AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ: ನಾಗರ ಪಂಚಮಿ ಅಂದರೆ ಉಂಡೆಗಳ ಹಬ್ಬ; ರವೆ, ಹೆಸರಿಟ್ಟು, ಎಳ್ಳು, ಕಡಲೆ ಸಮಾಗಮ

Nag panchami 2021: ಉಂಡೆಗಳೊಂದಿಗೆ ಚಕ್ಕಲಿ, ಬರ್ಫಿ, ಕಡಲೆ ಉಸುಳಿ ಸೇರಿದಂತೆ ಅನೇಕ ತಿನಿಸುಗಳನ್ನು ಕೂಡ ಮಾಡಲಾಗಿತ್ತು ಎಂದು ಸ್ಪರ್ಧೆ ಆಯೋಜಕರಾದ ಬಸಲಿಂಗಯ್ಯ ಹಿರೇಮಠ ಹೇಳಿದ್ದಾರೆ.

ಧಾರವಾಡ: ನಾಗರ ಪಂಚಮಿ ಅಂದರೆ ಉಂಡೆಗಳ ಹಬ್ಬ; ರವೆ, ಹೆಸರಿಟ್ಟು, ಎಳ್ಳು, ಕಡಲೆ ಸಮಾಗಮ
ಉಂಡೆಗಳ ಹಬ್ಬ
TV9 Web
| Updated By: preethi shettigar|

Updated on:Aug 11, 2021 | 8:57 AM

Share

ಧಾರವಾಡ: ಶ್ರಾವಣ ಮಾಸ ಬಂದರೆ ಸಾಕು ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಅದರಲ್ಲೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಅಂದರೆ ಸಾಕು ಮಹಿಳೆಯರಿಗೆ ಸಂಭ್ರಮವೋ ಸಂಭ್ರಮ. ಆದರೆ ಧಾರವಾಡಲ್ಲಿ ಈ ನಾಗರ ಪಂಚಮಿ (nag panchami 2021) ಅಂದರೆ ಅದು ತಹರೇವಾರಿ ಉಂಡೆಗಳ ಹಬ್ಬ. ಇಂಥ ಉಂಡೆಗಳನ್ನು ತಯಾರಿಸುವ ಸ್ಪರ್ಧೆ ಮಾಡುವ ಮೂಲಕ ಧಾರವಾಡದ ಜಾನಪದ ಸಂಶೋಧನಾ ಕೇಂದ್ರ ಮಹಿಳೆಯರಿಗೆ ಮನರಂಜನೆ ಒದಗಿಸಿತ್ತು.

ಧಾರವಾಡದ ಜಾನಪದ ಸಂಶೋಧನ ಕೇಂದ್ರದಲ್ಲಿ ರವೆ, ಹೆಸರಿಟ್ಟು, ಎಳ್ಳು, ಕಡಲೆ, ಚುರುಮರಿ, ಮೋತಿ ಚೂರು ಉಂಡೆಗಳ ಸಮಾಗಮ ನಡೆದಿದ್ದು, ಹೀಗೆ ಹತ್ತಾರು ಬಗೆಯ ಉಂಡೆಗಳು ಒಂದೇ ಕಡೆ ಕಾಣ ಸಿಗುವುದು ಅಪರೂಪ. ನಾಡಿನ ಪ್ರಸಿದ್ಧ ಗಾಯಕರಾದ ಬಸಲಿಂಗಯ್ಯ, ವಿಶ್ವೇಶ್ವರಿ ಹಿರೇಮಠ ದಂಪತಿ ಈ  ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಮಹಿಳೆಯರಿಗಾಗಿಯೇ ನಾಗರ ಪಂಚಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಹಿಳೆಯರಿಗಾಗಿ ಉಂಡೆ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಹಿಳೆಯರು ಮನೆಯಲ್ಲಿಯೇ ಬಗೆ ಬಗೆಯ ಉಂಡೆಗಳನ್ನು ತಯಾರಿಸಿಕೊಂಡು ಬಂದಿದ್ದರು. ಅವುಗಳನ್ನು ಒಂದೆಡೆ ಇಟ್ಟು, ಅವುಗಳ ಮಧ್ಯೆ ನಾಗರ ಹಾವಿನ ವಿಗ್ರಹ ಸ್ಥಾಪಿಸಿ, ಬಳಿಕ ಎಲ್ಲರೂ ಸೇರಿ ಹಾಲು ಹೊಯ್ದು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಉಂಡೆಗಳೊಂದಿಗೆ ಚಕ್ಕಲಿ, ಬರ್ಫಿ, ಕಡಲೆ ಉಸುಳಿ ಸೇರಿದಂತೆ ಅನೇಕ ತಿನಿಸುಗಳನ್ನು ಕೂಡ ಮಾಡಲಾಗಿತ್ತು ಎಂದು ಸ್ಪರ್ಧೆ ಆಯೋಜಕರಾದ ಬಸಲಿಂಗಯ್ಯ ಹಿರೇಮಠ ಹೇಳಿದ್ದಾರೆ.

ಮಕ್ಕಳೆಲ್ಲಾ ಸೇರಿ ಈ ಸಂದರ್ಭದಲ್ಲಿ ವಿವಿಧ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಇನ್ನು ಮಹಿಳೆಯರು ಅನೇಕ ಜಾನಪದ ಗೀತೆಗಳನ್ನು ಹಾಡುವ ಮೂಲಕ ಕಳೆದು ಹೋಗುತ್ತಿರುವ ಸಂಪ್ರದಾಯವನ್ನು ಮತ್ತೆ ನೆನಪಿಸಿದರು. ಇನ್ನು ಮಹಿಳೆಯರು ಗ್ರಾಮೀಣ ಪ್ರದೇಶದ ಉಡುಗೆಗಳನ್ನು ಧರಿಸಿ ಬಂದಿದ್ದರು. ಕಾಸಿನ ಹಾರ, ಮೂಗುತಿ, ಇಳಕಲ್ ಸೀರೆ ಹಾಗೂ ಇನ್ನಿತರ ವಿಭಿನ್ನ ಬಗೆಯ ಆಭರಣಗಳನ್ನು ಧರಿಸಿ ಬಂದಿದ್ದ ಮಹಿಳೆಯರು ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.

ಉತ್ತರ ಕರ್ನಾಟಕದ ದೊಡ್ಡ ಹಬ್ಬವಾಗಿರುವ ನಾಗರ ಪಂಚಮಿಯನ್ನು ಹೇಗೆ ಆಚರಿಸಬೇಕು ಎನ್ನುವುದು ಮುಂಬರುವ ಪೀಳಿಗೆಗೆ ಪರಿಚಯಿಸಿ ಕೊಡಲು ಇಂಥದ್ದೊಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೊರೊನಾ ಹಾವಳಿಯಿಂದಾಗಿ ಹಬ್ಬ- ಹರಿದಿನಗಳನ್ನು ಜನರು ಮರೆತೇ ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಈ ಹಬ್ಬ ಮಹಿಳೆಯರಿಗೆ ಕೊಂಚ ಖುಷಿ ತರುವಲ್ಲಿ ಯಶಸ್ವಿಯಾಯಿತು ಎಂದು ಗೃಹಿಣಿ ನಂದಾ ಗುಳೇದಗುಡ್ಡ ಅಭಿಪ್ರಾಯಪಟ್ಟಿದ್ದಾರೆ.

ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಕಾರ್ಯಕ್ರಮದ ಬಳಿಕ ಉಂಡೆ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಉತ್ತರ ಕರ್ನಾಟಕ ಶೈಲಿಯ ಊಟ ಎಲ್ಲರ ಗಮನ ಸೆಳೆಯಿತು. ದಿನದಿಂದ ದಿನಕ್ಕೆ ಹಬ್ಬಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಜಾನಪದ ಸಂಶೋಧನಾ ಕೇಂದ್ರ ಮತ್ತೆ ಹಳೆಯ ಸಂಪ್ರದಾಯಗಳನ್ನು ಉಳಿಸಿ, ಅವುಗಳನ್ನು ಮುಂದಿನ ಪೀಳಿಗೆಗೆ ತೋರಿಸಿಕೊಡುವಂಥ ಕೆಲಸ ಮಾಡುತ್ತಿರುವುದು ಸಂತಸದ ಸಂಗತಿಯೇ ಸರಿ.

ವರದಿ: ನರಸಿಂಹಮೂರ್ತಿ ಪ್ಯಾಟಿ ಇದನ್ನೂ ಓದಿ:

Nag Panchami 2021: ಶ್ರಾವಣ ಮಾಸದ ಅಚ್ಚುಮೆಚ್ಚಿನ ಹಬ್ಬ ನಾಗರ ಪಂಚಮಿ- ಏನಿದರ ವಿಶೇಷ, ಆಚರಣೆ, ಭಾವ-ಭಕ್ತಿ ಹೇಗೆ?

ಗವಿಗಂಗಾಧರೇಶ್ವರನ ಸನ್ನಿಧಿಯಲ್ಲಿ ನಾಗರ ಪಂಚಮಿಯ ಸಡಗರ

Published On - 8:55 am, Wed, 11 August 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ