AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾಪ ಅಂತ ಸುಮ್ಮನಿದ್ದೆ, ನಮ್ಮ ಬುಡಕ್ಕೆ ಬಂದರೆ ಹೊಡೆಯಲೇಬೇಕು’: ಸಂಗೀತಾ ಬಗ್ಗೆ ಕಾರ್ತಿಕ್​ ಕಿಡಿ

ಕಾರ್ತಿಕ್​ ಮಹೇಶ್​ ಮತ್ತು ವಿನಯ್​ ಗೌಡ ಅವರು ಈಗ ಸ್ನೇಹ ಬೆಳೆಸಿಕೊಂಡಿದ್ದಾರೆ. ಅವರಿಬ್ಬರು ಕೈ ಜೋಡಿಸಿರುವುದಕ್ಕೆ ಸಂಗೀತಾ ಶೃಂಗೇರಿ ಅವರು ಒಂಟಿ ಆದಂತೆ ಆಗಿದೆ. ಸದ್ಯ ಅವರ ಡ್ರೋನ್​ ಪ್ರತಾಪ್​ ಜೊತೆ ಸೇರಿಕೊಂಡಿದ್ದಾರೆ. ವಿನಯ್​ ಗೌಡ ಅವರು ರಾಜಕೀಯ ಮಾಡುವುದನ್ನು ಮುಂದುವರಿಸಿದ್ದಾರೆ.

‘ಪಾಪ ಅಂತ ಸುಮ್ಮನಿದ್ದೆ, ನಮ್ಮ ಬುಡಕ್ಕೆ ಬಂದರೆ ಹೊಡೆಯಲೇಬೇಕು’: ಸಂಗೀತಾ ಬಗ್ಗೆ ಕಾರ್ತಿಕ್​ ಕಿಡಿ
ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ
ಮದನ್​ ಕುಮಾರ್​
| Edited By: |

Updated on:Dec 19, 2023 | 6:58 AM

Share

ಕಾರ್ತಿಕ್​ ಮಹೇಶ್​ ಮತ್ತು ಸಂಗೀತಾ ಶೃಂಗೇರಿ (Sangeetha Sringeri) ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ಸಖತ್​ ಕ್ಲೋಸ್​ ಆಗಿದ್ದರು. ಆದರೆ ದಿನ ಕಳೆದಂತೆ ಎಲ್ಲವೂ ಬದಲಾಗಿದೆ. ಈಗ ಅವರ ನಡುವೆ ಯಾವುದೂ ಮೊದಲಿನಂತೆ ಇಲ್ಲ. ಕಾರ್ತಿಕ್​ ಮಹೇಶ್​ (Karthik Mahesh) ಅವರನ್ನು ಬಿಟ್ಟು ಸಂಗೀತಾ ದೂರ ಸರಿದಿದ್ದಾರೆ. ಈಗ ಅವರು ಡ್ರೋನ್​ ಪ್ರತಾಪ್​ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅಲ್ಲದೇ ಇತ್ತೀಚೆಗಿನ ಎಪಿಸೋಡ್​ನಲ್ಲಿ ಕಾರ್ತಿಕ್​ ಅವರು ಸಂಗೀತಾ ಅವರ ಪ್ರತಿಕೃತಿಗೆ ಸುತ್ತಿಗೆಯಿಂದ ಹೊಡೆದಿದ್ದರು. ಆ ಬಳಿಕ ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ವಾತಾವರಣ ಬದಲಾಗಿದೆ. ಅದರ ಬಗ್ಗೆ ವಿನಯ್​ ಗೌಡ ಮತ್ತು ಕಾರ್ತಿಕ್​ ಮಹೇಶ್​ ಚರ್ಚೆ ಮಾಡಿದ್ದಾರೆ.

ಕಾರ್ತಿಕ್​ ಮಹೇಶ್​ ಅವರು ಸಂಗೀತಾ ಅವರ ಪ್ರತಿಕೃತಿಯ ಮಡಿಕೆಗೆ ಫೋಟೋವನ್ನು ಅಂಟಿಸಿ ಒಡೆದಿದ್ದರ ಪರಿಣಾಮ ಯಾವ ರೀತಿ ಆಗಿದೆ ಎಂಬುದನ್ನು ವಿನಯ್​ ಗೌಡ ವಿವರಿಸಿದರು. ‘ಮಡಕೆ ಒಡೆದು ದಾರಿಯಲ್ಲಿ ಇರುವ ಹಾವನ್ನು ಬಿಟ್ಟುಕೊಂಡಂತೆ ಆಗಿದೆ. ಅದು ಬರೀ ಹಾವಲ್ಲ, ಅನಾಗೊಂಡ’ ಎಂದರು ವಿನಯ್​. ಅದಕ್ಕೆ ಕಾರ್ತಿಕ್​ ಮಹೇಶ್​ ತಮ್ಮ ಅನಿಸಿಕೆ ತಿಳಿಸಿದರು.

ಇದನ್ನೂ ಓದಿ: ಸಂಗೀತಾ ಶೃಂಗೇರಿಗೆ ಈ ವಾರ ತುಂಬ ಕಷ್ಟ ಆಗಲಿದೆ ಬಿಗ್​ ಬಾಸ್​ ಆಟ

‘ಪಾಪ ಅಂತ ಸುಮ್ಮನೆ ಇದ್ದೆ. ಆದರೆ ನಮ್ಮ ಬುಡಕ್ಕೆ ಬಂದಾಗ ಹೊಡೆಯಲೇ ಬೇಕು’ ಎಂದು ಕಾರ್ತಿಕ್​ ಮಹೇಶ್​ ಹೇಳಿದ್ದಾರೆ. ಆರಂಭದ ವಾರಗಳಲ್ಲಿ ಸಂಗೀತಾ ಶೃಂಗೇರಿ ಜೊತೆ ಕಾರ್ತಿಕ್​ ಸ್ನೇಹ ಬೆಳೆಸಿದ್ದರು. ಇಬ್ಬರೂ ಸದಾ ಕಾಲ ಜೊತೆಯಾಗಿ ಸಮಯ ಕಳೆಯುತ್ತಿದ್ದರು. ದಿನ ಕಳೆದಂತೆ ಆ ಸ್ನೇಹ ಗಟ್ಟಿ ಆಯಿತು. ಇಬ್ಬರೂ ಸೇರಿಕೊಂಡು ವಿನಯ್​ ವಿರುದ್ಧ ತಿರುಗಿ ಬಿದ್ದಿದ್ದರು. ಈಗ ಎಲ್ಲವೂ ಉಲ್ಟಾ ಆಗಿದೆ.

ಇದನ್ನೂ ಓದಿ: ‘ಬಿಗ್​ ಬಾಸ್​ ಫಿನಾಲೆಯ ಟಾಪ್​ 2 ಸ್ಥಾನಕ್ಕೆ ಸಂಗೀತಾ ಬರಲ್ಲ’: ಪವಿ ಪೂವಪ್ಪ ನೇರ ಅಭಿಪ್ರಾಯ

ಕಾರ್ತಿಕ್​ ಮಹೇಶ್​ ಮತ್ತು ವಿನಯ್​ ಗೌಡ ಅವರು ಈಗ ಒಡನಾಟ ಬೆಳೆಸಿಕೊಂಡಿದ್ದಾರೆ. ಅವರಿಬ್ಬರು ಕೈ ಜೋಡಿಸಿರುವುದಕ್ಕೆ ಸಂಗೀತಾ ಶೃಂಗೇರಿ ಅವರು ಒಂಟಿ ಆದಂತೆ ಆಗಿದೆ. ಸದ್ಯ ಅವರ ಡ್ರೋನ್​ ಪ್ರತಾಪ್​ ಜೊತೆ ಸೇರಿಕೊಂಡಿದ್ದಾರೆ. ವಿನಯ್​ ಗೌಡ ಅವರು ರಾಜಕೀಯ ಮಾಡುವುದನ್ನು ಮುಂದುವರಿಸಿದ್ದಾರೆ. ‘ಇನ್ಮೇಲೆ ರಾಜಕೀಯ ಮಾಡೋಣ’ ಎಂದು ಅವರು ನಮ್ರತಾ ಗೌಡ ಮತ್ತು ತನಿಷಾ ಕುಪ್ಪಂಡ ಜೊತೆ ಸೇರಿ ನಿರ್ಧಾರ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:42 pm, Mon, 18 December 23

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ