AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ನಾವೆಷ್ಟು ಗಟ್ಟಿ ಕಾಳು ಉಪಯೋಗಿಸುತ್ತಿದ್ದೇವೆ?

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಎಲ್ಲರಿಗೂ ಗೊತ್ತು. ಆದರೆ ಇಂದಿನ ನಮ್ಮ ಆಹಾರ ಪದ್ಧತಿ ಹೇಗಿದೆ ಎಂದು ನಾವೇ ಅವಲೋಕನ ಮಾಡಿಕೊಳ್ಳಬೇಕು. ಅಂದರೆ ಅಕ್ಕಿ ಬೇಳೆಗಳೆಲ್ಲ ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ಗಟ್ಟಿಯಾದ ಕಾಳುಗಳನ್ನು ನಾವು ಎಷ್ಟು ಉಪಯೋಗಿಸುತ್ತಿದ್ದೇವೆ?

ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ನಾವೆಷ್ಟು ಗಟ್ಟಿ ಕಾಳು ಉಪಯೋಗಿಸುತ್ತಿದ್ದೇವೆ?
ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ನಾವೆಷ್ಟು ಗಟ್ಟಿ ಕಾಳು ಉಪಯೋಗಿಸುತ್ತಿದ್ದೇವೆ?
TV9 Web
| Edited By: ಸಾಧು ಶ್ರೀನಾಥ್​|

Updated on: Aug 19, 2022 | 6:06 AM

Share

ಊಟ ಬಲ್ಲವನಿಗೆ ರೋಗವಿಲ್ಲ ಮಾತು ಎಲ್ಲರಿಗೂ ಗೊತ್ತು. ಆದರೆ ಇಂದಿನ ನಮ್ಮ ಆಹಾರ ಪದ್ಧತಿ ಹೇಗಿದೆ ಎಂದು ನಾವೇ ಅವಲೋಕನ ಮಾಡಿಕೊಳ್ಳಬೇಕು. ಅಂದರೆ ಅಕ್ಕಿ ಬೇಳೆಗಳೆಲ್ಲ ಪಾಲಿಶ್ ಆಗಿ, ಪ್ಯಾಕಿಂಗ್ ಎಂಬ ಮೇಕಪ್ಪಿನಿಂದ ಕಂಗೊಳಿಸುವ ಈ ಕಾಲದಲ್ಲಿ ಗಟ್ಟಿಯಾದ ಕಾಳುಗಳನ್ನು ನಾವು ಎಷ್ಟು ಉಪಯೋಗಿಸುತ್ತಿದ್ದೇವೆ?

ಇಂಥ ಗಟ್ಟಿ ಕಾಳುಗಳಲ್ಲಿ ಕಬ್ಬಿಣ, ಪ್ರೋಟಿನ್, ಹಾಗೂ ಅತ್ಯಧಿಕ ಕ್ಯಾಲ್ಸಿಯಂ ಹೊಂದಿರುವ ವಿಶೇಷ ಕಾಳುಗಳಿಗೆ… ಅದುವೇ ಹುಳ್ಳಿ ಕಾಳು, ಹುರುಳಿ ಕಾಳು ಅಥವಾ ಜುರಳಿ ಕಾಳು. ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಕುಲತಿ, ಕುಲತ್ಥಿ ಎಂದೂ ಆಂಗ್ಲ ಭಾಷೆಯಲ್ಲಿ Horse gram, Madras gram ಮತ್ತು ಸಂಸ್ಕೃತ ಭಾಷೆಯಲ್ಲಿ ಕುಲತ್ಥಿಕಾ, ಕುಲತ್ಥ ಎಂದು ಕರೆಯುತ್ತಾರೆ.

ಹುರುಳಿ ಕಾಳು ಉತ್ತರ ಕರ್ನಾಟಕದ ಮುಂಗಾರು ಹಂಗಾಮಿನಲ್ಲಿ ಬೆಳೆಯುವ ಒಂದು ಪ್ರಮುಖ ಬೆಳೆ. ಕೆಲವು ವರ್ಷಗಳ ಹಿಂದಿನವರೆಗೂ ಹುರುಳಿ ಕಾಳು ನೆನೆಸಿ ರೈತರು ಎತ್ತುಗಳಿಗೆ ತಿನ್ನಿಸುತ್ತಿದ್ದರು. ಇನ್ನು, ಜಟಕಾ ಬಂಡಿಯವರು ಕುದುರೆಗಳಿಗೆ ತಿನ್ನಿಸುತ್ತಿದ್ದರು. ಇದು ಕುದುರೆಗಳಿಗೆ ಅತ್ಯಂತ ಪ್ರಿಯವಾದ ಆಹಾರ. ಕುದರೆಗಳಿಗೇ ಶಕ್ತಿ ಕೊಡುವ ಈ ಹುರುಳಿ ಕಾಳು ಮನುಷ್ಯನಿಗೆ ಇನ್ನೆಷ್ಟು ಶಕ್ತಿ ಕೊಡಬಹುದು, ಅಲ್ಲವಾ? ಹೌದು ಇದರಲ್ಲಿ ಅಷ್ಟು ಅಗಾಧವಾದ ಶಕ್ತಿ ಇದೆ.

ಅನೇಕ ಕಾಯಿಲೆಗಳಿಗೆ ಮನೆ ಮದ್ದಾಗಿದೆ ಈ ಹುರುಳಿ ಕಾಳು. ಈ ಹಿಂದೆ, ಹುರುಳಿ ಕಾಳು ಹುರಿದು ತಿನ್ನಲು ಕೊಡುತ್ತಿದ್ದರು. ಹುರುಳಿ ಕಾಳನ್ನು ಮೊಳಕೆ ಬರಿಸಿ, ಹಸಿಯಾಗಿ ಅಥವಾ ಪಲ್ಯ ಮಾಡಿ ತಿನ್ನಬಹುದು. ಹುರುಳಿ ಕಾಳಿನ ಹೋಳಿಗೆ (ಒಬ್ಬಟ್ಟು) ಹುರುಳಿ ಕಟ್ಟು, ರೈತಾಪಿ ಜನರ ಹಾಗೂ ಬಡವರ ಪ್ರಿಯವಾದ ಆಹಾರ. ಎಷ್ಟೋ ಜನರಿಗೆ ಹುರುಳಿ ಕಾಳಿನ ಪರಿಚಯವಿಲ್ಲ. ಈ ಹುರುಳಿ ಕಾಳು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ.

ಇದನ್ನೂ ಓದಿ:

Horse Gram health benefits: ಮಧುಮೇಹವನ್ನು ನಿಯಂತ್ರಿಸುವಲ್ಲಿ ಹುರುಳಿ ಕಾಳು ಸಹಾಯಕ! ಹೇಗೆ ಅಂತೀರಾ?

* ಮಾನವನ ಕಿಡ್ನಿ ಕೂಡ ಹುರುಳಿ ಆಕಾರದಲ್ಲಿದೆ. ಕಿಡ್ನಿ ಸಮಸ್ಯೆ, ಕಿಡ್ನಿಯಲ್ಲಿರುವ ಹರಳುಗಳನ್ನು ಕರಗಿಸುವ ಶಕ್ತಿ ಹುರುಳಿ ಕಾಳಿಗಿದೆ. ಇದರ ಕಟ್ಟು (ಹುರುಳಿ ಕುದಿಸಿದ ನೀರು) ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ.

* ಬೊಜ್ಜು ಕರಗಿಸಲು ಹುರುಳಿ ಕಾಳು ಉತ್ತಮ ಆಹಾರ.

* ಮಧುಮೇಹಿಗಳಿಗೆ ಕೂಡ ಇದರ ಸೇವನೆ ಸೂಕ್ತವಾಗಿದೆ.

* ಮಹಿಳೆಯರ ಋತುಚಕ್ರದ ಸಮಸ್ಯೆಗಳಿಗೆ ಅತ್ಯುಪಯುಕ್ತ ಈ ಹುರುಳಿ ಕಟ್ಟಿನ ಸೇವನೆ.

* ಹುರುಳಿಕಾಳುಗಳನ್ನು ಹದವಾಗಿ ಹುರಿದು ಪುಡಿ ಮಾಡಿ, ನೀರಿನಲ್ಲಿ ಕುದಿಸಿ “ಹುಳ್ಳಿ ಸಂಗಟಿ” ತಯಾರಿಸುತ್ತಾರೆ. ಇದರಲ್ಲಿ ಬೆಲ್ಲ, ಶುಂಠಿ, ತುಪ್ಪ ಸೇರಿಸಿ ಬಿಸಿ ಬಿಸಿಯಾಗಿ ಕುಡಿದರೆ, ಜ್ವರ, ನೆಗಡಿ,ಕಫ, ಮೈ ಕೈ ನೋವು ಪರಿಹಾರ ವಾಗುತ್ತದೆ.

* ಕಾಮಾಲೆ ಗೆ ಹುರುಳಿ ಕಷಾಯದಲ್ಲಿ, ದಾಳಿಂಬೆ ಹಣ್ಣಿನ ರಸ ಬೆರೆಸಿ ಸೇವಿಸಬೇಕು.

* ಹೊಟ್ಟೆಯ ಹುಳುಗಳ ನಿವಾರಣೆಗೆ ಇದರ ಕಟ್ಟು ಸೇವನೆ ಒಳ್ಳೆಯದು. (ಮಾಹಿತಿ: ಎಸ್​ ಹೆಚ್​ ನದಾಫ್)

Follow Us
Web contact
Web contact

TV9 Kannada

Read More
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್