AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಕನ್ನಡ: ವಿನಯ್ ಎಲಿಮಿನೇಷನ್ ಫೇರ್​ ಅಲ್ಲ ಎಂದವರಿಗೆ ಕಿಚ್ಚ ಕೊಟ್ಟ ಉತ್ತರ ಏನು?

ನಮ್ರತಾ ಗೌಡ ಅವರು ಈ ಎಲಿಮಿನೇಷನ್ ಬಗ್ಗೆ ಮಾತನಾಡಿದರು. ‘ಅವರು ವಿನ್ನರ್ ಆಗಬೇಕಿತ್ತು. ಶಾಕಿಂಗ್ ಆಗಿತ್ತು. ಇದು ಫೇರ್ ಅಲ್ಲ’ ಎಂದಿದ್ದಾರೆ ಅವರು.

ಬಿಗ್ ಬಾಸ್ ಕನ್ನಡ: ವಿನಯ್ ಎಲಿಮಿನೇಷನ್ ಫೇರ್​ ಅಲ್ಲ ಎಂದವರಿಗೆ ಕಿಚ್ಚ ಕೊಟ್ಟ ಉತ್ತರ ಏನು?
ವಿನಯ್
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:Jan 29, 2024 | 9:45 AM

Share

ವಿನಯ್ ಗೌಡ ಅವರು ಬಿಗ್ ಬಾಸ್ (Bigg Boss) ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಅವರು ಮೂರನೇ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ. ಅವರ ಎಲಿಮಿನೇಷನ್ ಅನೇಕರಿಗೆ ಶಾಕ್ ತಂದಿದೆ. ನಮ್ರತಾ ಗೌಡ ಹಾಗೂ ತುಕಾಲಿ ಸಂತೋಷ್ ಮೊದಲಾದವರು ಶಾಕ್ ಆದರು. ‘ಇದು ಫೇರ್ ಅಲ್ಲ’ ಎಂದರು ನಮ್ರತಾ. ತುಕಾಲಿ ಸಂತೋಷ್ ಕೂಡ ಶಾಕ್ ಆದರು. ವಿನಯ್ ಗೌಡ ಅವರು ಖುಷಿಯಿಂದಲೇ ಇದನ್ನು ಸ್ವೀಕರಿಸಿದ್ದಾರೆ. ಅವರ ಪತ್ನಿ ಕಣ್ಣೀರು ಹಾಕಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಂಡಿದೆ.

ನಮ್ರತಾ ಗೌಡ ಅವರು ಈ ಎಲಿಮಿನೇಷನ್ ಬಗ್ಗೆ ಮಾತನಾಡಿದರು. ‘ಅವರು ವಿನ್ನರ್ ಆಗಬೇಕಿತ್ತು. ಶಾಕಿಂಗ್ ಆಗಿತ್ತು. ಇದು ಫೇರ್ ಅಲ್ಲ’ ಎಂದಿದ್ದಾರೆ ಅವರು. ‘ಕಪ್ಪು ಮುಖ್ಯ ಅಂತಿದ್ದ. ಇಷ್ಟು ಓವರ್ ಕಾನ್ಫಿಡೆನ್ಸ್ ಯಾಕೆ ಎಂದಿದ್ದೆ. ಆದರೆ, ಓವರ್ ಕಾನ್ಫಿಡೆನ್ಸ್ ಅಲ್ಲ ಎನ್ನುತ್ತಿದ್ದ. ಇದನ್ನು ಎಕ್ಸ್​ಪೆಕ್ಟ್ ಮಾಡೇ ಇರಲಿಲ್ಲ’ ಎಂದರು ತುಕಾಲಿ ಸಂತೋಷ್.

ಆ ಬಳಿಕ ಸುದೀಪ್ ಅವರು ವಿನಯ್ ಬಗ್ಗೆ ಮಾತನಾಡಿದರು. ‘ಅವರು ಕಾಂಟ್ರಿಬ್ಯೂಷನ್ ಇಲ್ಲದೆ ಸುಮಾರಷ್ಟು ನಡೆಯುತ್ತಾ ಇರಲಿಲ್ಲ. ವೋಟಿಂಗ್ ಫೇರ್ ಆಗೇ ನಡೆಯುತ್ತದೆ. ಅದು ನಮ್ಮ ಕೈಲಿ ಇರುವುದಿಲ್ಲ. ನಾನು ಇಲ್ಲಿಗೆ ಬಂದ ಬಳಿಕವೇ ಎಲಿಮಿನೇಷನ್ ಬಗ್ಗೆ ಕೇಳುತ್ತೇನೆ. ನನಗೆ ಶಾಕಿಂಗ್ ಆದ ಅನೇಕ ಎಲಿಮಿನೇಷನ್ ಇದೆ’ ಎಂದರು ಕಿಚ್ಚ ಸುದೀಪ್.

ಇದನ್ನೂ ಓದಿ: Vinay Gowda: ಬಿಗ್ ಬಾಸ್ ಮನೆಯಿಂದ ವಿನಯ್ ಗೌಡ ಔಟ್​; ಎಲ್ಲರಿಗೂ ಶಾಕ್​..

ಎಲಿಮಿನೇಟ್ ಆಗಿ ಹೊರ ಬಂದ ಬಳಿಕ ವಿನಯ್ ಮಾತನಾಡಿದ್ದಾರೆ. ‘ಶಾಕ್ ಆಯ್ತು. ಎಲ್ಲದೂ ವೋಟಿಂಗ್ ಮೇಲೆ ಅನ್ನೋದು ಗೊತ್ತಿದೆ. ನಾನು ಪೀಪಲ್ಸ್ ಚಾಂಪಿಯನ್. ತುಂಬಾ ಪ್ರೀತಿ ಕೊಟ್ಟಿದ್ದಾರೆ. ಇವರು ಇರ್ತಾ ಇರಲಿಲ್ಲ ಎಂದರೆ ನಾನು ಇಲ್ಲಿಯವರೆಗೆ ಬರ್ತಾ ಇರಲಿಲ್ಲ. ಎಲ್ಲರೂ ಮಹದೇವ ಎಂದು ಕರೆಯುತ್ತಿದ್ದರು. ಈ ಶೋ ಮುಗಿದ ಮೇಲೆ ವಿನಯ್ ಎಂದು ಕರೆಯುತ್ತಾರೆ ಎಂಬ ನಂಬಿಕೆ ಇದೆ’ ಎಂದಿದ್ದಾರೆ ವಿನಯ್ ಗೌಡ. ‘ನಂದೇನೂ ಕ್ಯಾರೆಕ್ಟರ್ ಎಲ್ಲರಿಗೂ ಇಷ್ಟ ಆಗಲ್ಲ. ಹೆದರಿಕೆ ಆಗುತ್ತದೆ. ನನ್ನನ್ನು ನಂಬಿದವರಿಗೆ ಕೊನೆಯವರೆಗೂ ಜೀವ ಕೊಡ್ತೀನಿ’ ಎಂದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:20 pm, Sun, 28 January 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ