ಕ್ಯಾಪ್ಟನ್ ಆದ ಹಂಸಾಗೆ ಖುಷಿಗಿಂತ ಕಣ್ಣೀರು, ದ್ವೇಷ ಸಿಕ್ಕಿದ್ದೇ ಜಾಸ್ತಿ; ಇದಕ್ಕೆಲ್ಲ ಕಾರಣ ಏನು?

ಹಂಸಾ ಅವರಿಗೆ ಬಿಗ್​ ಬಾಸ್​ ಆಟವೇ ಸಾಕು ಎಂಬಂತೆ ಆಗಿದೆ. ಎರಡೇ ವಾರಕ್ಕೆ ಅವರು ಸಾಕಷ್ಟು ಕಣ್ಣೀರು ಹಾಕಿದ್ದಾರೆ. ಈ ಸೀಸನ್​ನಲ್ಲಿ ಜಗಳವೇ ಹೈಲೈಟ್​ ಆಗುತ್ತಿದೆ. ಕ್ಯಾಪ್ಟನ್ ಆಗಿರುವ ಹಂಸಾ ಅವರು ಎಲ್ಲರ ನಿಷ್ಠುರ ಎದುರಿಸುವಂತಾಗಿದೆ. ಪ್ರತಿ ಟಾಸ್ಕ್​ ಆಡಿದಾಗಲೂ ಬಿಗ್​ ಬಾಸ್​ ಮನೆಯ ಸದಸ್ಯರು ಕ್ಯಾಪ್ಟನ್​ ಹಂಸಾ ಮೇಲೆ ಕಿರುಚಾಡುತ್ತಿದ್ದಾರೆ.

ಕ್ಯಾಪ್ಟನ್ ಆದ ಹಂಸಾಗೆ ಖುಷಿಗಿಂತ ಕಣ್ಣೀರು, ದ್ವೇಷ ಸಿಕ್ಕಿದ್ದೇ ಜಾಸ್ತಿ; ಇದಕ್ಕೆಲ್ಲ ಕಾರಣ ಏನು?
ಹಂಸಾ
Follow us
|

Updated on: Oct 10, 2024 | 10:52 PM

ಪ್ರತಿ ಬಾರಿ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಕ್ಯಾಪ್ಟನ್​ ಆದವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಗುತ್ತವೆ. ಅಲ್ಲದೇ ಇಮ್ಯುನಿಟಿ ಸಿಗುತ್ತದೆ. ಅದಕ್ಕಾಗಿ ಎಲ್ಲರೂ ಕ್ಯಾಪ್ಟನ್​ ಆಗಲು ಇಷ್ಟಪಡುತ್ತಾರೆ. ಆದರೆ ಈ ಸೀಸನ್​ನಲ್ಲಿ ಮೊದಲ ಕ್ಯಾಪ್ಟನ್​ ಆದ ಹಂಸಾ ಅವರು ಸಿಕ್ಕಾಪಟ್ಟೆ ಪೇಜಿಗೆ ಸಿಲುಕಿದ್ದಾರೆ. ಎಲ್ಲ ಟಾಸ್ಕ್​ನ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿದೆ. ಪ್ರತಿ ಟಾಸ್ಕ್​ನಲ್ಲಿಯೂ ಬಿಗ್​ ಬಾಸ್​ ಮನೆಯ ಸದಸ್ಯರು ಇಲ್ಲಸಲ್ಲದ ಕಿರಿಕ್​ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಹಂಸಾ ಅವರೇ ಹೊಣೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ದಿನವೂ ಹಂಸಾ ಅವರು ಕಣ್ಣೀರು ಹಾಕುತ್ತಾ ಕಿರಿಕಿರಿ ಅನುಭವಿಸುವಂತಾಗಿದೆ.

ಜಗಳ ಆಡುವುದನ್ನೇ ಆಟದ ತಂತ್ರಗಾರಿಕೆ ಎಂದು ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನ ಬಹುತೇಕ ಎಲ್ಲ ಸ್ಪರ್ಧಿಗಳು ಅಂದುಕೊಂಡಂತಿದೆ. ಹಾಗಾಗಿ ಅವಕಾಶ ಸಿಕ್ಕಾಗಲೆಲ್ಲ ಸ್ಪರ್ಧಿಗಳು ಜಗಳ ಆಡುತ್ತಿದ್ದಾರೆ. ಟಾಸ್ಕ್ ಆಡುವಾಗ ಬೇಕುಬೇಕಂತಲೇ ಕಿರಿಕ್​ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಆಟ ಕೆಟ್ಟು ಹೋಗುತ್ತಿದೆ. ಅಂತಿಮವಾಗಿ ಕ್ಯಾಪ್ಟನ್​ ನಿವೇಚನೆಗೆ ಬಿಡಲಾಗುತ್ತದೆ. ಆಗ ಹಂಸಾಗೆ ನಿಜವಾದ ಕಷ್ಟ ಎದುರಾಗುತ್ತದೆ.

ತಮ್ಮ ವಿವೇಚನೆ ಬಳಸಿ ಹಂಸಾ ಅಂತಿಮ ತೀರ್ಮಾನ ನೀಡಿದಾಗ ಸ್ವರ್ಗದವರಾಗಲಿ, ನರಕದವರಾಗಲಿ ಒಪ್ಪಿಕೊಳ್ಳುವುದೇ ಇಲ್ಲ. ಟಾಸ್ಕ್​ನ ನಿಯಮಗಳನ್ನು ಸ್ಪರ್ಧಿಗಳು ಅರ್ಧಂಬರ್ಧ ಅರ್ಥ ಮಾಡಿಕೊಂಡು ಇಡೀ ಆಟವನ್ನು ಕೆಡಿಸುತ್ತಿದ್ದಾರೆ. ಟಾಸ್ಕ್​ ಉಸ್ತುವಾರಿ ಹೊತ್ತ ಹಂಸಾ ಅವರಿಗೆ ಜಗಳ ಪರಿಹರಿಸುವುದೇ ಕೆಲಸ ಆಗಿ ಬಿಟ್ಟಿದೆ. ಇದರಿಂದ ಸ್ವರ್ಗದವರಿಂದಲೂ, ನರಕದವರಿಂದಲೂ ಹಂಸಾ ಟೀಕೆಗೆ ಗುರಿ ಆಗುವಂತಾಗಿದೆ.

ಇದನ್ನೂ ಓದಿ: ‘ಏನೇನೋ ಬೊಗಳುತ್ತಾನೆ’: ಪದೇಪದೇ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ

ಈ ಹಿಂದಿನ ಸೀಸನ್​ಗಳಲ್ಲಿ ಮೊದಲ ಎರಡು ವಾರ ಮನೆಯಲ್ಲಿ ಸಾಧ್ಯವಾದಷ್ಟು ಶಾಂತಿ ತುಂಬಿರುತ್ತಿತ್ತು. ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಈ ಸೀಸನ್​ನಲ್ಲಿ ಹಾಗಿಲ್ಲ. ಆರಂಭದಿಂದಲೇ ಜಗಳಗಳು ಅತಿಯಾಗಿವೆ. ಹೆಜ್ಜೆ ಹೆಜ್ಜೆಗೂ ಗಲಾಟೆ ನಡೆಯುತ್ತಿದೆ. ಚಿಕ್ಕ ವಿಷಯವನ್ನು ಕೂಡ ಏರು ಧ್ವನಿಯಲ್ಲೇ ಹೇಳಲಾಗುತ್ತಿದೆ. ಬೇಕಂತಲೇ ಗೊಂದಲ ಸೃಷ್ಟಿಸಿ, ಅದರಿಂದ ಜಗಳ ಎಬ್ಬಿಸಿ ಇಡೀ ಮನೆಯ ಶಾಂತಿ ಕೆಡಿಸಲಾಗುತ್ತಿದೆ. ಇದರಿಂದ ಕಿರಿಕಿರಿ ಆಗಿರುವ ಹಂಸಾ ಅವರು ‘ಈ ವಾರ ನಾನೇ ಹೊರಗೆ ಹೋಗುತ್ತೇನೆ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಕನ್ನಡಿಗನ ಮನದ ಮಾತು
ಪುತ್ತಿಗೆ ಮಠದ ಹಳೆಯ ಅನುಯಾಯಿಯೇನೋ ಎಂಬಂತಿತ್ತು ರತನ್ ಟಾಟಾರ ವರ್ತನೆ!
ಪುತ್ತಿಗೆ ಮಠದ ಹಳೆಯ ಅನುಯಾಯಿಯೇನೋ ಎಂಬಂತಿತ್ತು ರತನ್ ಟಾಟಾರ ವರ್ತನೆ!