Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೋಟದಲ್ಲಿ ಮಂಗ ಉಲ್ಟಾ ಮರ ಇಳಿಯೋದನ್ನು ನೋಡಿದ ಶಿರಹಟ್ಟಿ ಯುವಕ ಏನು ಮಾಡಿದ್ದಾನೆ ನೋಡಿ!

ಶಿರಹಟ್ಟಿಯ 22 ವರ್ಷದ ಈಶ್ವರ ತಲೆ ಕೆಳಗೆ ಮಾಡಿ ಮರ ಏರ್ತಾಯಿದ್ರೆ ಜನರ ಎದೆಯಲ್ಲಿ ಢವಢವ ಶುರುವಾಗುತ್ತೆ. ಅಷ್ಟೊಂದ ಜೀವ ರೀಸ್ಕ್ ತಗೊಂಡು ಮರ ಹತ್ತುವ ಸಾಧನೆ ಮಾಡಿದ್ದಾನೆ. ಒಂದು ದಿನ ಆತನ ತೋಟದಲ್ಲಿ ಮಂಗವೊಂದು ಉಲ್ಟಾ ಮರ ಇಳಿಯೋದನ್ನು ನೋಡಿದ್ದಾನೆ. ಅಷ್ಟೇ...

Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on:Mar 11, 2024 | 10:32 AM

ಆ ಪಟ್ಟಣದಲ್ಲೊಬ್ಬ ಡಿಫರಂಟ್ ಯುವಕ ಇದ್ದಾನೆ. ಆತನ ಸಾಧನೆ ನೋಡಿದ್ರೆ ನೀವು ಬೆಚ್ಚಿಬಿಳ್ತೀರಾ. ಹೌದು ಯಾರೇ ಆಗಲಿ ಸೀದಾ ತೆಂಗಿನ ಗಿಡ ಏರೋಕೆ ಭಯಪಡ್ತಾರೆ. ಆದ್ರೆ, ಈ ಯುವಕ ಯಾವುದೇ ಭಯವಿಲ್ಲದೇ ತೆಂಗಿನ ಗಿಡ ಏರೋದು ತಲೆ ಕೆಳಗೆ ಮಾಡಿ. ಅದು ಸರ ಸರನೇ ಮರ ಏರ್ತಾನೆ ಈ ಹುಡುಗ. ಈತ ವಿಚಿತ್ರವಾಗಿ ಮರ ಏರೋ ಶೈಲಿಗೆ ಇಡೀ ಪಟ್ಟಣದ ಜನ್ರೇ ಫಿದಾ ಆಗಿದ್ದಾರೆ. ತೆಂಗಿನ ಮರವನ್ನ ಉಲ್ಟಾ ಏರುವ ಮೂಲಕ ಅಚ್ಛರಿ ಮೂಡಿಸಿದ್ದಾನೆ. ಯಾರೀ ಅಂಜದ ಗಂಡು ಅಂತೀರಾ ಈ ಸ್ಟೋರಿ ನೋಡಿ….

ತಲೆ ಕೆಳಗೆ ಮಾಡಿ ತೆಂಗಿನ ಮರ ಏರೋ ಡಿಫರಂಟ್ ಯುವಕ…! ಯುವಕನ ಸಾಹಸ ನೋಡಿ ‘ಹೌದೋ ಗಂಡು’ ಅಂತಿರೋ ಜನ…! ಹಳ್ಳಿ ಪ್ರತಿಭೆಯ ಈ ಸಾಹಸ ನೋಡಿ ಅಚ್ಚರಿ ಪಡ್ತಾಯಿರೋ ಜನ್ರು…! ಕ್ಷಣಾರ್ಧದಲ್ಲಿ ಉಲ್ಟಾ ತೆಂಗಿನ ಮರ ಏರಿ ಹುಬ್ಬೇರುವಂತೆ ಮಾಡಿ ಯುವಕ..!

ಚಿತ್ರದುರ್ಗದಲ್ಲಿ ಕೋತಿ ರಾಮ ಕೋಟೆ ಹತ್ತಿ ಫೇಮಸ್ ಆಗಿದ್ದಾನೆ. ಆದ್ರೆ, ಇಲ್ಲೊಬ್ಬ ಯುವಕನ ಸಾಧನೆ ಮಾತ್ರ ತುಂಬ ಡಿಫರಂಟ್. ಸೀದಾ ಮರ ಏರೋದು ತುಂಬಾ ಕಷ್ಟ. ಅದು 40-50 ಅಡಿ ಎತ್ತರದ ತೆಂಗಿನ ಮರ ಏರೋದು ಅಂದ್ರೆ ಸುಮ್ಮನೆಯ ಮಾತಾ!? ಇಷ್ಟೊಂದು ಎತ್ತರದ ತೆಂಗಿನ ಮರಗಳನ್ನು ಈ ಯುವಕ ಕ್ಷಣಾರ್ಧದಲ್ಲಿ ತಲೆ ಕೆಳಗೆ ಮಾಡಿ ಸರಸರನೇ ಏರ್ತಾನೆ.

ಹೌದು ಅಂಜದ ಗಂಡು ಸಾಧನೆ ಮಾಡಿದ್ದು, ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ. ಹೌದು ಶಿರಹಟ್ಟಿ ಪಟ್ಟಣದ 22 ವರ್ಷದ ಯುವಕ ಈಶ್ವರ (Ishwar Jidagannavar) ಎಂಬಾತನೇ ವಿಶೇಷ ಸಾಧನೆ ಮಾಡಿದ ಯುವಕ. ಈತ ತೆಂಗಿನ ಮರ ಏರ್ತಾನೆ ಅಂದ್ರೆ ಸಾಕು ನೂರಾರು ಜನ್ರು ನಿಂತು ನೋಡ್ತಾರೆ. ಮರ ಏರೋದ್ರಲ್ಲೇನು ವಿಶೇಷ ಅಂತಾರೆ.

ಸೀದಾ ಮರ ಏರೋ ಸಾಮಾನ್ಯ. ಈ ಈಶ್ವರ ಉಲ್ಟಾ ಮರ ಹತ್ತುತ್ತಾನೆ. ಉಲ್ಟಾ ಮರ ಹತ್ತೋದ್ರಲ್ಲಿ ಈತ ಫುಲ್ ಫೇಮಸ್ ಆಗಿದ್ದಾನೆ. ತಮ್ಮ ತೋಟದಲ್ಲಿ ತೆಂಗಿನ ಮರದಲ್ಲಿ ಸುಮಾರು ಎರಡು ವರ್ಷಗಳ ಪರಿಶ್ರಮ ದಿಂದ ಉಲ್ಟಾ ತೆಂಗಿನ ಮರ ಏರಲು ಕಲಿತಿದ್ದಾನೆ. ಸಿದಾ ತೆಂಗಿನ ಮರ ಏರಲು ಜನ್ರು ಹಿಂದೇಟು ಹಾಕ್ತಾರೆ. ಆದ್ರೆ ಈಶ್ವರ ಮಾತ್ರ ಕ್ಷಣಾರ್ಧದಲ್ಲಿ ತಲೆ ಕೆಳಗೆ ಮಾಡಿ ತೆಂಗಿನ ಮರ ಹತ್ತಿ ಬಿಡುತ್ತಾನೆ.

Also Read: ಬಂಗಾರಪೇಟೆಯಲ್ಲಿ ಮಹಾಶಿವರಾತ್ರಿಗೆ ನಾನ್​ ವೆಜ್​ ಪೂಜೆ! ಮೇಕೆ, ಕೋಳಿಯ ಕತ್ತನ್ನು ಕಚ್ಚಿ ಬಿಸಿ ರಕ್ತ ಸೇವಿಸುವ ತಮಿಳು ಸಂಸ್ಕೃತಿ

ಈಶ್ವರನ ಸಾಹಸಮಯ ಕೆಲಸ ನೋಡಿ ಜನ್ರು ಅಚ್ಚರಿಗೊಂಡಿದ್ದಾರೆ. ಈತ ತಲೆ ಕೆಳಗೆ ಮಾಡಿ ಮರ ಏರ್ತಾಯಿದ್ರೆ ಜನ್ರ ಎದೆಯಲ್ಲಿ ಢವಢವ ಶುರುವಾಗುತ್ತೆ. ಅಷ್ಟೊಂದ ಜೀವ ರಿಸ್ಕ್ ದಿಂದ ಮರ ಹತ್ತುವ ಸಾಧನೆ ಮಾಡಿದ್ದಾನೆ. ಒಂದು ದಿನ ಆತನ ತೋಟದಲ್ಲಿ ಮಂಗವೊಂದು ಉಲ್ಟಾ ಮರ ಇಳಿಯೋದನ್ನು ನೋಡಿದ್ದಾನೆ. ಅಷ್ಟೇ ನಾನೂ ಯಾಕೆ ತಲೆ ಕೆಳಗೆ ಮಾಡಿ ಮರ ಹತ್ತಬಾರದು ಅಂತ ತಲೆಯಲ್ಲಿ ಅಲೋಚನೆ ಬಂದಿದೆ ಅಷ್ಟೇ.

ತಮ್ಮದೇ ತೋಟದಲ್ಲಿ ತಲೆ ಕೆಳಗೆ ಮಾಡಿ ಮರ ಏರಲು ಶುರು ಮಾಡಿ ಸಾಕಷ್ಟು ಶ್ರಮಪಟ್ಟು ಈ ಸಾಧನೆ ಮಾಡಿದ್ದಾನೆ. ಏರುವಾಗ ಸ್ವಲ್ಪ ಹೆಚ್ಚುಕಮ್ಮಿಯಾದ್ರೂ ಜೀವನಕ್ಕೆ ಅಪಾಯ ಗ್ಯಾರಂಟಿ. ಮನೆಯಲ್ಲಿ ತಂದೆ, ತಾಯಿಗೆ ಗೋತ್ತಿಲ್ಲದೇ ಈ ಸಾಹಸ ಮಾಡಿದ್ದಾನೆ. ಮನೆಯಲ್ಲಿ ತಂದೆ, ತಾಯಿಗೆ ಗೋತ್ತಾದ್ರೆ ಬೈತಾರೇ ಅಂತ ಮನೆಯಲ್ಲೂ ಯಾರಿಗೂ ಹೇಳಿಲ್ಲ. ಜನ್ರಿಂದ್ಲೇ ಮಗನ ಸಾಧನೆ ಬಗ್ಗೆ ತಂದೆ ತಿಳಿದುಕೊಂಡಿದ್ದಾರೆ. ಈಶ್ವರ ಈಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರುವ ಗುರಿಯನ್ನು ಹೊಂದಿದ್ದಾರೆ.

ಈಗಾಗಲೇ 40 ಅಡಿ ಎತ್ತರದ ತೆಂಗಿನ ಮರವನ್ನ ಉಲ್ಟಾ ಏರಿರುವ ಈಶ್ವರ. ನೂರು ಅಡಿಯವರಿಗೆ ಉಲ್ಟಾ ಏರಬೇಕೆಂಬ ಆಸೆಯಿದೆ ಈತನಿಗೆ. ಈ ಮೂಲಕ ಸಾಧನೆ ಮಾಡುವ ಛಲ ಹೊಂದಿದ್ದಾನೆ. ತೆಂಗಿನ ಮರ ಹತ್ತುವುದು ತುಂಬಾನೆ ಕಷ್ಟದ ಕೆಲಸ ಯಾಕೆಂದರೆ ತೆಂಗಿನ ಮರ ಏರಲು ಹೋದ್ರೆ ಕೈ ಕಾಲುಗಳು ಜಾರುತ್ತವೆ.. ಆದ್ರೆ ಇಂತಹ ಕಷ್ಟದ ಕೆಲಸವನ್ನ ಸರಳವಾಗಿ ತೆಂಗಿನ ಮರ ಏರುವ ಮೂಲಕ ಈಶ್ವರ ಈ ಭಾಗದಲ್ಲಿ ಭಾರಿ ಫೇಮಸ್ ಆಗಿದ್ದಾನೆ. ನಮ್ಮೂರು ಯುವಕನ ಸಾಧನೆ ನೋಡಿ ನಮಗೆ ತುಂಬ ಖುಷಿಯಾಗಿದೆ. ಈತ ದೊಡ್ಡ ಸಾಧನೆ ಮಾಡಿ ನಮ್ಮೂರು, ರಾಜ್ಯದ ಹೆಸರು ತರುವಂತಾಗಲೀ ಅಂತ ಹಾರೈಸಿದ್ದಾರೆ.

ಒಟ್ಟಿನಲ್ಲಿ ಡೆಂಜರ್ ಜೋನ್ ನಲ್ಲಿ ತೆಂಗಿನ ಮರ ಏರಿ ಸಾಹಸ ಕೆಲಸ ಮಾಡಿರುವ ಈಶ್ವರ ಕಾರ್ಯಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.‌ ಚಿತ್ರದುರ್ಗದ ಕೋಟೆ ಹತ್ತವು ಕೋತಿ ರಾಮನಂತೆ ನಮ್ಮ ಈಶ್ವರನು ಫೇಮಸ್ ಆಗಬೇಕು ಸಾಧನೆ ಮಾಡಬೇಕು ಅನ್ನೋದು ಎಲ್ಲರ ಆಶಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:27 am, Mon, 11 March 24

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಹೋಳಿ ಹಬ್ಬದಂದೇ ಹರಿಯಾಣದ ಬಿಜೆಪಿ ನಾಯಕನ ಹತ್ಯೆ; ಸಿಸಿಟಿವಿ ವಿಡಿಯೋ ವೈರಲ್
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ಅಮೃತಸರ ದೇವಾಲಯದ ಮೇಲಿನ ಗ್ರೆನೇಡ್ ದಾಳಿ ಸಿಸಿಟಿವಿಯಲ್ಲಿ ಸೆರೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಮಹಿಳೆ, ಮಗುವಿನ ಮೇಲೆ ಬೀದಿ ಹಸು ಅಟ್ಯಾಕ್; ವಿಡಿಯೋ ಇಲ್ಲಿದೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ