‘ಆ ಪಾತ್ರದಲ್ಲಿ ನಟಿಸಲ್ಲ’ ಎಂದಿದ್ದೇಕೆ ರಾಧಿಕಾ ಪಂಡಿತ್​, ಶ್ರದ್ಧಾ ಶ್ರೀನಾಥ್​? ಕಾರಣ ತಿಳಿಸಿದ ‘ಡಿಎನ್​ಎ’ ನಿರ್ದೇಶಕ

‘ಕಲಾವಿದರಿಗೋಸ್ಕರ​ ನಾನು ಕಥೆ ಆಯ್ಕೆ ಮಾಡಿಕೊಂಡಿಲ್ಲ. ಕಥೆಗಾಗಿ ಕಲಾವಿದರನ್ನು ಆಯ್ಕೆ ಮಾಡಿಕೊಂಡೆ’ ಎನ್ನುವ ಮೂಲಕ ‘ಡಿಎನ್​ಎ’ ಚಿತ್ರದ ಪಾತ್ರವರ್ಗದ ಬಗ್ಗೆ ಮಾಹಿತಿ ನೀಡಿದ್ದಾರೆ ನಿರ್ದೇಶಕ ಪ್ರಕಾಶ್​ರಾಜ್​ ಮೇಹು.

‘ಆ ಪಾತ್ರದಲ್ಲಿ ನಟಿಸಲ್ಲ’ ಎಂದಿದ್ದೇಕೆ ರಾಧಿಕಾ ಪಂಡಿತ್​, ಶ್ರದ್ಧಾ ಶ್ರೀನಾಥ್​? ಕಾರಣ ತಿಳಿಸಿದ ‘ಡಿಎನ್​ಎ’ ನಿರ್ದೇಶಕ
ರಾಧಿಕಾ ಪಂಡಿತ್, ಶ್ರದ್ಧಾ ಶ್ರೀನಾಥ್, ಎಸ್ತರ್ ನರೋನಾ,
Follow us
| Updated By: ಮದನ್​ ಕುಮಾರ್​

Updated on: Jan 24, 2022 | 3:03 PM

ಕನ್ನಡ ಚಿತ್ರರಂಗದಲ್ಲಿ ನಟಿಯರಾದ ರಾಧಿಕಾ ಪಂಡಿತ್ (Radhika Pandit)​ ಮತ್ತು ಶ್ರದ್ಧಾ ಶ್ರೀನಾಥ್​ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಿರುವ ರಾಧಿಕಾ ಪಂಡಿತ್​ ಅವರು ಇತ್ತೀಚಿನ ವರ್ಷಗಳಲ್ಲಿ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅತ್ತ, ಶ್ರದ್ಧಾ ಶ್ರೀನಾಥ್​ (Shraddha Srinath) ಅವರು ಬೇರೆ ಭಾಷೆಯ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಈ ವಾರ (ಜ.28) ಬಿಡುಗಡೆ ಆಗುತ್ತಿರುವ ‘ಡಿಎನ್​ಎ’ (DNA Kannada Movie) ಸಿನಿಮಾದಲ್ಲಿ ನಟಿಸುವಂತೆ ಈ ಇಬ್ಬರೂ ನಟಿಯರಿಗೆ ಕೇಳಿಕೊಳ್ಳಲಾಗಿತ್ತು. ನಿರ್ದೇಶಕ ಪ್ರಕಾಶ್​ರಾಜ್​ ಮೇಹು ಅವರು ಇಬ್ಬರಿಗೂ ಕಥೆ ಹೇಳಿದ್ದರು. ಆದರೆ ಅವರು ಒಪ್ಪಿಕೊಳ್ಳಲಿಲ್ಲ. ನಂತರ ಆ ಪಾತ್ರ ಎಸ್ತರ್​ ನರೋನಾ ಪಾಲಾಯಿತು. ಅಷ್ಟಕ್ಕೂ ಆ ಪಾತ್ರದಲ್ಲಿ ಅಂಥದ್ದೇನಿದೆ? ಶ್ರದ್ಧಾ ಶ್ರೀನಾಥ್​ ಮತ್ತು ರಾಧಿಕಾ ಪಂಡಿತ್​ ಅವರು ಆ ಪಾತ್ರವನ್ನು ಒಪ್ಪಿಕೊಳ್ಳದೇ ಇರಲು ಕಾರಣ ಏನು? ಈ ವಿಚಾರಗಳ ಬಗ್ಗೆ ನಿರ್ದೇಶಕ ಪ್ರಕಾಶ್​ರಾಜ್​ ಮೇಹು ಅವರು ವಿವರಿಸಿದ್ದಾರೆ.

‘ಡಿಎನ್​ಎ’ ಸಿನಿಮಾದಲ್ಲಿ ತಾಯಿ-ಮಗುವಿನ ಸಂಬಂಧದ ಕಥೆ ಹೇಳಲಾಗಿದೆ. ಮಗುವಿನ ತಾಯಿ ಪಾತ್ರವನ್ನು ಎಸ್ತರ್​ ನರೋನಾ ನಿಭಾಯಿಸಿದ್ದಾರೆ. ಮಗುವಿನ ತಾಯಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಶ್ರದ್ಧಾ ಶ್ರೀನಾಥ್​​ ಮತ್ತು ರಾಧಿಕಾ ಪಂಡಿತ್​ ಅವರು ಆ ಪಾತ್ರವನ್ನು ಮಾಡಲು ಹಿಂದೇಟು ಹಾಕಿದರು.

‘ಕಲಾವಿದರಿಗೋಸ್ಕರ​ ನಾನು ಕಥೆ ಆಯ್ಕೆ ಮಾಡಿಕೊಂಡಿಲ್ಲ. ಕಥೆಗಾಗಿ ಕಲಾವಿದರನ್ನು ಆಯ್ಕೆ ಮಾಡಿಕೊಂಡೆ. ‘ಯು ಟರ್ನ್’​ ಸಿನಿಮಾ ನೋಡಿದ ಬಳಿಕ ರೋಜರ್​ ನಾರಾಯಣ್​​ ಅವರ ಸೂಕ್ಷ್ಮವಾದ ಅಭಿನಯ ಇಷ್ಟ ಆಗಿತ್ತು. ಹಾಗಾಗಿ ಅವರನ್ನು ನಮ್ಮ ಸಿನಿಮಾದ ಒಂದು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡೆ. ನೇರವಾಗಿ ಹೆಸರು ಹೇಳಬೇಕು ಎಂದರೆ ನಾನು ರಾಧಿಕಾ ಪಂಡಿತ್​ ಅವರನ್ನು ಒಪ್ಪಿಸೋಕೆ ಪ್ರಯತ್ನಿಸಿದೆ. ಅವರು ಕಥೆ ಕೇಳಿ ಇಷ್ಟಪಟ್ಟರು. ಆದರೆ ಮಗುವಿನ ತಾಯಿಯ ಪಾತ್ರ ಮಾಡಬೇಕಾ ಎಂಬ ಕಾರಣಕ್ಕೆ ಹಿಂದೇಟು ಹಾಕಿದರು. ನಂತರ ಶ್ರದ್ಧಾ ಶ್ರೀನಾಥ್​ ಕೂಡ ಅದೇ ಕಾರಣ ನೀಡಿದರು’ ಎಂದಿದ್ದಾರೆ ನಿರ್ದೇಶಕರು.

ಅಂತಿಮವಾಗಿ ಆ ಪಾತ್ರ ಎಸ್ತರ್​ ನರೋನಾ ಪಾಲಾಯಿತು. ಅವರ ಜೊತೆ ರೋಜರ್​ ನಾರಾಯಣ್​, ಯಮುನಾ, ಅಚ್ಯುತ್​ ಕುಮಾರ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ‘ಆರಂಭದಲ್ಲಿ ಎಸ್ತರ್​ ನರೋನಾ ಅವರನ್ನು ಆಯ್ಕೆ ಮಾಡಿಕೊಂಡಾಗ ನನಗೆ ಭಯ ಇತ್ತು. ಆದರೆ ಅವರ ನಟನೆ ನೋಡಿದ ಬಳಿಕ ಅವರು ಕೂಡ ಸೂಕ್ತ ನಟಿ ಎನಿಸಿತು’ ಎಂದು ನಿರ್ದೇಶಕರು ಹೇಳಿದ್ದಾರೆ.​

‘ಪರಮಾತ್ಮ’, ‘ನಾಗಮಂಡಲ’, ‘ತಾಯಿ ಸಾಹೇಬ’, ‘ದೇವೀರಿ’ ಸೇರಿದಂತೆ ಅನೇಕ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಪ್ರಕಾಶ್​ ರಾಜ್​ ಮೇಹು ಅವರಿಗೆ ಇದೆ. ಕಲಾತ್ಮಕ ಹಾದಿಯಲ್ಲಿ ಒಂದು ವ್ಯಾಪಾರಿ ಸಿನಿಮಾ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದ್ದ ಅವರು ಈಗ ‘ಡಿಎನ್​ಎ’ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

‘ಈಗಾಗಲೇ ನಮ್ಮ ಸಿನಿಮಾವನ್ನು ನಾವು ಕೆಲವು ಪ್ರೇಕ್ಷಕರಿಗೆ ತೋರಿಸಿದ್ದೇವೆ. ಮುಖ್ಯವಾಗಿ ಮಹಿಳಾ ಪ್ರೇಕ್ಷಕರಿಗೆ ತುಂಬ ಇಷ್ಟ ಆಗಿದೆ. ಚಿತ್ರಮಂದಿರಲ್ಲೂ ಕೌಟುಂಬಿಕ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಇಷ್ಟ ಆಗಲಿದೆ ಎಂಬ ಭರವಸೆ ಇದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ:

ಹೊಸ ಹುರುಪಿನಿಂದ ರಿಲೀಸ್​ಗೆ ಸಜ್ಜಾದ ‘ಡಿಎನ್​ಎ’: ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆ ಮತ್ತೆ ಶುರು

ರಾಧಿಕಾ ಪಂಡಿತ್​ ಮೊಬೈಲ್​ನಲ್ಲಿ ಯಶ್​ ಹೆಸರು ಏನೆಂದು ಸೇವ್​ ಆಗಿದೆ? ವೈರಲ್​ ಆಯ್ತು ವಿಡಿಯೋ

ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್ ಸೇಲ್ 26ಕ್ಕೆ ಸ್ಟಾರ್ಟ್​!
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
CM Siddaramaiah Press Meet Live: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
ಬೆಂಗಳೂರಿನ ಅನೇಕ ಕೆರೆಗಳಲ್ಲಿ ಕರಗದೇ ತೇಲುತ್ತಿವೆ ಗಣೇಶ ಮೂರ್ತಿಗಳು
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಕುರಿತು ಉಪೇಂದ್ರ ವಿಶೇಷ ಸುದ್ದಿಗೋಷ್ಠಿ; ಇಲ್ಲಿದೆ ಲೈವ್ ವಿಡಿಯೋ
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಮೆಡಿಕಲ್​ಗಳಲ್ಲೂ ಸಿಂಥೆಟಿಕ್ ಡ್ರಗ್ಸ್: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?