ಭಾರತದ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಮಹಿಳೆಯರನ್ನು ರಕ್ಷಿಸಬಹುದೇ?

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಭಾರತೀಯ ವಿಜ್ಞಾನಿಗಳು ಹೆಚ್ಚು ಪರಿಣಾಮಕಾರಿಯಾದ, ಕಡಿಮೆ ವೆಚ್ಚದ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಭಾರತದ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಮಹಿಳೆಯರನ್ನು ರಕ್ಷಿಸಬಹುದೇ?
ಸಾಂದರ್ಭಿಕ ಚಿತ್ರImage Credit source: Medika Life
Follow us
| Updated By: ಅಕ್ಷತಾ ವರ್ಕಾಡಿ

Updated on:Jan 14, 2023 | 4:44 PM

ಗರ್ಭಕಂಠದ ಕ್ಯಾನ್ಸರ್‌(Cervical Cancer)ಗೆ ಮುಖ್ಯ ಕಾರಣ ಮತ್ತು ಇತರ ಕ್ಯಾನ್ಸರ್‌ಗಳಿಗೆ ಸಂಭಾವ್ಯ ಕಾರಣವಾಗಿರುವ ಹ್ಯೂಮನ್ ಪ್ಯಾಪಿಲೋಮ ವೈರಸ್​​ನ್ನು ಗುರಿಯಾಗಿಟ್ಟುಕೊಂಡು ಹೊಸದಾಗಿ ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ಬಳಸಿಕೊಂಡು 6 ರಿಂದ 14 ವರ್ಷದೊಳಗಿನ ಹುಡುಗಿಯರಿಗೆ ಏಪ್ರಿಲ್‌ನಲ್ಲಿ ರಾಷ್ಟ್ರ ವ್ಯಾಪಿ ಪ್ರತಿರಕ್ಷಣೆ ಅಭಿಯಾನವನ್ನು ಪ್ರಾರಂಭಿಸುವುದಾಗಿ ಭಾರತ ಸರ್ಕಾರ ಇತ್ತೀಚಿಗೆ ಘೋಷಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2019 ರಿಂದ ಭಾರತದಲ್ಲಿ 4.1 ಮಿಲಿಯನ್ ಮಹಿಳೆಯರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಮತ್ತು 2020 ರ ಸುಮಾರಿಗೆ 5.7 ಮಿಲಿಯನ್ ಜನ ಎಂದು ಹೇಳಿಕೆ ನೀಡಿದೆ.

2030ರ ವೇಳೆಗೆ ಪ್ರತಿ 1,00,000 ಮಹಿಳೆಯರಲ್ಲಿ ವರ್ಷಕ್ಕೆ 4 ಕ್ಕಿಂತ ಕಡಿಮೆ ಪ್ರಕರಣಗಳು ಕಾಣಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದಿಷ್ಟ ಪಡಿಸಿದೆ. ಆದ್ದರಿಂದ ಈ ಕ್ಯಾನ್ಸರ್ ಸಂಭವದ ಪ್ರಮಾಣವನ್ನು ಕಡಿಮೆ ಮಾಡಲು ಹುಡುಗಿಯರಿಗೆ ಈ ಕ್ಯಾನ್ಸರ್ ತಡೆಗಟ್ಟುವ ವ್ಯಾಕ್ಸಿನೇಷನ್ ಅತ್ಯಗತ್ಯವಾಗಿದೆ. ಲಸಿಕೆ ರೋಲ್‌ಔಟ್‌ಗಾಗಿ ಸರಿಯಾದ ಮಾರ್ಗಸೂಚಿ ಮತ್ತು ಸಾಮಾಜಿಕ ಸಜ್ಜುಗೊಳಿಸುವಿಕೆಯ ಕಾರ್ಯತಂತ್ರವನ್ನು ಸಿದ್ಧಪಡಿಸಿದ್ದೇವೆ. ಕೋವಿಡ್ ಲಸಿಕೆ ಕಾರ್ಯಕ್ರಮದೊಂದಿಗಿನ ನಮ್ಮ ಅನುಭವವು ನಮಗೆ ಅಪಾರವಾಗಿ ಸಹಾಯ ಮಾಡಿದೆ ಎಂದು ಇಮ್ಯುನೈಸೇಶನ್ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಅಧ್ಯಕ್ಷ ಎನ್.ಕೆ. ಅರೋರಾ ತಿಳಿಸಿದರು.

ಸೀರಮ್ ಇನ್ಸ್ಟಟ್ಯೂಟ್ ಆಫ್ ಇಂಡಿಯಾ (SII) ಅಭಿವೃದ್ಧಿ ಪಡಿಸಿದ ‘ಸರ್ವವಾಕ್’ ಎಂಬ ಕ್ವಾಡ್ರಿವೇಲೆಂಟ್ ಲಸಿಕೆಯು ಹೆಚ್.ಐ.ವಿಯ ನಾಲ್ಕು ತಳಿಗಳ ವಿರುದ್ಧ ರಕ್ಷಣೆ ನೀಡುತ್ತದೆ. ಪ್ರಸ್ತುತ ಭಾರತವು ಲಸಿಕೆಗಳಿಗಾಗಿ ವಿದೇಶಿ ತಯಾರಕರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಮತ್ತು ಇದು ದುಬಾರಿಯಾಗಿದೆ.

ಹೆಚ್.ಐ.ವಿ ಲೈಂಗಿಕವಾಗಿ ಹರಡುವ ವೈರಲ್ ಸೋಂಕು ಆಗಿದ್ದು, ಇದು ಜನನಾಂಗ, ಬಾಯಿ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವುದನ್ನು ಹೊರತುಪಡಿಸಿ, ವೈರಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ. ವೈದ್ಯಕೀಯ ಜರ್ನಲ್, ಲ್ಯಾನ್ಸೆಟ್ ಪ್ರಕಾರ ಹೆಚ್.ಐ.ವಿ ಯ ಲಸಿಕೆಗಳು ೨೦೦೮ರಿಂದ ಭಾರತದಲ್ಲಿ ಲಭ್ಯವಿದ್ದರೂ, ರಾಷ್ಟ್ರೀಯ ಲಸಿಕೆ ಕಾರ್ಯಕ್ರಮವನ್ನು ಸ್ಥಾಪಿಸುವ ಪ್ರಯತ್ನಗಳು ಮುಖ್ಯವಾಗಿ ಆಧಾರರಹಿತ ಚಿಂತೆಗಳ ಅಡ್ಡ ಪರಿಣಾಮಗಳು ಮತ್ತು ಕೈಗೆಟಕುವ ಕಾಳಜಿಯ ಕಾರಣ ಸ್ಥಗಿತಗೊಂಡಿವೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸುಮಾರು ಎರಡು ವರ್ಷಗಳಲ್ಲಿ 200 ಮಿಲಿಯನ್ ಡೋಸ್‌ಗಳನ್ನು ಉತ್ಪಾದಿಸುವ ನಿರೀಕ್ಷೆಯಲ್ಲಿದೆ. ಲಸಿಕೆಗಾಗಿ ದೈಹಿಕ ಪ್ರಯೋಗಗಳನ್ನು ಭಾರತದಾದ್ಯಂತ ಹತ್ತು ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಯಿತು. ಮೊದಲು ಇದನ್ನು ಭಾರತದ ನಾಗರಿಕರಿಗೆ ವಿತರಿಸಲಾಗುವುದು. ನಂತರ ಲಸಿಕೆಯನ್ನು ಜಾಗತಿಕವಾಗಿ ಹಂಚಲಾಗುತ್ತದೆ. ಪ್ರಪಂಚದಾದ್ಯಂತದ ಎಲ್ಲಾ ಮಹಿಳೆಯರಿಗಾಗಿ ಇದನ್ನು ತಯಾರಿಸಿದ್ದೇವೆ. ಇದು ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆಗೆ ಬಹಳ ಮುಖ್ಯವಾಗಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿ.ಇ.ಓ ಆದರ್ ಪೂನಾವಾಲಾ ಹೇಳಿದ್ದಾರೆ.

ಇದನ್ನೂ ಓದಿ: ಹಬ್ಬದ ವಿಶೇಷ ಆಹಾರದ ಆರೋಗ್ಯ ಪ್ರಯೋಜನ ತಿಳಿಯಿರಿ

ಸೀರಮ್ ಇನ್‌ಸ್ಟಿಟ್ಯೂಟ್ ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾಗಿದ್ದು, ಇದು ಡಿಫ್ತೀರಿಯಾ, ಟೆಟನಸ್, ಹೆಪಟೈಟಿಸ್ ಬಿ, ದಡಾರ, ಮಂಪ್ಸ್ ಮತ್ತು ರುಬೆಲ್ಲಾ ಕಾಯಿಲೆಯ ವಿರುದ್ಧ ಲಸಿಕೆಯನ್ನು ತಯಾರಿಸುತ್ತದೆ. ಕೈಗೆಟಕುವ ಬೆಲೆಯಲ್ಲಿ ವಾರ್ಷಿಕವಾಗಿ 1.5 ಶತಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ರವಾನಿಸುತ್ತದೆ. ಪ್ರಪಂಚದಾದ್ಯಂತ ಸುಮಾರು ಶೇಕಡಾ 65 ಮಕ್ಕಳು ಇಲ್ಲಿ ತಯಾರಿಸಿದ ಕನಿಷ್ಠ ಒಂದು ಲಸಿಕೆಯನ್ನು ಪಡೆಯುತ್ತಾರೆ ಎಂದು ಅಂದಾಜಿಸಲಾಗಿದೆ. ಇದರ ಲಸಿಕೆಗಳನ್ನು ಸುಮಾರು 170 ದೇಶಗಳಲ್ಲಿ ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮಗಳಿಗಾಗಿ ಬಳಸಲಾಗುತ್ತದೆ ಮತ್ತು ಇದು ಪ್ರಪಂಚದಾದ್ಯಂತ ಲಕ್ಷಾಂತರ ಜೀವಗಳನ್ನು ಉಳಿಸುತ್ತದೆ.

ಸ್ಕ್ಯಾನಿಂಗ್ ಗರ್ಭಕಂಠದ ಕ್ಯಾನ್ಸರ್ ನಿಯಂತ್ರಣದ ಪ್ರಮುಖ ಆಧಾರವಾಗಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಸೂಚಿಸುತ್ತಾರೆ. ಇದಕ್ಕಾಗಿ ಸುಸಂಘಟಿತ ಮತ್ತು ಪ್ರವೇಶ ಪಡೆಯಬಹುದಾದ ರಾಷ್ಟ್ರೀಯ ಸ್ಕ್ಯಾನಿಂಗ್ ಕಾರ್ಯಕ್ರಮಗಳು ಅತ್ಯಗತ್ಯ.

ಇದನ್ನೂ ಓದಿ: ವಿಶ್ವದ 15 ದೇಶಗಳಲ್ಲಿ 30 ಮಿಲಿಯನ್‌ಗಿಂತಲೂ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು

ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಸ್ಟಾಫ್‌ನರ್ಸ್ ಮತ್ತು ವೈದ್ಯಕೀಯ ಅಧಿಕಾರಿಗಳು ಗರ್ಭಕಂಠದ ಕ್ಯಾನ್ಸರ್ ತಪಾಸಣೆಗೆ ತರಬೇತಿ ಪಡೆಯಬೇಕು ಎಂದು ಸಾರ್ವಜನಿಕ ಆರೋಗ್ಯ ಸಂಶೋಧಕಿ ಸರೋಜಿನಿ ನಡಿಂಪಲ್ಲಿ ತಿಳಿಸಿದರು. ಯಾವುದೇ ಲಸಿಕೆಗೆ ಧೀರ್ಘಾವಧಿಯ ಮೇಲ್ವಿಚಾರಣೆ ಮುಖ್ಯವಾಗಿದೆ. ಎರಡು ಡೋಸ್ ಪ್ರೋಗ್ರಾಂ ಆಗಿರುವ ಸೆರ್ವವಾಕ್ ಲಸಿಕೆ ಸಂದರ್ಭದಲ್ಲಿ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಶಾಲೆಗಳಿಗೆ ಹಾಜರಾಗದ ಬಾಲಕಿಯರಿಗೆ ಸಮುದಾಯ ವ್ಯಾಪ್ತಿ ಮತ್ತು ಸಂಚಾರಿ ಆರೋಗ್ಯ ತಂಡಗಳ ಮೂಲಕ ಲಸಿಕೆಗಳನ್ನು ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 9 ರಿಂದ 14 ವರ್ಷ ವಯಸ್ಸಿನ ಸುಮಾರು 50 ಮಿಲಿಯನ್ ಹುಡುಗಿಯರಿಗೆ ಲಸಿಕೆಯನ್ನು ನೀಡಲಾಗುವುದು. ರೋಗ ಮತ್ತು ಲಸಿಕೆ ಬಗ್ಗೆ ಜಾಗೃತಿ ಮೂಡಿಸುವುದು ಎಂದು ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾದ ಸಾಂಕ್ರಾಮಿಕ ರೋಗಶಾಸ್ತಜ್ಞ ಗಿರಿಧರ ಬಾಬು ಹೇಳಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 4:44 pm, Sat, 14 January 23

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್