ಈ ಮನೆಮದ್ದಿನಿಂದ ಕೇವಲ ಒಂದೇ ರಾತ್ರಿಯಲ್ಲಿ ನರಹುಲಿ ಕಡಿಮೆ ಮಾಡಬಹುದು
ನರಹುಲಿ ಸಮಸ್ಯೆ: ನರಹುಲಿ ಸಮಸ್ಯೆಯಿಂದ ಕೆಲವರು ತುಂಬಾ ಸಮಸ್ಯೆ ಅನುಭವಿಸುತ್ತಾರೆ. ಇದರಿಂದ ಮುಕ್ತಿ ಪಡೆಯಲು ನಾನಾ ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಆದರೆ ಇದಕ್ಕೆ ಔಷಧಿ, ಮಾತ್ರೆಗಳ ಮೊರೆ ಹೋಗುವ ಬದಲು ಸುಲಭವಾಗಿ ಮನೆಯಲ್ಲಿ ಇರುವ ಇರುವ ವಸ್ತುಗಳನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಯಾವ ರೀತಿ ಮದ್ದು ಮಾಡಬಹುದು ಎಂಬುದನ್ನು ಈ ಸ್ಟೋರಿಯಿಂದ ತಿಳಿದುಕೊಳ್ಳಿ.

ಮುಖದ ಮೇಲೆ, ಕುತ್ತಿಗೆಯ ಮೇಲೆ, ಮೂಗಿನ ಮೇಲೆ ಹೀಗೆ ದೇಹದ ಹಲವು ಭಾಗಗಳಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಗುಳ್ಳೆಗಳು ಮುಜುಗರದ ಜೊತೆಗೆ ಕಿರಿಕಿರಿ ಉಂಟುಮಾಡುತ್ತದೆ. ಈ ರೀತಿ ಗುಳ್ಳೆಗಳಾಗಿ ಬಳಿಕ ಗಂಟುಗಳ ರೂಪಕ್ಕೆ ತಿರುಗುವುದಕ್ಕೆ ನರಹುಲಿ, ನರೋಲಿ (wart) ಅಥವಾ ಇಂಗ್ಲೀಷ್ನಲ್ಲಿ ವಾರ್ಟ್ಸ್ ಎಂದೂ ಕರೆಯುತ್ತಾರೆ. ಜನ ಇದರಿಂದ ಮುಕ್ತಿ ಪಡೆಯಲು ನಾನಾ ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಆದರೆ ನೈಸರ್ಗಿಕವಾಗಿ ಉಂಟಾಗುವ ಈ ಸಮಸ್ಯೆಯನ್ನು ನಿಸರ್ಗದತ್ತವಾಗಿ (Natural remedy) ಸುಲಭವಾಗಿ ಸಿಗುವ ವಸ್ತುಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಯಾವ ರೀತಿ ಮದ್ದು (Medicine) ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.
ಬೆಳ್ಳುಳ್ಳಿ ಪೇಸ್ಟ್
ನರಹುಲಿ ಅಥವಾ ನರೋಲಿ ಸಮಸ್ಯೆಯಿಂದ ಮುಕ್ತಿ ಪಡೆಯಲು ಬೆಳ್ಳುಳ್ಳಿ ಬಹಳ ಪರಿಣಾಮಕಾರಿ ಔಷಧಿಯಾಗಿದೆ. ಇದನ್ನು ಮಾಡಲು, ಮೊದಲು ಬೆಳ್ಳುಳ್ಳಿಯನ್ನು ನುಣ್ಣಗೆ ಜಜ್ಜಿಕೊಂಡು, ರಾತ್ರಿ ಮಲಗುವ ಮೊದಲು ನರಹುಲಿ ಅಥವಾ ನರೋಲಿ ಇರುವ ಜಾಗದಲ್ಲಿ ಇಟ್ಟುಕೊಳ್ಳಿ, ನಂತರ ಅದು ಬೀಳದಂತೆ ಸರಿಯಾಗಿ ಬ್ಯಾಂಡೇಜ್ ಮಾಡಿಕೊಳ್ಳಿ. ಈ ರೀತಿ ಮಾಡಿದರೆ ಬೆಳಿಗ್ಗೆ ಏಳುವಾಗ ನರಹುಲಿ ಸಮಸ್ಯೆ ಕಡಿಮೆಯಾಗುತ್ತವೆ. ಸಾಮಾನ್ಯವಾಗಿ ಬೆಳ್ಳುಳ್ಳಿಯಲ್ಲಿ ಆಂಟಿ- ವೈರಲ್ ಗುಣಗಳಿದ್ದು, ನರಹುಲಿ ಕಡಿಮೆ ಮಾಡಲು ಸಹಾಯ ಮಾಡುವ ಅಲಿಯಮ್ ಸ್ಯಾಟಿವಮ್ ಎಂಬ ಸಂಯುಕ್ತವನ್ನು ಒಳಗೊಂಡಿದೆ ಹಾಗಾಗಿ ಇದನ್ನು ನರಹುಲಿ ಕಡಿಮೆ ಮಾಡಲು ಬಳಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಅಲೋವೆರಾ ಜೆಲ್
ಅಲೋವೆರಾ ಬಳಸಿಯೂ ಮೊಡವೆಗಳಂತಿರುವ ನರಹುಲಿಗೆ ಮುಕ್ತಿ ನೀಡಬಹುದು. ಶುದ್ಧವಾಗಿರುವ ಅಲೋವೆರಾ ಜೆಲ್ ತೆಗೆದುಕೊಂಡು ಮೊಡವೆಗಳಿರುವ ಪ್ರದೇಶಕ್ಕೆ ಹಚ್ಚಿ, ಅದು ಬೀಳದಂತೆ ಸರಿಯಾಗಿ ಬ್ಯಾಂಡೇಜ್ ಮಾಡಿ. ಬೆಳಿಗ್ಗೆ ಎದ್ದು ಇದನ್ನು ತೆಗೆಯಿರಿ. ಹೀಗೆ ಮಾಡುವುದರಿಂದ ಮೊಡವೆಯಂತಿರುವ ನರಹುಲಿ ಮಾಯವಾಗುತ್ತವೆ. ಇದರ ಜೊತೆಗೆ, ಈ ಅಲೋವೆರಾ ಜೆಲ್ ಗಳು ನರಹುಲಿಯಿಂದ ಮಾತ್ರವಲ್ಲ ನಾನಾ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ. ಇದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಶುಗರ್ ಇದ್ಯಾ? ಹಾಗಿದ್ರೆ ಈ ಸೊಪ್ಪನ್ನು ತಪ್ಪದೇ ಸೇವಿಸಿ
ಮರ ಸೇಬು ಹಣ್ಣಿನ ರಸ
ಇನ್ನು ಇದೆಲ್ಲದರ ಬದಲು ಮರದ ಸೇಬಿನ ರಸವನ್ನು ಕೂಡ ಈ ನರಹುಲಿ ಸಮಸ್ಯೆಗೆ ಮುಕ್ತಿ ನೀಡಲು ಬಳಸಬಹುದು. ಸಾಮಾನ್ಯವಾಗಿ ನರಹುಲಿ ಆಗಿರುವ ಜಾಗಕ್ಕೆ ಮರದ ಸೇಬಿನ ರಸವನ್ನು ಹಚ್ಚುವುದರಿಂದ ಅವು ಕಡಿಮೆಯಾಗುತ್ತದೆ. ಆದರೆ ಕೆಲವರಿಗೆ ಇದರಿಂದ ಪರಿಹಾರ ಪಡೆಯಲು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.
ನಿಂಬೆ ರಸ
ನಿಂಬೆಹಣ್ಣು ಮತ್ತು ಬೇಕಿಂಗ್ ಸೋಡಾ ಎರಡನ್ನೂ ತೆಗೆದುಕೊಂಡು ನಯವಾಗಿ ಪೇಸ್ಟ್ ಮಾಡಿ ಅದನ್ನು ನರಹುಲಿಯಾಗಿರುವ ಭಾಗಕ್ಕೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ದಿನದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಕೆಲವೇ ವಾರಗಳಲ್ಲಿ ನಿಮಗೆ ಚರ್ಮದ ಗಂಟು ಮಾಯವಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ