AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu Kannada Serial: ಕೋಪ ಮರೆತು ಸಹಾಯ ಮಾಡಿದ ರಿಷಿ; ವಸು ಫುಲ್ ಖುಷ್

Honganasu Serial Update: ವಸು ಮತ್ತು ರಿಷಿಯನ್ನು ಒಂದು ಮಾಡಬೇಕೆಂದು ಮಹೇಂದ್ರ ಹಾಗೂ ಜಗತಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಅದಕ್ಕೆ ದೇವಯಾನಿ ಅಡ್ಡಗಾಲು ಹಾಕುತ್ತಿದ್ದಾಳೆ.

Honganasu Kannada Serial: ಕೋಪ ಮರೆತು ಸಹಾಯ ಮಾಡಿದ ರಿಷಿ; ವಸು ಫುಲ್ ಖುಷ್
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on:Dec 25, 2022 | 5:28 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಎಜುಕೇಶನ್ ಪ್ರಾಜೆಕ್ಟ್ ವಿಚಾರವಾಗಿ ವಸುಧರಾ ಮತ್ತು ಗೌತಮ್ ಇಬ್ಬರೂ ಹಳ್ಳಿಗೆ ಹೋದರು. ವಸುಧರಾಳನ್ನು ನೋಡಲು ರಿಷಿ ಕೂಡ ಎಂಟ್ರಿ ಕೊಟ್ಟ. ವಸುಧರಾಳ ನೋಡಿ ತಕ್ಷಣ ವಾಪಸ್ ಹೊರಟ ರಿಷಿ. ಕೆಲಸವೆಲ್ಲ ಮುಗಿದ ಬಳಿಕ ಗೌತಮ್‌ಗೆ ಕಾಲ್ ಮಾಡಿ ರಿಷಿ ವಿಚಾರಿಸಿಕೊಂಡ. ಪರೋಕ್ಷವಾಗಿ ವಸುಧರಾ ಬಗ್ಗೆ ಕೇಳಿದ. ಅವಳು ಸೈಕಲ್‌ನಲ್ಲಿ ಹೋದಳು ಎಂದು ಗೌತಮ್ ಮಾಹಿತಿ ನೀಡಿದ.

ಕಾಲೇಜಿನ ಕೆಲಸಕ್ಕೆ ಸೈಕಲ್‌ನಲ್ಲಿ ಓಡಾಡುತ್ತಿದ್ದಾಳೆ ವಸುಧರಾ. ಮನೆಗೆ ಹೋಗುವಾಗ ಸೈಕಲ್ ಹಾಳಾಗಿ ರಿಪೇರಿ ಮಾಡುತ್ತಾ ರಸ್ತೆಯಲ್ಲೇ ಕುಳಿತಳು. ಕಾರಿನಲ್ಲಿ ಹೋಗುತ್ತಿದ್ದ ರಿಷಿ ವಸುಧರಾಳನ್ನು ನೋಡಿದ. ಕಾರಿನಿಂದ ಇಳಿದು ಬಂದು ಸೈಕಲ್ ಸರಿಮಾಡಿ ಕೊಡುವುದಾಗಿ ಆತ ಕೇಳಿದ. ಇದು ನಿಮ್ಮಿಂದ ಆಗಲ್ಲ ಎಂದು ವಸು ಹೇಳಿದಳು. ಮತ್ತೇನು ಮಾಡುತ್ತೀಯಾ ಎಂದು ಕೇಳಿದ ರಿಷಿ. ಕಾರ್‌ನಲ್ಲಿ ಡ್ರಾಪ್ ಮಾಡುವಂತೆ ರಿಷಿಗೆ ಪರೋಕ್ಷವಾಗಿ ಹೇಳಿದಳು ವಸು. ಅರ್ಥವಾಯ್ತು ಎಂದು ವಸುಧರಾ ಮೇಲಿನ ಕೋಪ ಮರೆತು ಕಾರಿನಲ್ಲಿ ಕೂರಿಸಿಕೊಂಡ. ಇಬ್ಬರೂ ರಸ್ತೆ ಪಕ್ಕದಲ್ಲಿ ಇರುವ ಅಂಗಡಿಯಲ್ಲಿ ಟೀ ಕುಡಿದರು. ಕೊನೆಗೂ ರಿಷಿ ಸರ್ ಮಾತನಾಡಿಸಿದರು ಎಂದು ವಸು ಸಂತಸ ಪಟ್ಟಳು. ರಾತ್ರಿ ಮನೆಗೆ ಹೋದ ಆಕೆಗೆ ರಿಷಿದೇ ಚಿಂತೆ. ಪ್ರೀತಿ ರಿಜೆಕ್ಟ್ ಮಾಡಿ ನೋವು ಕೊಟ್ಟೆ, ಅದನ್ನು ತಾನೆ ಸರಿ ಮಾಡಬೇಕೆಂದು ಯೋಚಿಸಿದಳು. ಸಹಾಯ ಮಾಡಿದ್ದಕ್ಕೆ ರಿಷಿಗೆ ಧನ್ಯವಾದ ತಿಳಿಸಿದಳು.

ಇದನ್ನೂ ಓದಿ: Honganasu: ತನ್ನನ್ನು ರಿಜೆಕ್ಟ್ ಮಾಡಿದ್ರೂ ವಸುಧರಾ ಮೇಲೆ ರಿಷಿಗೆ ಬೆಟ್ಟದಷ್ಟು ಪ್ರೀತಿ

ಇತ್ತ ಬೇಕು ಅಂತನೆ ಜಗತಿಗೆ ಚುಚ್ಚು ಮಾತುಗಳನ್ನು ಆಡಿ ಜಗಳವಾಡುತ್ತಿದ್ದಾಳೆ ದೇವಯಾನಿ. ರಿಷಿಗೆ ಊಟ ಬಡಿಸಲು ಕಾಯುತ್ತಿದ್ದಳು ಜಗತಿ. ಆದರೆ ತಾನೇ ಬಡಿಸುತ್ತೇನೆ ಎಂದು ದೇವಯಾನಿ ಬಂದಳು. ಊಟ ಬಡಿಸಿ ಚೆನ್ನಾಗಿ ತಿನ್ನು ಕಂದ ಎಂದು ರಿಷಿಗೆ ಹೇಳಿದಳು ದೇವಯಾನಿ. ಜಗತಿ ಮಾಡಿದ ಅಡುಗೆಯನ್ನೂ ತಾನೆ ಮಾಡಿದ್ದು ಎಂದು ರಿಷಿ ಮುಂದೆ ದೇವಯಾನಿ ಹೇಳಿಕೊಂಡಳು. ಆಕೆಯ ಸುಳ್ಳುಗಳನ್ನು ಕೇಳಿ ಶಾಕ್ ಆದ ಮಹೇಂದ್ರ. ರಿಷಿ ಕೂಲ್ ಆಗಿ ಇದ್ದಾನೆ ಎಂದು ಮತ್ತೆ ಸಾಕ್ಷಿ ವಿಚಾರ ಎತ್ತಿದಳು ದೇವಯಾನಿ. ಸಾಕ್ಷಿ ಬಗ್ಗೆ ಮಾತನಾಡುತ್ತಿದ್ದಂತೆ ಅರ್ಧಕ್ಕೆ ಊಟ ನಿಲ್ಲಿಸಿ ಹೊರಟು ಹೋದ ರಿಷಿ. ತನ್ನ ಮಗನಿಗೆ ನೆಮ್ಮದಿಯಾಗಿ ಊಟ ಮಾಡಲು ಬಿಟ್ಟಿಲ್ಲಾ ಎಂದು ದೇವಯಾನಿ ಮೇಲೆ ರೇಗಿದಳು ಜಗತಿ. ಮಗ ಊಟ ಮಾಡಿಲ್ಲ ಎಂದು ಮಹೇಂದ್ರ ಕೂಡ ಹಾಗೆ ಎದ್ದು ಹೋದ.

ಇದನ್ನೂ ಓದಿ: ಹೊಂಗನಸು: ಗೌತಮ್‌ಗೆ ಚಳ್ಳೆ ಹಣ್ಣು ತಿನ್ನಿಸಿ ವಸು ಜೊತೆ ರಿಷಿಯ ರೊಮ್ಯಾಂಟಿಕ್ ಬೈಕ್ ರೈಡ್

ಬೆಳಗ್ಗೆ ಕಾಲೇಜಿಗೆ ಬಂದ ರಿಷಿಯನ್ನು ಆಡಿಕೊಂಡ ಮಹೇಂದ್ರ. ನಿಮ್ಮ ಸ್ಟೂಡೆಂಟ್‌ಗೆ ಸೈಕಲ್‌ನಲ್ಲಿ ಓಡಾಡುವುದು ಬೇಡ ಅಂತ ಹೇಳಿ ಎಂದು ವಸುಧರಾ ಬಗ್ಗೆ ಪರೋಕ್ಷವಾಗಿ ಜಗತಿಗೆ ಹೇಳಿದ ರಿಷಿ. ವಸು ಮತ್ತು ರಿಷಿಯನ್ನು ಒಂದು ಮಾಡಬೇಕೆಂದು ಮಹೇಂದ್ರ ಮತ್ತು ಜಗತಿ ಇಬ್ಬರೂ ಪ್ರಯತ್ನ ಪಡುತ್ತಿದ್ದಾರೆ. ರಿಷಿಗೆ ಪ್ರಾಜೆಕ್ಟ್ ಕೊಡುವಂತೆ ವಸುಧರಾಗೆ ಹೇಳಿದಳು ಜಗತಿ. ವಸುಧರಾ ಭಯದಲ್ಲೇ ರಿಷಿ ಚೇಂಬರ್‌ಗೆ ಎಂಟ್ರಿ ಕೊಟ್ಟಳು. ಪ್ರಾಜೆಕ್ಟ್ ವಿಚಾರವಾಗಿ ಬಂದಿದ್ದು ಎಂದಳು ವಸು. ಇದ್ಯಾವುದು ಅವಶ್ಯಕತೆ ಇಲ್ಲ ಎಂದು ವಸುಧರಾಳನ್ನು ವಾಪಸ್ ಕಳುಹಿಸಿದ ರಿಷಿ. ಬೇಸರದಲ್ಲೇ ಹೊರಟಳು ವಸುಧರಾ. ರಿಷಿ ಸಂಪೂರ್ಣ ಕೋಪ ಮರೆತು ವಸು ಜೊತೆ ಮೊದಲಿನ ಹಾಗೆ ಇರುತ್ತಾನಾ? ವಸು ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:28 pm, Sun, 25 December 22

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ