AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರಗೆ ದತ್ತು ಮಕ್ಕಳಾದ ಹನುಮಂತ ಹಾಗೂ ಧನರಾಜ್

ಬಿಗ್ ಬಾಸ್ ಕನ್ನಡದಲ್ಲಿ ಚೈತ್ರಾ ಕುಂದಾಪುರ ಅವರು ಧನರಾಜ್ ಮತ್ತು ಹನುಮಂತ ಅವರನ್ನು ದತ್ತು ಮಕ್ಕಳು ಎಂದಿದ್ದಾರೆ. ಕಳೆದ ವಾರ ಎಲಿಮಿನೇಷನ್‌ನಿಂದ ಪಾರಾದ ನಂತರ, ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅವರ ತಾಯಿ-ಮಕ್ಕಳ ಬಾಂಧವ್ಯ ಬಿಗ್ ಬಾಸ್ ಮನೆಯಲ್ಲಿ ಹೇಗೆ ಮುಂದುವರಿಯುತ್ತದೆ ಎಂಬುದು ಕುತೂಹಲಕಾರಿ.

ಚೈತ್ರಾ ಕುಂದಾಪುರಗೆ ದತ್ತು ಮಕ್ಕಳಾದ ಹನುಮಂತ ಹಾಗೂ ಧನರಾಜ್
ಚೈತ್ರಾ-ಹನುಮಂತ
Follow us
ರಾಜೇಶ್ ದುಗ್ಗುಮನೆ
|

Updated on: Dec 12, 2024 | 7:21 AM

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಮನರಂಜನೆ ನೀಡುತ್ತಾ ಸಾಗುತ್ತಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರ ಆಟ ಕೂಡ ದಿನ ಕಳೆದಂತೆ ಏಳ್ಗೆ ಕಾಣುತ್ತಿದೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಿದ್ದಾರೆ. ಈಗ ಚೈತ್ರಾ ಕುಂದಾಪುರ ಅವರು ಒಂದು ಕಾರಣಕ್ಕೆ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅದಕ್ಕೆ ಕಾರಣ ಆಗಿರೋದು ಅವರ ದತ್ತು ಮಕ್ಕಳ ವಿಚಾರ. ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಹಾಗೂ ಹನುಮಂತ ಅವರಿಗೆ ದತ್ತು ಮಕ್ಕಳಾಗಿದ್ದಾರೆ.

ಕಳೆದ ವೀಕೆಂಡ್​ನಲ್ಲಿ ಚೈತ್ರಾ ಅವರು ಎಲಿಮಿನೇಷನ್ ಹಂತಕ್ಕೆ ಹೋಗಿದ್ದರು. ಅವರನ್ನು ಕನ್​ಫೆಷನ್​ರೂಂನಲ್ಲಿ ಕೂರಿಸಿ ಬಿಗ್ ಬಾಸ್​ನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತೋರಿಸಲಾಗುತ್ತಿತ್ತು. ಅದು ಅವರಿಗೆ ಸಾಕಷ್ಟು ಟೆನ್ಷನ್ ಕೊಟ್ಟಿತ್ತಂತೆ. ಸೇವ್ ಆಗಿ ಬಂದ ಬಳಿಕ ಚೈತ್ರಾ ಅವರು ಧನರಾಜ್ ಹಾಗೂ ಹನುಮಂತ ಬಳಿ ಈ ವಿಚಾರ ಹೇಳಿಕೊಂಡಿದ್ದರು. ‘ಹೆರಿಗೆ ನೋವು ಹೆಣ್ಣುಮಕ್ಕಳಿಗೆ ಮರುಜನ್ಮ ಎನ್ನುತ್ತಾರೆ. ಆ ನೋವು ಹೇಗಿರುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಕನ್​ಫೆಷನ್​ ರೂಂನಲ್ಲಿ ಕುಳಿತಾಗ ಒಂದು ರೀತಿಯ ಅನುಭವ ಆಯಿತು. ಬಹುಶಃ ಆ ನೋವು ಹಾಗೆಯೇ ಇರಬಹುದು ಎಂದುಕೊಂಡೆ’ ಎಂದಿದ್ದಾರೆ ಅವರು.

‘ಆ ಹೆರಿಗೆ ನೋವಿಗೆ ಜನಿಸಿದವರು ನಾವಿಬ್ಬರು’ ಎಂದು ಧನರಾಜ್ ಅವರು ಹೇಳಿದರು. ಅಲ್ಲಿಂದ ಚೈತ್ರಾ ಅವರು ಹನುಮಂತ-ಧನರಾಜ್ ಅವರನ್ನು ಮಕ್ಕಳಂತೆ ಕಾಣುತ್ತಾ ಇದ್ದಾರೆ. ಈ ವಾರವೂ ಆ ಬಾಂಧವ್ಯ ಮುಂದುವರಿದಿದೆ. ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಗೆ ಬರೋ ಸಾಧ್ಯತೆ ಇದೆ.

ಇದನ್ನೂ ಓದಿ: ಮುನಿಸು ಮರೆತು ಮತ್ತೆ ಒಂದಾದ ಮೋಕ್ಷಿತಾ-ಗೌತಮಿ; ಮಂಜುನ ದೂರ ಇಟ್ಟ ಜೋಡಿ

ಚೈತ್ರಾ ಒಂದು ತಂಡ ಆದರೆ, ಹನುಮಂತ ಹಾಗೂ ಧನರಾಜ್ ಮತ್ತೊಂದು ತಂಡದಲ್ಲಿ ಇದ್ದಾರೆ. ‘ಮಕ್ಕಳಾ ನೀವು ಮತ್ತೊಂದು ತಂಡದಲ್ಲಿ ಇದ್ದೀರಾ. ನಿಮ್ಮ ಅಮ್ಮ ಮತ್ತೊಂದು ತಂಡದಲ್ಲಿದ್ದಾಳೆ’ ಎಂದು ಚೈತ್ರಾ ಹೇಳಿದರು. ಅಲ್ಲಿದ್ದವರು, ‘ತಾಯಿನ ಗೆಲ್ಲಿಸೋಕೆ ಸಹಾಯ’ ಮಾಡಿ ಎಂದು ಕೋರಿದರು. ಆಗ ಚೈತ್ರಾ ಕೂಡ ನಕ್ಕರು. ಈ ವಾರ ಧನರಾಜ್, ಚೈತ್ರಾ ಹಾಗೂ ಹನುಮಂತ ನಾಮಿನೇಷನ್ ಲಿಸ್ಟ್​ನಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾರಿ ಮಳೆಗೆ ಜಮಖಂಡಿ ಬಸ್ ನಿಲ್ದಾಣದೊಳಗೆ ನುಗ್ಗಿದ ನೀರು
ಭಾರಿ ಮಳೆಗೆ ಜಮಖಂಡಿ ಬಸ್ ನಿಲ್ದಾಣದೊಳಗೆ ನುಗ್ಗಿದ ನೀರು
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು