AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಜಾಸ್ತಿ ಆದ್ರೆ ಎರಡು ತಟ್ಟೋಣ ಅನ್ಸುತ್ತೆ; ಪ್ರಶಾಂತ್ ಸಂಬರಗಿಗೆ ಸುದೀಪ್​ ವಾರ್ನಿಂಗ್​

Bigg Boss Kannada: ಸರ್ಪ್ರೈಸ್​ ಆಗಿ ಕಳಿಸಿದ ವಾಯ್ಸ್​ ನೋಟ್​ನಲ್ಲಿ ಸುದೀಪ್​ ಧ್ವನಿ ಸೌಮ್ಯವಾಗಿತ್ತಾದರೂ ಕೂಡ ಅವರು ನೀಡಿದ ಎಚ್ಚರಿಕೆ ತೀಕ್ಷ್ಣವಾಗಿತ್ತು. ಅದಕ್ಕೆ ತಮ್ಮದೇ ರೀತಿಯಲ್ಲಿ ಪ್ರಶಾಂತ್​ ಸಂಬರಗಿ ಉತ್ತರಿಸಿದ್ದಾರೆ.

Kichcha Sudeep: ಜಾಸ್ತಿ ಆದ್ರೆ ಎರಡು ತಟ್ಟೋಣ ಅನ್ಸುತ್ತೆ; ಪ್ರಶಾಂತ್ ಸಂಬರಗಿಗೆ ಸುದೀಪ್​ ವಾರ್ನಿಂಗ್​
ಬಿಗ್​ ಬಾಸ್​ ಕನ್ನಡ - ಕಿಚ್ಚ ಸುದೀಪ್​
ಮದನ್​ ಕುಮಾರ್​
|

Updated on: May 04, 2021 | 5:10 PM

Share

ಬಿಗ್​ ಬಾಸ್​ ಸ್ಪರ್ಧಿ ಪ್ರಶಾಂತ್​ ಸಂಬರಗಿ ಅವರ ಗುಣ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ದೊಡ್ಮನೆಯಲ್ಲಿ ಅವರು ಅನೇಕ ಡ್ರಾಮಾ ಮಾಡಿದ್ದಾರೆ. ಕ್ಷಣ ಕ್ಷಣಕ್ಕೆ ಮಾತು ಬದಲಾಯಿಸುತ್ತಾರೆ. ಕಣ್ಣೆದುರಲ್ಲೇ ಸುಳ್ಳು ಹೇಳುತ್ತಾರೆ. ಖಂಡಿಸುತ್ತೇನೆ ಎಂಬ ನೆಪದಲ್ಲಿ ಕೆಲವೊಮ್ಮೆ ಅತಿರೇಕವಾಗಿ ಆಡುತ್ತಾರೆ. ಈ ಎಲ್ಲ ಗುಣಗಳನ್ನು ಗಮನಿಸಿರುವ ಕಿಚ್ಚ ಸುದೀಪ್​ ಅವರು ಸಂಬರಗಿಗೆ ಒಂದು ವಾರ್ನಿಂಗ್​ ನೀಡಿದ್ದಾರೆ. ಅದರ ಬಳಿಕ ಪ್ರಶಾಂತ್​ ಮನಸ್ಸಲ್ಲಿ ಢವಢವ ಶುರು ಆದಂತಿದೆ.

ಪ್ರತಿ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್​ ಅವರು ವಾರದ ಪಂಚಾಯಿತಿ ನಡೆಸುತ್ತಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಅವರಿಗೆ ಈಗ ಶೋ ನಡೆಸಲು ಸಾಧ್ಯವಾಗಿಲ್ಲ. ಒಂದು ವೇಳೆ ಅವರು ವಾರದ ಪಂಚಾಯಿತಿ ನಡೆಸಿದ್ದಿದ್ದರೆ ಎಲ್ಲರ ಸರಿ ತಪ್ಪುಗಳನ್ನು ಎತ್ತಿ ಹೇಳುತ್ತಿದ್ದರು. ಆದರೆ ವೀಕೆಂಡ್​ ಶೋಗಳ ಚಿತ್ರೀಕರಣ ರದ್ದಾಗಿದ್ದರಿಂದ ಸರಿ-ತಪ್ಪುಗಳ ಬಗ್ಗೆ ಮಾತನಾಡುವ ಪ್ರಮೇಯವೇ ಬಂದಿರಲಿಲ್ಲ. ಹಾಗಾಗಿ ಎಲ್ಲ ಸ್ಪರ್ಧಿಗಳು ತಮಗೆ ಮನಬಂದಂತೆ ನಡೆದುಕೊಳ್ಳುತ್ತಿದ್ದರು. ಅಂಥವರಿಗೆಲ್ಲ ಈಗ ಸುದೀಪ್​ ಛಾಟಿ ಬೀಸಿದ್ದಾರೆ.

ವೀಕೆಂಡ್​ ಎಪಿಸೋಡ್​ನಲ್ಲಿ ಭಾಗವಹಿಸದೇ ಇದ್ದರೂ ಕೂಡ ಎಲ್ಲ ಎಪಿಸೋಡ್​ಗಳನ್ನು ಸುದೀಪ್​ ಗಮನಿಸುತ್ತಿದ್ದಾರೆ. ಮೇ 3ರ ಸಂಚಿಕೆಯಲ್ಲಿ ಮನೆಯಲ್ಲಿ ಉಳಿದಿರುವ ಎಲ್ಲ 12 ಸ್ಪರ್ಧಿಗಳಿಗೆ ಕಿಚ್ಚ ಒಂದೊಂದು ವಾಯ್ಸ್​ ನೋಟ್​ ಕಳಿಸಿದ್ದರು. ಅದರಲ್ಲಿ ಪ್ರಶಾಂತ್​ ಸಂಬರಗಿ ಅವರಿಗೆ ಖಡಕ್​ ಆಗಿಯೇ ಒಂದು ಸಂದೇಶ ನೀಡಿದ್ದಾರೆ. ‘ಅಳುವ ಮಗುವಿಗೆ ಹಾಲು ಜಾಸ್ತಿ ಸಿಗುತ್ತೆ ಪ್ರಶಾಂತ್​. ಆದರೆ ಅಳೋದು ಜಾಸ್ತಿಯಾದ್ರೆ ನೋಡುವವರಿಗೆ ಎರಡು ತಟ್ಟೋಣ ಅನಿಸುತ್ತೆ. ನೆನಪಿನಲ್ಲಿ ಇಟ್ಟುಕೊಳ್ಳಿ’ ಎಂದು ಕಿಚ್ಚ ವಾರ್ನಿಂಗ್​ ನೀಡಿದರು.

ಈ ವಾಯ್ಸ್​ ನೋಟ್​ನಲ್ಲಿ ಸುದೀಪ್​ ಧ್ವನಿ ಸೌಮ್ಯವಾಗಿತ್ತಾದರೂ ಕೂಡ ಅವರು ನೀಡಿದ ಎಚ್ಚರಿಕೆ ತೀಕ್ಷ್ಣವಾಗಿತ್ತು. ಆ ಮಾತಿಗೆ ತಮ್ಮದೇ ರೀತಿಯಲ್ಲಿ ಪ್ರಶಾಂತ್​ ಸಂಬರಗಿ ಉತ್ತರಿಸಿದ್ದಾರೆ. ‘ನಾನು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದು ಅಷ್ಟೇ. ಜಾಸ್ತಿ ಏನೂ ನಾನು ಅತಿಯಾಗಿ ಮಾಡಿಲ್ಲ. ಒಂದು ವೇಳೆ ಅತಿಯಾಗಿ ಮಾಡಿದ್ದೇನೆ ಅನಿಸಿದರೆ ಕ್ಷಮೆ ಇರಲಿ. ನಿಮ್ಮ ಮಾತನ್ನು ನಾನು ಪಾಸಿಟಿವ್​ ಆಗಿ ಸ್ವೀಕರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಇದಿನ್ನೂ ಕೆಟ್ಟದಾಗಿ ಕಾಣಿಸುತ್ತಿದೆ; ಪ್ರಶಾಂತ್​ ಸಂಬರಗಿ ಗುಣಗಳು ಚಕ್ರವರ್ತಿಗೆ ಅಸಹ್ಯ ಮೂಡಿಸುತ್ತಿವೆ

ಶುಭಾ ಬಳಿ ಇರುವ ಅಮೂಲ್ಯ ವಸ್ತು ಕದಿಯಲು ಸಂಬರಗಿ ಪ್ಲ್ಯಾನ್​; ಮಂಜು ಕೊಟ್ರು ಎಚ್ಚರಿಕೆ

ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು
ಯುವಕನಿಗೆ ಮಹಿಳೆಯ ವಯಸ್ಸು ಗೊತ್ತಾಗದಿರೋದು ಅಚ್ಚರಿಯ ಸಂಗತಿ
ಯುವಕನಿಗೆ ಮಹಿಳೆಯ ವಯಸ್ಸು ಗೊತ್ತಾಗದಿರೋದು ಅಚ್ಚರಿಯ ಸಂಗತಿ
ಕೇಸ್ ದಾಖಲಾಗಿರುವುದು ರಾಜಕೀಯ ಪಿತೂರಿಯ ಭಾಗ: ಭೈರತಿ ಬಸವರಾಜ
ಕೇಸ್ ದಾಖಲಾಗಿರುವುದು ರಾಜಕೀಯ ಪಿತೂರಿಯ ಭಾಗ: ಭೈರತಿ ಬಸವರಾಜ
ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವ್ಯಕ್ತಿ ಸಾವು
ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಬೈಕ್ ಓಡಿಸುತ್ತಿದ್ದ ವ್ಯಕ್ತಿ ಸಾವು