AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​

ಸಾರಾ ಖಾನ್​ ಹಾಗೂ ಅಲಿ ಮರ್ಚಂಟ್​ ಅವರು 2010ರಲ್ಲಿ ಹಿಂದಿ ಬಿಗ್​ ಬಾಸ್​ 4ಕ್ಕೆ ಎಂಟ್ರಿ ಪಡೆದಿದ್ದರು. ಇಬ್ಬರೂ ಬಿಗ್ ಬಾಸ್ ಮನೆಯಲ್ಲೇ ಮದುವೆ ಆದರು. ವಿ

‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​
ಬಿಬ್​ ಬಾಸ್​
TV9 Web
| Edited By: |

Updated on: Mar 19, 2022 | 6:00 AM

Share

‘ಬಿಗ್​ ಬಾಸ್​’ ಮನೆಯಲ್ಲಿ (Bigg Boss House) ಪ್ರೀತಿ ಹುಟ್ಟಿಕೊಳ್ಳೋದು ಸರ್ವೇ ಸಾಮಾನ್ಯ. ಬಿಗ್​ ಬಾಸ್​ ಮನೆಯಲ್ಲಿ ಹುಟ್ಟಿದ ಪ್ರೀತಿಯಲ್ಲಿ ಕೆಲವು ಹಸೆಮಣೆವರೆಗೆ (Marriage) ಹೋಗಿದೆ. ಇನ್ನೂ ಕೆಲವು ಬ್ರೇಕಪ್​ನಲ್ಲಿ ಅಂತ್ಯವಾಗಿದೆ. ಆದರೆ, ಬಿಗ್​ ಬಾಸ್​ನಲ್ಲೇ ಮದುವೆ ಆದ ಜೋಡಿ ಬಗ್ಗೆ ನಿಮಗೆ ಗೊತ್ತಾ? ಹೀಗೊಂದು ಘಟನೆ 2010ರಲ್ಲಿ ನಡೆದಿತ್ತು. ಅಚ್ಚರಿ ಎಂದರೆ, ‘ನಾವು ಬಿಗ್​ ಬಾಸ್​ ಮನೆಯಲ್ಲಿ ಮದುವೆ ಆಗೋಕೆ 50 ಲಕ್ಷ ರೂಪಾಯಿ ಹಣವನ್ನು (Money) ​ ಚಾನೆಲ್​ನವರು ನೀಡಿದ್ದರು’ ಎಂದು ಈ ಜೋಡಿ ಹೇಳಿಕೊಂಡಿತ್ತು. ಆದರೆ, ವಾಹಿನಿಯವರು ಇದನ್ನು ಅಲ್ಲಗಳೆದಿದ್ದರು. ಹಾಗಾದರೆ, ಯಾರು ಇವರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಾರಾ ಖಾನ್​ ಹಾಗೂ ಅಲಿ ಮರ್ಚಂಟ್​ ಅವರು 2010ರಲ್ಲಿ ಹಿಂದಿ ಬಿಗ್​ ಬಾಸ್​ 4ಕ್ಕೆ ಎಂಟ್ರಿ ಪಡೆದಿದ್ದರು. ಇಬ್ಬರೂ ಬಿಗ್ ಬಾಸ್ ಮನೆಯಲ್ಲೇ ಮದುವೆ ಆದರು. ವಿಚಿತ್ರ ಎಂದರೆ, ಮದುವೆ ಆದ ಎರಡೇ ತಿಂಗಳಿಗೆ ಈ ಸಂಬಂಧ ಮುರಿದು ಬಿದ್ದಿತ್ತು. ಪತಿಯಿಂದ ಪದೇಪದೇ ಮೋಸ ಹೋಗಿದ್ದರಿಂದ ಈ ರೀತಿಯ ನಿರ್ಧಾರಕ್ಕೆ ಬಂದಿದ್ದೆ ಎಂದು ಸಾರಾ ಈಗ ಹೇಳಿಕೊಂಡಿದ್ದಾರೆ.

ಸಾರಾ ಹಾಗೂ ಅಲಿ ಇಬ್ಬರೂ ಒಟ್ಟಿಗೆ ಬಿಗ್ ಬಾಸ್ ಮನೆಗೆ ಬಂದರು. ಅಲಿ ಅವರು ಬಿಗ್ ಬಾಸ್​ ಮನೆಯಲ್ಲಿ ಸಾರಾಗೆ ಪ್ರಪೋಸ್​ ಮಾಡಿದರು. ಬಿಗ್​ ಬಾಸ್​ ಮನೆಯಲ್ಲೇ ಇವರ ವಿವಾಹ ನೆರವೇರಿತು. ಈ ಗಿಮಿಕ್​ ಮಾಡೋಕೆ ಚಾನೆಲ್​ನವರು ನಮಗೆ 50 ಲಕ್ಷ ರೂಪಾಯಿ ನೀಡಿದ್ದಾಗಿ ಈ ಜೋಡಿ ಹೇಳಿಕೊಂಡಿತ್ತು. ಆದರೆ, ಚಾನೆಲ್​ನವರು ಇದನ್ನು ಅಲ್ಲಗಳೆದಿದ್ದರು. ಮದುವೆ ಆಗಿ ಎರಡೇ ತಿಂಗಳಿಗೆ ಇಬ್ಬರೂ ಬೇರೆ ಆದರು.

ನಡೆದಿತ್ತು ನಿರಂತರ ಮೋಸ

ಆಲ್ಟ್​ಬಾಲಾಜಿ ಹಾಗೂ ಎಂಎಕ್ಸ್​ ಪ್ಲೇಯರ್​ನಲ್ಲಿ ಪ್ರಸಾರವಾಗುವ ‘ಲಾಕಪ್​’ ಶೋಗೆ ಸಾರಾ ಸ್ಪರ್ಧಿಯಾಗಿ ಬಂದಿದ್ದಾರೆ. ಈ ವೇಳೆ ಅವರು ತಮಗಾದ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ. ‘ಅಲಿ ಯಾವಾಗಲೂ ನನಗೆ ಮೋಸ ಮಾಡಲು ಪ್ರಯತ್ನಿಸುತ್ತಲೇ ಇದ್ದ. ಅದು ನನಗೆ ಕಿರಿಕಿರಿ ಉಂಟು ಮಾಡಿತ್ತು. ನಾನು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದೇನೆ. ಅವಕಾಶ ಕೊಟ್ಟಾಗಲೆಲ್ಲ ಅವರು ಸಿಕ್ಕಿ ಬಿದ್ದಿದ್ದರು. ಅಲಿ ಹೇಳುತ್ತಿದ್ದ ಪ್ರತಿಯೊಂದು ಸುಳ್ಳನ್ನೂ ನಾನು ಕಂಡು ಹಿಡಿದಿದ್ದೇನೆ. ನಾನು ಅವರಿಗೆ ಕನಿಷ್ಠ 350 ಅವಕಾಶಗಳನ್ನು ನೀಡಿದ್ದೆ. ಏಕೆಂದರೆ ಅವರು ನನಗೆ ಮುಖ್ಯವಾದ ವ್ಯಕ್ತಿ ಆಗಿದ್ದರು. ಆದರೆ, ಮತ್ತೆ ಮೋಸ ಹೋದೆ. ಅದರಿಂದ ಹೊರಬರಲು, ಎಲ್ಲವನ್ನೂ ಬಿಟ್ಟು ನನ್ನ ಜೀವನದಲ್ಲಿ ಮುಂದೆ ಸಾಗಲು ನಾನು ನಾಲ್ಕೂವರೆ ವರ್ಷಗಳನ್ನು ತೆಗೆದುಕೊಂಡೆ’ ಎಂದಿದ್ದಾರೆ ಸಾರಾ.

ಇದನ್ನೂ ಓದಿ: ಜಾನ್ವಿ ಕಪೂರ್​ ನಟಿ ಆಗೋದು ತಾಯಿ ಶ್ರೀದೇವಿಗೆ ಇಷ್ಟ ಇರಲಿಲ್ಲ; ಕಾರಣ ಏನು?

Janhvi Kapoor: ಮಾದಕ ಲುಕ್​ನಿಂದ ಪಡ್ಡೆಗಳ ನಿದ್ದೆ ಕದ್ದ ಜಾನ್ವಿ ಕಪೂರ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್