AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jaggesh: ಬೇರೆಯವರ ಜಾಗದಲ್ಲಿ ಮನೆ ಕಟ್ಟಿದ್ದ ವಿಷ್ಣುಗೆ ಬಳಿಕ ಸಿಕ್ತು ಡಬಲ್​ ಸೈಟ್​: ಜಗ್ಗೇಶ್​ ತೆರೆದಿಟ್ಟ ವಿಷಯ ಇದು

Vishnuvardhan | Jaggesh: ವಿಷ್ಣುವರ್ಧನ್​ ಹೊಸ ಮನೆ ‘ವಲ್ಮೀಕ’ ಗೃಹ ಪ್ರವೇಶಕ್ಕೆ ಜಗ್ಗೇಶ್​ ಆಗಮಿಸಿದ್ದಾರೆ. ‘ಇದು ಒಂದು ಮನೆ ರೀತಿ ಕಾಣುತ್ತಿಲ್ಲ. ದೇವಸ್ಥಾನದ ರೀತಿ ಇದೆ’ ಎಂದು ಅವರು ಹೇಳಿದ್ದಾರೆ.

Jaggesh: ಬೇರೆಯವರ ಜಾಗದಲ್ಲಿ ಮನೆ ಕಟ್ಟಿದ್ದ ವಿಷ್ಣುಗೆ ಬಳಿಕ ಸಿಕ್ತು ಡಬಲ್​ ಸೈಟ್​: ಜಗ್ಗೇಶ್​ ತೆರೆದಿಟ್ಟ ವಿಷಯ ಇದು
ಗೃಹ ಪ್ರವೇಶ ಸಮಾರಂಭದಲ್ಲಿ ಜಗ್ಗೇಶ್
TV9 Web
| Edited By: |

Updated on:Nov 27, 2022 | 4:19 PM

Share

‘ಸಾಹಸ ಸಿಂಹ’ ವಿಷ್ಣುವರ್ಧನ್​ (Dr Vishnuvardhan) ಎಂದರೆ ಚಂದನವನದಲ್ಲಿ ಅನೇಕರಿಗೆ ಸ್ಫೂರ್ತಿ. ಇಂದು (ನ.27) ಅವರ ಹೊಸ ಮನೆಯ ಗೃಹ ಪ್ರವೇಶ ಮಾಡಲಾಗಿದೆ. ಬೆಂಗಳೂರಿನ ಜಯನಗರದಲ್ಲಿ ಈ ಮನೆ ಇದೆ. ಇದಕ್ಕೆ (Vishnuvardhan New House) ‘ವಲ್ಮೀಕ’ ಎಂದು ಹೆಸರು ಇಡಲಾಗಿದೆ. ಗೃಹ ಪ್ರವೇಶದ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು, ಸಿನಿಮಾ-ಕಿರುತೆರೆ ಸೆಲೆಬ್ರಿಟಿಗಳು ಆಗಮಿಸಿ ವಿಷ್ಣುವರ್ಧನ್​ ಅವರ ಕುಟುಂಬದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ನವರಸ ನಾಯಕ ಜಗ್ಗೇಶ್​ (Navarasa Nayaka Jaggesh) ಅವರು ವಿಷ್ಣುವರ್ಧನ್​ ಅವರನ್ನು ಸ್ಮರಿಸಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಜಯನಗರದಲ್ಲಿ ವಿಷ್ಣುವರ್ಧನ್​ ಮನೆ ಕಟ್ಟಿದಾಗ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದರ ಬಗ್ಗೆ ಜಗ್ಗೇಶ್​ ಮಾತನಾಡಿದ್ದಾರೆ. ಅಲ್ಲದೇ, ಈಗ ಚಿತ್ರರಂಗದ ನಿರ್ಮಾಪಕರು ವಿಷ್ಣು ಅಳಿಯ ಅನಿರುದ್ಧ್​ ಅವರ ಪರ ನಿಲ್ಲಬೇಕು ಎಂದು ಜಗ್ಗೇಶ್​ ಹೇಳಿದ್ದಾರೆ.

‘ವಿಷ್ಣುವರ್ಧನ್​ ಅವರು ನಮಗೆಲ್ಲ ಹಿರಿಯರು. ನಮಗೆ ಶುಭ ಹಾರೈಸಿದವರು ಅವರು. ಈ ಮನೆಗೆ ಸಂಬಂಧ ಪಟ್ಟಂತೆ ಒಂದು ಬ್ಯೂಟಿಫುಲ್​ ಕಥೆ ಇದೆ’ ಎಂದು ಜಗ್ಗೇಶ್​ ಮಾತು ಆರಂಭಿಸಿದರು. ‘ಮೊದಲಿಗೆ ವಿಷ್ಣುವರ್ಧನ್​ ಅವರು ಇಲ್ಲೊಂದು ಮನೆ ಕಟ್ಟುತ್ತಾರೆ. ಆಗ ಪಕ್ಕದ ಸೈಟಿನ ವ್ಯಕ್ತಿ ಬಂದು, ಸರ್​ ನೀವು ನಮ್ಮ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದೀರಿ ಅಂತ ಹೇಳ್ತಾನೆ. ಆಗ ವಿಷ್ಣುವರ್ಧನ್​ ಗಾಬರಿಯಾದರು. ಆದರೆ ಪಕ್ಕದ ಸೈಟಿನವರು ಎಂಥ ಅದ್ಭುತ ವ್ಯಕ್ತಿ ಎಂದರೆ, ಪರವಾಗಿಲ್ಲ ಸರ್​ ಈ ಜಾಗ ಕೂಡ ನೀವೇ ಇಟ್ಕೊಳ್ಳಿ ಅಂತ ಕೊಟ್ಟರು. ಹಾಗಾಗಿ ಇಲ್ಲಿ ವಿಷ್ಣುವರ್ಧನ್​ ಅವರಿಗೆ ಡಬಲ್​ ಸೈಟ್​ ಸಿಕ್ಕಿತು’ ಎಂದಿದ್ದಾರೆ ಜಗ್ಗೇಶ್​.

‘ವಿಷ್ಣುವರ್ಧನ್​ ಅವರಿಗೆ ಇದು ಪ್ರಿಯವಾದ ಜಾಗ. ಪರಿಸರದಲ್ಲಿ ನಾನು ಇರುತ್ತೇನೆ ಅಂತ ಭಗವದ್ಗೀತೆಯಲ್ಲಿ ಕೃಷ್ಣ ಹೇಳ್ತಾನೆ. ವಿಷ್ಣುವರ್ಧನ್​ ಅವರ ಮನೆಯ ಮಹಡಿಯಿಂದ ನೋಡಿದರೆ ಮಲೆನಾಡಿನಲ್ಲಿ ಇದ್ದಂತಹ ಭಾವ ಮೂಡುತ್ತದೆ. ಶುದ್ಧವಾಗಿ ಬಾಳಿದವರಿಗೆ ಭಗವಂತ ಕೊಡುವ ಆಶೀರ್ವಾದ ಇದು. ಈ ಸಂದರ್ಭದಲ್ಲಿ ಆ ಸಿಂಹ ಇದ್ದಿದ್ದರೆ ಈ ಮನೆಯ ಒಂದೊಂದು ಜಾಗದಲ್ಲಿ ಹೆಂಗೆ ಘರ್ಜನೆ ಮಾಡುತ್ತಿತ್ತು ಎಂಬ ಪ್ರಶ್ನೆ ನನ್ನ ಮನದಲ್ಲಿ ಕಾಡಿತು’ ಎಂದು ಜಗ್ಗೇಶ್​ ಹೇಳಿದ್ದಾರೆ.

ಇದನ್ನೂ ಓದಿ
Image
ಸಿನಿಮಾ, ಟಿವಿ ಶೋಗೆ ಜಗ್ಗೇಶ್ ಪಡೆಯುವ ಸಂಬಳ ಎಷ್ಟು ಕೋಟಿ? ಎಲ್ಲವನ್ನೂ ಓಪನ್ ಆಗಿ ಹೇಳಿಕೊಂಡ ನಟ
Image
Jaggesh: ರಾಜ್ಯಸಭೆ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ರಾಯರ ಬೃಂದಾವನ ದರ್ಶನ ಪಡೆದ ಜಗ್ಗೇಶ್​
Image
ರಸ್ತೆಯಲ್ಲಿ ನನ್ನ ತಂದೆ ಬೂಟ್​ನಲ್ಲಿ ಹೊಡೆಯುತ್ತಿದ್ದರು; ನೆನಪಿನ ಬುತ್ತಿ ತೆರೆದಿಟ್ಟ ಜಗ್ಗೇಶ್
Image
ಜಗ್ಗೇಶ್​ ಮನೆಗೆ ಬಂತು ಹೊಸ BMW ಕಾರು; ಅಚ್ಚರಿಯ ರೀತಿಯಲ್ಲಿ ಸಿಕ್ಕಿದೆ ಗುರು ರಾಯರ ಪ್ರತಿಮೆ

‘ಇದು ಒಂದು ಮನೆ ರೀತಿ ಕಾಣುತ್ತಿಲ್ಲ. ದೇವಸ್ಥಾನದ ರೀತಿ ಇದೆ. ನನಗೆ ಬಹಳ ಖುಷಿಯಾದ ದಿನ ಇದು. ಈ ಸಂದರ್ಭದಲ್ಲಿ ಕನ್ನಡದ ಎಲ್ಲ ನಿರ್ಮಾಪಕರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ತುಂಬ ವರ್ಷಗಳ ಕಾಲ ವಿಷ್ಣುವರ್ಧನ್​ ಅವರು ನಮ್ಮನ್ನೆಲ್ಲ ರಂಜಿಸಿದರು. ಅವರ ಅಳಿಯ ಅನಿರುದ್ಧ್​ ಎಂದರೆ ಮಗನ ಥರ. ಅವರ ಜೊತೆ ಮಾಧ್ಯಮ ಮತ್ತು ಚಿತ್ರರಂಗ ನಿಲ್ಲಬೇಕು ಎಂಬುದು ನನ್ನ ಶುಭ ಹಾರೈಕೆ’ ಎಂದು ಜಗ್ಗೇಶ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:19 pm, Sun, 27 November 22

Follow Us
ಬೆಳಗಾವಿ, ಹಾವೇರಿಯಲ್ಲಿ ಭಾರಿ ಮಳೆ: ನದಿಯಂತಾದ ರಸ್ತೆ, ಬೈಕ್​ಗಳು ಮುಳುಗಡೆ
ಬೆಳಗಾವಿ, ಹಾವೇರಿಯಲ್ಲಿ ಭಾರಿ ಮಳೆ: ನದಿಯಂತಾದ ರಸ್ತೆ, ಬೈಕ್​ಗಳು ಮುಳುಗಡೆ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಕಾರಿನಲ್ಲೇ ಸುಟ್ಟು ಹೋದ ಧಾರವಾಡದ ಮಾಜಿ ಶಾಸಕನ ಪುತ್ರ
ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಎಲ್​ಪಿಜಿ ಹೊತ್ತ 2 ಹಡಗುಗಳು
ಇರಾನ್ ಯುದ್ಧದ ನಡುವೆ ಹಾರ್ಮುಜ್ ಜಲಸಂಧಿ ದಾಟಿದ ಎಲ್​ಪಿಜಿ ಹೊತ್ತ 2 ಹಡಗುಗಳು
ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!
ಪ್ರೀತಿ ನೀಡಲು ಪ್ರಾಣಿಯೇ ಆಗಬೇಕಿಲ್ಲ, ಮನುಷ್ಯತ್ವವೊಂದಿದ್ದರೆ ಸಾಕು!