AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಪ್ರಿಲ್ 22ರ ವರೆಗೆ ಈ ರಾಶಿಯಲ್ಲಿ ಶುಕ್ರನ ಸಂಚಾರ: ನೀವು ಮಾಡುವ ಒಂದು ಕೆಲಸಕ್ಕೆ ಹತ್ತು ಫಲ

ಶುಕ್ರನು ಮಾರ್ಚ್ 25ರಿಂದ ಏಪ್ರಿಲ್ 22ರವರೆಗೆ ಮೇಷ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಗೋಚಾರವು ಜ್ಯೋತಿಷ್ಯದ ಪ್ರಕಾರ ವಿವಿಧ ರಾಶಿಗಳ ಮೇಲೆ ವಿಶಿಷ್ಟ ಪ್ರಭಾವ ಬೀರುತ್ತದೆ. ಮೇಷ ರಾಶಿಯಲ್ಲಿ ಶುಕ್ರನು ವ್ಯಕ್ತಿಯಲ್ಲಿ ಆಕರ್ಷಣೆ, ಸಾಹಸ ಪ್ರವೃತ್ತಿ ಹಾಗೂ ಕಲಾ ಆಸಕ್ತಿಯನ್ನು ಹೆಚ್ಚಿಸುತ್ತದೆ. ವೃಷಭ ರಾಶಿಯವರಿಗೆ ಆರ್ಥಿಕ ಸ್ಥಿರತೆ ಮತ್ತು ಕುಟುಂಬ ಸುಖ ಲಭಿಸಿದರೆ, ತುಲಾ ರಾಶಿಯವರಿಗೆ ಶುಕ್ರನ ದೃಷ್ಟಿಯಿಂದ ವ್ಯಾಪಾರ, ದಾಂಪತ್ಯದಲ್ಲಿ ಸಾಮರಸ್ಯ ಹಾಗೂ ಸಾಮಾಜಿಕ ಗೌರವ ದುಪ್ಪಟ್ಟಾಗುತ್ತದೆ.

ಏಪ್ರಿಲ್ 22ರ ವರೆಗೆ ಈ ರಾಶಿಯಲ್ಲಿ ಶುಕ್ರನ ಸಂಚಾರ: ನೀವು ಮಾಡುವ ಒಂದು ಕೆಲಸಕ್ಕೆ ಹತ್ತು ಫಲ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 06, 2026 | 2:29 PM

Share

ಮಾರ್ಚ್ 25ರಿಂದ ಏಪ್ರಿಲ್ 22 ರ ವರೆಗೆ ಶುಕ್ರನು ಮೇಷ ರಾಶಿಯಲ್ಲಿ ಸಂಚರಿಸುವನು. ಈ ಸಮಯದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ತಾವು ನಿಂತಿರುವ ರಾಶಿ, ತಮ್ಮ ಸ್ವಕ್ಷೇತ್ರಗಳು ಮತ್ತು ತಮ್ಮ ದೃಷ್ಟಿ ಬೀರುವ ರಾಶಿಗಳ ಮೇಲೆ ವಿಶಿಷ್ಟ ಪ್ರಭಾವ ಬೀರುತ್ತವೆ. ಮೇಷ ರಾಶಿಯ ರವಿ ದ್ರೇಕ್ಕಾಣದಲ್ಲಿ ಶುಕ್ರನು ಸ್ಥಿತನಾಗಿದ್ದರೆ, ಆತ ದೃಢತೆ ಮತ್ತು ಕ್ರಿಯಾಶೀಲತೆಯನ್ನು ಹೊಂದಿರುತ್ತಾನೆ.

​ಈ ಸ್ಥಿತಿಯಲ್ಲಿ ಶುಕ್ರನು ನೀಡುವ ವಿಶೇಷವಾದುದು.

ಮೇಷದಲ್ಲಿರುವ ಶುಕ್ರ:

ಈ ರಾಶಿ ಮಂಗಳನ ಮನೆ. ಇಲ್ಲಿ ಶುಕ್ರನು ರವಿ ದ್ರೇಕ್ಕಾಣದಲ್ಲಿದ್ದಾಗ ವ್ಯಕ್ತಿಯಲ್ಲಿ ಅದ್ಭುತವಾದ ಆಕರ್ಷಣೆ ಮತ್ತು ತೇಜಸ್ಸು ಇರುತ್ತದೆ. ಆತುರದ ನಿರ್ಧಾರಗಳು ಮತ್ತು ಪ್ರೇಮ ವಿಚಾರದಲ್ಲಿ ಅತಿಯಾದ ಉತ್ಸಾಹವಿರುತ್ತದೆ. ಸಾಹಸ ಪ್ರವೃತ್ತಿ ಹೆಚ್ಚಾಗುತ್ತದೆ. ಕಲೆ ಮತ್ತು ಸೌಂದರ್ಯದ ಕಡೆಗೆ ಒಲವು ಇದ್ದರೂ, ಸ್ವಾಭಿಮಾನ ಅಥವಾ ಅಹಂಕಾರದ ಪ್ರಭಾವ ಸಂಬಂಧಗಳ ಮೇಲೆ ಬೀಳಬಹುದು. ​ ವೃಷಭ ರಾಶಿಯ ಫಲ

​ವೃಷಭ ರಾಶಿಯು ಶುಕ್ರನ ಸ್ವಂತ ಮನೆಯಾಗಿದ್ದು, ದ್ವಿತೀಯ ಭಾವವನ್ನು ಪ್ರತಿನಿಧಿಸುತ್ತದೆ. ​ಧನ ಮತ್ತು ಸಂಪತ್ತು: ಶುಕ್ರನು ಬಲಿಷ್ಠನಾಗಿದ್ದರೆ ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಐಷಾರಾಮಿ ವಸ್ತುಗಳ ಸಂಗ್ರಹ ಮತ್ತು ಕೌಟುಂಬಿಕ ಸುಖ ಲಭಿಸುತ್ತದೆ. ಸ್ಥಿರ ಆಸ್ತಿಗಳ ಮೇಲೆ ಹೂಡಿಕೆ ಮಾಡಲು ಇದು ಪ್ರೇರಣೆ ನೀಡುತ್ತದೆ. ಮಾತು ಮಧುರವಾಗಿರುತ್ತದೆ ಮತ್ತು ಸುಖ ಭೋಜನದ ಯೋಗವಿರುತ್ತದೆ. ​ ಶುಕ್ರನ ಸ್ವಕ್ಷೇತ್ರದಲ್ಲಿ

​ತುಲಾ ರಾಶಿಯು ಶುಕ್ರನ ಮೂಲತ್ರಿಕೋಣ ಸ್ಥಾನವಾಗಿದ್ದು, ಸಪ್ತಮ ಭಾವವನ್ನು ಸೂಚಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ಗೌರವ ತಂದುಕೊಡುತ್ತಾನೆ. ವ್ಯಾಪಾರ ಪಾಲುದಾರಿಕೆಯಲ್ಲಿ ಲಾಭವಾಗುತ್ತದೆ. ವಿವಾಹಾದಿ ಶುಭ ಕಾರ್ಯಗಳಿಗೆ ಮತ್ತು ಸಾಮಾಜಿಕ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಇದು ಪೂರಕವಾಗಿದೆ. ನ್ಯಾಯಯುತವಾಗಿ ನಡೆದುಕೊಳ್ಳುವ ಗುಣವನ್ನು ಇದು ವೃದ್ಧಿಸುತ್ತದೆ. ​ ತುಲಾ ರಾಶಿಗೆ ದೃಷ್ಟಿ ಫಲ

​ಶುಕ್ರನು ಮೇಷ ರಾಶಿಯಲ್ಲಿದ್ದಾಗ, ತನ್ನ ಪೂರ್ಣ ಸಪ್ತಮ ದೃಷ್ಟಿಯನ್ನು ತುಲಾ ರಾಶಿಯ ಮೇಲೆ ಬೀರುತ್ತಾನೆ. ​ ಶುಕ್ರನು ತನ್ನ ಸ್ವಂತ ಮನೆಯಾದ ತುಲಾ ರಾಶಿಯನ್ನೇ ನೋಡುವುದರಿಂದ, ಆ ರಾಶಿಯ ಶುಭ ಫಲಗಳು ದುಪ್ಪಟ್ಟಾಗುತ್ತವೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಮತ್ತು ಪ್ರೀತಿ ಹೆಚ್ಚಾಗುತ್ತದೆ. ​ವ್ಯವಹಾರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ​ಸೌಂದರ್ಯವರ್ಧಕ, ಕಲೆ, ಅಥವಾ ಫ್ಯಾಷನ್ ರಂಗದಲ್ಲಿ ಇರುವವರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ​ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ.

ರವಿ ದ್ರೇಕ್ಕಾಣದ ಈ ಶುಕ್ರನು ವ್ಯಕ್ತಿಗೆ ರಾಜಕೀಯ ಅಥವಾ ಉನ್ನತ ಮಟ್ಟದ ವ್ಯಕ್ತಿಗಳ ಸಂಪರ್ಕದಿಂದ ಲಾಭ ತಂದುಕೊಡುತ್ತಾನೆ. ತುಲಾ ರಾಶಿಯ ಮೇಲೆ ಶುಕ್ರನ ದೃಷ್ಟಿ ಬೀಳುವುದರಿಂದ, ಆತ ಎಷ್ಟೇ ಕಷ್ಟದಲ್ಲಿದ್ದರೂ ಅಂತಿಮವಾಗಿ ಸಾಮಾಜಿಕ ಪ್ರತಿಷ್ಠೆ ಮತ್ತು ಆರ್ಥಿಕ ಭದ್ರತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತಾನೆ.

– ಲೋಹಿತ ಹೆಬ್ಬಾರ್

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ