AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಪ್ಟನ್ ಆದ ಹಂಸಾಗೆ ಖುಷಿಗಿಂತ ಕಣ್ಣೀರು, ದ್ವೇಷ ಸಿಕ್ಕಿದ್ದೇ ಜಾಸ್ತಿ; ಇದಕ್ಕೆಲ್ಲ ಕಾರಣ ಏನು?

ಹಂಸಾ ಅವರಿಗೆ ಬಿಗ್​ ಬಾಸ್​ ಆಟವೇ ಸಾಕು ಎಂಬಂತೆ ಆಗಿದೆ. ಎರಡೇ ವಾರಕ್ಕೆ ಅವರು ಸಾಕಷ್ಟು ಕಣ್ಣೀರು ಹಾಕಿದ್ದಾರೆ. ಈ ಸೀಸನ್​ನಲ್ಲಿ ಜಗಳವೇ ಹೈಲೈಟ್​ ಆಗುತ್ತಿದೆ. ಕ್ಯಾಪ್ಟನ್ ಆಗಿರುವ ಹಂಸಾ ಅವರು ಎಲ್ಲರ ನಿಷ್ಠುರ ಎದುರಿಸುವಂತಾಗಿದೆ. ಪ್ರತಿ ಟಾಸ್ಕ್​ ಆಡಿದಾಗಲೂ ಬಿಗ್​ ಬಾಸ್​ ಮನೆಯ ಸದಸ್ಯರು ಕ್ಯಾಪ್ಟನ್​ ಹಂಸಾ ಮೇಲೆ ಕಿರುಚಾಡುತ್ತಿದ್ದಾರೆ.

ಕ್ಯಾಪ್ಟನ್ ಆದ ಹಂಸಾಗೆ ಖುಷಿಗಿಂತ ಕಣ್ಣೀರು, ದ್ವೇಷ ಸಿಕ್ಕಿದ್ದೇ ಜಾಸ್ತಿ; ಇದಕ್ಕೆಲ್ಲ ಕಾರಣ ಏನು?
ಹಂಸಾ
ಮದನ್​ ಕುಮಾರ್​
|

Updated on: Oct 10, 2024 | 10:52 PM

Share

ಪ್ರತಿ ಬಾರಿ ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಕ್ಯಾಪ್ಟನ್​ ಆದವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಗುತ್ತವೆ. ಅಲ್ಲದೇ ಇಮ್ಯುನಿಟಿ ಸಿಗುತ್ತದೆ. ಅದಕ್ಕಾಗಿ ಎಲ್ಲರೂ ಕ್ಯಾಪ್ಟನ್​ ಆಗಲು ಇಷ್ಟಪಡುತ್ತಾರೆ. ಆದರೆ ಈ ಸೀಸನ್​ನಲ್ಲಿ ಮೊದಲ ಕ್ಯಾಪ್ಟನ್​ ಆದ ಹಂಸಾ ಅವರು ಸಿಕ್ಕಾಪಟ್ಟೆ ಪೇಜಿಗೆ ಸಿಲುಕಿದ್ದಾರೆ. ಎಲ್ಲ ಟಾಸ್ಕ್​ನ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿದೆ. ಪ್ರತಿ ಟಾಸ್ಕ್​ನಲ್ಲಿಯೂ ಬಿಗ್​ ಬಾಸ್​ ಮನೆಯ ಸದಸ್ಯರು ಇಲ್ಲಸಲ್ಲದ ಕಿರಿಕ್​ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಹಂಸಾ ಅವರೇ ಹೊಣೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದಾಗಿ ಪ್ರತಿ ದಿನವೂ ಹಂಸಾ ಅವರು ಕಣ್ಣೀರು ಹಾಕುತ್ತಾ ಕಿರಿಕಿರಿ ಅನುಭವಿಸುವಂತಾಗಿದೆ.

ಜಗಳ ಆಡುವುದನ್ನೇ ಆಟದ ತಂತ್ರಗಾರಿಕೆ ಎಂದು ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನ ಬಹುತೇಕ ಎಲ್ಲ ಸ್ಪರ್ಧಿಗಳು ಅಂದುಕೊಂಡಂತಿದೆ. ಹಾಗಾಗಿ ಅವಕಾಶ ಸಿಕ್ಕಾಗಲೆಲ್ಲ ಸ್ಪರ್ಧಿಗಳು ಜಗಳ ಆಡುತ್ತಿದ್ದಾರೆ. ಟಾಸ್ಕ್ ಆಡುವಾಗ ಬೇಕುಬೇಕಂತಲೇ ಕಿರಿಕ್​ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಆಟ ಕೆಟ್ಟು ಹೋಗುತ್ತಿದೆ. ಅಂತಿಮವಾಗಿ ಕ್ಯಾಪ್ಟನ್​ ನಿವೇಚನೆಗೆ ಬಿಡಲಾಗುತ್ತದೆ. ಆಗ ಹಂಸಾಗೆ ನಿಜವಾದ ಕಷ್ಟ ಎದುರಾಗುತ್ತದೆ.

ತಮ್ಮ ವಿವೇಚನೆ ಬಳಸಿ ಹಂಸಾ ಅಂತಿಮ ತೀರ್ಮಾನ ನೀಡಿದಾಗ ಸ್ವರ್ಗದವರಾಗಲಿ, ನರಕದವರಾಗಲಿ ಒಪ್ಪಿಕೊಳ್ಳುವುದೇ ಇಲ್ಲ. ಟಾಸ್ಕ್​ನ ನಿಯಮಗಳನ್ನು ಸ್ಪರ್ಧಿಗಳು ಅರ್ಧಂಬರ್ಧ ಅರ್ಥ ಮಾಡಿಕೊಂಡು ಇಡೀ ಆಟವನ್ನು ಕೆಡಿಸುತ್ತಿದ್ದಾರೆ. ಟಾಸ್ಕ್​ ಉಸ್ತುವಾರಿ ಹೊತ್ತ ಹಂಸಾ ಅವರಿಗೆ ಜಗಳ ಪರಿಹರಿಸುವುದೇ ಕೆಲಸ ಆಗಿ ಬಿಟ್ಟಿದೆ. ಇದರಿಂದ ಸ್ವರ್ಗದವರಿಂದಲೂ, ನರಕದವರಿಂದಲೂ ಹಂಸಾ ಟೀಕೆಗೆ ಗುರಿ ಆಗುವಂತಾಗಿದೆ.

ಇದನ್ನೂ ಓದಿ: ‘ಏನೇನೋ ಬೊಗಳುತ್ತಾನೆ’: ಪದೇಪದೇ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ

ಈ ಹಿಂದಿನ ಸೀಸನ್​ಗಳಲ್ಲಿ ಮೊದಲ ಎರಡು ವಾರ ಮನೆಯಲ್ಲಿ ಸಾಧ್ಯವಾದಷ್ಟು ಶಾಂತಿ ತುಂಬಿರುತ್ತಿತ್ತು. ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಈ ಸೀಸನ್​ನಲ್ಲಿ ಹಾಗಿಲ್ಲ. ಆರಂಭದಿಂದಲೇ ಜಗಳಗಳು ಅತಿಯಾಗಿವೆ. ಹೆಜ್ಜೆ ಹೆಜ್ಜೆಗೂ ಗಲಾಟೆ ನಡೆಯುತ್ತಿದೆ. ಚಿಕ್ಕ ವಿಷಯವನ್ನು ಕೂಡ ಏರು ಧ್ವನಿಯಲ್ಲೇ ಹೇಳಲಾಗುತ್ತಿದೆ. ಬೇಕಂತಲೇ ಗೊಂದಲ ಸೃಷ್ಟಿಸಿ, ಅದರಿಂದ ಜಗಳ ಎಬ್ಬಿಸಿ ಇಡೀ ಮನೆಯ ಶಾಂತಿ ಕೆಡಿಸಲಾಗುತ್ತಿದೆ. ಇದರಿಂದ ಕಿರಿಕಿರಿ ಆಗಿರುವ ಹಂಸಾ ಅವರು ‘ಈ ವಾರ ನಾನೇ ಹೊರಗೆ ಹೋಗುತ್ತೇನೆ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!