AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡದಲ್ಲಿ ನಟಿಸಿದ್ದ ಈ ನಟಿಯ ಅದ್ದೂರಿ ವಿವಾಹ; 16 ದಿನಕ್ಕೆ ಗಂಡನಿಂದ ದೂರವಾದ ಹೀರೋಯಿನ್

ಕನ್ನಡದಲ್ಲಿ ನಟಿಸಿರೋ ಎಸ್ತರ್ ನೊರೊನಾ ಅವರು 2019ರಲ್ಲಿ ನೋಯೆಲ್ ಎಂಬುವವರನ್ನು ಮದುವೆಯಾಗಿ 16 ದಿನಗಳಲ್ಲೇ ವಿಚ್ಛೇದನ ಪಡೆದ ಘಟನೆ ಸುದ್ದಿಯಾಗಿದೆ. ಮದುವೆ ಆದ ಬಳಿಕ ಅವರ ನಿಜವಾದ ಸ್ವಭಾವ ಗೊತ್ತಾಗದಿರುವುದು ವಿಚ್ಛೇದನಕ್ಕೆ ಕಾರಣ ಎಂದು ಎಸ್ತರ್ ಹೇಳಿದ್ದಾರೆ. ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಯಶಸ್ವಿಯಾಗುತ್ತಿರುವ ಅವರು ತಮ್ಮ ವೃತ್ತಿಜೀವನದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ

ಕನ್ನಡದಲ್ಲಿ ನಟಿಸಿದ್ದ ಈ ನಟಿಯ ಅದ್ದೂರಿ ವಿವಾಹ; 16 ದಿನಕ್ಕೆ ಗಂಡನಿಂದ ದೂರವಾದ ಹೀರೋಯಿನ್
ಎಸ್ತರ್
ರಾಜೇಶ್ ದುಗ್ಗುಮನೆ
|

Updated on:Nov 30, 2024 | 2:54 PM

Share

ಸೆಲೆಬ್ರಿಟಿಗಳ ವಿಚ್ಛೇದನ ವಿಚಾರ ಯಾವಾಗಲೂ ಸದಾ ಚರ್ಚೆಯಲ್ಲಿ ಇರುತ್ತದೆ. ಸಮಂತಾ-ನಾಗ ಚೈತನ್ಯ ವಿಚ್ಛೇದನ ನಡೆದು ಮೂರು ವರ್ಷಗಳೇ ಕಳೆದರೂ ಈಗಲೂ ಸುದ್ದಿ ಆಗುತ್ತಿದೆ. ಇತ್ತೀಚೆಗೆ ಸಂಗೀತ ಸಂಯೋಜಕ ಎಆರ್​ ರೆಹಮಾನ್ ಅವರು ಪತ್ನಿ ಸೈರಾ ಬಾನುಗೆ ವಿಚ್ಛೇದನ ನೀಡಿದ್ದು ಸುದ್ದಿ ಆಗಿತ್ತು. ಈ ದಂಪತಿ ಮದುವೆ ಆಗಿ 29 ವರ್ಷಗಳು ಕಳೆದಿದ್ದವು. ಅಚ್ಚರಿಯ ಸಂಗತಿ ಎಂದರೆ ಕನ್ನಡದಲ್ಲಿ ನಟಿಸಿದ್ದ ಎಸ್ತರ್ ನೊರೋನಾ ಕೇವಲ 16 ದಿನಕ್ಕೆ ಗಂಡನಿಂದ ದೂರ ಆಗಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಎಸ್ತರ್ ನೊರೋನಾ 2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲು ಹಿಂದಿ ಸಿನಿಮಾಗಳಲ್ಲಿ ನಟಿಸಿದರು. ಆ ಬಳಿಕ 2014ರಲ್ಲಿ ‘ಉಸಿರಿಗಿಂತ ನೀನೆ ಹತ್ತಿರ’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟರು. ‘ನಾವಿಕ’, ‘ಅತಿರಥ’ ‘ಲಂಕೆ’ ಮೊದಲಾದ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಎಸ್ತರ್ ಹಲವು ವರ್ಷಗಳ ಕಾಲ ಹುಡುಗನೊಬ್ಬನ ಜೊತೆ ಡೇಟ್ ಮಾಡಿದ್ದರು. ಮದುವೆ ಆದ ಬಳಿಕ ಇವರ ಸಂಸಾರ ಹೆಚ್ಚುದಿನ ನಡೆಯಲಿಲ್ಲ.

ಎಸ್ತರ್ ಅವರು 2019ರಲ್ಲಿ ನೋಯೆಲ್ ಸೀನ್ ಎಂಬುವವರನ್ನು ಮದುವೆ ಆದರು. ಇವರ ನಿಶ್ಚಿತಾರ್ಥ ನಡೆದು ವರ್ಷವೇ ಕಳೆದಿತ್ತು. ಇವರ ಮದುವೆ ಅದ್ದೂರಿಯಾಗಿ ನಡೆಯಿತು. ಮದುವೆ ಆಗಿ 16 ದಿನಕ್ಕೆ ಪತಿಯ ಅಸಲಿ ವಿಚಾರ ಗೊತ್ತಾಯಿತು ಎಂದಿರೋ ಅವರು ಮೂರು ತಿಂಗಳಿಗೆ ವಿಚ್ಛೇದನ ಪಡೆದರು.

‘16 ದಿನಕ್ಕೆ ಆತನ ನಿಜವಾದ ಬಣ್ಣ ಗೊತ್ತಾಯಿತು. ಹೀಗಾಗಿ ಬೇರೆ ಆಗುವ ನಿರ್ಧಾರ ತೆಗೆದುಕೊಂಡೆ’ ಎಂದು ಎಸ್ತರ್ ಅವರು ಹೇಳಿದ್ದರು. ಮದುವೆ ಆಗಿ ಮೂರು ತಿಂಗಳಲ್ಲಿ ವಿಚ್ಛೇದನ ಪಡೆದ ವಿಚಾರ ಘೋಷಣೆ ಮಾಡಿದ್ದರು. ವಿಚ್ಛೇದನಕ್ಕೂ ಮೊದಲೇ ಇವರು ದೂರ ಆಗುವ ನಿರ್ಧಾರಕ್ಕೆ ಬಂದಿದ್ದರು.

ಇದನ್ನೂ ಓದಿ: ‘ಕರ್ಮ ಬಡ್ಡಿ ಸಮೇತ ಬರುತ್ತೆ’; ಧನುಷ್ ವಿಚ್ಛೇದನಕ್ಕೆ ಟಾಂಗ್ ಕೊಟ್ರಾ ನಯನತಾರಾ?

ಇತ್ತೀಚೆಗೆ ತೆಲುಗಿನಲ್ಲಿ ‘ಟೆನೆಂಟ್’ ಹೆಸರಿನ ಸಿನಿಮಾ ಬಂದಿದೆ. ಈ ಚಿತ್ರ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿತ್ತು. ಈ ಸಿನಿಮಾ ಏಪ್ರಿಲ್​ನಲ್ಲಿ ರಿಲೀಸ್ ಆಯಿತು. ಈ ಚಿತ್ರ ಮೆಚ್ಚುಗೆ ಪಡೆದಿದೆ. ಈ ಚಿತ್ರದಿಂದ ಅವರು ಗೆಲುವು ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:54 pm, Sat, 30 November 24

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್