AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jaggesh: ಬೇರೆಯವರ ಜಾಗದಲ್ಲಿ ಮನೆ ಕಟ್ಟಿದ್ದ ವಿಷ್ಣುಗೆ ಬಳಿಕ ಸಿಕ್ತು ಡಬಲ್​ ಸೈಟ್​: ಜಗ್ಗೇಶ್​ ತೆರೆದಿಟ್ಟ ವಿಷಯ ಇದು

Vishnuvardhan | Jaggesh: ವಿಷ್ಣುವರ್ಧನ್​ ಹೊಸ ಮನೆ ‘ವಲ್ಮೀಕ’ ಗೃಹ ಪ್ರವೇಶಕ್ಕೆ ಜಗ್ಗೇಶ್​ ಆಗಮಿಸಿದ್ದಾರೆ. ‘ಇದು ಒಂದು ಮನೆ ರೀತಿ ಕಾಣುತ್ತಿಲ್ಲ. ದೇವಸ್ಥಾನದ ರೀತಿ ಇದೆ’ ಎಂದು ಅವರು ಹೇಳಿದ್ದಾರೆ.

Jaggesh: ಬೇರೆಯವರ ಜಾಗದಲ್ಲಿ ಮನೆ ಕಟ್ಟಿದ್ದ ವಿಷ್ಣುಗೆ ಬಳಿಕ ಸಿಕ್ತು ಡಬಲ್​ ಸೈಟ್​: ಜಗ್ಗೇಶ್​ ತೆರೆದಿಟ್ಟ ವಿಷಯ ಇದು
ಗೃಹ ಪ್ರವೇಶ ಸಮಾರಂಭದಲ್ಲಿ ಜಗ್ಗೇಶ್
TV9 Web
| Edited By: |

Updated on:Nov 27, 2022 | 4:19 PM

Share

‘ಸಾಹಸ ಸಿಂಹ’ ವಿಷ್ಣುವರ್ಧನ್​ (Dr Vishnuvardhan) ಎಂದರೆ ಚಂದನವನದಲ್ಲಿ ಅನೇಕರಿಗೆ ಸ್ಫೂರ್ತಿ. ಇಂದು (ನ.27) ಅವರ ಹೊಸ ಮನೆಯ ಗೃಹ ಪ್ರವೇಶ ಮಾಡಲಾಗಿದೆ. ಬೆಂಗಳೂರಿನ ಜಯನಗರದಲ್ಲಿ ಈ ಮನೆ ಇದೆ. ಇದಕ್ಕೆ (Vishnuvardhan New House) ‘ವಲ್ಮೀಕ’ ಎಂದು ಹೆಸರು ಇಡಲಾಗಿದೆ. ಗೃಹ ಪ್ರವೇಶದ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು, ಸಿನಿಮಾ-ಕಿರುತೆರೆ ಸೆಲೆಬ್ರಿಟಿಗಳು ಆಗಮಿಸಿ ವಿಷ್ಣುವರ್ಧನ್​ ಅವರ ಕುಟುಂಬದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ನವರಸ ನಾಯಕ ಜಗ್ಗೇಶ್​ (Navarasa Nayaka Jaggesh) ಅವರು ವಿಷ್ಣುವರ್ಧನ್​ ಅವರನ್ನು ಸ್ಮರಿಸಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಜಯನಗರದಲ್ಲಿ ವಿಷ್ಣುವರ್ಧನ್​ ಮನೆ ಕಟ್ಟಿದಾಗ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದರ ಬಗ್ಗೆ ಜಗ್ಗೇಶ್​ ಮಾತನಾಡಿದ್ದಾರೆ. ಅಲ್ಲದೇ, ಈಗ ಚಿತ್ರರಂಗದ ನಿರ್ಮಾಪಕರು ವಿಷ್ಣು ಅಳಿಯ ಅನಿರುದ್ಧ್​ ಅವರ ಪರ ನಿಲ್ಲಬೇಕು ಎಂದು ಜಗ್ಗೇಶ್​ ಹೇಳಿದ್ದಾರೆ.

‘ವಿಷ್ಣುವರ್ಧನ್​ ಅವರು ನಮಗೆಲ್ಲ ಹಿರಿಯರು. ನಮಗೆ ಶುಭ ಹಾರೈಸಿದವರು ಅವರು. ಈ ಮನೆಗೆ ಸಂಬಂಧ ಪಟ್ಟಂತೆ ಒಂದು ಬ್ಯೂಟಿಫುಲ್​ ಕಥೆ ಇದೆ’ ಎಂದು ಜಗ್ಗೇಶ್​ ಮಾತು ಆರಂಭಿಸಿದರು. ‘ಮೊದಲಿಗೆ ವಿಷ್ಣುವರ್ಧನ್​ ಅವರು ಇಲ್ಲೊಂದು ಮನೆ ಕಟ್ಟುತ್ತಾರೆ. ಆಗ ಪಕ್ಕದ ಸೈಟಿನ ವ್ಯಕ್ತಿ ಬಂದು, ಸರ್​ ನೀವು ನಮ್ಮ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದೀರಿ ಅಂತ ಹೇಳ್ತಾನೆ. ಆಗ ವಿಷ್ಣುವರ್ಧನ್​ ಗಾಬರಿಯಾದರು. ಆದರೆ ಪಕ್ಕದ ಸೈಟಿನವರು ಎಂಥ ಅದ್ಭುತ ವ್ಯಕ್ತಿ ಎಂದರೆ, ಪರವಾಗಿಲ್ಲ ಸರ್​ ಈ ಜಾಗ ಕೂಡ ನೀವೇ ಇಟ್ಕೊಳ್ಳಿ ಅಂತ ಕೊಟ್ಟರು. ಹಾಗಾಗಿ ಇಲ್ಲಿ ವಿಷ್ಣುವರ್ಧನ್​ ಅವರಿಗೆ ಡಬಲ್​ ಸೈಟ್​ ಸಿಕ್ಕಿತು’ ಎಂದಿದ್ದಾರೆ ಜಗ್ಗೇಶ್​.

‘ವಿಷ್ಣುವರ್ಧನ್​ ಅವರಿಗೆ ಇದು ಪ್ರಿಯವಾದ ಜಾಗ. ಪರಿಸರದಲ್ಲಿ ನಾನು ಇರುತ್ತೇನೆ ಅಂತ ಭಗವದ್ಗೀತೆಯಲ್ಲಿ ಕೃಷ್ಣ ಹೇಳ್ತಾನೆ. ವಿಷ್ಣುವರ್ಧನ್​ ಅವರ ಮನೆಯ ಮಹಡಿಯಿಂದ ನೋಡಿದರೆ ಮಲೆನಾಡಿನಲ್ಲಿ ಇದ್ದಂತಹ ಭಾವ ಮೂಡುತ್ತದೆ. ಶುದ್ಧವಾಗಿ ಬಾಳಿದವರಿಗೆ ಭಗವಂತ ಕೊಡುವ ಆಶೀರ್ವಾದ ಇದು. ಈ ಸಂದರ್ಭದಲ್ಲಿ ಆ ಸಿಂಹ ಇದ್ದಿದ್ದರೆ ಈ ಮನೆಯ ಒಂದೊಂದು ಜಾಗದಲ್ಲಿ ಹೆಂಗೆ ಘರ್ಜನೆ ಮಾಡುತ್ತಿತ್ತು ಎಂಬ ಪ್ರಶ್ನೆ ನನ್ನ ಮನದಲ್ಲಿ ಕಾಡಿತು’ ಎಂದು ಜಗ್ಗೇಶ್​ ಹೇಳಿದ್ದಾರೆ.

ಇದನ್ನೂ ಓದಿ
Image
ಸಿನಿಮಾ, ಟಿವಿ ಶೋಗೆ ಜಗ್ಗೇಶ್ ಪಡೆಯುವ ಸಂಬಳ ಎಷ್ಟು ಕೋಟಿ? ಎಲ್ಲವನ್ನೂ ಓಪನ್ ಆಗಿ ಹೇಳಿಕೊಂಡ ನಟ
Image
Jaggesh: ರಾಜ್ಯಸಭೆ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ರಾಯರ ಬೃಂದಾವನ ದರ್ಶನ ಪಡೆದ ಜಗ್ಗೇಶ್​
Image
ರಸ್ತೆಯಲ್ಲಿ ನನ್ನ ತಂದೆ ಬೂಟ್​ನಲ್ಲಿ ಹೊಡೆಯುತ್ತಿದ್ದರು; ನೆನಪಿನ ಬುತ್ತಿ ತೆರೆದಿಟ್ಟ ಜಗ್ಗೇಶ್
Image
ಜಗ್ಗೇಶ್​ ಮನೆಗೆ ಬಂತು ಹೊಸ BMW ಕಾರು; ಅಚ್ಚರಿಯ ರೀತಿಯಲ್ಲಿ ಸಿಕ್ಕಿದೆ ಗುರು ರಾಯರ ಪ್ರತಿಮೆ

‘ಇದು ಒಂದು ಮನೆ ರೀತಿ ಕಾಣುತ್ತಿಲ್ಲ. ದೇವಸ್ಥಾನದ ರೀತಿ ಇದೆ. ನನಗೆ ಬಹಳ ಖುಷಿಯಾದ ದಿನ ಇದು. ಈ ಸಂದರ್ಭದಲ್ಲಿ ಕನ್ನಡದ ಎಲ್ಲ ನಿರ್ಮಾಪಕರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ತುಂಬ ವರ್ಷಗಳ ಕಾಲ ವಿಷ್ಣುವರ್ಧನ್​ ಅವರು ನಮ್ಮನ್ನೆಲ್ಲ ರಂಜಿಸಿದರು. ಅವರ ಅಳಿಯ ಅನಿರುದ್ಧ್​ ಎಂದರೆ ಮಗನ ಥರ. ಅವರ ಜೊತೆ ಮಾಧ್ಯಮ ಮತ್ತು ಚಿತ್ರರಂಗ ನಿಲ್ಲಬೇಕು ಎಂಬುದು ನನ್ನ ಶುಭ ಹಾರೈಕೆ’ ಎಂದು ಜಗ್ಗೇಶ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:19 pm, Sun, 27 November 22

Follow Us
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ