Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​

ಸಾರಾ ಖಾನ್​ ಹಾಗೂ ಅಲಿ ಮರ್ಚಂಟ್​ ಅವರು 2010ರಲ್ಲಿ ಹಿಂದಿ ಬಿಗ್​ ಬಾಸ್​ 4ಕ್ಕೆ ಎಂಟ್ರಿ ಪಡೆದಿದ್ದರು. ಇಬ್ಬರೂ ಬಿಗ್ ಬಾಸ್ ಮನೆಯಲ್ಲೇ ಮದುವೆ ಆದರು. ವಿ

‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​
ಬಿಬ್​ ಬಾಸ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 19, 2022 | 6:00 AM

‘ಬಿಗ್​ ಬಾಸ್​’ ಮನೆಯಲ್ಲಿ (Bigg Boss House) ಪ್ರೀತಿ ಹುಟ್ಟಿಕೊಳ್ಳೋದು ಸರ್ವೇ ಸಾಮಾನ್ಯ. ಬಿಗ್​ ಬಾಸ್​ ಮನೆಯಲ್ಲಿ ಹುಟ್ಟಿದ ಪ್ರೀತಿಯಲ್ಲಿ ಕೆಲವು ಹಸೆಮಣೆವರೆಗೆ (Marriage) ಹೋಗಿದೆ. ಇನ್ನೂ ಕೆಲವು ಬ್ರೇಕಪ್​ನಲ್ಲಿ ಅಂತ್ಯವಾಗಿದೆ. ಆದರೆ, ಬಿಗ್​ ಬಾಸ್​ನಲ್ಲೇ ಮದುವೆ ಆದ ಜೋಡಿ ಬಗ್ಗೆ ನಿಮಗೆ ಗೊತ್ತಾ? ಹೀಗೊಂದು ಘಟನೆ 2010ರಲ್ಲಿ ನಡೆದಿತ್ತು. ಅಚ್ಚರಿ ಎಂದರೆ, ‘ನಾವು ಬಿಗ್​ ಬಾಸ್​ ಮನೆಯಲ್ಲಿ ಮದುವೆ ಆಗೋಕೆ 50 ಲಕ್ಷ ರೂಪಾಯಿ ಹಣವನ್ನು (Money) ​ ಚಾನೆಲ್​ನವರು ನೀಡಿದ್ದರು’ ಎಂದು ಈ ಜೋಡಿ ಹೇಳಿಕೊಂಡಿತ್ತು. ಆದರೆ, ವಾಹಿನಿಯವರು ಇದನ್ನು ಅಲ್ಲಗಳೆದಿದ್ದರು. ಹಾಗಾದರೆ, ಯಾರು ಇವರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಾರಾ ಖಾನ್​ ಹಾಗೂ ಅಲಿ ಮರ್ಚಂಟ್​ ಅವರು 2010ರಲ್ಲಿ ಹಿಂದಿ ಬಿಗ್​ ಬಾಸ್​ 4ಕ್ಕೆ ಎಂಟ್ರಿ ಪಡೆದಿದ್ದರು. ಇಬ್ಬರೂ ಬಿಗ್ ಬಾಸ್ ಮನೆಯಲ್ಲೇ ಮದುವೆ ಆದರು. ವಿಚಿತ್ರ ಎಂದರೆ, ಮದುವೆ ಆದ ಎರಡೇ ತಿಂಗಳಿಗೆ ಈ ಸಂಬಂಧ ಮುರಿದು ಬಿದ್ದಿತ್ತು. ಪತಿಯಿಂದ ಪದೇಪದೇ ಮೋಸ ಹೋಗಿದ್ದರಿಂದ ಈ ರೀತಿಯ ನಿರ್ಧಾರಕ್ಕೆ ಬಂದಿದ್ದೆ ಎಂದು ಸಾರಾ ಈಗ ಹೇಳಿಕೊಂಡಿದ್ದಾರೆ.

ಸಾರಾ ಹಾಗೂ ಅಲಿ ಇಬ್ಬರೂ ಒಟ್ಟಿಗೆ ಬಿಗ್ ಬಾಸ್ ಮನೆಗೆ ಬಂದರು. ಅಲಿ ಅವರು ಬಿಗ್ ಬಾಸ್​ ಮನೆಯಲ್ಲಿ ಸಾರಾಗೆ ಪ್ರಪೋಸ್​ ಮಾಡಿದರು. ಬಿಗ್​ ಬಾಸ್​ ಮನೆಯಲ್ಲೇ ಇವರ ವಿವಾಹ ನೆರವೇರಿತು. ಈ ಗಿಮಿಕ್​ ಮಾಡೋಕೆ ಚಾನೆಲ್​ನವರು ನಮಗೆ 50 ಲಕ್ಷ ರೂಪಾಯಿ ನೀಡಿದ್ದಾಗಿ ಈ ಜೋಡಿ ಹೇಳಿಕೊಂಡಿತ್ತು. ಆದರೆ, ಚಾನೆಲ್​ನವರು ಇದನ್ನು ಅಲ್ಲಗಳೆದಿದ್ದರು. ಮದುವೆ ಆಗಿ ಎರಡೇ ತಿಂಗಳಿಗೆ ಇಬ್ಬರೂ ಬೇರೆ ಆದರು.

ನಡೆದಿತ್ತು ನಿರಂತರ ಮೋಸ

ಆಲ್ಟ್​ಬಾಲಾಜಿ ಹಾಗೂ ಎಂಎಕ್ಸ್​ ಪ್ಲೇಯರ್​ನಲ್ಲಿ ಪ್ರಸಾರವಾಗುವ ‘ಲಾಕಪ್​’ ಶೋಗೆ ಸಾರಾ ಸ್ಪರ್ಧಿಯಾಗಿ ಬಂದಿದ್ದಾರೆ. ಈ ವೇಳೆ ಅವರು ತಮಗಾದ ಮೋಸದ ಬಗ್ಗೆ ಹೇಳಿಕೊಂಡಿದ್ದಾರೆ. ‘ಅಲಿ ಯಾವಾಗಲೂ ನನಗೆ ಮೋಸ ಮಾಡಲು ಪ್ರಯತ್ನಿಸುತ್ತಲೇ ಇದ್ದ. ಅದು ನನಗೆ ಕಿರಿಕಿರಿ ಉಂಟು ಮಾಡಿತ್ತು. ನಾನು ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದೇನೆ. ಅವಕಾಶ ಕೊಟ್ಟಾಗಲೆಲ್ಲ ಅವರು ಸಿಕ್ಕಿ ಬಿದ್ದಿದ್ದರು. ಅಲಿ ಹೇಳುತ್ತಿದ್ದ ಪ್ರತಿಯೊಂದು ಸುಳ್ಳನ್ನೂ ನಾನು ಕಂಡು ಹಿಡಿದಿದ್ದೇನೆ. ನಾನು ಅವರಿಗೆ ಕನಿಷ್ಠ 350 ಅವಕಾಶಗಳನ್ನು ನೀಡಿದ್ದೆ. ಏಕೆಂದರೆ ಅವರು ನನಗೆ ಮುಖ್ಯವಾದ ವ್ಯಕ್ತಿ ಆಗಿದ್ದರು. ಆದರೆ, ಮತ್ತೆ ಮೋಸ ಹೋದೆ. ಅದರಿಂದ ಹೊರಬರಲು, ಎಲ್ಲವನ್ನೂ ಬಿಟ್ಟು ನನ್ನ ಜೀವನದಲ್ಲಿ ಮುಂದೆ ಸಾಗಲು ನಾನು ನಾಲ್ಕೂವರೆ ವರ್ಷಗಳನ್ನು ತೆಗೆದುಕೊಂಡೆ’ ಎಂದಿದ್ದಾರೆ ಸಾರಾ.

ಇದನ್ನೂ ಓದಿ: ಜಾನ್ವಿ ಕಪೂರ್​ ನಟಿ ಆಗೋದು ತಾಯಿ ಶ್ರೀದೇವಿಗೆ ಇಷ್ಟ ಇರಲಿಲ್ಲ; ಕಾರಣ ಏನು?

Janhvi Kapoor: ಮಾದಕ ಲುಕ್​ನಿಂದ ಪಡ್ಡೆಗಳ ನಿದ್ದೆ ಕದ್ದ ಜಾನ್ವಿ ಕಪೂರ್​

ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ