Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಚಿನ ಕಂಠ ಇದ್ದರೂ ಹಾಡುತ್ತಿರಲಿಲ್ಲ ರಾಜ್​ಕುಮಾರ್; ಆ ವ್ಯಕ್ತಿಯ ಒತ್ತಾಯಕ್ಕೆ ಗಾಯಕರಾದರು

ರಾಜ್ ಕುಮಾರ್ ಅವರು ಆರಂಭದಲ್ಲಿ ಹಾಡು ಹಾಡಲು ಇಷ್ಟಪಡುತ್ತಿರಲಿಲ್ಲ. "ಸಂಪತ್ತಿಗೆ ಸವಾಲ್" ಚಿತ್ರದ "ಯಾರೇ ಕೂಗಾಡಲಿ" ಹಾಡು ಅವರ ಮೊದಲ ಹಾಡು. ತಮ್ಮ ಹಾಡಿನಿಂದ ಇತರ ಗಾಯಕರಿಗೆ ಅವಕಾಶ ಕಡಿಮೆಯಾಗುತ್ತದೆ ಎಂದು ಅವರು ಭಾವಿಸಿದ್ದರು. ಆದರೆ, ಸಂಗೀತ ಸಂಯೋಜಕರ ಒತ್ತಾಯಕ್ಕೆ ಮಣಿದು ಹಾಡಿದ ಅವರು ನಂತರ ಖ್ಯಾತ ಗಾಯಕರಾದರು.

ಕಂಚಿನ ಕಂಠ ಇದ್ದರೂ ಹಾಡುತ್ತಿರಲಿಲ್ಲ ರಾಜ್​ಕುಮಾರ್; ಆ ವ್ಯಕ್ತಿಯ ಒತ್ತಾಯಕ್ಕೆ ಗಾಯಕರಾದರು
ರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on: Apr 12, 2025 | 11:39 AM

ರಾಜ್​ಕುಮಾರ್ (Rajkumar) ಅವರು ನಮ್ಮನ್ನು ಬಿಟ್ಟುಹೋಗಿ ಬರೋಬ್ಬರಿ 19 ವರ್ಷಗಳು ಕಳೆದು ಹೋಗಿವೆ. ಇಂದು (ಏಪ್ರಿಲ್ 12) ಅವರ ಪುಣ್ಯತಿಥಿ. ರಾಜ್​ಕುಮಾರ್ ಅವರು ನಮ್ಮನ್ನು ಬಿಟ್ಟು ಹೋದರೂ ಅವರು ಹಾಕಿಕೊಟ್ಟ ಆದರ್ಶಗಳು, ಅವರು ಮಾಡಿದ ಸಿನಿಮಾಗಳು ಎಂದಿಗೂ ಅಮರ. ಈ ವ್ಯಕ್ತಿ ಮನಸ್ಸು ಮಾಡದೆ ಇದ್ದಿದ್ದರೆ ರಾಜ್​ಕುಮಾರ್ ಹಾಡನ್ನು ಹಾಡುತ್ತಲೇ ಇರಲಿಲ್ಲ. ಶ್ರೇಷ್ಠ ಗಾಯಕರು ಸಿಗುತ್ತಾ ಇರಲಿಲ್ಲ. ಅಷ್ಟಕ್ಕೂ ಅವರು ಹಾಡದೇ ಇರಲು ಕಾರಣವಾದ ವಿಚಾರ ಏನು? ಆ ಬಗ್ಗೆ ಇಲ್ಲಿದೆ ವಿವರ.

ರಾಜ್​ಕುಮಾರ್ ಅವರು ಮೊದಲು ಹಾಡಿದ್ದು ‘ಸಂಪತ್ತಿಗೆ ಸವಾಲ್’ ಚಿತ್ರದ ‘ಯಾರೇ ಕೂಗಾಡಲಿ..’ ಹಾಡು. ಈ ಹಾಡು ಸೂಪರ್ ಹಿಟ್ ಆಯಿತು. ಈ ಹಾಡನ್ನು ಮೊದಲು ರಾಜ್​ಕುಮಾರ್ ಹಾಡಲು ಒಪ್ಪಿರಲಿಲ್ಲ. ತಾವು ಹಾಡನ್ನೂ ಹಾಡಲು ಆರಂಭಿಸಿದರೆ ಉಳಿದ ಗಾಯಕರಿಗೆ ಇದರಿಂದ ಅವಕಾಶ ತಪ್ಪಿ ಹೋಗುತ್ತದೆ ಎಂಬುದು ಅವರ ಆಲೋಚನೆ ಆಗಿತ್ತು. ಈ ಕಾರಣದಿಂದ ರಾಜ್​ಕುಮಾರ್ ಅವರು ಈ ಬಗ್ಗೆ ಸಾಕಷ್ಟು ಆಲೋಚಿಸುತ್ತಿದ್ದರು ಮತ್ತು ಹಾಡಲು ಹಿಂದೇಟು ಹಾಕುತ್ತಿದ್ದರು.

ಈ ಕಾರಣದಿಂದಲೇ ರಾಜ್​ಕುಮಾರ್ ಅವರು ಹಲವು ಆಫರ್​ಗಳನ್ನು ರಿಜೆಕ್ಟ್ ಮಾಡುತ್ತಾ ಬಂದರು. ಆದರೆ, ‘ಯಾರೇ ಕೂಗಾಡಲಿ..’ ಹಾಡನ್ನು ರಾಜ್​ಕುಮಾರ್ ಬಳಿಯೇ ಹೇಳಿಸಬೇಕು ಎಂದು ಒತ್ತಾಯ ಹೇಳಿದರು. ಎಲ್ಲರ ಒತ್ತಾಯಕ್ಕೆ ಮಣಿದ ರಾಜ್​ಕುಮಾರ್ ಅವರು ಹಾಡನ್ನು ಹಾಡಿದರು. ಅಲ್ಲಿಂದ ರಾಜ್​ಕುಮಾರ್ ಅವರ ಅದೃಷ್ಟ ಬದಲಾಗಿ ಹೋಯಿತು. ಗಾಯಕನಾಗಿ ರಾಜ್​ಕುಮಾರ್​ಗೆ ಬೇಡಿಕೆ ಸೃಷ್ಟಿ ಆಯಿತು.

ಇದನ್ನೂ ಓದಿ
Image
‘ಓಂ’ ಚಿತ್ರದ ತಕರಾರು; ರಾಜ್​ಕುಮಾರ್ ಹೇಳಿದ ಒಂದೇ ಮಾತಿಗೆ ಎಲ್ಲರೂ ಸೈಲೆಂಟ್
Image
ಸಿಂಪತಿ ಗಳಿಸಲು ತಮಗೆ ಕಷ್ಟ ಇತ್ತು ಎಂದು ಕಥೆ ಹೇಳಿದ್ರಾ ವಿಕ್ಕಿ ಕೌಶಲ್?
Image
ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆದ ರವಿತೇಜ ಮಗಳು ಮೋಕ್ಷಧಾ
Image
‘ಲಕ್ಷ್ಮೀ ಬಾರಮ್ಮ’ ಕೊನೆ ಆಗುವುದಕ್ಕೂ ಮೊದಲು ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ

ಇದನ್ನೂ ಓದಿ: ‘ಓಂ’ ಚಿತ್ರಕ್ಕೆ ಕೇಳಿ ಬಂದಿತ್ತು ತಕರಾರು; ರಾಜ್​ಕುಮಾರ್ ಹೇಳಿದ ಒಂದೇ ಮಾತಿಗೆ ಎಲ್ಲರೂ ಸೈಲೆಂಟ್

‘ನಾರಿಯಾ ಸೀರೆ ಕದ್ದ..’, ‘ಬಾನಿಗೊಂದು ಎಲ್ಲೆ ಎಲ್ಲಿದೆ..’, ‘ನಾ ನಿನ್ನ ಮರೆಯಲಾರೆ..’, ಸೇರಿ ಹಲವು ಹಾಡುಗಳನ್ನು ಅವರು ಹಾಡಿದ್ದಾರೆ. ಆ ಬಳಿಕ ಪುನೀತ್ ರಾಜ್​ಕುಮಾರ್ ನಟನೆಯ ಕೆಲವು ಸಿನಿಮಾಗಳ ಹಾಡಿಗೂ ರಾಜ್​ಕುಮಾರ್ ಧ್ವನಿ ಆಗಿದ್ದರು. ರಾಜ್​ಕುಮಾರ್ ಅವರನ್ನು ಪುನೀತ್ ಅವರು ಫಾಲೋ ಮಾಡಿದ್ದರು. ಪುನೀತ್ ಕೂಡ ಹಲವು ಹಾಡುಗಳನ್ನು ಹಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ