AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯಲ್ಲಿ ಹರ ಹರ ಮಹಾದೇವ: ಹೃದಯ ಗೆಲ್ಲಬಲ್ಲರೇ ವಿನಯ್?

Bigg Boss: ಬಿಗ್​ಬಾಸ್ ಕನ್ನಡ ಸೀಸನ್​ 10ರ ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಬಿಗ್​ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಸಂಕಷ್ಟದ ಬಾಲ್ಯ ಹೊಂದಿದ್ದ ವಿನಯ್, ಬಿಗ್​ಬಾಸ್​ನ ಹಿರಿಯ ಸದಸ್ಯರಾಗುವ ಸಾಧ್ಯತೆ ಇದೆ. ಅಂದಹಾಗೆ ಇವರ ಹಿನ್ನೆಲೆ ಏನು?

ಬಿಗ್​ಬಾಸ್ ಮನೆಯಲ್ಲಿ ಹರ ಹರ ಮಹಾದೇವ: ಹೃದಯ ಗೆಲ್ಲಬಲ್ಲರೇ ವಿನಯ್?
ವಿನಯ್
ಮಂಜುನಾಥ ಸಿ.
| Edited By: |

Updated on:Oct 09, 2023 | 9:02 AM

Share

ಬಿಗ್​ಬಾಸ್ (Bigg Boss) ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ‘ಹರ ಹರ ಮಹಾದೇವ’ ಧಾರಾವಾಹಿ ನಟ ವಿನಯ್ ಗೌಡ ಮನೆ ಪ್ರವೇಶಿಸಿದ್ದಾರೆ. ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಶಿವ ಪಾತ್ರಧಾರಿಯಾಗಿ ನಟಿಸಿರುವ ವಿನಯ್ ಅದ್ಧೂರಿಯಾಗಿ ಬಿಗ್​ಬಾಸ್ ಮನೆ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಸುರಸುಂದರ ಅವಿನಾಶ್ ಅವರು ನಾಲ್ಕನೇ ಸ್ಪರ್ಧಿ ಆಗಿದ್ದರು, ಆದರೆ ಅವರು ಕಡಿಮೆ ಮತ ಪಡೆದ ಕಾರಣ ಅವರನ್ನು ಮನೆಯ ಒಳಗೆ ಕಳಿಸಲಿಲ್ಲ. ಹಾಗಾಗಿ ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಮನೆಗೆ ಎಂಟ್ರಿ ಪಡೆದರು. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

ತಂದೆ-ತಾಯಿ ವಿಚ್ಛೇದನದಿಂದಾಗಿ ಮಾನಸಿಕ ಏರಿಳಿತಗಳ ಬಾಲ್ಯ ಕಳೆದ ವಿನಯ್, ತಂದೆ-ತಾಯಿಯ ಸಮಸ್ಯೆಯಿಂದಲೇ ಮನೆ ಬಿಟ್ಟು ಹೊರಬಂದು ಸ್ವತಂತ್ರ್ಯವಾಗಿ ಬದುಕಲು ಆರಂಭಿಸಿದರು. ಎಳವೆಯಿಂದಲೇ ಸವಾಲುಗಳನ್ನು ಎದುರಿಸುತ್ತಾ, ಭಿನ್ನ ಹಾದಿಯನ್ನು ತುಳಿಯುತ್ತಾ ಬಂದಿರುವ ವಿನಯ್ ಅವರಿಗೆ ಬಾಡಿಬಿಲ್ಡಿಂಗ್ ಬಹಳ ಮೆಚ್ಚಿನ ಹವ್ಯಾಸ.

ಇದನ್ನೂ ಓದಿ:ಹಿಂದಿ ಬಿಗ್​ಬಾಸ್ ಹೊಸ ಸೀಸನ್ ಘೋಷಣೆ: ಸಲ್ಮಾನ್ ಖಾನ್​ಗೆ ಬಿಡುವೇ ಇಲ್ಲ

‘ಹರ ಹರ ಮಹದೇವ್’ ಧಾರಾವಾಹಿಯಲ್ಲಿ ಶಿವನ ಪಾತ್ರಧಾರಿಯಾಗಿ ಕರ್ನಾಟಕದಲ್ಲಿ ಲಕ್ಷಾಂತರ ಮನ ಗೆದ್ದಿರುವ ವಿನಯ್​ಗೆ ಪ್ರಪಂಚವೆಂದರೆ ಅವರ 14 ವರ್ಷದ ಮಗ ಹಾಗೂ ಪತ್ನಿ ಇಬ್ಬರೇ. ತನ್ನ ಬಾಲ್ಯದಂತೆ ಮಗನ ಬಾಲ್ಯ ಆಗಬಾರದೆಂಬ ಕಾಳಜಿಯಿಂದ ಮಗನೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಾ, ಆರೋಗ್ಯಕರ ವಾತಾವರಣದಲ್ಲಿ ಮಗನನ್ನು ಬೆಳೆಸುತ್ತಿದ್ದಾರೆ.

ಅಂದಹಾಗೆ ವಿನಯ್​ಗೆ ಒಸಿಡಿ ಸಮಸ್ಯೆ ಇದೆ. ಅಂದರೆ ವಿನಯ್​ಗೆ ಎಲ್ಲವೂ ಶುಚಿಯಾಗಿರಬೇಕು. ಅದರಲ್ಲಿಯೂ ಬಾತ್​ರೂಂಗಳು ಕೊಳಕಾಗಿದ್ದರೆ, ವಾಸನೆ ಬರುವಂತಿದ್ದರೆ ವಿನಯ್​ ಸಹಿಸಲಾರರು. ಆದರೆ ಬಿಗ್​ಬಾಸ್​ನಲ್ಲಿ ಅದಕ್ಕೆ ವಿರುದ್ಧವಾಗಿ ನಡೆಯುತ್ತದೆ. ಅದರಲ್ಲಿಯೂ ಪುರುಷರ ಬಾತ್​ರೂಂ ಬಹಳ ಕೊಳಕಾಗಿರುತ್ತದೆ. ಬಾತ್​ರೂಂ ಏರಿಯಾ ಅಂತೂ ಕೊಳಕು ಬಟ್ಟೆಗಳಿಂದಲೇ ತುಂಬಿರುತ್ತದೆ. ಇದನ್ನು ವಿನಯ್ ಹೇಗೆ ಸಹಿಸಿಕೊಳ್ಳುತ್ತಾರೋ ನೋಡಬೇಕು. ಈವರೆಗೆ ನಮ್ರತಾ, ಸ್ನೇಹಿತ್ ಗೌಡ, ಈಶಾನಿ ಹಾಗೂ ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಕಾಲಿಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:01 pm, Sun, 8 October 23

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!