Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK9: 50 ದಿನಕ್ಕೆ ಅಚ್ಚರಿ​ ನೀಡಿದ ಬಿಗ್​ ಬಾಸ್​; ಈ ವಾರ ಆಗಲೇ ಇಲ್ಲ ಎಲಿಮಿನೇಷನ್​; ಆದ್ರೂ ಇತ್ತು ಶಾಕ್​

Bigg Boss Elimination: ತಾವು ಎಲಿಮಿನೇಟ್​ ಆದರೂ ಪರವಾಗಿಲ್ಲ ಎಂಬ ಮನಸ್ಥಿತಿಯಲ್ಲಿ ಆರ್ಯವರ್ಧನ್​ ಗುರೂಜಿ ಇದ್ದರು. ಆದರೆ ಈ ವಾರ ಎಲಿಮಿನೇಷನ್​ ಇಲ್ಲ ಎಂಬ ಸತ್ಯ ಗೊತ್ತಾದಾಗ ಅವರು ಕಣ್ಣೀರು ಹಾಕಿದರು.

BBK9: 50 ದಿನಕ್ಕೆ ಅಚ್ಚರಿ​ ನೀಡಿದ ಬಿಗ್​ ಬಾಸ್​; ಈ ವಾರ ಆಗಲೇ ಇಲ್ಲ ಎಲಿಮಿನೇಷನ್​; ಆದ್ರೂ ಇತ್ತು ಶಾಕ್​
ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 13, 2022 | 10:12 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ರಿಯಾಲಿಟಿ ಶೋನಲ್ಲಿ 50 ದಿನ ಕಳೆದಿದೆ. ಈವರೆಗೂ ಈ ಸೀಸನ್​ನಲ್ಲಿ 6 ಮಂದಿ ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದಾರೆ. ಆದರೆ 7ನೇ ವಾರದಲ್ಲಿ ಅಚ್ಚರಿ ನೀಡಲಾಗಿದೆ. ಯಾಕೆಂದರೆ ಈ ವಾರ ಯಾರೂ ಕೂಡ ಎಲಿಮಿನೇಟ್​ ಆಗಿಲ್ಲ. ಆರ್ಯವರ್ಧನ್​ ಗುರೂಜಿ (Aryavardhan Guruji), ರೂಪೇಶ್​ ರಾಜಣ್ಣ, ಅನುಪಮಾ ಗೌಡ, ಅರುಣ್​ ಸಾಗರ್​, ಅಮೂಲ್ಯ ಗೌಡ, ದಿವ್ಯಾ ಉರುಡುಗ ಅವರು ನಾಮಿನೇಟ್​ ಆಗಿದ್ದರು. ಶನಿವಾರವೇ ಕಿಚ್ಚ ಸುದೀಪ್ ​(Kichcha Sudeep) ಅವರು ಎಲಿಮಿನೇಷನ್​ ಪ್ರಕ್ರಿಯೆ ಆರಂಭಿಸಿದರು. ಭಾನುವಾರದ ಎಪಿಸೋಡ್​ನಲ್ಲೂ ಸ್ಪರ್ಧಿಗಳ ಎದೆಯಲ್ಲಿ ಢವ ಢವ ಜೋರಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಎಲಿಮಿನೇಷನ್​ ಇಲ್ಲ ಎಂಬುದನ್ನು ಬಿಗ್​ ಬಾಸ್​ ಘೋಷಿಸಿದರು.

ಎಲಿಮಿನೇಷನ್​ ಪ್ರಕ್ರಿಯೆಯ ಕೊನೇ ಹಂತದಲ್ಲಿ ರೂಪೇಶ್​ ರಾಜಣ್ಣ ಮತ್ತು​ ಆರ್ಯವರ್ಧನ್​ ಗುರೂಜಿ ಅವರು ಡೇಂಜರ್​ ಝೋನ್​ನಲ್ಲಿ ಇದ್ದರು. ಅಂತಿಮವಾಗಿ ಆರ್ಯವರ್ಧನ್​ ಎಲಿಮಿನೇಟ್​ ಎಂದು ಸುದೀಪ್​ ಹೇಳಿದರು. ಎಲ್ಲರಿಗೂ ವಿದಾಯ ಹೇಳಿ, ದೊಡ್ಮನೆಯಿಂದ ಹೊರಡಲು ಗುರೂಜಿ ಸಿದ್ಧವಾದರು. ಆದರೆ ಬಾಗಿಲು ಬಳಿ ಬಂದು ನಿಂತ ಅವರಿಗೆ ಶಾಕ್ ಕಾದಿತ್ತು. ಹೊರಹೋಗಲು ಬಾಗಿಲು ತೆರೆಯಲೇ ಇಲ್ಲ! ‘ಈ ವಾರ ಎಲಿಮಿನೇಷನ್​ ಇಲ್ಲ. ಹಾಗಾಗಿ ಆರ್ಯವರ್ಧನ್​ ವಾಪಸ್​ ಮನೆ ಒಳಗೆ ಹೋಗಬೇಕು’ ಎಂದು ಘೋಷಿಸಿದಾಗ ಎಲ್ಲರೂ ಖುಷಿಯಿಂದ ಕುಣಿದಾಡಿದರು.

ಭಾನುವಾರದ ಸಂಚಿಕೆ ಶುರುವಾದಾಗ ಎಲಿಮಿನೇಟ್​ ಆದರೂ ಪರವಾಗಿಲ್ಲ ಎಂಬ ಮನಸ್ಥಿತಿಯಲ್ಲಿ ಆರ್ಯವರ್ಧನ್​ ಗುರೂಜಿ ಇದ್ದರು. ಮಗಳನ್ನು ನೋಡಬೇಕು ಎಂಬ ತವಕ ಅವರಲ್ಲಿ ಹೆಚ್ಚಾಗಿತ್ತು. ಅದಕ್ಕಾಗಿ ಅವರು ತುದಿಗಾಲಿನಲ್ಲಿ ನಿಂತಿದ್ದರು. ಅಂತಿಮ ಹಂತದಲ್ಲಿ ‘ನನ್ನನ್ನೇ ಕಳಿಸಿ, ರೂಪೇಶ್​ ರಾಜಣ್ಣ ಅವರನ್ನು ಉಳಿಸಿಕೊಳ್ಳಿ’ ಎಂದು ಓಪನ್​ ಆಗಿಯೇ ಅವರು ಹೇಳಿದ್ದರು. ಆದರೆ ಅವರು ನಿರೀಕ್ಷಿಸಿದಂತೆ ಆಗಲಿಲ್ಲ. ತಾವು ಎಲಿಮಿನೇಟ್​ ಆಗುತ್ತಿಲ್ಲ ಎಂಬ ಸತ್ಯ ಗೊತ್ತಾದಾಗ ಆರ್ಯವರ್ಧನ್​ ಗುರೂಜಿ ಅವರು ಕಣ್ಣೀರು ಹಾಕಿದರು.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಬಿಗ್​ ಬಾಸ್​ ಶೋ 50 ದಿನ ಪೂರೈಸಿದ್ದಕ್ಕಾಗಿ ವಿಶೇಷ ವಿಡಿಯೋ ಪ್ರದರ್ಶಿಸಲಾಯಿತು. ಅದನ್ನು ನೋಡಿ ಸ್ಪರ್ಧಿಗಳೆಲ್ಲರೂ ಖುಷಿಪಟ್ಟರು. ತಮ್ಮ ಜರ್ನಿಯನ್ನು ತಾವೇ ನೋಡಿ ಎಲ್ಲರ ಮುಖದಲ್ಲೂ ನಗು ಮೂಡಿತು. ಇನ್ನೂ ಚೆನ್ನಾಗಿ ಆಡಬೇಕು ಎಂಬ ಹುಮ್ಮಸ್ಸು ಎಲ್ಲರಿಗೂ ಬಂದಿದೆ.

ಕಿಚ್ಚನ ಚಪ್ಪಾಳೆ ಪಡೆದ ರಾಕೇಶ್​ ಅಡಿಗ:

ಬಿಗ್​ ಬಾಸ್​ ಒಟಿಟಿ ಶೋನಿಂದ ಟಿವಿ ಸೀಸನ್​ಗೆ ಎಂಟ್ರಿ ಪಡೆದು ಎಲ್ಲರ ಗಮನ ಸೆಳೆಯುತ್ತಿರುವ ರಾಕೇಶ್​ ಅಡಿಗ ಅವರು ಈ ವಾರ ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದಾರೆ. 50 ದಿನಗಳ ಪರ್ಫಾರ್ಮೆನ್ಸ್​ ಆಧರಿಸಿ ಅವರಿಗೆ ಈ ವಾರ ಚಪ್ಪಾಳೆ ನೀಡಲಾಗಿದೆ. 12 ಸ್ಪರ್ಧಿಗಳ ನಡುವೆ ಈಗ ಪೈಪೋಟಿ ಮುಂದುವರಿದಿದೆ. ಕಳೆದ ವಾರ ಸಾನ್ಯಾ ಐಯ್ಯರ್​ ಎಲಿಮಿನೇಟ್​ ಆಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ