Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಕಾಂತಾರ ಸಿನಿಮಾ ರೀತಿಯಲ್ಲೇ ಕಾಂತೇರಿ ಜುಮಾದಿ ದೈವಾರಾಧನೆಗೆ ಅಡ್ಡಿ ಆರೋಪ

ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ನಿಂದ ದೈವಾರಾಧನೆಗೆ ತಡೆ ಒಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. 800 ವರ್ಷ ಇತಿಹಾಸವಿರುವ ಕಾಂತೇರಿ ಜುಮಾದಿ ದೈವಸ್ಥಾನ ಎಂಎಸ್​ಇಝಡ್ ವ್ಯಾಪ್ತಿಯಲ್ಲಿತ್ತು. ಇಲ್ಲಿನ ನೆಲ್ಲಿದಡಿ ಗುತ್ತುಮನೆಗೆ ಪ್ರವೇಶಕ್ಕೆ ಹಾಗೂ ಕಾಂತೇರಿ ಜುಮಾದಿ ದೈವದ ನಿತ್ಯ ಆರಾಧನೆಗೆ ತಡೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಂಗಳೂರು: ಕಾಂತಾರ ಸಿನಿಮಾ ರೀತಿಯಲ್ಲೇ ಕಾಂತೇರಿ ಜುಮಾದಿ ದೈವಾರಾಧನೆಗೆ ಅಡ್ಡಿ ಆರೋಪ
ನೆಲ್ಲಿದಡಿ ಗುತ್ತಿನ ಕಾಂತೇರಿ ಜುಮಾದಿ ದೈವಸ್ಥಾನ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: Ganapathi Sharma

Updated on: Feb 27, 2025 | 1:14 PM

ಮಂಗಳೂರು, ಫೆಬ್ರವರಿ 27: ಕಾಂತಾರ, ಕನ್ನಡದಲ್ಲಿ ಬಿಡುಗಡೆಯಾಗಿ ನಂತರ ಬೇರೆ ಭಾಷೆಗಳಿಗೂ ಡಬ್​ ಆಗಿ ಅಮೋಘ ಯಶಸ್ಸು ಕಂಡ ಸಿನಿಮಾ. ಕಾಂತಾರ ಸಿನಿಮಾದಲ್ಲಿದ್ದುದು ಕರಾವಳಿಯ ದೈವಾರಾಧನೆಯ ಸುತ್ತ ಹೆಣೆದ ಕಥೆ. ಕರಾವಳಿಯ ಸೊಗಡು, ಅಲ್ಲಿಯ ಸಂಪ್ರದಾಯ, ಆ ಪ್ರಾದೇಶಿಕತೆಗೆ ಇಡೀ ಭಾರತವೇ ಮನಸೋತಿತ್ತು. ಸಿನಿಮಾದ ಕಥೆಯಲ್ಲಿ ಕಾಡಿನಲ್ಲಿ ನಡೆಯುವ ದೈವಾರಾಧನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುವುದನ್ನು ತೋರಿಸಲಾಗಿತ್ತು. ಈಗ ಅಂತಹದ್ದೇ ಘಟನೆ ಮಂಗಳೂರು ಬಜ್ಪೆ ಸಮೀಪ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ನಿಂದ ದೈವಾರಾಧನೆಗೆ ತಡೆ ಒಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸುಮಾರು 800 ವರ್ಷಗಳ ಇತಿಹಾಸವಿರುವ ಕಾಂತೇರಿ ಜುಮಾದಿ ದೈವಸ್ಥಾನ ಬಜ್ಪೆ ಸಮೀಪದ ಎಂಎಸ್​ಇಝಡ್ ವ್ಯಾಪ್ತಿಯಲ್ಲಿದೆ. ಇಲ್ಲಿನ ನೆಲ್ಲಿದಡಿ ಗುತ್ತುಮನೆ ಪ್ರವೇಶಕ್ಕೆ ಹಾಗೂ ಕಾಂತೇರಿ ಜುಮಾದಿ ದೈವದ ನಿತ್ಯ ಆರಾಧನೆಗೆ ತಡೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಂತಾರ ಸಿನಿಮಾ ರೀತಿಯಲ್ಲೇ ದೈವಾರಾಧನೆಗೆ ಅಧಿಕಾರಿಗಳಿಂದ ಅಡ್ಡಿ ಎಂಬ ಆರೋಪ ಕೇಳಿ ಬಂದಿದೆ. ಈ ಪ್ರದೇಶವನ್ನು 2006ರಲ್ಲಿ ವಿಶೇಷ ಆರ್ಥಿಕ ವಲಯ ಎಂದು ಘೋಷಿಸಿ ಇಡೀ ಊರಿಗೆ ಊರನ್ನೇ ಸರ್ಕಾರ ಒಕ್ಕಲೆಬ್ಬಿಸಿತ್ತು. ಸುಮಾರು 3 ಸಾವಿರ ಎಕರೆ ಭೂಮಿ ಎಂಎಸ್​ಇಝಡ್ ವಶವಾದರೂ ಕಾಂತೇರಿ ಜುಮಾದಿ ದೈವಸ್ಥಾನ ಉಳಿದಿತ್ತು. ಇದರ ನಡುವೆ ಅದೆಷ್ಟೋ ದೇವಸ್ಥಾನ, ದೈವಸ್ಥಾನ ,ಮಸೀದಿ, ಚರ್ಚ್​​ಗಳು ನೆಲಸಮವಾಗಿದ್ದವು. ಆದರೂ ದೈವದ ಕಾರ್ಣಿಕದ ಫಲವಾಗಿ ಕಾಂತೇರಿ ಜುಮಾದಿ ದೈವದ ಐತಿಹಾಸಿಕ ಸ್ಥಳ ಉಳಿದಿತ್ತು.

ಹೋರಾಟದ ಫಲವಾಗಿ ಸ್ಮಾರಕದ ರೀತಿ ಉಳಿದುಕೊಂಡಿದ್ದ ನೆಲ್ಲಿದಡಿ ಗುತ್ತು

ಹೋರಾಟದ ಫಲವಾಗಿ 2016ರಲ್ಲಿ ಸ್ಮಾರಕದ ರೀತಿ ನೆಲ್ಲಿದಡಿ ಗುತ್ತನ್ನು ಜಿಲ್ಲಾಡಳಿತ ಉಳಿಸಿಕೊಂಡಿತ್ತು. ಕೇವಲ ದೈವಾರಾಧನೆಗೆ ಮಾತ್ರ ವಿಶೇಷ ಅನುಮತಿ ನೀಡಿ ನೆಲ್ಲಿದಡಿ ಗುತ್ತಿಗೆ ಹೋಗಲು MSEZ ಅವಕಾಶ ನೀಡುತ್ತಿತ್ತು. ಪ್ರತಿ ಬಾರಿ ದೈವಾರಾಧನೆಗಾಗಿ ಒಳ ಹೋಗುವಾಗ ಅನುಮತಿ ಪಡೆದು ನೆಲ್ಲಿದಡಿ ಗುತ್ತಿನ ಪ್ರಮುಖರು ಹೋಗುತ್ತಿದ್ದರು.

ಇದನ್ನೂ ಓದಿ
Image
ಕರ್ನಾಟಕದ ಹೋಟೆಲ್​, ಉಪಾಹಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ​ ನಿಷೇಧ
Image
ಬೆಂಗಳೂರಿಗರಿಗೆ ಶಾಕಿಂಗ್ ಸುದ್ದಿ: ಇಡ್ಲಿ ತಿಂದರೂ ಬರಬಹುದು ಕ್ಯಾನ್ಸರ್‌!
Image
ಕರಾವಳಿ ಜಿಲ್ಲೆಗಳಲ್ಲಿ ಉಷ್ಣ ಅಲೆ: ಏನೇನು ಮುನ್ನೆಚ್ಚರಿಕೆ ವಹಿಸಬೇಕು?
Image
ಹೃದಯಾಘಾತದಿಂದ ಬಟ್ಟೆ ಅಂಗಡಿ ಸಿಬ್ಬಂದಿ ಸಾವು, ಕೊನೇ ಕ್ಷಣದ ಸಿಸಿಟಿವಿ ದೃಶ್ಯ

ವರ್ಷಕ್ಕೊಮ್ಮೆ ಅನುಮತಿ ಮೇರೆಗೆ ನಡೆಯುತ್ತಿದ್ದ ಉತ್ಸವ

ವರ್ಷಕ್ಕೊಮ್ಮೆ ಊರಿನವರ ಸಹಭಾಗಿತ್ವದಲ್ಲಿ ದೈವದ ಉತ್ಸವ ನಡೆಯುತ್ತಿತ್ತು. ಆದರೆ ಇದೀಗ ದೈವದ ಆರಾಧನೆಗೆ MSEZ ಅಧಿಕಾರಿಗಳು ಕಿರಿಕ್ ತೆಗೆದಿದ್ದಾರೆ. ತಿಂಗಳ ಸಂಕ್ರಮಣ ವೇಳೆ ದೈವಸ್ಥಾನಕ್ಕೆ ಹೋಗಿ ಧಾರ್ಮಿಕ ಕಾರ್ಯ ನೆರವೇರಿಸಲು ಅನುಮತಿ ನಿರಾಕರಿಸಿದ್ದಾರೆ. MSEZ ಪ್ರವೇಶಕ್ಕೆ ಅಧಿಕಾರಿಗಳು ತಡೆಯೊಡ್ಡುತ್ತಿದ್ದಂತೆಯೇ ದೈವಾರಾಧಕರ ಆಕ್ರೋಶದ ಕಟ್ಟೆಯೊಡೆದಿದೆ.

Kantheri Jumadi Daiva Kola

ಕಾಂತೇರಿ ಜುಮಾದಿ ದೈವ ಕೋಲದ ಸಂಗ್ರಹ ಚಿತ್ರ

ಇನ್ನು ಕಾಂತಗೇರಿ ಜುಮಾದಿ ದೈವಸ್ಥಾನ ಬಹಳಷ್ಟು ಕಾರಣಿಕ ಶಕ್ತಿ ಹೊಂದಿದೆ. ಇಲ್ಲಿರುವ ಬಾವಿಯ ಸ್ಫಟಿಕ ‌ಶುದ್ಧದಂತಿರುವ ತೀರ್ಥ ಕುಡಿದರೆ ಕ್ಷಣಾರ್ಧದಲ್ಲಿ ಮೈಗೆ ಏರಿದ ವಿಷ ಇಳಿಯುತ್ತದೆ ಎಂಬ ನಂಬಿಕೆ ಇದೆ. ಈ ಬಾವಿಯ ತೀರ್ಥ, ಇಲ್ಲಿನ ಒಂದು ಚಿಟಿಕೆ ಮಣ್ಣನ್ನು ಜುಮಾದಿ‌ ದೈವದ ಹೆಸರು ಹೇಳಿ ಕೊಟ್ಟರೆ ಜೀವ ಉಳಿಯುತ್ತದೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್ ತಿರುವಿನಲ್ಲೇ ಕೆಎಸ್​ಆರ್​ಟಿಸಿ ಬಸ್ ಸ್ಟೇರಿಂಗ್ ಕಟ್: ಆಮೇಲೇನಾಯ್ತು?

ಇನ್ನು ಈ ದೈವಸ್ಥಾನದ ಎತ್ತರ ಮೀರಿ ಯಾರೂ ಸಹ ಕಟ್ಟಡ ಕಟ್ಟಬಾರದೆಂಬ ನಿಯಮವೂ ಇಲ್ಲಿದೆ. ನಿಯಮ ಮೀರಿ ಕಟ್ಟಡ ಕಟ್ಟಿದ ಫ್ಯಾಕ್ಟರಿಗಳಿಗೆ ಬೆಂಕಿ ಬಿದ್ದ ಉದಾಹರಣೆಯೂ ಇದೆ. ಇದೀಗ ಈ ದೈವಸ್ಥಾನಕ್ಕೆ ಹೋಗಲು ಪ್ರತ್ಯೇಕ ರಸ್ತೆಯ ವ್ಯವಸ್ಥೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ