ಜಾತಿ ಜನಗಣತಿ ಬಿಡುಗಡೆ ಜಟಾಪಟಿ: ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ ನಾಗಮೋಹನ್ ದಾಸ್
Kantharaj commission caste census report : ಕರ್ನಾಟಕದಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆಗೆ ಪರ-ವಿರೋಧಗಳು ವ್ಯಕ್ತವಾಗಿವೆ. ಕೆಲ ಪ್ರಬಲ ಸಮುದಾಯಗಳು ಈ ಕಾಂತ್ರಾಜ್ ಜಾತಿ ಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದರೆ, ಹಿಂದೂಳಿದ ಸಮುದಾಯಗಳು ಬಿಡುಗಡೆಗೆ ಪಟ್ಟು ಹಿಡಿದಿವೆ. ಇನ್ನು ಇದರ ಮಧ್ಯೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಅವರು ರಾಜ್ಯ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ.

ಬೆಂಗಳೂರು, (ಡಿಸೆಂಬರ್ 19): ಕರ್ನಾಟಕದಲ್ಲಿ ಜಾತಿ ಜನಗಣತಿ(caste census report) ಬಿಡುಗಡೆಗೆ ಪರ-ವಿರೋಧದ ಚರ್ಚೆಗಳು ನಡೆದಿವೆ. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಈ ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಇನ್ನುಳಿಂದಂತೆ ಇತರೆ ಹಿಂದೂಳಿದ ವರ್ಗಗಳು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾತಿ ಗಣತಿ ಬಿಡುಗಡೆ ಸಂಬಂಧ ಜಟಾಪಟಿ ನಡೆದಿದೆ. ಇದರ ಮಧ್ಯೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ (retired judge Nagamohan Das )ಅವರು ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಪಡೆಯುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆಯ ವರದಿ ಪಡೆಯುವಂತೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ರಾಜ್ಯ ಸರ್ಕಾರಕ್ಕೆ ಹೇಳಿದ್ದು, ವರದಿ ಪರಿಶೀಲಿಸಿ ನಂತರ ಸಾಧಕಬಾದಕಗಳ ಚರ್ಚೆ ನಡೆಸುವಂತೆ ಸಲಹೆ ನೀಡಿದ್ದಾರೆ.
ಈ ಬಗ್ಗೆ Tv9ಗೆ ಪ್ರತಿಕ್ರಿಯಿಸಿರುವ ಹೆಚ್.ಎನ್ ನಾಗಮೋಹನ್ ದಾಸ್, ಜನಗಣತಿ ಆಧಾರದ ಮೇಲೆ ತನ್ನ ನೀತಿ, ಕಾರ್ಯಕ್ರಮ, ಯೋಜನೆಗಳ ರೂಪಿಸೋದಕ್ಕೆ ಅಗತ್ಯವಾಗುತ್ತೆ. ಇದು ಭಾರತ ಸೇರಿದಂತೆ ಜಗತ್ತಿನ ನಿಗಮ. ಭಾರತದಲ್ಲೂ ಬ್ರಿಟಿಷರ ಆಳ್ವಿಕೆಯಲ್ಲಿ 1881ರಲ್ಲಿ ಮೊದಲಿಗೆ ಜನಗಣತಿ ಮತ್ತು ಜಾತಿ ಗಣತಿ ಎರಡೂ ಪ್ರಾರಂಭವಾಯ್ತು. ಈ ಕಾರ್ಯ 1931ರವರೆಗೂ ಮುಂದುವರೆಯಿತು
ಸ್ವಾತಂತ್ರ್ಯದ ಬಳಿಕ ಭಾರತ ಸರ್ಕಾರ 1948ರಲ್ಲಿ ಇಂಡಿಯನ್ ಸೆನ್ಸಸ್ ಆಕ್ಟ್ ಕಾಯ್ದೆ ಜಾರಿಗೆ ತಂದಿದೆ. 1950ರಲ್ಲಿ ಭಾರತ ಸಂವಿಧಾನವನ್ನ ಜಾರಿಗೆ ತರಲಾಯ್ತು. ಸೆನ್ಸಸ್ ಆಕ್ಟ್ ಮತ್ತು ಸಂವಿಧಾನದಲ್ಲಿ ಜನಗಣತಿ ನಡೆಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ. 1951ರಿಂದ 2011ರವರೆಗೆ ಭಾರತ ಸರ್ಕಾರ ಜನಗಣತಿ ಮಾಡಿಕೊಂಡು ಬಂದಿದೆ. SC, ST ಜಾತಿಗಣತಿಯನ್ನೂ ಮಾಡಿದೆ, ಆದರೆ ಇತರೆ ಜಾತಿಗಳ ಜಾತಿಗಣತಿ ಮಾಡಿಲ್ಲ. ಈ ಸನ್ನಿವೇಶದಲ್ಲಿ1968ರಲ್ಲಿ ಕೇರಳ ರಾಜ್ಯ ಸರ್ಕಾರ ಎಲ್ಲ ಜಾತಿಯ ಶೈಕ್ಷಣಯ, ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿದೆ. ಇದರ ಆಧಾರದ ಮೇಲೆ ಕೇರಳ ಸರ್ಕಾರ ತನ್ನ ನೀತಿ, ಯೋಜನೆಗಳನ್ನ ರೂಪಿಸಿಕೊಂಡಿದೆ. ಈ ಪರಿಸ್ಥಿತಿಯನೂ ಕರ್ನಾಟಕದಲ್ಲೂ ನಿರ್ಮಾಣ ಆಗಿದೆ ಎಂದರು.
ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ಎಲ್ಲ ಜಾತಿಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಿ ಎಂದು ಹೇಳಿತ್ತು. ಕಾಂತರಾಜ್ ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಈ ಕೆಲಸ ಮಾಡಿದ್ದಾರೆ. ಈ ಸಮಿತಿಯ ವರದಿ ಹಿಂದುಳಿದ ವರ್ಗಗಳ ಆಯೋಗದಲ್ಲಿದೆ. ಈ ವರೆಗೆ ಇದನ್ನು ಸರ್ಕಾರ ಸ್ವೀಕಾರ ಮಾಡಿಲ್ಲ. ಅಧಿಕೃತವಾದ ಸಮಿಕ್ಷಾ ವರದಿ ಜನರ ಕೈಗೆ ಇನ್ನೂ ಸಿಕ್ಕಿಲ್ಲ. ಅಧಿಕೃತ ವರದಿ ನೋಡದೆ ಒಪ್ಪಬಾರದು, ತಿರಸ್ಕಾರ ಮಾಡ್ಬೇಕು ಎಂಬ ಮಾತು ಕೇಳಿ ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ಜಾತಿಯವರು ಜಾತಿಗಣತಿ ಸಮಿಕ್ಷೆಗೆ ವಿರೋಧ ಇಲ್ಲ. ಆದರೆ ವೈಜ್ಞಾನಿಕವಾಗಿ ಮಾಡಬೇಕೆಂಬ ಚರ್ಚೆ ಈಗಲೇ ಶುರುವಾಗಿದೆ. ಅಧಿಕೃತ ವರದಿ ನೊಡದೆಯೇ ಸರಿಯಲ್ಲ, ತಿರಸ್ಕಾರ ಮಾಡಿ ಅನ್ನೋದು ಸೂಕ್ತವಲ್ಲ. ವರದಿ ಪಡೆದು ಸರ್ಕಾರ ಜನರ ಚರ್ಚೆಗೆ ಬಿಡಬೇಕು. ಲೋಪದೋಷಗಳನ್ನು ತಿಳಿಸಿದ ಬಳಿಕ ಸರಿಪಡಿಸಬಹುದಾದ ಅಂಶಗಳನ್ನ ಸರಿಪಡಿಸಬೇಕು. ಸರಿಪಿಡಿಸೋಕೆ ಆಗುವುದಿಲ್ಲ, ವರದಿ ಅವೈಜ್ಞಾನಿಕ ಅಂದ್ರೆ ತಿರಸ್ಕಾರ ಮಾಡೋಣ ಎಂದರು.
ರಾಜಕೀಯ ಹಿತಾಸಕ್ತಿಗೆ ಹೋಗದೆ ಜನರ ಹಿತಸಕ್ತಿಯಿಂದ 162 ಕೋಟಿ ರೂ. ಖರ್ಚು ಮಾಡಿ ಅಧ್ಯಯನ ಮಾಡಿ, ಸಮೀಕ್ಷೆ ನಡೆಸಿ ತಯಾರಿಸಿದ ವರದಿಯನ್ನ ಸರ್ಕಾರ ಸ್ವೀಕರಿಸಬೇಕು/ ವರದಿ ವೈಜ್ಞಾನಿಕವಾಗಿದ್ದರೆ ಮುಂದಿನ ಕ್ರಮಕ್ಕೆ ಸರ್ಕಾರ ಹೆಜ್ಜೆ ಇಡಬೇಕೆಂದು ಸಲಹೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ