AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಗ್ಲು ತೆಗಿ ಮೇರಿ ಜಾನ್​’ ಹಾಡು ಸೂಪರ್​ ಹಿಟ್​; ಮೂರೂವರೆ ಮಿಲಿಯನ್​ ದಾಟಿದ ವೀಕ್ಷಣೆ

‘ತೋತಾಪುರಿ’ ಚಿತ್ರದ ‘ಬಾಗ್ಲು ತೆಗಿ ಮೇರಿ ಜಾನ್​’ ಹಾಡು ಸೂಪರ್​ ಹಿಟ್​ ಆಗಿದೆ. ಜಗ್ಗೇಶ್​ ಮತ್ತು ಅದಿತಿ ಪ್ರಭುದೇವ ಮಸ್ತ್​ ಮನರಂಜನೆ ನೀಡಿದ್ದಾರೆ.

‘ಬಾಗ್ಲು ತೆಗಿ ಮೇರಿ ಜಾನ್​’ ಹಾಡು ಸೂಪರ್​ ಹಿಟ್​; ಮೂರೂವರೆ ಮಿಲಿಯನ್​ ದಾಟಿದ ವೀಕ್ಷಣೆ
ಅದಿತಿ ಪ್ರಭುದೇವ, ಜಗ್ಗೇಶ್​
TV9 Web
| Edited By: |

Updated on: Feb 04, 2022 | 12:06 PM

Share

‘ನವರಸ ನಾಯಕ’ ಜಗ್ಗೇಶ್​ (Jaggesh) ಅಭಿನಯದ ಸಿನಿಮಾ ಎಂದರೆ ಅಲ್ಲಿ ಮಸ್ತ್​ ಕಾಮಿಡಿ ಇರಲೇಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಜಗ್ಗೇಶ್​ ಜೊತೆಗೆ ‘ನೀರ್​ ದೋಸೆ’ ಖ್ಯಾತಿಯ ನಿರ್ದೇಶಕ ವಿಜಯ್​ ಪ್ರಸಾದ್​ ಕೈ ಜೋಡಿಸಿದರೆ ಅಭಿಮಾನಿಗಳ ಪಾಲಿಗೆ ಅದು ಭರ್ಜರಿ ಕಾಂಬಿನೇಷನ್​. ಇವರಿಬ್ಬರು ಜೊತೆಯಾಗಿ ಮಾಡಿರುವ ‘ತೋತಾಪುರಿ’ ಸಿನಿಮಾ ಈಗಾಗಲೇ ಹಲವು ಕಾರಣದಿಂದ ಸೌಂಡು ಮಾಡುತ್ತಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಒಂದು ಚಿಕ್ಕ ಟೀಸರ್​ ಸಖತ್​ ಹೈಪ್​ ಸೃಷ್ಟಿ ಮಾಡಿತ್ತು. ಈಗ ಈ ಚಿತ್ರದ ಹಾಡು ಕೂಡ ಭರ್ಜರಿ ಯಶಸ್ಸು ಕಂಡಿದೆ. ಅದಿತಿ ಪ್ರಭುದೇವ  (Aditi Prabhudeva) ಮತ್ತು ಜಗ್ಗೇಶ್​ ಹೆಜ್ಜೆ ಹಾಕಿರುವ ‘ಬಾಗ್ಲು ತೆಗಿ ಮೇರಿ ಜಾನ್​..’ (Baglu Tegi Meri Jaan) ಹಾಡು ಜನಮನ ಗೆದ್ದಿದೆ. ಈ ಗೀತೆಯಿಂದಾಗಿ ‘ತೋತಾಪುರಿ’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತಾಗಿದೆ. ಯೂಟ್ಯೂಬ್​ನಲ್ಲಿ ಈ ಹಾಡನ್ನು ಈವರೆಗೆ 3.54 ಮಿಲಿಯನ್​, ಅಂದರೆ 35 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಿದ್ದಾರೆ ಸಿನಿಪ್ರಿಯರು. ಇದು ತಂಡದ ಸಂತಸಕ್ಕೆ ಕಾರಣ ಆಗಿದೆ.

ಈ ಹಾಡಿಗೆ ವಿಜಯ್​ ಪ್ರಸಾದ್​ ಸಾಹಿತ್ಯ ಬರೆದಿದ್ದಾರೆ. ಅನೂಪ್​ ಸಿಳೀನ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಮುರಳಿ ಅವರ ನೃತ್ಯ ನಿರ್ದೇಶನದಲ್ಲಿ ‘ಬಾಗ್ಲು ತೆಗಿ ಮೇರಿ ಜಾನ್​..’ ಹಾಡು ಸಖತ್​ ತಮಾಷೆಯಾಗಿ ಮೂಡಿಬಂದಿದೆ. ವ್ಯಾಸರಾಜ್​ ಸೋಸಲೆ, ಅನನ್ಯಾ ಭಟ್​ ಮತ್ತು ಸುಪ್ರಿಯಾ ರಾಮ್​ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಜಗ್ಗೇಶ್​ ಅಭಿಮಾನಿಗಳಂತೂ ಈ ಗೀತೆಯಲ್ಲಿ ಸಖತ್​ ಮೆಚ್ಚಿಕೊಂಡಿದ್ದಾರೆ.

ಈ ಹಾಡು ಬಿಡುಗಡೆ ಆಗುವುದಕ್ಕೂ ಮುನ್ನ ಒಂದು ಚಿಕ್ಕ ಟೀಸರ್​ ರಿಲೀಸ್​ ಮಾಡಲಾಗಿತ್ತು. ಅದರಲ್ಲಿ ಇದ್ದ ಒಂದು ಪದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಆ ಕಾರಣದಿಂದ ‘ಬಾಗ್ಲು ತೆಗಿ ಮೇರಿ ಜಾನ್​..’ ವಿರೋಧ ಸೃಷ್ಟಿಸುವ ಸಾಧ್ಯತೆ ಕೂಡ ಇತ್ತು. ಅದೆಲ್ಲವನ್ನೂ ಮೀರಿ ಈಗ ಈ ಸಾಂಗ್​ ಸೂಪರ್​ ಹಿಟ್​ ಆಗಿದೆ. ಜಗ್ಗೇಶ್​ ಅವರ ಮ್ಯಾನರಿಸಂ, ಅದಿತಿ ಪ್ರಭುದೇವ ಅವರ ಡ್ಯಾನ್ಸ್, ಇತರೆ ಕಲಾವಿದರ ಅಭಿನಯದಿಂದಾಗಿ ಈ ಗೀತೆ ಯಶಸ್ವಿ ಆಗಿದೆ.

( ‘ಬಾಗ್ಲು ತೆಗಿ ಮೇರಿ ಜಾನ್​..’ ಹಾಡು ಇಲ್ಲಿದೆ)

ಹಾಡು ಹಿಟ್​ ಆಗಿದ್ದರ ಬಗ್ಗೆ ನಿರ್ದೇಶಕ ವಿಜಯ್​ ಪ್ರಸಾದ್​ ಅವರಿಗೆ ಸಖತ್​ ಖುಷಿ ಇದೆ. ‘ಈ ಗೆಲುವಿನ ಎಲ್ಲ ಕ್ರೆಡಿಟ್​ ಸಂಗೀತ ನಿರ್ದೇಶಕ ಅನೂಪ್​ ಸಿಳೀನ್​ ಅವರಿಗೆ ಸಲ್ಲಬೇಕು. ಕಂಟೆಂಟ್ ಚೆನ್ನಾಗಿದ್ದರೆ ಯಶಸ್ಸು ಸಿಗತ್ತೆ ಅನ್ನೋದಕ್ಕೆ ಈ ಹಾಡು ಸಾಕ್ಷಿ. ಶೇ.95ರಷ್ಟು ಜನರಿಗೆ ಹಾಡು ಇಷ್ಟ ಆಗಿದೆ. ಇದರಲ್ಲಿ ಬಳಸಿದ ಒಂದು ಪದದ ಬಗ್ಗೆ ಶೇ.5ರಷ್ಟು ಜನರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಆ ಪದಕ್ಕೆ ಮೂರ್ಖ ಎಂಬ ಅರ್ಥ ಇದೆ. ಅದನ್ನು ಖಚಿತಪಡಿಸಿಕೊಂಡೇ ನಾವು ಈ ಹಾಡನ್ನು ರಿಲೀಸ್​ ಮಾಡಿದ್ದು. ಸಾಹಿತ್ಯದಲ್ಲಿ ಹಿಂದಿ ಜಾಸ್ತಿ ಇದೆ ಅಂತ ಕೂಡ ಕೆಲವರು ಹೇಳಿದ್ದಾರೆ. ಚಿತ್ರದ ಕಥೆ ಏನು? ಪಾತ್ರಗಳು ಯಾಕೆ ಹಿಂದಿ ಮಾತಾಡ್ತವೆ ಅನ್ನೋದು ಜನರಿಗೆ ಈಗ ಗೊತ್ತಿಲ್ಲ. ಸಿನಿಮಾ ನೋಡಿದಾಗ ತಿಳಿಯುತ್ತೆ’ ಎಂದಿದ್ದಾರೆ ನಿರ್ದೇಶಕರು. ಕೆ.ಎ. ಸುರೇಶ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:

‘ಲೀಲಾವತಿ ರೀತಿ ಅದಿತಿ ಪ್ರಭುದೇವಗೂ ಒಳ್ಳೆಯ ಗುಣ ಇದೆ’: ಹಿರಿಯ ನಟ ಬೆಂಗಳೂರು ನಾಗೇಶ್​

ಭಾವಿ ಪತಿ ಜತೆ ಅದಿತಿ ಪ್ರಭುದೇವ ಹೊಸ ವರ್ಷದ ಸೆಲೆಬ್ರೇಷನ್​; ಫೋಟೋ ವೈರಲ್​

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?