AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಲಕ್ಷಣ ಕಡೆಗಣಿಸದಿದ್ದರೆ ಲಿಂಫೋಮಾ ಕ್ಯಾನ್ಸರ್ ಗುಣಪಡಿಸಬಹುದು ಎನ್ನುತ್ತಾರೆ ಡಾ. ಪ್ರಶಾಂತ ಬಿ

ಇತ್ತೀಚಿಗೆ ಲಿಂಫೋಮಾ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಪ್ರತಿಯೊಬ್ಬರು ಕೂಡ ಈ ಬಗ್ಗೆ ತಿಳಿಯುವುದು ಬಹಳ ಮುಖ್ಯವಾಗಿದೆ. ಲಿಂಫೋಮಾ ದುಗ್ಧರಸ ವ್ಯವಸ್ಥೆಯಲ್ಲಿ (lymphatic system) ಪ್ರಾರಂಭವಾಗುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಇದು ದೇಹದ ಸೋಂಕುಗಳನ್ನು ಎದುರಿಸುವ ಲಿಂಫೋಸೈಟ್‌ಗಳು ಎಂಬ ಬಿಳಿ ರಕ್ತ ಕಣಗಳಲ್ಲಿನ ಅಸಹಜ ಬೆಳವಣಿಗೆಯಿಂದ ಉಂಟಾಗುತ್ತದೆ. ಹಾಗಾದರೆ ಲಿಂಫೋಮಾದ ಲಕ್ಷಣಗಳು ಹೇಗಿರುತ್ತವೆ, ಯಾಕೆ ಕಂಡುಬರುತ್ತದೆ ಮತ್ತು ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು ಎಂಬುದರ ಬಗ್ಗೆ ಮಂಗಳೂರಿನ ಡಾ. ಬಿ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ ಯ ಕನ್ಸಲ್ಟೆಂಟ್ ಹೆಮಟೊಲೊಜಿಸ್ಟ್ ಡಾ. ಪ್ರಶಾಂತ ಬಿ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ ಲಕ್ಷಣ ಕಡೆಗಣಿಸದಿದ್ದರೆ ಲಿಂಫೋಮಾ ಕ್ಯಾನ್ಸರ್ ಗುಣಪಡಿಸಬಹುದು ಎನ್ನುತ್ತಾರೆ ಡಾ. ಪ್ರಶಾಂತ ಬಿ
Lymphoma Cancer
ಪ್ರೀತಿ ಭಟ್​, ಗುಣವಂತೆ
|

Updated on: Sep 26, 2025 | 5:15 PM

Share

ಲಿಂಫೋಮಾ ಎಂಬ ಪದ ಇತ್ತೀಚಿಗೆ ಎಲ್ಲರ ಬಾಯಲ್ಲಿಯೂ ಕೇಳಿ ಬರುತ್ತಿದೆ. ಕೆಲವರಿಗೆ ಇದರ ಬಗ್ಗೆ ಅಷ್ಟಾಗಿ ತಿಳಿದಿರದ ಕರಣ ಅವುಗಳ ಬಗ್ಗೆ ತಿಳಿಯಲು ಆಸಕ್ತಿ ತೋರುವುದಿಲ್ಲ ಆದರೆ ಇದರ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ. ಏಕೆಂದರೆ ಲಿಂಫೋಮಾ ಎಂಬ ಕ್ಯಾನ್ಸರ್, ಸಾಮಾನ್ಯವಾಗಿ ಕಂಡುಬರುತ್ತಿರುವ ರಕ್ತ ಕ್ಯಾನ್ಸರ್ ಆಗಿದೆ. ತ್ವರಿತವಾಗಿ ಚಿಕಿತ್ಸೆ ಆರಂಭಿಸಿದಲ್ಲಿ ಈ ಕ್ಯಾನ್ಸರ್ ಗುಣಪಡಿಸಬಹುದಾಗಿದ್ದು ಪ್ರತಿಯೊಬ್ಬರು ಈ ಕ್ಯಾನ್ಸರ್ನ ಗುಣಲಕ್ಷಣಗಳ ಬಗ್ಗೆ ಅರಿತುಕೊಳ್ಳುವುದು ಬಹಳ ಮುಖ್ಯವಾಗಿದೆ. ಈ ಲಿಂಫೋಮಾ ದೇಹದ ರೋಗನಿರೋಧಕ ಶಕ್ತಿಯಾಗಿರುವ ರಕ್ತದಲ್ಲಿನ ಬಿಳಿ ರಕ್ತ ಕಣಗಳಿಂದ ಉಂಟಾಗುತ್ತದೆ. ದೇಹದ ವಿವಿಧ ಭಾಗಗಳಲ್ಲಿರುವ ಲಿಂಪ್ ಗ್ಲ್ಯಾಂಡ್ಸ್ (ದುಗ್ದರಸ ಗ್ರಂಥಿಗಳ) ಮೂಲಕ ಹುಟ್ಟಿಕೊಳ್ಳುತ್ತವೆ. ಹಾಗಾದರೆ ಲಿಂಫೋಮಾದ ಲಕ್ಷಣಗಳು ಹೇಗಿರುತ್ತವೆ, ಯಾಕೆ ಕಂಡುಬರುತ್ತದೆ ಮತ್ತು ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು ಎಂಬುದರ ಬಗ್ಗೆ ಮಂಗಳೂರಿನ ಡಾ. ಬಿ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ ಯ ಕನ್ಸಲ್ಟೆಂಟ್ ಹೆಮಟೊಲೊಜಿಸ್ಟ್ ಡಾ. ಪ್ರಶಾಂತ ಬಿ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ ಲಿಂಫೋಮಾ ಕ್ಯಾನ್ಸರ್ ನಲ್ಲಿ ಹಲವು ವಿಧಗಳಿವೆ. ನಿಧಾನವಾಗಿ ಆರಂಭವಾಗುವ ಟ್ಯೂಮರ್ (ಗಡ್ಡೆ) ನಿಂದ ತೀವ್ರವಾಗಿ ಬೆಳೆಯುವ ರೋಗ ಪತ್ತೆಹಚ್ಚದೇ ಇದ್ದಲ್ಲಿ ಅಥವಾ ಚಿಕಿತ್ಸೆ ಸಿಗದೇ ಇದ್ದಲ್ಲಿ ಕೆಲವೇ ದಿನಗಳಲ್ಲಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಲಿಂಫೋಮಾದ ವಿಧದಲ್ಲಿ ಶೇ. 25ರಷ್ಟು ಹಾಡ್ಗ್ಕಿನ್ಸ್ ಲಿಂಫೋಮಾ ಮತ್ತು ಶೇ. 75ರಷ್ಟು ನಾನ್ ಹಾಡ್ಗ್ಕಿನ್ಸ್ ಲಿಂಫೋಮಾ ಕಂಡುಬರುತ್ತದೆ. ಸದ್ಯ ಹಾಡ್ಗ್ಕಿನ್ಸ್ ಲಿಂಫೋಮಾದಲ್ಲಿ ಶೇ.90- 95 ರಷ್ಟು ಮತ್ತು ನಾನ್ ಹಾಡ್ಗ್ಕಿನ್ಸ್ ಲಿಂಫೋಮಾದಲ್ಲಿ ಶೇ. 50- 60 ರಷ್ಟು ಪ್ರಕರಣಗಳು ಗುಣಪಡಿಸಬಹುದಾಗಿದೆ.

ಲಿಂಫೋಮಾದ ಸಾಮಾನ್ಯ ಲಕ್ಷಣಗಳೇನು?

  • ಕುತ್ತಿಗೆ, ಕಂಕುಳು ಅಥವಾ ತೊಡೆಸಂದುಗಳಲ್ಲಿ ಹೆಚ್ಚಾಗಿ ಕಂಡುಬರುವ ವಿವಿಧ ಗಾತ್ರದ ನೋವುರಹಿತ ದುಂಡಗಿನ ಊತಗಳು
  • ಉದ್ದೇಶಪೂರ್ವಕವಲ್ಲದ ದೇಹದ ತೂಕದಲ್ಲಿ ಇಳಿಕೆ
  • ಆಯಾಸ ಅಥವಾ ದಣಿವು
  • ರಾತ್ರಿ ಸಮಯದಲ್ಲಿ ಬೆವರು ಅಧಿಕವಾಗಿ ಬರುವಂತದ್ದು
  • ಸೋಂಕುಗಳು ಇಲ್ಲದೇ ಪದೇ ಪದೇ ಕಾಡುವ ಜ್ವರ
  • ಚರ್ಮದಲ್ಲಿ ತುರಿಕೆ

ಈ ರೀತಿ ಲಕ್ಷಣಗಳು ಕಂಡುಬಂದಾಗ ಏನು ಮಾಡಬೇಕು?

  • 1-2 ವಾರಗಳಿಗಿಂತ ಹೆಚ್ಚು ಕಾಲ ಕಾಯಿಲೆಗಳ ಲಕ್ಷಣಗಳು ಮುಂದುವರಿದರೆ ವೈದ್ಯಕೀಯ ತಪಾಸಣೆಗೆ ಒಳಗಾಗುವುದು ಮುಖ್ಯ. ಫಿಸಿಶಿಯನ್, ಹೆಮಟಾಲಜಿಸ್ಟ್ ಅಥವಾ ವೈದ್ಯಕೀಯ ಆಂಕೊಲಾಜಿಸ್ಟ್ ಗಳು ಅನಾರೋಗ್ಯಕ್ಕೆ ನಿಖರ ಕಾರಣ ಪತ್ತೆಹಚ್ಚಲು ನಿಮಗೆ ಸಹಾಯ ಮಾಡುತ್ತಾರೆ.
  • ಸಾಮಾನ್ಯವಾಗಿ ಪೀಡಿತ ದುಗ್ಧರಸ ಗ್ರಂಥಿಗಳು (ಲಿಂಫ್) ಅಥವಾ ಅಂಗಾಂಶಗಳ(ಟಿಶ್ಯೂ) ಬಯಾಪ್ಸಿ ಮೂಲಕ ರೋಗನಿರ್ಣಯ ಮಾಡಬಹುದು. ಇಮ್ಯುನೊಹಿಸ್ಟೋ ಕೆಮಿಸ್ಟ್ರಿ ಮತ್ತು ಫಿಶ್ (FISH) ಪರೀಕ್ಷೆಗಳಂತಹ ಹೆಚ್ಚಿನ ಪರೀಕ್ಷೆಗಳು ಯಾವ ವಿಧದ ಲಿಂಫೋಮಾ ಎಂಬುದನ್ನು ದೃಢೀಕರಿಸಲು ಸಹಾಯ ಮಾಡುತ್ತದೆ. ರೋಗ ನಿರ್ಣಯದ ಬಳಿಕ ವೈದ್ಯರು ಸಂಪೂರ್ಣ ದೇಹದ ಸಿ ಟಿ ಸ್ಕ್ಯಾನ್ ಅಥವಾ ಪಿಇಟಿ ಸಿಟಿ ಸ್ಕ್ಯಾನ್ಗೆ ಒಳಪಡಿಸಿ ರೋಗ ಯಾವ ಹಂತದಲ್ಲಿದೆ ಎಂಬುದನ್ನು ಖಚಿತಪಡಿಸುತ್ತಾರೆ.

ಲಿಂಫೋಮಾದ ಹಂತ ಮತ್ತು ಉಪ ಪ್ರಕಾರವನ್ನು ಆಧರಿಸಿ, ನಿಮ್ಮ ವೈದ್ಯರು ನಿಮಗೆ ಉತ್ತಮ ಚಿಕಿತ್ಸೆಯ ಕೋರ್ಸ್ ಅನ್ನು ನಿರ್ಧರಿಸುತ್ತಾರೆ, ಇದರಲ್ಲಿ ಒಂದು ಅಥವಾ ಹೆಚ್ಚಿನ ಕಿಮೊಥೆರಪಿ, ಇಮ್ಯುನೊಥೆರಪಿ, ಉದ್ದೇಶಿತ ಚಿಕಿತ್ಸೆ ಮತ್ತು ರೇಡಿಯೊಥೆರಪಿ ಸೇರಿವೆ. ಕೆಲವು ಆಕ್ರಮಣಕಾರಿ ಲಿಂಫೋಮಾಗಳಿಗೆ ಸಂಪೂರ್ಣ ಗುಣ ಸಾಧಿಸಲು ಮೂಳೆ ಮಜ್ಜೆಯ ಕಸಿ ಅಗತ್ಯವಿರಬಹುದು.

ಇದನ್ನೂ ಓದಿ: ಮನುಷ್ಯ ಸತ್ತ ಮೇಲೆ ಮಾತ್ರವಲ್ಲ ಬದುಕಿರುವಾಗಲೂ ಅಂಗಾಂಗ ದಾನ ಮಾಡಬಹುದು; ಈ ಬಗ್ಗೆ ಡಾ. ಪ್ರದೀಪ್ ರಂಗಪ್ಪ ಏನ್ ಹೇಳ್ತಾರೆ ನೋಡಿ

ಲಿಂಫೋಮಾ ಚಿಕಿತ್ಸೆಯಲ್ಲಿ ಹೊಸದೇನಿದೆ?

ಕಳೆದ ಎರಡು ವರ್ಷಗಳಿಂದ ಲಿಂಫೋಮಾ ಚಿಕಿತ್ಸೆಯಲ್ಲಿ ಅದ್ಭುತವಾದ ಪ್ರಗತಿ ಕಂಡುಬಂದಿದೆ. ಇಮ್ಯುನೊಥೆರಪಿಯಿಂದ, ಟಾರ್ಗೆಟೆಡ್ ಥೆರಪಿ ವರೆಗೆ ಹಲವು ಹೊಸ ಔಷಧಗಳನ್ನು ಕಂಡುಹಿಡಿಯಲಾಗಿದೆ. ರೋಗಿಯ ಸ್ವಂತ ರೋಗನಿರೋಧಕ ವ್ಯವಸ್ಥೆಯ ಸೆಲ್ಗಳನ್ನು ಕ್ಯಾನ್ಸರ್ ಸೆಲ್ಗಳ ವಿರುದ್ಧ ಉತ್ತೇಜಿಸುವ ಸಿಎಆರ್-ಟಿ (CAR-T) ಥೆರಪಿ ಲಿಂಫೋಮಾ ಚಿಕಿತ್ಸೆಯಲ್ಲಿ ಬಹುದೊಡ್ಡ ಆವಿಷ್ಕಾರವಾಗಿದೆ. ಈ ಚಿಕಿತ್ಸೆ ಈಗ ನಮ್ಮ ದೇಶದಲ್ಲೂ ಲಭ್ಯವಿದೆ. ಮುಂದಿನ ದಿನಗಳಲ್ಲಿ ಈ ಚಿಕಿತ್ಸೆಯ ವೆಚ್ಚ ಸಾಮಾನ್ಯ ಜನರಿಗೂ ಕೈಗೆಟಕುವಂತಾಗುವುದು. ಗುಣಪಡಿಸಲು ಸಾಧ್ಯವಿರುವ ಈ ಲಿಂಫೋಮಾ ಕ್ಯಾನ್ಸರ್ನ್ನು ಆರಂಭದಲ್ಲೇ ಗುರುತಿಸುವುದು, ಶೀಘ್ರ ಚಿಕಿತ್ಸೆ ಆರಂಭಿಸುವುದು ಹಾಗೇ ಜನರಿಗೆ ಇದರ ಲಕ್ಷಣಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ