AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಓಂ’ ಚಿತ್ರಕ್ಕೆ ಕೇಳಿ ಬಂದಿತ್ತು ತಕರಾರು; ರಾಜ್​ಕುಮಾರ್ ಹೇಳಿದ ಒಂದೇ ಮಾತಿಗೆ ಎಲ್ಲರೂ ಸೈಲೆಂಟ್

Rajkumar Death Anniversary: ಶಿವರಾಜ್ ಕುಮಾರ್ ಅಭಿನಯದ 'ಓಂ' ಚಿತ್ರವು ತನ್ನ 30ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಚಿತ್ರವು ಸೆನ್ಸಾರ್ ಮಂಡಳಿಯಿಂದ ತೀವ್ರ ವಿರೋಧ ಎದುರಿಸಿತು. ಆದರೆ, ರಾಜ್ ಕುಮಾರ್ ಅವರ ಒಂದೇ ಒಂದು ಮಾತಿನಿಂದ ಈ ವಿವಾದ ಬಗೆಹರಿಯಿತು. ಕೋಟೆ ಪ್ರಭಾಕರ್ ಅವರ ಸಂದರ್ಶನದಲ್ಲಿ ಈ ಘಟನೆಯ ವಿವರಗಳನ್ನು ತಿಳಿಸಲಾಗಿದೆ.

‘ಓಂ’ ಚಿತ್ರಕ್ಕೆ ಕೇಳಿ ಬಂದಿತ್ತು ತಕರಾರು; ರಾಜ್​ಕುಮಾರ್ ಹೇಳಿದ ಒಂದೇ ಮಾತಿಗೆ ಎಲ್ಲರೂ ಸೈಲೆಂಟ್
ರಾಜ್​ಕುಮಾರ್-ಓಂ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Apr 12, 2025 | 9:02 AM

Share

ಶಿವರಾಜ್​ಕುಮಾರ್ (Shiva Rajkumar) ನಟನೆಯ ‘ಓಂ’ ಸಿನಿಮಾ 1995ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ನೂರಾರು ಬಾರಿ ರೀ-ರಿಲೀಸ್ ಆಗಿದೆ. ಈ ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಿದ್ದರೆ, ಪಾರ್ವತಮ್ಮ ಅವರು ನಿರ್ಮಾಣ ಮಾಡಿದ್ದರು. ಈ ಸಿನಿಮಾ ಈಗ 30 ವರ್ಷಗಳನ್ನು ಪೂರೈಸುತ್ತಿದೆ. ಈ ಚಿತ್ರಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಸೆನ್ಸಾರ್ ಮಂಡಳಿಯಿಂದಲೇ ತಕರಾರರು ಎದ್ದಿತ್ತು. ಈ ಬಗ್ಗೆ ರಾಜ್​ಕುಮಾರ್ ಹೇಳಿದ ಒಂದೇ ಮಾತಿನಿಂದ ಎಲ್ಲವೂ ಸೈಲೆಂಟ್ ಆಯಿತು.

ಇಂದು (ಏಪ್ರಿಲ್ 12) ರಾಜ್​ಕುಮಾರ್ ಅವರ ಪುಣ್ಯತಿಥಿ. ಅವರು ನಮ್ಮನ್ನು ಅಗಲಿ 19 ವರ್ಷಗಳು ಕಳೆದಿವೆ. ರಾಜ್​ಕುಮಾರ್ ಅವರು ಇಲ್ಲದೆ ಹೋದರು ಅವರು ಮಾಡಿದ ಕೆಲಸಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ರಾಜ್​ಕುಮಾರ್ ಪುಣ್ಯತಿಥಿ ವೇಳೆ ಅವರು ಮಾಡಿದ ಕೆಲವು ಒಳ್ಳೆಯ ಕೆಲಸಗಳ ಬಗ್ಗೆ ಮಾತನಾಡೋಣ. ಅದರಲ್ಲಿ ‘ಓಂ’ ಚಿತ್ರದ ಸಂದರ್ಭದಲ್ಲಿ ಎದ್ದ ತಕಾರರು ಕೂಡ ಒಂದು. ಈ ಬಗ್ಗೆ ಕೋಟೆ ಪ್ರಭಾಕರ್ ಅವರು ‘ಕಲಾಮಾಧ್ಯಮ’ ಯೂಟ್ಯೂಬ್ ಚಾನೆಲ್​ಗ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

‘ಓಂ ಸಿನಿಮಾ ಇನ್ನೂ ಅದ್ದೂರಿಯಾಗಿತ್ತು. ಆದರೆ, ಸಿನಿಮಾಗೆ ಸೆನ್ಸಾರ್ ಮಂಡಳಿಯವರು ತಕರಾರು ಎತ್ತಿದ್ದರು. ರೌಡಿಗಳನ್ನು ನೀವೇ ಬೆಳೆಸುತ್ತಿದ್ದೀರಾ ಎಂದು ಸೆನ್ಸಾರ್ ಮಂಡಳಿಯವರು ಹೇಳಿದರು. ಹಾಗಾಗಿ ಹಲವು ಕಡೆ ಟ್ರಿಮ್ ಮಾಡಲಾಯಿತು. ಆಮೇಲೆ ರಾಜ್​ಕುಮಾರ್ ಅವರೇ ಬಂದು, ಬ್ರಾಹ್ಮಣ ರೌಡಿ ಆಗೋದಷ್ಟೇ ಅಲ್ಲವಾ? ಕಥೆ ಹಾಗಿದೆ. ಅದಕ್ಕೆ ಹಾಗೆ ಮಾಡಲಾಗಿದೆ ಎಂದು ರಾಜ್​ಕುಮಾರ್ ಮನ ಒಲಿಸಿದ ಬಳಿಕ ಯಾರೂ ಸಿನಿಮಾ ಬಗ್ಗೆ ಮಾತನಾಡಲಿಲ್ಲ’ ಎಂದು ಕೋಟೆ ಪ್ರಭಾಕರ್ ಹೇಳಿದ್ದಾರೆ.

ಇದನ್ನೂ ಓದಿ
Image
ಸಿಂಪತಿ ಗಳಿಸಲು ತಮಗೆ ಕಷ್ಟ ಇತ್ತು ಎಂದು ಕಥೆ ಹೇಳಿದ್ರಾ ವಿಕ್ಕಿ ಕೌಶಲ್?
Image
ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆದ ರವಿತೇಜ ಮಗಳು ಮೋಕ್ಷಧಾ
Image
‘ಲಕ್ಷ್ಮೀ ಬಾರಮ್ಮ’ ಕೊನೆ ಆಗುವುದಕ್ಕೂ ಮೊದಲು ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ
Image
ಕಂಗನಾ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದ್ದು ನಿಜವೇ? ಕಳ್ಳಾಟ ಬಯಲು

ಇದನ್ನೂ ಓದಿ: ‘ನನ್ನ ಸುದೀಪ್ ಮಧ್ಯೆ ಸಣ್ಣಪುಟ್ಟ ಮನಸ್ತಾಪ ಆಗಿರಬಹುದು, ಆದರೆ ವೈರತ್ವ ಬೆಳೆದಿಲ್ಲ’; ಶಿವರಾಜ್​ಕುಮಾರ್

ರಾಜ್​ಕುಮಾರ್ ಅವರು ಸಿನಿಮಾ ರಂಗಕ್ಕೆ ನೀಡಿದ ಕೊಡಗೆ ತುಂಬಾನೇ ದೊಡ್ಡದು. ಅವರು ಅನೇಕರನ್ನು ಬೆಳೆಸಿದ್ದಾರೆ. ಅವರು ಇಲ್ಲ ಎಂಬ ನೋವು ಅಭಿಮಾನಿಗಳಿಗೆ ಎಂದಿಗೂ ಮರೆ ಆಗುವಂಥದ್ದಲ್ಲ. ಅವರ ಹಿಟ್ ಚಿತ್ರಗಳನ್ನು ಈಗಲೂ ಫ್ಯಾನ್ಸ್ ವೀಕ್ಷಿಸುತ್ತಾರೆ. ರಾಜ್​ಕುಮಾರ್ ಅವರ ಪುಣ್ಯಸ್ಮರಣೆ ಪ್ರಯುಕ್ತ ಕುಟುಂಬದವರು ರಾಜ್​ಕುಮಾರ್ ಸಮಾಧಿಗೆ ತೆರಳಿ ಪೂಜೆ ಸಲ್ಲಿಸೋ ಸಾಧ್ಯತೆ ಇದೆ. ರಾಜ್​ಕುಮಾರ್ ಹುಟ್ಟಿದ್ದು ಹಾಗೂ ಸತ್ತಿದ್ದು ಒಂದೇ ತಿಂಗಳಲ್ಲಿ. ಅವರಿಗೆ ಏಪ್ರಿಲ್ 24 ಜನ್ಮದಿನ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ