AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Blood Donor Day: ಇಂದು ವಿಶ್ವ ರಕ್ತದಾನಿಗಳ ದಿನ; ಪ್ರತಿಯೊಬ್ಬ ದಾನಿಯ ಜೀವನಶೈಲಿ ಹೀಗಿರಲಿ

ಇಂದು ವಿಶ್ವ ರಕ್ತದಾನಿಗಳ ದಿನ. ಆರೋಗ್ಯಕರ ಆಹಾರ, ವ್ಯಾಯಾಮ, ಯೋಗ ಮತ್ತು ಪರಿಪೂರ್ಣ ನಿದ್ರೆ, ಇವೆಲ್ಲವನ್ನು ರಕ್ತದಾನಿ ನಿತ್ಯ ಜೀವನದ ಭಾಗವನ್ನಾಗಿಸಿಕೊಳ್ಳುವುದು ಅಗತ್ಯ. ಒಬ್ಬ ಆರೋಗ್ಯವಂತ ವ್ಯಕ್ತಿ 18ನೇ ವಯಸ್ಸಿನಲ್ಲಿ ರಕ್ತದಾನ ಆರಂಭಿಸಿದರೆ, ಪುರುಷರು 150 ಬಾರಿ ಮತ್ತು ಮಹಿಳೆಯರು 100 ಬಾರಿ ರಕ್ತದಾನ ಮಾಡಬಹುದು.

World Blood Donor Day: ಇಂದು ವಿಶ್ವ ರಕ್ತದಾನಿಗಳ ದಿನ; ಪ್ರತಿಯೊಬ್ಬ ದಾನಿಯ ಜೀವನಶೈಲಿ ಹೀಗಿರಲಿ
World Blood Donor Day
TV9 Web
| Updated By: ಅಕ್ಷತಾ ವರ್ಕಾಡಿ|

Updated on: Jun 14, 2025 | 7:50 AM

Share

ಇಂದು ವಿಶ್ವ ರಕ್ತದಾನಿಗಳ ದಿನ. ಈ ಮಹತ್ತರ ದಿನದ ಅಂಗವಾಗಿ, ನಿರಂತರವಾಗಿ ರಕ್ತದಾನ ಮಾಡುವ ಮಹಾತ್ಮರಿಗೂ, ಇನ್ನೊಬ್ಬರನ್ನು ಪ್ರೇರೇಪಿಸುವ ನಿಜವಾದ ದಾನಶೀಲರಿಗೂ, ಜಾಗೃತಿ ಮೂಡಿಸುವ ಆರೋಗ್ಯ ಕಾರ್ಯಕರ್ತರಿಗೂ, ರಕ್ತ ನಿಧಿಗಳ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಯನ್ನೂ ಸೇರಿದಂತೆ ಎಲ್ಲರಿಗೂ ಹೃತ್ಪೂರ್ವಕ ಪ್ರಣಾಮಗಳು. ರಕ್ತದಾನ ಒಂದು ಸೇವೆ ಮಾತ್ರವಲ್ಲ – ಅದು ತ್ಯಾಗ, ಶಿಸ್ತು ಮತ್ತು ಮೌಲ್ಯಾಧಾರಿತ ಬದುಕಿನ ಸಂಕೇತ. ಈ ತ್ಯಾಗವು ಆರೋಗ್ಯದ ಕಂಬೀರುಗಳ ಮೇಲೆ ನಿಂತಿರಬೇಕು. ಯಾಕೆಂದರೆ, ಪ್ರತಿಯೊಬ್ಬ ದಾನಿಯೂ ತಮ್ಮದೇ ಆದ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನೂ ಹೊರುತ್ತಾರೆ.

ರಕ್ತದಾನ ಮಾಡುವವರು ಈ ಜೀವನಶೈಲಿ ಅಳವಡಿಸಿಕೊಳ್ಳಿ:

  • ಸಮತೋಲನಯುಕ್ತ ಆಹಾರ
  • ನಿಯಮಿತ ವ್ಯಾಯಾಮ
  • ಯೋಗಾಭ್ಯಾಸ
  • ಪರಿಪೂರ್ಣ ನಿದ್ರೆ.
  • ಚಟರಹಿತಜೀವನ

ಇವೆಲ್ಲವನ್ನು ನಿತ್ಯ ಜೀವನದ ಭಾಗವನ್ನಾಗಿಸಿಕೊಳ್ಳುವುದು ಅಗತ್ಯ.

ರಕ್ತದಾನವೆಂದರೆ ಒಂದು ವ್ರತ:

ಚತುರ್ಮಾಸ ವ್ರತ, ಒಂದು ತಿಂಗಳ ಉಪವಾಸದ ಆಚರಣೆ – ಇವು ಸಂಪ್ರದಾಯಗಳಲ್ಲಿ ಪ್ರಸಿದ್ಧ. ಆದರೆ ರಕ್ತದಾನವೆಂದರೆ 18ರಿಂದ 60 ವಯಸ್ಸಿನವರೆಗಿನ 42 ವರ್ಷದ ಪರೋಪಕಾರಿ ಶ್ರೇಯಸ್ವರೂಪಿ ವ್ರತ. ಆರೋಗ್ಯವಂತ ವ್ಯಕ್ತಿ 18ನೇ ವಯಸ್ಸಿನಲ್ಲಿ ರಕ್ತದಾನ ಆರಂಭಿಸಿ, ನಿರಂತರವಾಗಿ ಆರೈಕೆಯಿಂದ ಜೀವನ ನಡೆಸಿದರೆ, ಪುರುಷರು 150 ಬಾರಿ ಹಾಗೂ ಸ್ತ್ರೀಯರು 100 ಬಾರಿ ರಕ್ತದಾನ ಮಾಡಬಹುದಾಗಿದೆ.

ಇದನ್ನೂ ಓದಿ: ಶುಗರ್ ಇದ್ಯಾ? ಹಾಗಿದ್ರೆ ಈ ಸೊಪ್ಪನ್ನು ತಪ್ಪದೇ ಸೇವಿಸಿ

ಇದು ಪ್ರತಿ ಒಬ್ಬನ “ಅನುಭವದ ಧರ್ಮಯಾತ್ರೆ”:

ಈ ಸೇವೆಗೆ ಪ್ರಶಸ್ತಿಗಳಿಲ್ಲ, ಭಿತ್ತಿಯಿಲ್ಲ, ಭದ್ರತೆಗಳಿಲ್ಲ. ಅದು ಸ್ವಯಂ ಪ್ರೇರಿತ ಮನಸ್ಸಿನ ವ್ರತ. ಆದ್ದರಿಂದ ರಕ್ತದಾನಿಗಳು ಹಾಗೂ ಅವರ ಕುಟುಂಬದ ಸದಸ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸೇರಿದ್ದಾರೆಯೆಂದು ಕಾಲಕಾಲಕ್ಕೆ ಪರಿಶೀಲನೆ ಮಾಡಿಕೊಳ್ಳುವುದು ಸೂಕ್ತ.

ಲೇಖನ: ಡಾ. ರವಿಕಿರಣ ಪಟವರ್ಧನ

(ಆಯುರ್ವೇದ ವೈದ್ಯ, ಶಿರಸಿ)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ