AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಗ್ಲು ತೆಗಿ ಮೇರಿ ಜಾನ್​’ ಹಾಡು ಸೂಪರ್​ ಹಿಟ್​; ಮೂರೂವರೆ ಮಿಲಿಯನ್​ ದಾಟಿದ ವೀಕ್ಷಣೆ

‘ತೋತಾಪುರಿ’ ಚಿತ್ರದ ‘ಬಾಗ್ಲು ತೆಗಿ ಮೇರಿ ಜಾನ್​’ ಹಾಡು ಸೂಪರ್​ ಹಿಟ್​ ಆಗಿದೆ. ಜಗ್ಗೇಶ್​ ಮತ್ತು ಅದಿತಿ ಪ್ರಭುದೇವ ಮಸ್ತ್​ ಮನರಂಜನೆ ನೀಡಿದ್ದಾರೆ.

‘ಬಾಗ್ಲು ತೆಗಿ ಮೇರಿ ಜಾನ್​’ ಹಾಡು ಸೂಪರ್​ ಹಿಟ್​; ಮೂರೂವರೆ ಮಿಲಿಯನ್​ ದಾಟಿದ ವೀಕ್ಷಣೆ
ಅದಿತಿ ಪ್ರಭುದೇವ, ಜಗ್ಗೇಶ್​
TV9 Web
| Updated By: ಮದನ್​ ಕುಮಾರ್​|

Updated on: Feb 04, 2022 | 12:06 PM

Share

‘ನವರಸ ನಾಯಕ’ ಜಗ್ಗೇಶ್​ (Jaggesh) ಅಭಿನಯದ ಸಿನಿಮಾ ಎಂದರೆ ಅಲ್ಲಿ ಮಸ್ತ್​ ಕಾಮಿಡಿ ಇರಲೇಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಜಗ್ಗೇಶ್​ ಜೊತೆಗೆ ‘ನೀರ್​ ದೋಸೆ’ ಖ್ಯಾತಿಯ ನಿರ್ದೇಶಕ ವಿಜಯ್​ ಪ್ರಸಾದ್​ ಕೈ ಜೋಡಿಸಿದರೆ ಅಭಿಮಾನಿಗಳ ಪಾಲಿಗೆ ಅದು ಭರ್ಜರಿ ಕಾಂಬಿನೇಷನ್​. ಇವರಿಬ್ಬರು ಜೊತೆಯಾಗಿ ಮಾಡಿರುವ ‘ತೋತಾಪುರಿ’ ಸಿನಿಮಾ ಈಗಾಗಲೇ ಹಲವು ಕಾರಣದಿಂದ ಸೌಂಡು ಮಾಡುತ್ತಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಒಂದು ಚಿಕ್ಕ ಟೀಸರ್​ ಸಖತ್​ ಹೈಪ್​ ಸೃಷ್ಟಿ ಮಾಡಿತ್ತು. ಈಗ ಈ ಚಿತ್ರದ ಹಾಡು ಕೂಡ ಭರ್ಜರಿ ಯಶಸ್ಸು ಕಂಡಿದೆ. ಅದಿತಿ ಪ್ರಭುದೇವ  (Aditi Prabhudeva) ಮತ್ತು ಜಗ್ಗೇಶ್​ ಹೆಜ್ಜೆ ಹಾಕಿರುವ ‘ಬಾಗ್ಲು ತೆಗಿ ಮೇರಿ ಜಾನ್​..’ (Baglu Tegi Meri Jaan) ಹಾಡು ಜನಮನ ಗೆದ್ದಿದೆ. ಈ ಗೀತೆಯಿಂದಾಗಿ ‘ತೋತಾಪುರಿ’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತಾಗಿದೆ. ಯೂಟ್ಯೂಬ್​ನಲ್ಲಿ ಈ ಹಾಡನ್ನು ಈವರೆಗೆ 3.54 ಮಿಲಿಯನ್​, ಅಂದರೆ 35 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಿದ್ದಾರೆ ಸಿನಿಪ್ರಿಯರು. ಇದು ತಂಡದ ಸಂತಸಕ್ಕೆ ಕಾರಣ ಆಗಿದೆ.

ಈ ಹಾಡಿಗೆ ವಿಜಯ್​ ಪ್ರಸಾದ್​ ಸಾಹಿತ್ಯ ಬರೆದಿದ್ದಾರೆ. ಅನೂಪ್​ ಸಿಳೀನ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಮುರಳಿ ಅವರ ನೃತ್ಯ ನಿರ್ದೇಶನದಲ್ಲಿ ‘ಬಾಗ್ಲು ತೆಗಿ ಮೇರಿ ಜಾನ್​..’ ಹಾಡು ಸಖತ್​ ತಮಾಷೆಯಾಗಿ ಮೂಡಿಬಂದಿದೆ. ವ್ಯಾಸರಾಜ್​ ಸೋಸಲೆ, ಅನನ್ಯಾ ಭಟ್​ ಮತ್ತು ಸುಪ್ರಿಯಾ ರಾಮ್​ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಜಗ್ಗೇಶ್​ ಅಭಿಮಾನಿಗಳಂತೂ ಈ ಗೀತೆಯಲ್ಲಿ ಸಖತ್​ ಮೆಚ್ಚಿಕೊಂಡಿದ್ದಾರೆ.

ಈ ಹಾಡು ಬಿಡುಗಡೆ ಆಗುವುದಕ್ಕೂ ಮುನ್ನ ಒಂದು ಚಿಕ್ಕ ಟೀಸರ್​ ರಿಲೀಸ್​ ಮಾಡಲಾಗಿತ್ತು. ಅದರಲ್ಲಿ ಇದ್ದ ಒಂದು ಪದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಆ ಕಾರಣದಿಂದ ‘ಬಾಗ್ಲು ತೆಗಿ ಮೇರಿ ಜಾನ್​..’ ವಿರೋಧ ಸೃಷ್ಟಿಸುವ ಸಾಧ್ಯತೆ ಕೂಡ ಇತ್ತು. ಅದೆಲ್ಲವನ್ನೂ ಮೀರಿ ಈಗ ಈ ಸಾಂಗ್​ ಸೂಪರ್​ ಹಿಟ್​ ಆಗಿದೆ. ಜಗ್ಗೇಶ್​ ಅವರ ಮ್ಯಾನರಿಸಂ, ಅದಿತಿ ಪ್ರಭುದೇವ ಅವರ ಡ್ಯಾನ್ಸ್, ಇತರೆ ಕಲಾವಿದರ ಅಭಿನಯದಿಂದಾಗಿ ಈ ಗೀತೆ ಯಶಸ್ವಿ ಆಗಿದೆ.

( ‘ಬಾಗ್ಲು ತೆಗಿ ಮೇರಿ ಜಾನ್​..’ ಹಾಡು ಇಲ್ಲಿದೆ)

ಹಾಡು ಹಿಟ್​ ಆಗಿದ್ದರ ಬಗ್ಗೆ ನಿರ್ದೇಶಕ ವಿಜಯ್​ ಪ್ರಸಾದ್​ ಅವರಿಗೆ ಸಖತ್​ ಖುಷಿ ಇದೆ. ‘ಈ ಗೆಲುವಿನ ಎಲ್ಲ ಕ್ರೆಡಿಟ್​ ಸಂಗೀತ ನಿರ್ದೇಶಕ ಅನೂಪ್​ ಸಿಳೀನ್​ ಅವರಿಗೆ ಸಲ್ಲಬೇಕು. ಕಂಟೆಂಟ್ ಚೆನ್ನಾಗಿದ್ದರೆ ಯಶಸ್ಸು ಸಿಗತ್ತೆ ಅನ್ನೋದಕ್ಕೆ ಈ ಹಾಡು ಸಾಕ್ಷಿ. ಶೇ.95ರಷ್ಟು ಜನರಿಗೆ ಹಾಡು ಇಷ್ಟ ಆಗಿದೆ. ಇದರಲ್ಲಿ ಬಳಸಿದ ಒಂದು ಪದದ ಬಗ್ಗೆ ಶೇ.5ರಷ್ಟು ಜನರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಆ ಪದಕ್ಕೆ ಮೂರ್ಖ ಎಂಬ ಅರ್ಥ ಇದೆ. ಅದನ್ನು ಖಚಿತಪಡಿಸಿಕೊಂಡೇ ನಾವು ಈ ಹಾಡನ್ನು ರಿಲೀಸ್​ ಮಾಡಿದ್ದು. ಸಾಹಿತ್ಯದಲ್ಲಿ ಹಿಂದಿ ಜಾಸ್ತಿ ಇದೆ ಅಂತ ಕೂಡ ಕೆಲವರು ಹೇಳಿದ್ದಾರೆ. ಚಿತ್ರದ ಕಥೆ ಏನು? ಪಾತ್ರಗಳು ಯಾಕೆ ಹಿಂದಿ ಮಾತಾಡ್ತವೆ ಅನ್ನೋದು ಜನರಿಗೆ ಈಗ ಗೊತ್ತಿಲ್ಲ. ಸಿನಿಮಾ ನೋಡಿದಾಗ ತಿಳಿಯುತ್ತೆ’ ಎಂದಿದ್ದಾರೆ ನಿರ್ದೇಶಕರು. ಕೆ.ಎ. ಸುರೇಶ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:

‘ಲೀಲಾವತಿ ರೀತಿ ಅದಿತಿ ಪ್ರಭುದೇವಗೂ ಒಳ್ಳೆಯ ಗುಣ ಇದೆ’: ಹಿರಿಯ ನಟ ಬೆಂಗಳೂರು ನಾಗೇಶ್​

ಭಾವಿ ಪತಿ ಜತೆ ಅದಿತಿ ಪ್ರಭುದೇವ ಹೊಸ ವರ್ಷದ ಸೆಲೆಬ್ರೇಷನ್​; ಫೋಟೋ ವೈರಲ್​

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು