AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗರ ಪಂಚಮಿ: ಯಾವ ಯಾವ ರಾಶಿಯ ಅದೃಷ್ಟ ಬದಲಾಗಲಿದೆ?

Naga Panchami: ನಾಗದೋಷದಿಂದ ಸಂಕಷ್ಟದಲ್ಲಿರುವವರು ಈ ನಾಗರ ಪಂಚಮಿಯಂದು ಇಷ್ಟಾರ್ಥ ಪೂಜೆ ಮಾಡಿ ಪರಿಹಾರವನ್ನು ಪಡೆದು ಉತ್ತಮ ಆರೋಗ್ಯ, ಸುಖ, ನೆಮ್ಮದಿ ಸಂಪತ್ತು, ಉದ್ಯೋಗ, ವಿವಾಹ, ಸಂತಾನ ಭಾಗ್ಯವನ್ನು ಪಡೆಯಲು ಅವಕಾಶವಿದೆ.

ನಾಗರ ಪಂಚಮಿ: ಯಾವ ಯಾವ ರಾಶಿಯ ಅದೃಷ್ಟ ಬದಲಾಗಲಿದೆ?
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 05, 2024 | 12:39 PM

Share

ಶ್ರಾವಣ ಮಾಸ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಬ್ಬಗಳೂ ಒಂದರ ಹಿಂದೆ ಒಂದರಂತೆ ಸರಮಾಲೆಯಾಗಿ ಬರಲಿವೆ. ಇವು ಮನುಷ್ಯನ ಬದುಕಿಗೆ ಬೇಕಾದ ಪರಿವರ್ತನೆಯನ್ನೂ ಮಾಡಿಕೊಡಲು ಸಾಧ್ಯವಿದೆ. ಹಬ್ಬಗಳ ಯಾದಿಯಲ್ಲಿ ಮೊದಲಿರುವ ಹಬ್ಬ ನಾಗರ ಪಂಚಮೀ. ಈ ಹಬ್ಬವು ಅನೇಕ‌ ಕಾರಣಗಳಿಂದ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ನಾಗ ದೋಷನಿವಾರಣೆಗೆ ಉಚಿತವಾದ ಹಬ್ಬ ಇದು. ಎಲ್ಲರೂ ಆಚರಿಸಬಹುದಾದ ಹಬ್ಬವಾದರೂ ಕೆಲವು ರಾಶಿಯವರಿಗೆ ಇದು ವಿಶೇಷ ಫಲವನ್ನು ಪಡೆಯಲು ಇರುವ ಹಬ್ಬವಾಗಿದೆ. ಶ್ರಾವಣ ಶುಕ್ಲ ಪಂಚಮಿಯಂದು ಈ ಹಬ್ಬ ಬರಲಿದೆ. ಪಂಚಮೀ ತಿಥಿಯ ದೇವತೆ ಸರ್ಪ. ಹಾಗಾಗಿ ಈ ದಿನಕ್ಕೆ ವಿಶೇಷ ಮಹತ್ತ್ವ. ಅದರಲ್ಲಿಯೂ ಈ ವರ್ಷ ಶುಕ್ರವಾರ ಬಂದಿದೆ. ಸಿದ್ಧಿ ಯೋಗದಲ್ಲಿ ಹಬ್ಬವು ಮನೋರಥವನ್ನು ಸಿದ್ಧಿಸಿಕೊಳ್ಳುವ ದಿನವಾಗಿದೆ.

ಮಿಥುನ ರಾಶಿ :

ಈ ರಾಶಿಯವರಿಗೆ ನಾಗರ ಪಂಚಮೀ ಶುಭಫಲವನ್ನು ಕೊಡುವುದು. ಕುಟುಂಬ ಸೌಖ್ಯ ದಾಯದಿ ಕಲಹವು ಇದ್ದರೆ ಅದು ನಿವಾರಣೆಯಾಗಿ ಬಾಂಧವ್ಯವು ಸಹಜ ಸ್ಥಿತಿಗೆ ಮರಳುವುದು‌. ವಿದೇಶ ಪ್ರಯಾಣದ ಆಲೋಚನೆಯೂ ಕೈಗೂಡುವುದು.

ಕನ್ಯಾ ರಾಶಿ :

ಈ ರಾಶಿಯವರಿಗೆ ಸಂಗಾತಿಯ ನಡುವೆ ಮನಸ್ತಾಪ ದೂರವಾಗಿ ಸುಖ ದಾಂಪತ್ಯವು ಸಿದ್ಧಿಸುವುದು. ಅವಿವಾಹಿತರು ಸಂಗಾತಿಯ ಅನ್ವೇಷಣೆಯನ್ನು ಮಾಡಲು ಉತ್ತಮ ಅವಕಾಶ. ಉತ್ತಮ ಸಂಗಾತಿಯ ಪ್ರಾಪ್ತಿಯಾಗಲಿದೆ.

ತುಲಾ ರಾಶಿ :

ಈ ರಾಶಿಯವರಿಗೆ ಅನಾರೋಗ್ಯವು ಕಡಿಮೆಯಾಗಲಿದೆ. ಉತ್ತಮ ಚಿಕಿತ್ಸೆ ದೊರೆಯುವುದು. ಪಾಪವು ಪರಿಹಾರವಾಗಲಿದೆ. ನರದೌರ್ಬಲ್ಯವು ನಿವಾರಣೆಯಾಗಿ ಸ್ವಸ್ಥರಾಗಲು ಸಮಯವು ಬರುವುದು.

ಕುಂಭ ರಾಶಿ :

ಆರ್ಥಿಕ ಹೊರೆಯು ಕಡಿಮೆಯಾಗಲಿದೆ. ದುಷ್ಕಾರ್ಯಕ್ಕೆ ಕಳೆದು ಹೋಗುವ ಹಣವು ಸತ್ಕಾರ್ಯಕ್ಕೆ ವಿನಿಯೋಗವಾಗಲಿದೆ. ಒತ್ತಡದ ಮನಸ್ಸು ಹಗುರಾಗಲಿದೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಆ ರಾಶಿಯವರಿಗೆ ಲಕ್ಷ್ಮಿ ಯೋಗ… ಮುಟ್ಟಿದ್ದೆಲ್ಲಾ ಚಿನ್ನವೇ

ಮೀನ ರಾಶಿ :

ಈ ರಾಶಿಯವರಿಗೆ ದೈಹಿಕ‌ ಹಾಗೂ ಮಾನಸಿಕ ಆರೋಗ್ಯದಲ್ಲಿ ಚೇತರಿಕೆ ಕಾಣಿಸುವುದು. ಮಾಡುವ ಕಾರ್ಯದಲ್ಲಿ ಸ್ಥೈರ್ಯ ಕಾಣಿಸುವುದು.‌ ಭಯವು ನಿವಾರಣೆಯಾಗಿ ಮಾಡುವ ಕೆಲಸದಲ್ಲಿ ಉತ್ಸಾಹ ಇರುವುದು.

ಇಷ್ಟು ರಾಶಿಯವರು ನಾಗದೇವರಿಗೆ ಶುದ್ಧ ಮನಸ್ಸಿನಿಂದ ಪೂಜೆ ಸಲ್ಲಿಸಿ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಅವಕಾಶವನ್ನು ಭಗವಂತ ಕರುಣಿಸಿದ್ದಾನೆ.

-ಲೋಹಿತ ಹೆಬ್ಬಾರ್ – 8762924271

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!