AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದ ಕ್ರಮಕ್ಕೆ ಕಂಗಾಲಾದ ವಯೋವೃದ್ಧ ಪಿಂಚಣಿದಾರರು: ಕಚೇರಿಗೆ ಅಲೆದಾಟ

ರಾಜ್ಯ ಸರ್ಕಾರವು 23 ಲಕ್ಷ ಶಂಕಾಸ್ಪದ ಪಿಂಚಣಿದಾರರ ಗುರುತಿಸಿದ್ದು, ಹುಬ್ಬಳ್ಳಿಯ ಸಾವಿರಾರು ವಯೋವೃದ್ಧರಿಗೆ ಪಿಂಚಣಿ ನಿಲ್ಲಿಸಿದೆ. ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಹಿರಿಯ ನಾಗರಿಕರು ಆದಾಯ ಪ್ರಮಾಣಪತ್ರ, ಬಿಪಿಎಲ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಲು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.

ಸರ್ಕಾರದ ಕ್ರಮಕ್ಕೆ ಕಂಗಾಲಾದ ವಯೋವೃದ್ಧ ಪಿಂಚಣಿದಾರರು: ಕಚೇರಿಗೆ ಅಲೆದಾಟ
ಪಿಂಚಣಿದಾರರು Image Credit source: tv9 kannada
ಸಂಜಯ್ಯಾ ಚಿಕ್ಕಮಠ
| Edited By: |

Updated on: Jul 03, 2026 | 6:53 PM

Share

ಮುಖ್ಯಾಂಶಗಳು

  • 23 ಲಕ್ಷ ಶಂಕಾಸ್ಪದ ಪಿಂಚಣಿದಾರರು ಪತ್ತೆ
  • ಹುಬ್ಬಳ್ಳಿಯಲ್ಲಿ ವೃದ್ಧರ ಪರದಾಟ
  • ಬೆಳ್ಳಂಬೆಳಗ್ಗೆ ಕ್ಯೂನಲ್ಲಿ ನಿಂತ ಪಿಂಚಣಿದಾರರು

ಹುಬ್ಬಳ್ಳಿ, ಜುಲೈ 03: ರಾಜ್ಯ ಸರ್ಕಾರ ಕೇಂದ್ರದ ಸಹಕಾರದೊಂದಿಗೆ ಸಾಮಾಜಿಕ ಭದ್ರತೆಯಡಿ ಪಿಂಚಣಿಗಳನ್ನು ನೀಡುತ್ತದೆ. 60 ವರ್ಷ ವಯಸ್ಸಾದವರು, ವಿಧವೆಯರು ಸೇರಿದಂತೆ ಅನೇಕರಿಗೆ ಮಾಸಿಕ ಪಿಂಚಣಿ ನೀಡುತ್ತದೆ. ಆದರೆ ಗ್ಯಾರಂಟಿ ಯೋಜನೆಗಳ ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಲು ಪರಿಷ್ಕರಣೆ ಜೊತೆಗೆ ಇದೀಗ ಪಿಂಚಣಿ ಫಲಾನುಭವಿಗಳ ಪರಿಷ್ಕರಣೆ (Pension Revision) ಕೂಡ ಮಾಡಲಾಗುತ್ತಿದೆ. ಪಿಂಚಣಿ ಪಡೆಯುತ್ತಿರುವರಲ್ಲಿ ಶಂಕಾಸ್ಪದ ಪಿಂಚಣಿ ಫಲಾನುಭವಿಗಳಿಗೆ ಕಳೆದ ಕೆಲ ತಿಂಗಳಿಂದ ಪಿಂಚಣಿ ಹಾಕಿಲ್ಲ. ಇದೀಗ ಅವರು ಹೊಸದಾಗಿ ದಾಖಲಾತಿಗಳನ್ನು ನೀಡಬೇಕು. ಇದಕ್ಕಾಗಿ ವೃದ್ದರು ತಹಶೀಲ್ದಾರ್ ಕಚೇರಿಯಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

23 ಲಕ್ಷ ಶಂಕಾಸ್ಪದ ಪಿಂಚಣಿದಾರರು ಪತ್ತೆ

ಪಿಂಚಣಿ ಫಲಾನುಭವಿಗಳು ಹುಬ್ಬಳ್ಳಿ ನಗರದ ತಹಶೀಲ್ದಾರ್ ಕಚೇರಿಗೆ ಬೆಳಿಗ್ಗೆ ಬಂದು ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಕೇಳುತ್ತಿರುವ ದಾಖಲಾತಿಗಳನ್ನು ನೀಡಲು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಸರಿಸುಮಾರು 83 ಲಕ್ಷ ಪಿಂಚಣಿದಾರರು ಪಿಂಚಣಿ ಫಲಾನುಭವಿಗಳಿದ್ದಾರೆ. ಆದರೆ ಅದರಲ್ಲಿ ಸರಿಸುಮಾರು 23 ಲಕ್ಷ ಶಂಕಾಸ್ಪದ ಪಿಂಚಣಿದಾರರಿರುವುದು ಗೊತ್ತಾಗಿದೆ. ಶಂಕಾಸ್ಪದ ಪಿಂಚಣಿದಾರರ ಖಾತೆಗೆ ಕಳೆದ ಕೆಲ ತಿಂಗಳಿಂದ ಪಿಂಚಣಿ ಹಣ ಜಮೆಯಾಗಿಲ್ಲ.

ಈ ತಿಂಗಳು ಬರುತ್ತೆ, ಮುಂದಿನ ತಿಂಗಳು ಬರುತ್ತೆ ಅಂತ ಕಾದಿದ್ದ ಫಲಾನುಭವಿಗಳಿಗೆ ಹಣ ಬಾರದಿದ್ದಾಗ ವಿಚಾರಿಸಿದಾಗ ಹೊಸದಾಗಿ ದಾಖಲಾತಿಗಳನ್ನು ನೀಡಬೇಕು ಎಂಬುವುದು ಗೊತ್ತಾಗಿದೆ. ಹೀಗಾಗಿ ಅನೇಕ ವೃದ್ದರು, ಹೊಸದಾಗಿ ದಾಖಲಾತಿಗಳನ್ನು ಹೊಂದಿಸಿ ನೀಡಲು ಪರದಾಡುತ್ತಿದ್ದಾರೆ. ಇದೀಗ ಹೊಸದಾಗಿ ಇವರೆಲ್ಲ, ತಮ್ಮ ಆದಾಯ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್ ಸೇರಿದಂತೆ ಅನೇಕ ದಾಖಲಾತಿಗಳನ್ನು ನೀಡಬೇಕಾಗಿದೆ. ಅವರ ದಾಖಲಾತಿಗಳನ್ನು ಪರಿಶೀಲನೆ ನಡೆಸಲಿರುವ ಅಧಿಕಾರಿಗಳು ಅವರು ಅರ್ಹರಿದ್ದರೆ ಅವರಿಗೆ ಪಿಂಚಣಿ ನೀಡಲು ಶಿಪಾರಸ್ಸು ಮಾಡಲಿದ್ದಾರೆ.

ಇದನ್ನೂ ಓದಿ: ಗೃಹಜ್ಯೋತಿ ಮರು ಪರಿಶೀಲನೆ: ಜಾತಿ ಪ್ರಮಾಣಪತ್ರ ಗೊಂದಲದ ಬಗ್ಗೆ ಸ್ಪಷ್ಟನೆ ನಿಡಿದ ಬೆಸ್ಕಾಂ

ಇನ್ನು ಈ ಮೊದಲು ಪ್ರತಿ ಫಲಾನುಭವಿಗೂ ಪಿಂಚಣಿ ಬರುತಿತ್ತು. ಆದರೆ ಅನೇಕರು ಅನರ್ಹ ಫಲಾನುಭವಿಗಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸರ್ಕಾರ, ಸರಿಸುಮಾರು 23 ಲಕ್ಷದಷ್ಟು ಶಂಕಾಸ್ಪದ ಪಿಂಚಣಿದಾರರು ಇರುವುದನ್ನು ಪತ್ತೆ ಮಾಡಿದೆ. ಅನೇಕ ಪಿಂಚಣಿದಾರರು, ಪ್ರತಿವರ್ಷ ತಾವು ಜೀವಂತ ಇರುವ ಪ್ರಮಾಣಪತ್ರವನ್ನು ನೀಡಬೇಕು, ಆದರೆ ಬಹುತೇಕರು ನೀಡಿಲ್ಲ. ಇನ್ನು ಅನೇಕರು ಅನೇಕ ತಿಂಗಳ ಪಿಂಚಣಿಯನ್ನು ಡ್ರಾ ಮಾಡಿಲ್ಲ. ಅಂತವರ ಖಾತೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಅರ್ಹರಿದ್ದರು ನಮ್ಮನ್ನ ಕೈಬಿಡಲಾಗಿದೆ ಎಂದ ಪಿಂಚಣಿದಾರರು 

ಇನ್ನು ಕೆಲವರು ಬಿಪಿಎಲ್ ಕಾರ್ಡ್​ನಿಂದ ಎಪಿಎಲ್ ಕಾರ್ಡ್​ಗೆ ಮೇಲ್ದರ್ಜೆಗೆ ಏರಿದ್ದಾರೆ. ಅಂತವರಿಗೆ ಪಿಂಚಣಿ ಹಣ ಜಮೆಯಾಗಿಲ್ಲ. ಕೆಲವರ ವರಮಾನ ಹೆಚ್ಚಾಗಿದ್ದು, ಅವರ ಮಕ್ಕಳು, ಮೊಮ್ಮಕ್ಕಳು ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ ಖರೀದಿ ಮಾಡಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಅಂತವರ ಪಿಂಚಣಿಯನ್ನು ಕೂಡ ಶಂಕಾಸ್ಪದ ಪಿಂಚಣಿದಾರರ ಗುಂಪಿಗೆ ಸೇರಿಸಲಾಗಿದೆ. ಇನ್ನು ಕೆಲವರು ಐಟಿ ಫೈಲ್ ಮಾಡಿದ್ದಾರೆ. ಕುಂಟುಂಬ ತಂತ್ರಾಶದಲ್ಲಿ ಅನೇಕ ಪಿಂಚಣಿದಾರರು ವರಮಾನ ಸೇರಿದಂತೆ ವಾಹನಗಳ ಖರೀದಿ ಮಾಡಿದ್ದು ಗೊತ್ತಾಗಿದ್ದು, ಅವರ ಖಾತೆಗಳನ್ನು ಶಂಕಾಸ್ಪದ ಖಾತೆಗಳು ಅಂತ ಪರಿಗಣಿಸಿ ಅವರ ಖಾತೆಗೆ ಹಣ ಹಾಕೋದನ್ನು ನಿಲ್ಲಿಸಿದೆ. ಇದೀಗ ಇವರು ಹೊಸದಾಗಿ ದಾಖಲಾತಿಗಳನ್ನು ನೀಡಿ, ತಾವು ಪಿಂಚಣಿ ಪಡೆಯಲು ಅರ್ಹರು ಅನ್ನೋದನ್ನು ಸಾಬೀತು ಮಾಡಬೇಕಿದೆ. ಅಂದಾಗ ಮಾತ್ರ ಪಿಂಚಣಿ ಮರು ಜಾರಿಯಾಗುತ್ತದೆ. ಇನ್ನು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಹೊಸದಾಗಿ ದಾಖಲಾತಿಗಳನ್ನು ನೀಡಲು ವಯೋವೃದ್ದರು ಪರದಾಡುತ್ತಿದ್ದಾರೆ. ತಾವು ಯೋಜನೆಗೆ ಅರ್ಹರಿದ್ದೇವೆ. ಆದರೂ ನಮ್ಮನ್ನು ಕೈಬಿಡಲಾಗಿದೆ ಅಂತ ಅನೇಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: ಶ್ರೀರಂಗಪಟ್ಟಣ ADLR ಭೂ ಹಗರಣ: 200 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿ, 9 ಜನರ ಬಂಧನ

ಅರ್ಹ ಪಿಂಚಣಿದಾರರಿಗೆ ಪಿಂಚಣಿ ಹಣ ಜಮೆಯಾಗುತ್ತಿದೆ. ಆದರೆ ಶಂಕಾಸ್ಪದ ಅಂತ ಗುರುತಿಸಿರುವವರಿಗೆ ಕಳೆದ ಕೆಲ ತಿಂಗಳಿಂದ ಪಿಂಚಣಿ ಹಣ ಬಂದಿಲ್ಲ. ಹೀಗಾಗಿ ಹೊಸದಾಗಿ ದಾಖಲಾತಿಗಳನ್ನು ನೀಡುವುದು ಅನಿವಾರ್ಯವಾಗಿದೆ. ಅನರ್ಹ ಫಲಾನುಭವಿಗಳನ್ನು ತೆಗೆಯುವುದು ಸ್ವಾಗತಾರ್ಹವೇ. ಆದರೆ ವೃದ್ದರು ಗಂಟೆಗಟ್ಟಲೇ ಕಚೇರಿಗಳಲ್ಲಿ ಕ್ಯೂ ನಿಲ್ಲುವುದು ತೊಂದರೆಯಾಗುತ್ತಿದ್ದು, ಇದಕ್ಕೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
1 ಗಂಟೆ ಮೋಡ ಬಿತ್ತನೆಗೆ ಎಷ್ಟು ಖರ್ಚು? ವಿವರಿಸಿದ ಶಾಸಕ
1 ಗಂಟೆ ಮೋಡ ಬಿತ್ತನೆಗೆ ಎಷ್ಟು ಖರ್ಚು? ವಿವರಿಸಿದ ಶಾಸಕ
ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ
ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ
ಕೋಲಾರದ ಕುರುಬರಪೇಟೆಯಲ್ಲಿ ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ!
ಕೋಲಾರದ ಕುರುಬರಪೇಟೆಯಲ್ಲಿ ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ!
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!