AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರ ಪಂಚಮಿ: ಯಾವ ಯಾವ ರಾಶಿಯ ಅದೃಷ್ಟ ಬದಲಾಗಲಿದೆ?

Naga Panchami: ನಾಗದೋಷದಿಂದ ಸಂಕಷ್ಟದಲ್ಲಿರುವವರು ಈ ನಾಗರ ಪಂಚಮಿಯಂದು ಇಷ್ಟಾರ್ಥ ಪೂಜೆ ಮಾಡಿ ಪರಿಹಾರವನ್ನು ಪಡೆದು ಉತ್ತಮ ಆರೋಗ್ಯ, ಸುಖ, ನೆಮ್ಮದಿ ಸಂಪತ್ತು, ಉದ್ಯೋಗ, ವಿವಾಹ, ಸಂತಾನ ಭಾಗ್ಯವನ್ನು ಪಡೆಯಲು ಅವಕಾಶವಿದೆ.

ನಾಗರ ಪಂಚಮಿ: ಯಾವ ಯಾವ ರಾಶಿಯ ಅದೃಷ್ಟ ಬದಲಾಗಲಿದೆ?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 05, 2024 | 12:39 PM

Share

ಶ್ರಾವಣ ಮಾಸ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಬ್ಬಗಳೂ ಒಂದರ ಹಿಂದೆ ಒಂದರಂತೆ ಸರಮಾಲೆಯಾಗಿ ಬರಲಿವೆ. ಇವು ಮನುಷ್ಯನ ಬದುಕಿಗೆ ಬೇಕಾದ ಪರಿವರ್ತನೆಯನ್ನೂ ಮಾಡಿಕೊಡಲು ಸಾಧ್ಯವಿದೆ. ಹಬ್ಬಗಳ ಯಾದಿಯಲ್ಲಿ ಮೊದಲಿರುವ ಹಬ್ಬ ನಾಗರ ಪಂಚಮೀ. ಈ ಹಬ್ಬವು ಅನೇಕ‌ ಕಾರಣಗಳಿಂದ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ನಾಗ ದೋಷನಿವಾರಣೆಗೆ ಉಚಿತವಾದ ಹಬ್ಬ ಇದು. ಎಲ್ಲರೂ ಆಚರಿಸಬಹುದಾದ ಹಬ್ಬವಾದರೂ ಕೆಲವು ರಾಶಿಯವರಿಗೆ ಇದು ವಿಶೇಷ ಫಲವನ್ನು ಪಡೆಯಲು ಇರುವ ಹಬ್ಬವಾಗಿದೆ. ಶ್ರಾವಣ ಶುಕ್ಲ ಪಂಚಮಿಯಂದು ಈ ಹಬ್ಬ ಬರಲಿದೆ. ಪಂಚಮೀ ತಿಥಿಯ ದೇವತೆ ಸರ್ಪ. ಹಾಗಾಗಿ ಈ ದಿನಕ್ಕೆ ವಿಶೇಷ ಮಹತ್ತ್ವ. ಅದರಲ್ಲಿಯೂ ಈ ವರ್ಷ ಶುಕ್ರವಾರ ಬಂದಿದೆ. ಸಿದ್ಧಿ ಯೋಗದಲ್ಲಿ ಹಬ್ಬವು ಮನೋರಥವನ್ನು ಸಿದ್ಧಿಸಿಕೊಳ್ಳುವ ದಿನವಾಗಿದೆ.

ಮಿಥುನ ರಾಶಿ :

ಈ ರಾಶಿಯವರಿಗೆ ನಾಗರ ಪಂಚಮೀ ಶುಭಫಲವನ್ನು ಕೊಡುವುದು. ಕುಟುಂಬ ಸೌಖ್ಯ ದಾಯದಿ ಕಲಹವು ಇದ್ದರೆ ಅದು ನಿವಾರಣೆಯಾಗಿ ಬಾಂಧವ್ಯವು ಸಹಜ ಸ್ಥಿತಿಗೆ ಮರಳುವುದು‌. ವಿದೇಶ ಪ್ರಯಾಣದ ಆಲೋಚನೆಯೂ ಕೈಗೂಡುವುದು.

ಕನ್ಯಾ ರಾಶಿ :

ಈ ರಾಶಿಯವರಿಗೆ ಸಂಗಾತಿಯ ನಡುವೆ ಮನಸ್ತಾಪ ದೂರವಾಗಿ ಸುಖ ದಾಂಪತ್ಯವು ಸಿದ್ಧಿಸುವುದು. ಅವಿವಾಹಿತರು ಸಂಗಾತಿಯ ಅನ್ವೇಷಣೆಯನ್ನು ಮಾಡಲು ಉತ್ತಮ ಅವಕಾಶ. ಉತ್ತಮ ಸಂಗಾತಿಯ ಪ್ರಾಪ್ತಿಯಾಗಲಿದೆ.

ತುಲಾ ರಾಶಿ :

ಈ ರಾಶಿಯವರಿಗೆ ಅನಾರೋಗ್ಯವು ಕಡಿಮೆಯಾಗಲಿದೆ. ಉತ್ತಮ ಚಿಕಿತ್ಸೆ ದೊರೆಯುವುದು. ಪಾಪವು ಪರಿಹಾರವಾಗಲಿದೆ. ನರದೌರ್ಬಲ್ಯವು ನಿವಾರಣೆಯಾಗಿ ಸ್ವಸ್ಥರಾಗಲು ಸಮಯವು ಬರುವುದು.

ಕುಂಭ ರಾಶಿ :

ಆರ್ಥಿಕ ಹೊರೆಯು ಕಡಿಮೆಯಾಗಲಿದೆ. ದುಷ್ಕಾರ್ಯಕ್ಕೆ ಕಳೆದು ಹೋಗುವ ಹಣವು ಸತ್ಕಾರ್ಯಕ್ಕೆ ವಿನಿಯೋಗವಾಗಲಿದೆ. ಒತ್ತಡದ ಮನಸ್ಸು ಹಗುರಾಗಲಿದೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಆ ರಾಶಿಯವರಿಗೆ ಲಕ್ಷ್ಮಿ ಯೋಗ… ಮುಟ್ಟಿದ್ದೆಲ್ಲಾ ಚಿನ್ನವೇ

ಮೀನ ರಾಶಿ :

ಈ ರಾಶಿಯವರಿಗೆ ದೈಹಿಕ‌ ಹಾಗೂ ಮಾನಸಿಕ ಆರೋಗ್ಯದಲ್ಲಿ ಚೇತರಿಕೆ ಕಾಣಿಸುವುದು. ಮಾಡುವ ಕಾರ್ಯದಲ್ಲಿ ಸ್ಥೈರ್ಯ ಕಾಣಿಸುವುದು.‌ ಭಯವು ನಿವಾರಣೆಯಾಗಿ ಮಾಡುವ ಕೆಲಸದಲ್ಲಿ ಉತ್ಸಾಹ ಇರುವುದು.

ಇಷ್ಟು ರಾಶಿಯವರು ನಾಗದೇವರಿಗೆ ಶುದ್ಧ ಮನಸ್ಸಿನಿಂದ ಪೂಜೆ ಸಲ್ಲಿಸಿ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಅವಕಾಶವನ್ನು ಭಗವಂತ ಕರುಣಿಸಿದ್ದಾನೆ.

-ಲೋಹಿತ ಹೆಬ್ಬಾರ್ – 8762924271

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್