AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಪಿಸಿಒಡಿ ಸಮಸ್ಯೆ ಯುವತಿಯರಲ್ಲಿ ಹೆಚ್ಚುವಿಕೆಗೆ ಕಾರಣವೇನು? ಸಮಸ್ಯೆಯ ಲಕ್ಷಣಗಳು ಮತ್ತು ಪರಿಹಾರ ವಿಧಾನ ಹೀಗಿದೆ

ಅನಿಯಮಿತ ಮುಟ್ಟಿನಿಂದಾಗಿ, ತೂಕ ಹೆಚ್ಚಳದಿಂದಾಗಿ ಪಿಸಿಒಡಿ ಸಮಸ್ಯೆ ಹೆಚ್ಚು ಕಾಡುತ್ತದೆ. ಪಿಸಿಒಡಿ ಸಮಸ್ಯೆಯು ಬಂಜೆತನಕ್ಕೆ ಕಾರಣವಾಗಬಹುದು. ಇದು ಮಹಿಳೆಯರು ಗರ್ಭಧರಿಸಲು ಕಷ್ಟವಾಗಬಹುದು.

Women Health: ಪಿಸಿಒಡಿ ಸಮಸ್ಯೆ ಯುವತಿಯರಲ್ಲಿ ಹೆಚ್ಚುವಿಕೆಗೆ ಕಾರಣವೇನು? ಸಮಸ್ಯೆಯ ಲಕ್ಷಣಗಳು ಮತ್ತು ಪರಿಹಾರ ವಿಧಾನ ಹೀಗಿದೆ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Aug 26, 2021 | 7:53 AM

Share

ಇತ್ತೀಚೆಗೆ ಯುವತಿಯರಲ್ಲಿ ಪಾಲಿಸಿಸ್ಟಿಕ್ ಅಂಡಾಶಯದ ಖಾಯಿಲೆ ಸಮಸ್ಯೆ ಹೆಚ್ಚುತ್ತಿದೆ. ಮೊದಲು 30 ರಿಂದ 35 ವರ್ಷದ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತಿತ್ತು. ಆದರೆ ಈಗೀಗ 18 ರಿಂದ 20 ವರ್ಷದ ಒಳಗಿನ ಹುಡುಗಿಯರಲ್ಲಿ ಪಿಸಿಒಡಿ ಸಮಸ್ಯೆ ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ಪೊಸಿಒಎಸ್ ಎಂದೂ ಸಹ ಕರೆಯುತ್ತಾರೆ. ಪಿಸಿಒಡಿ ಹಾರ್ಮೋನುಗಳ ಸಮಸ್ಯೆಯಾಗಿದ್ದು ಅದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಅನಿಯಮಿತ ಮುಟ್ಟಿನಿಂದಾಗಿ, ತೂಕ ಹೆಚ್ಚಳದಿಂದಾಗಿ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಪಿಸಿಒಡಿ ಸಮಸ್ಯೆಯು ಬಂಜೆತನಕ್ಕೆ ಕಾರಣವಾಗಬಹುದು. ಇದು ಮಹಿಳೆಯರು ಗರ್ಭಧರಿಸಲು ಕಷ್ಟವಾಗಬಹುದು. ಗರ್ಭಿಣಿಯಾಗಿದ್ದರೆ ಗರ್ಭಪಾತ ಸಂಭವಿಸಬಹುದು. ಈ ಸಮಸ್ಯೆಯ ರೋಗಲಕ್ಷಣಗಳು ಮತ್ತು ಈ ಸಮಸ್ಯೆಯನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ತಿಳಿಯಿರಿ.

ರೋಗ ಲಕ್ಷಣಗಳು ಅತಿಯಾದ ತೂಕ ಮೊಡವೆ ಹೊಟ್ಟೆ ನೋವು ಮುಖದ ಮೇಲೆ ಕೂದಲು

ಮಧುಮೇಹದಿಂದ ಕ್ಯಾನ್ಸರ್​ಗೆ ಅಪಾಯ ಪಿಸಿಒಡಿ ಸಮಸ್ಯೆ ಇದ್ದರೆ, ಅಂಡಾಶಯ ಕ್ಯಾನ್ಸರ್​ಗೆ ಮಧುಮೇಹದ ಅಪಾಯವಿದೆ. ತಜ್ಞರ ಪ್ರಕಾರ ಪಿಸಿಒಡಿ ಸಮಯದಲ್ಲಿ ಮೇದೋಜ್ಜೀರಕ ಗ್ರಂಥಿಯು ಹೆಚ್ಚು ಇನ್ಸುಲಿನ್ ಉತ್ಪಾದಿಸುತ್ತದೆ. ಅನೇಕ ಬಾರಿ ಮೇದೋಜ್ಜೀರಕ ಗ್ರಂಥಿಯು ಆಯಾಸಗೊಳ್ಳಬಹುದು. ಹೆಚ್ಚು ಇನ್ಸುಲಿನ್ ತಯಾರಿಸುವಾಗ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇನ್ಸುಲಿನ್ ಕೊರತೆಯಿಂದಾಗಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಏಳುವ ಗಡ್ಡೆಗಳು ಬಂಜೆತನ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ. ಜತೆಗೆ ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುತ್ತದೆ.

ಪರಿಹಾರ ಕ್ರಮ ರೋಗ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ತಕ್ಷಣ ತಜ್ಞರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ. ಪಿಸಿಒಡಿ ಸಮಸ್ಯೆಯ ಬಗ್ಗೆ ಸಂಶಯವಿದ್ದರೆ ವೈದ್ಯರು ಸೋನೋಗ್ರಫಿಗಾಗಿ ಸಲಹೆ ನೀಡುತ್ತಾರೆ. ಅಗತ್ಯವಿದ್ದರೆ ರಕ್ತ ಪರೀಕ್ಷೆ ಮತ್ತು ಹಾರ್ಮೋನುಗಳ ಪರೀಕ್ಷೆ ಮಾಡಬಹುದು. ವೈದ್ಯರಿಂದ ಪಿಸಿಒಡಿ ಸಮಸ್ಯೆ ದೃಢಪಟ್ಟಿದ್ದರೆ ಚಿಕಿತ್ಸೆಯನ್ನು ಎಂದಿಗೂ ನಿರ್ಲಕ್ಷಿಸಬೇಡಿ ಮತ್ತು ಚಿಕಿತ್ಸೆ ಪಡೆಯಲು ತಡಮಾಡಬೇಡಿ.

ದೀರ್ಘಕಾಲೀನ ಸಮಸ್ಯೆ ಪಿಸಿಒಡಿ ಒಂದು ಹಾರ್ಮೋನ್ ಸಮಸ್ಯೆ. ಆದ್ದರಿಂದ ಚಿಕಿತ್ಸೆಯು ದೀರ್ಘಕಾಲದವರೆಗೆ ನಡೆಯುತ್ತದೆ. ಕನಿಷ್ಠ 12ರಿಂದ 18 ತಿಂಗಳ ಹಾರ್ಮೋನ್ ಚಿಕಿತ್ಸೆಯನ್ನು ನೀಡುತ್ತಾರೆ. ಅಲ್ಪವಧಿಯ ಮಧ್ಯಂತರದ ನಂತರ ನೀವು ಮತ್ತೆ ಚಿಕಿತ್ಸೆ ತೆಗೆದುಕೊಳ್ಳುವ ಸಂದರ್ಭ ಬರಬಹುದು.

ಅಧಿಕವಾಗಿ ಕೊಲೆಸ್ಟ್ರಾಲ್, ಅಧಿಕ ಕೊಬ್ಬು, ಕಾರ್ಬೋಹೈಡ್ರೇಟ್​ಗಳನ್ನು ಹೊಂದಿರುವ ಆಹಾರವನ್ನು ತಪ್ಪಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಸಮಯಕ್ಕೆ ಸರಿಯಾಗಿ ಔಷಧವನ್ನು ತೆಗೆದುಕೊಳ್ಳಿ. ಮದ್ಯ ಹಾಗೂ ಧೂಮಪಾನದಿಂದ ದೂರವಿರಿ. ನೀವು ಎಷ್ಟು ಹೆಚ್ಚು ದೈಹಿಕ ಚಟುವಟಿಕೆಗಳನ್ನು ಮಾಡುತ್ತೀರೋ ಮತ್ತು ದೇಹದ ತೂಕವನ್ನು ನಿಯಂತ್ರಿಸುತ್ತೀರೋ ಅಷ್ಟು ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ:

Women Health: ಗರ್ಭಪಾತಕ್ಕೆ ಕಾರಣಗಳೇನು? ಈ ಅಂಶಗಳನ್ನು ಮಹಿಳೆಯರು ತಿಳಿದಿರುವುದು ಒಳಿತು

Women Health: ಯುವತಿಯರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್​; ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ವಿಧಾನಗಳು

(PCOD Problem increasing girls know about its symptoms and prevention)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ