AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌತಮ್​ನ ಹೊರಹಾಕಿ ಹಾಯಾಗಿದ್ದ ಜಯದೇವ್​​ಗೆ ಬ್ಯಾಂಕ್​ನಿಂದ ಶಾಕ್; ಇದನ್ನು ಯಾರೂ ಊಹಿಸಿರಲಿಲ್ಲ

ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ನಂತರದ ತಿರುವು ಕಥಾವಸ್ತುವಿಗೆ ಹೊಸ ವಿನ್ಯಾಸ ತಂದಿದೆ. ಜಯದೇವ್ ಅವರು 600 ಕೋಟಿ ರೂಪಾಯಿ ಸಾಲದ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಾಲದಿಂದಾಗಿ ಅವರ ಎಲ್ಲಾ ಆಸ್ತಿ ಮಾರಾಟವಾಗುವ ಸಂಭವವಿದೆ. ಇದರಿಂದ ಜಯದೇವ್ ಮತ್ತು ಅವರ ತಾಯಿ ಶಕುಂತಲ ಬೀದಿಗೆ ಬೀಳುವ ಅಪಾಯವಿದೆ.

ಗೌತಮ್​ನ ಹೊರಹಾಕಿ ಹಾಯಾಗಿದ್ದ ಜಯದೇವ್​​ಗೆ ಬ್ಯಾಂಕ್​ನಿಂದ ಶಾಕ್; ಇದನ್ನು ಯಾರೂ ಊಹಿಸಿರಲಿಲ್ಲ
ಅಮೃತಧಾರೆ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 15, 2025 | 10:07 AM

Share

‘ಅಮೃತಧಾರೆ’ ಧಾರಾವಾಹಿ (Amruthadhaare) ಈಗ ಹೊಸ ತಿರುವನ್ನು ಪಡೆದುಕೊಂಡಿದ್ದು ಗೊತ್ತೇ ಇದೆ. ಧಾರಾವಾಹಿಯ ಕಥೆ ನೇರವಾಗಿ ಐದು ವರ್ಷ ಮುಂದಕ್ಕೆ ಹೋಗಿದೆ. ಈ ಎಲ್ಲಾ ಘಟನೆ ನಡೆಯುವ ಮೊದಲು ಭೂಮಿಕಾ ಮಗನನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಳು. ಆ ಬಳಿಕ ಮನೆಯನ್ನು ಮಲತಾಯಿ ಹಾಗೂ ಜಯದೇವ್ ಹೆಸರಿಗೆ ಬರೆದಿಟ್ಟು ಹೊರಟೇ ಹೋಗಿದ್ದ. ಈಗ ಜಯದೇವ್​ಗೆ ಶಾಕ್ ಸಿಕ್ಕಿದೆ.

ಜಯದೇವ್ ಇಡೀ ಆಸ್ತಿ ಅನುಭವಿಸುವ ಕನಸು ಕಂಡಿದ್ದ. ಇದಕ್ಕೆ ಆತನ ತಾಯಿ ಶಕುಂತಲ ಕೂಡ ಸಾಥ್ ನೀಡಿದ್ದಳು. ಇದು ಯಶಸ್ಸು ಕಂಡಿತ್ತು. ಗೌತಮ್ ಎಲ್ಲಾ ಆಸ್ತಿಯನ್ನು ಇವರ ಹೆಸರಿಗೆ ಬರೆದುಕೊಟ್ಟು ಮನೆ ಬಿಟ್ಟು ಹೋಗಿದ್ದ. ಎಲ್ಲಾ ಆಸ್ತಿಯನ್ನು ಇವರು ಎಂಜಾಯ್ ಮಾಡುತ್ತಿದ್ದರು. ಆದರೆ, ಈಗ ಎಲ್ಲಾ ಉಲ್ಟ್ ಆಗಿದೆ.

ಬ್ಯಾಂಕ್​ನವರು ಬಂದು ಜಯದೇವ್​ಗೆ ನೋಟಿಸ್ ನೀಡಿದ್ದಾರೆ. ನಿಮ್ಮ ಕಂಪನಿಯವರು ನಮ್ಮಿಂದ 600 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು. ಅದನ್ನು ಹಿಂದಿರುಗಿಸಬೇಕು ಎಂದು ಹೇಳಿದ್ದಾರೆ. ಇದು ಜಯದೇವ್​ಗೆ ಶಾಕ್ ಮೂಡಿಸಿದೆ. ಇಷ್ಟು ದಿನ ಪಬ್ ಎಂದು ಎಂಜಾಯ್ ಮಾಡುತ್ತಿದ್ದ ಆತನಿಗೆ ಈ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ.

ಇದನ್ನೂ ಓದಿ
Image
ರೇಣುಕಾಸ್ವಾಮಿ ಪತ್ನಿ ಸಹನಾಗೆ ಸಿಗಲಿದೆ ಸರ್ಕಾರಿ ಕೆಲಸ; ಶಾಸಕನ ಭರವಸೆ
Image
ಕಿರುತೆರೆ ನಟಿಯ ಪತಿ​ಗೆ ಕಾರು ಅಪಘಾತ; ಪ್ರಾಣಾಪಾಯದಿಂದ ಜಸ್ಟ್ ಮಿಸ್
Image
ಶರಣ್-ತರುಣ್ ಸುಧೀರ್ ಗೆಳೆತನ ಎಂಥದ್ದು? ಯಾರೂ ಊಹಿಸಲೂ ಸಾಧ್ಯವಿಲ್ಲ
Image
ರಿಯಾಲಿಟಿ ಶೋಗೆ ಬರಲ್ಲ, ಬರಲ್ಲ ಅಂತ ಬಂದೇ ಬಿಟ್ರು ನಟಿ ಸುಧಾರಾಣಿ

ಇದನ್ನೂ ಓದಿ: ಟಾಪ್​ನಲ್ಲಿ ಯಾರೂ ಊಹಿಸದ ಸೀರಿಯಲ್; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?

ಈಗ 600 ಕೋಟಿ ರೂಪಾಯಿ ಸಾಲ ಹಿಂದಿರುಗಿಸಬೇಕು ಎಂದರೆ ಎಲ್ಲಾ ಆಸ್ತಿಯನ್ನು ಮಾರಬೇಕಾದ ಪರಿಸ್ಥಿತಿ ಬರಬಹುದು. ಹಾಗಾದಲ್ಲಿ ಇವರು ಏನು ಅಂದುಕೊಂಡಿದ್ದರೋ ಅದು ಯಶಸ್ಸು ಕಾಣುವುದಿಲ್ಲ. ಅವರು ಬೀದಿಗೆ ಬರೋ ಸಾಧ್ಯತೆ ಇದೆ. ಈ ವೇಳೆ ಮತ್ತೆ ಗೌತಮ್ ಕಾಲು ಹಿಡಿದುಕೊಳ್ಳೋ ಪರಿಸ್ಥಿತಿ ಬರಬೇಕಾಗಿ ಬರಹುದು. ಈಗಾಗಲೇ ಜಯದೇವ್ ಎರಡನೇ ಪತ್ನಿಗೆ ಅಸಮಾಧಾನ ಮೂಡಿದೆ. ತನಗೆ ಅಧಿಕಾರ ಸಿಗುತ್ತಿಲ್ಲ ಎಂದು ಆಕೆ ಬೇಸರ ಮಾಡಿಕೊಂಡಿದ್ದಾಳೆ. ಆಕೆಗೆ ಈ ವಿಚಾರ ಗೊತ್ತಾದರೆ ನೇರವಾಗಿ ಮನೆ ಬಿಟ್ಟು ಹೋಗುವ ಸಾಧ್ಯತೆ ಇದೆ.

ಗೌತಮ್ ಹಾಗೂ ಭೂಮಿಕಾ ಈಗ ಒಂದೇ ಊರು ಸೇರಿದ್ದಾಳೆ. ಇಬ್ಬರೂ ಭೇಟಿ ಆಗುವ ಸನಿಹಕ್ಕೆ ಬಂದಿದ್ದಾಳೆ. ಇವರ ಮತ್ತೆ ಭೇಟಿ ಆಗಲಿ ಎಂದು ಫ್ಯಾನ್ಸ್ ಕೂಡ ಬಯಸುತ್ತಿದ್ದಾರೆ. ಇವರ ಭೇಟಿ ಯಾವಾಗ ಆಗುತ್ತದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ