AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯಲ್ಲಿ ಹರ ಹರ ಮಹಾದೇವ: ಹೃದಯ ಗೆಲ್ಲಬಲ್ಲರೇ ವಿನಯ್?

Bigg Boss: ಬಿಗ್​ಬಾಸ್ ಕನ್ನಡ ಸೀಸನ್​ 10ರ ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಬಿಗ್​ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಸಂಕಷ್ಟದ ಬಾಲ್ಯ ಹೊಂದಿದ್ದ ವಿನಯ್, ಬಿಗ್​ಬಾಸ್​ನ ಹಿರಿಯ ಸದಸ್ಯರಾಗುವ ಸಾಧ್ಯತೆ ಇದೆ. ಅಂದಹಾಗೆ ಇವರ ಹಿನ್ನೆಲೆ ಏನು?

ಬಿಗ್​ಬಾಸ್ ಮನೆಯಲ್ಲಿ ಹರ ಹರ ಮಹಾದೇವ: ಹೃದಯ ಗೆಲ್ಲಬಲ್ಲರೇ ವಿನಯ್?
ವಿನಯ್
ಮಂಜುನಾಥ ಸಿ.
| Edited By: |

Updated on:Oct 09, 2023 | 9:02 AM

Share

ಬಿಗ್​ಬಾಸ್ (Bigg Boss) ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ‘ಹರ ಹರ ಮಹಾದೇವ’ ಧಾರಾವಾಹಿ ನಟ ವಿನಯ್ ಗೌಡ ಮನೆ ಪ್ರವೇಶಿಸಿದ್ದಾರೆ. ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಶಿವ ಪಾತ್ರಧಾರಿಯಾಗಿ ನಟಿಸಿರುವ ವಿನಯ್ ಅದ್ಧೂರಿಯಾಗಿ ಬಿಗ್​ಬಾಸ್ ಮನೆ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಸುರಸುಂದರ ಅವಿನಾಶ್ ಅವರು ನಾಲ್ಕನೇ ಸ್ಪರ್ಧಿ ಆಗಿದ್ದರು, ಆದರೆ ಅವರು ಕಡಿಮೆ ಮತ ಪಡೆದ ಕಾರಣ ಅವರನ್ನು ಮನೆಯ ಒಳಗೆ ಕಳಿಸಲಿಲ್ಲ. ಹಾಗಾಗಿ ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಮನೆಗೆ ಎಂಟ್ರಿ ಪಡೆದರು. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

ತಂದೆ-ತಾಯಿ ವಿಚ್ಛೇದನದಿಂದಾಗಿ ಮಾನಸಿಕ ಏರಿಳಿತಗಳ ಬಾಲ್ಯ ಕಳೆದ ವಿನಯ್, ತಂದೆ-ತಾಯಿಯ ಸಮಸ್ಯೆಯಿಂದಲೇ ಮನೆ ಬಿಟ್ಟು ಹೊರಬಂದು ಸ್ವತಂತ್ರ್ಯವಾಗಿ ಬದುಕಲು ಆರಂಭಿಸಿದರು. ಎಳವೆಯಿಂದಲೇ ಸವಾಲುಗಳನ್ನು ಎದುರಿಸುತ್ತಾ, ಭಿನ್ನ ಹಾದಿಯನ್ನು ತುಳಿಯುತ್ತಾ ಬಂದಿರುವ ವಿನಯ್ ಅವರಿಗೆ ಬಾಡಿಬಿಲ್ಡಿಂಗ್ ಬಹಳ ಮೆಚ್ಚಿನ ಹವ್ಯಾಸ.

ಇದನ್ನೂ ಓದಿ:ಹಿಂದಿ ಬಿಗ್​ಬಾಸ್ ಹೊಸ ಸೀಸನ್ ಘೋಷಣೆ: ಸಲ್ಮಾನ್ ಖಾನ್​ಗೆ ಬಿಡುವೇ ಇಲ್ಲ

‘ಹರ ಹರ ಮಹದೇವ್’ ಧಾರಾವಾಹಿಯಲ್ಲಿ ಶಿವನ ಪಾತ್ರಧಾರಿಯಾಗಿ ಕರ್ನಾಟಕದಲ್ಲಿ ಲಕ್ಷಾಂತರ ಮನ ಗೆದ್ದಿರುವ ವಿನಯ್​ಗೆ ಪ್ರಪಂಚವೆಂದರೆ ಅವರ 14 ವರ್ಷದ ಮಗ ಹಾಗೂ ಪತ್ನಿ ಇಬ್ಬರೇ. ತನ್ನ ಬಾಲ್ಯದಂತೆ ಮಗನ ಬಾಲ್ಯ ಆಗಬಾರದೆಂಬ ಕಾಳಜಿಯಿಂದ ಮಗನೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಾ, ಆರೋಗ್ಯಕರ ವಾತಾವರಣದಲ್ಲಿ ಮಗನನ್ನು ಬೆಳೆಸುತ್ತಿದ್ದಾರೆ.

ಅಂದಹಾಗೆ ವಿನಯ್​ಗೆ ಒಸಿಡಿ ಸಮಸ್ಯೆ ಇದೆ. ಅಂದರೆ ವಿನಯ್​ಗೆ ಎಲ್ಲವೂ ಶುಚಿಯಾಗಿರಬೇಕು. ಅದರಲ್ಲಿಯೂ ಬಾತ್​ರೂಂಗಳು ಕೊಳಕಾಗಿದ್ದರೆ, ವಾಸನೆ ಬರುವಂತಿದ್ದರೆ ವಿನಯ್​ ಸಹಿಸಲಾರರು. ಆದರೆ ಬಿಗ್​ಬಾಸ್​ನಲ್ಲಿ ಅದಕ್ಕೆ ವಿರುದ್ಧವಾಗಿ ನಡೆಯುತ್ತದೆ. ಅದರಲ್ಲಿಯೂ ಪುರುಷರ ಬಾತ್​ರೂಂ ಬಹಳ ಕೊಳಕಾಗಿರುತ್ತದೆ. ಬಾತ್​ರೂಂ ಏರಿಯಾ ಅಂತೂ ಕೊಳಕು ಬಟ್ಟೆಗಳಿಂದಲೇ ತುಂಬಿರುತ್ತದೆ. ಇದನ್ನು ವಿನಯ್ ಹೇಗೆ ಸಹಿಸಿಕೊಳ್ಳುತ್ತಾರೋ ನೋಡಬೇಕು. ಈವರೆಗೆ ನಮ್ರತಾ, ಸ್ನೇಹಿತ್ ಗೌಡ, ಈಶಾನಿ ಹಾಗೂ ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಕಾಲಿಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:01 pm, Sun, 8 October 23

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​