ರೈಲು ಸಂಚಾರ ರದ್ದು: ಮಂಗಳೂರು-ಬೆಂಗಳೂರು ವಿಮಾನ ಟಿಕೆಟ್ ದರ ದುಪ್ಪಟ್ಟು
ಹಳಿ ಮೇಲೆ ಮಣ್ಣ ಕುಸಿದು ಬಿದ್ದಿರುವುರಿಂದ ಬೆಂಗಳೂರು ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ. ಹಿನ್ನೆಲೆಯಲ್ಲಿ ಪ್ರಯಾಣಿಕರು ಅನಿವಾರ್ಯವಾಗಿ ಬಸ್ ಮೂಲಕವೇ ಪ್ರಯಾಣಿಸಬೇಕಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ನವರು ಟಿಕೆಟ್ ದರ ಹೆಚ್ಚಳ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ವಿಮಾನ ಟಿಕೆಟ್ ಸಹ ದುಪ್ಪಟ್ಟಾಗಿದೆ.
ಮಂಗಳೂರು, (ಜುಲೈ 29): ಬೆಂಗಳೂರು ಮಂಗಳೂರು ರೈಲು ಸಂಚಾರ ರದ್ದಾಗಿದ್ದರಿಂದ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳವಾಗಿದೆ. ಇದರ ಬೆನ್ನಲ್ಲೆ ಇದೀಗ ವಿಮಾನ ಟಿಕೆಟ್ ಸಹ ಗಗನಕ್ಕೇರಿದೆ. ಹಳಿ ಮೇಲೆ ಮಣ್ಣ ಕುಸಿತವಾಗಿದ್ದರಿಂದ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ವಿಮಾನಯಾನ ಕಂಪನಿಗಳು, ಮಂಗಳೂರು ಬೆಂಗಳೂರು ನಡುವಿನ ವಿಮಾನಯಾನ ದರ ಮೂರ್ನಾಲ್ಕು ಪಟ್ಟು ಹೆಚ್ಚಿಸಿವೆ. ಇದರಿಂದ ವಿಮಾನ ಪ್ರಯಾಣಿಕರು ಕಂಗಾಲಾಗಿದ್ದಾರೆ.
ಮಂಗಳೂರು:ಮಂಗಳೂರು- ಬೆಂಗಳೂರು ರೈಲು ಮಾರ್ಗದಲ್ಲಿ ಭೂ ಕುಸಿತವಾಗಿದ್ದರಿಂದ ರೈಲು ಸಂಚಾರ ರದ್ದಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವಿಮಾನಯಾನ ಕಂಪನಿಗಳು ವಿಮಾನ ಟಿಕೆಟ್ ದರವನ್ನು ಮೊದಲಿಗಿಂತ ಮೂರ್ನಾಲ್ಕು ಪಟ್ಟ ಹೆಚ್ಚಳ ಮಾಡಿವೆ. ಸಾಮಾನ್ಯವಾಗಿ ಮಂಗಳೂರು ಟು ಬೆಂಗಳೂರು ವಿಮಾನ ಟಿಕೆಟ್ ದರ 3 ಸಾವಿರದಿಂದ 3,600 ಇರುತ್ತಿತ್ತು. ಆದ್ರೆ, ಇಂದು (ಜುಲೈ 29) ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಿಮಾನ ದರ 9,143 ರೂಪಾಯಿಗೆ ಹೆಚ್ಚಳವಾಗಿದೆ. ವೀಕ್ ಡೇಸ್ಗಳಲ್ಲೇ ಇಷ್ಟಾದರೆ ಇನ್ನು ವಾರಾಂತ್ಯದಲ್ಲಿ ಇನ್ನಷ್ಟು ಟಿಕೇಟ್ ದರ ಹೆಚ್ಚಿಸುವ ಸಾಧ್ಯತೆಗಳಿವೆ. ಈ ದರ ಏರಿಕೆ ನಿರ್ಧಾರಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣಕ್ಕೆ ಹೊರಟವರಿಗೆ ಶಾಕ್: ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು
ನಿನ್ನೆ (ಜುಲೈ 28) ಪ್ರಯಾಣಿಕರೊಬ್ಬರು ಬೆಂಗಳೂರಿನಿಂದ ಮಂಗಳೂರು, ಮಂಗಳೂರಿನಿಂದ ಬೆಂಗಳೂರಿಗೆ 23,396 ರೂ ನೀಡಿದ್ದಾರೆ. ಇದರಿಂದ ಪ್ರಯಾಣಿಕರು ವಿಮಾನಯಾನ ಕಂಪೆನಿಗಳ ವಿರುದ್ಧ ಆಕ್ರೋಶಗೊಂಡಿದ್ದು, ರಸ್ತೆ, ಟ್ರೈನ್ ಬಂದ್ ಆದಾಗ ವಿಮಾನಯಾನ ದರ ಗಗನಕ್ಕೇರಿಸಿದ್ದಾರೆ. ತುರ್ತು ಸುಂದರ್ಭ ಇದ್ದಾಗ ಜನ ತೊಂದರೆಗೊಳಗುತ್ತಿದ್ದಾರೆ. ಸಾಮಾನ್ಯ ಜನ ಇಷ್ಟೊಂದು ಹಣವನ್ನು ಎಲ್ಲಿಂದ ಕೊಡುವುದು. ಹೆಚ್ಚು ಫ್ಲೈಟ್ ಹಾಕಿ ಜನರಿಗೆ ಅನುಕೂಲ ಮಾಡಿಕೊಡಬೇಕಿತ್ತು. ಈ ಸಂದರ್ಭದಲ್ಲಿ ಹೆಚ್ಚಿ ವಿಮಾನ ವ್ಯವಸ್ಥೆ ಮಾಡಿ ಟಿಕೆಟ್ ದರ ಕಡಿಮೆ ಮಾಡಬೇಕಿತ್ತು ಎಂದು ಪ್ರಯಾಣಿಕ ಸುಹಾನ್ ಆಳ್ವ ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ