AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nandini Milk: ಇನ್ಮುಂದೆ ಹೊಸ ರೂಪದಲ್ಲಿ ಬರಲಿದೆ ನಂದಿನಿ ಹಾಲಿನ ಪ್ಯಾಕೆಟ್, ದೇಶದಲ್ಲೇ ಮೊದಲ ಪ್ರಯತ್ನ

ನಂದಿನಿ ಹಾಲು: ಪರಿಸರಕ್ಕೆ ಮಾರಕವಾಗಿದ್ದ ಪಾಲಿಥಿನ್‌ ಹಾಲಿನ ಪ್ಯಾಕೆಟ್‌ಗಳ ಬದಲಿಗೆ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್‌ (ಜೈವಿಕ ಅಂಶಗಳಾಗಿ ವಿಘಟನೆಯಾಗಬಲ್ಲ) ಹಾಲಿನ ಕವರ್‌ಗಳನ್ನು ಬಳಕೆ ಮಾಡಲು ಕೆಎಂಎಫ್​ ಹೆಜ್ಜೆ ಇಟ್ಟಿದ್ದು, ಇದು ದೇಶದಲ್ಲೇ ಮೊದಲು. ಬಮೂಲ್‌ (ಬೆಂಗಳೂರು ಹಾಲು ಒಕ್ಕೂಟ) ಈ ಪ್ರಯತ್ನ ಇತಿಹಾಸದಲ್ಲಿ ಮಾತ್ರವಲ್ಲದೆ ದೇಶದ ಹಾಲು ಉದ್ಯಮದಲ್ಲೇ ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ.

Nandini Milk: ಇನ್ಮುಂದೆ ಹೊಸ ರೂಪದಲ್ಲಿ ಬರಲಿದೆ ನಂದಿನಿ ಹಾಲಿನ ಪ್ಯಾಕೆಟ್, ದೇಶದಲ್ಲೇ ಮೊದಲ ಪ್ರಯತ್ನ
Nandini Milk
ರಮೇಶ್ ಬಿ. ಜವಳಗೇರಾ
|

Updated on:Jul 18, 2025 | 4:24 PM

Share

ಬೆಂಗಳೂರು, (ಜುಲೈ 18): ಕರ್ನಾಟಕದಲ್ಲಷ್ಟೇ ಅಲ್ಲದೇ ದೇಶ-ವಿದೇಶಗಳಲ್ಲೂ ಜನರ ಮೆಚ್ಚುಗೆ ಗಳಿಸಿರುವ ನಂದಿನಿ ಹಾಲಿಗೆ ( Nandini milk)ಇನ್ಮುಂದೆ ಹೊಸ ರೂಪ ನೀಡಲು ಕೆಎಂಎಫ್ (Karnataka Milk Federation (KMF) ಮುಂದಾಗಿದೆ. ಈಗ ಪಾಲಿಥಿನ್ ಕವರ್​​ ನಲ್ಲಿ ಪ್ಯಾಕ್ ಆಗಿ ಹೊರಬರುತ್ತಿರುವ ನಂದಿನಿ ಹಾಲಿಗೆ ಇದೀಗ ಪರಿಸರ ಸ್ನೇಹಿ ಟಚ್ ಕೊಡಲು ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ಮುಂದಾಗಿದೆ. ಹೌದು….ಇನ್ಮುಂದೆ ಪಾಲಿಥಿನ್ ಪ್ಯಾಕೆಟ್​​ ಗಳ ಬದಲಾಗಿ ಜೈವಿಕ ಅಂಶಗಳಾಗಿ ವಿಘಟನೆಯಾಗಬಲ್ಲ (ಮಣ್ಣಿನಲ್ಲಿ ಬೇಗ ಕೊಳೆಯುವ ಪ್ಯಾಕೆಟ್) ಪ್ಯಾಕೆಟ್​​ ನಲ್ಲಿ ನಂದಿನಿ ಹಾಲು ಬರಲಿದೆ. ಪ್ರಯೋಗಿಕವಾಗಿ ಇದೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮಾತ್ರ ಹೊಸ ರೂಪದೊಂದಿಗೆ ನಂದಿನಿ ಹಾಲಿನ ಪ್ಯಾಕೆಟ್ ಬಿಡುಗಡೆಯಾಗಲಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ ಎಂಬ ಭೂತಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಪ್ಲಾಸ್ಟಿಕ್‌ ನಿಷೇಧ ಮಾಡಿದ್ದರೂ ಸಹ ಹಾಲು ಪೂರೈಕೆಯಲ್ಲಿ ಬಳಸಲಾಗುವ ಪಾಲಿಥಿನ್‌ ಕವರ್‌ಗಳನ್ನು ನಿಷೇಧ ಮಾಡಿರಲಿಲ್ಲ. ಕಾರಣ ಪ್ರತಿದಿನ ಮುಂಜಾನೆ ಪ್ರತಿ ಮನೆಗೆ ನಂದಿನಿ ಹಾಲನ್ನು ಪೂರೈಕೆ ಮಾಡಲು ಪಾಲಿಥಿನ್‌ ಪ್ಯಾಕೆಟ್‌ ಬದಲಿಗೆ ಪರ್ಯಾಯ ವಸ್ತು ಇರಲಿಲ್ಲ. ಇದೀಗ ಪರಿಸರ ಸ್ನೇಹಿ ಬಯೋಡಿಗ್ರೇಡಬಲ್‌ (ಜೈವಿಕ ಅಂಶಗಳಾಗಿ ವಿಘಟನೆಯಾಗಬಲ್ಲ) ಪ್ಯಾಕೆಟ್​ ದೊರೆತ್ತಿದ್ದು, ಇದರಲ್ಲೇ ಹಾಲು ತುಂಬಿ ಮಾರಾಟ ಮಾಡಲು ಕೆಎಂಎಫ್​ ಮುಂದಾಗಿದೆ. ಮೆಕ್ಕೆಜೋಳ ಹಾಗೂ ಕಬ್ಬಿನಿಂದ ಈ ಪ್ಯಾಕೇಟ್​ಗಳು ತಯಾರಾಗುವುದರಿಂದ ಕೇವಲ 90 ದಿನಗಳಲ್ಲೇ ಮಣ್ಣಿನಲ್ಲಿ ಕರಗುತ್ತವೆ.

ಇದನ್ನೂ ಓದಿ: ನಂದಿನಿ ಹಾಲಿಗೆ ಪರಿಸರಸ್ನೇಹಿ ಪ್ಯಾಕಿಂಗ್: ಇನ್ನು ಮೆಕ್ಕೆಜೋಳದಲ್ಲಿ ತಯಾರಾಗಲಿದೆ ಹಾಲಿನ ಪ್ಯಾಕೆಟ್!

ಪ್ರಸ್ತುತ ಹಾಲಿನ ಪ್ಯಾಕೆಟ್‌ಗೆ ಬಳಸುವ ಪಾಲಿಥಿನ್‌ ಕವರ್‌ ಮಣ್ಣಲ್ಲಿ ಕರಗಲು ಹಲವು ದಿನಗಳೇ ಬೇಕು. ಒಂದು ದಿನಕ್ಕೆ ಲಕ್ಷಾಂತರ ಕವರ್‌ಗಳನ್ನು ಬಳಸುವ ನಾವು ತಿಂಗಳು, ವರ್ಷಗಳನ್ನು ಲೆಕ್ಕ ಹಾಕದರೆ ಅಂಕಿಸಂಖ್ಯೆಗಳ ಪ್ರಮಾಣವನ್ನು ಊಹಿಸುವುದು, ಅದರಿಂದ ಪರಿಸದರ ಮೇಲಾಗುವ ದುಷ್ಪರಿಣಾಮಗಳನ್ನು ಯೋಚಿಸಿವುದು ಸಹ ಕಷ್ಟಸಾಧ್ಯ. ಇದೆಲ್ಲವನ್ನು ಮನಗಂಡು ಬಮೂಲ್‌ ಇದಕ್ಕೆ ಪರಿಹಾರ ಕಾಣಬೇಕೆಂಬ ಉದ್ದೇಶದಲ್ಲಿ ಕನಕಪುರದ ಶಿವನಹಳ್ಳಿ ಬಳಿ ಸ್ಥಾಪಿಸಿರುವ ಮೆಗಾಡೇರಿ ಪ್ಲಾಂಟ್‌ನಲ್ಲಿ ಹೊಸದಾಗಿ ಡಿ ಕಂಪೋಸಬಲ್‌ ಕವರ್‌ಗಳನ್ನು ಬಳಕೆ ಮಾಡಲು ಮುಂದಾಗಿದೆ. ಈ ಕವರ್‌ಗಳು ಪರಿಸರ ಸ್ನೇಹಿಯಾಗಿದ್ದು, ಹಾಲಿನ ಬಳಕೆ ಬಳಿಕ ಬೇಗನೇ ಮಣ್ಣಲ್ಲಿ ಕರಗುತ್ತೆ ಎನ್ನಲಾಗಿದೆ.

ಏನಿದು ಬಯೋ ಡಿ ಕಾಂಪೋಸಬಲ್‌ ?

ವಿದೇಶಿ ತಂತ್ರಜ್ಞಾನದಲ್ಲಿ ತಯಾರಾಗಿರುವ ಬಯೋ ಡಿ ಕಂಪೋಸಬಲ್‌ ಕವರ್‌ಗಳನ್ನು ಜೋಳದಿಂದ ತಯಾರು ಮಾಡಲಾಗುತ್ತದೆ. ಇವು ಇತರೆ ಸಾವಯವ ವಸ್ತುಗಳಂತೆ ವಾತಾವರಣದಲ್ಲಿ ಬಹುಬೇಗ ವಿಘಟನೆ ಹೊಂದುತ್ತವೆ. ಪ್ರಸ್ತುತ ಬಳಕೆ ಮಾಡುತ್ತಿರುವ ಪಾಲಿಥಿನ್‌ ಮಣ್ಣಲ್ಲಿ ಕರಗಲು ವರ್ಷಗಳೇ  ಬೇಕು. ಆದರೆ ಬಮೂಲ್‌ ಬಳಕೆ ಮಾಡಲು ಮುಂದಾಗಿರುವ ಬಯೋ ಡಿ ಕಾಂಪೋಸಬಲ್‌ ಕೇವಲ ಐದಾರು ತಿಂಗಳಲ್ಲೇ ಮಣ್ಣಲ್ಲಿ ಕರಗಲಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿಯಾಗಿ ಹೊರಬರಲಿದೆ.

ದೇಶದಲ್ಲೇ ಇದು ಮೊದಲ ಪ್ರಯತ್ನ

ದೇಶದ ಹಾಲು ಉದ್ಯಮದಲ್ಲಿ ಪ್ರಭುತ್ವ ಸ್ಥಾಪಿಸಿರುವ ಅಮೂಲ್‌ನಿಂದಲೂ ಸಾಧ್ಯವಾಗದ ಕೆಲಸವನ್ನು ಬಮೂಲ್‌ ಮಾಡುತ್ತಿದ್ದು, ದೇಶದಲ್ಲೆ ಮೊದಲ ಪ್ರಯತ್ನ ಇದಾಗಿದೆ. ಪರಿಸರ ದಿನಾಚರಣೆಯಂದು ಬಮೂಲ್‌ ನಿರ್ದೇಶಕ ಡಿ.ಕೆ.ಸುರೇಶ್‌ ಬಯೋ ಡಿ ಕಾಂಪೋಸಬಲ್‌ ಕವರ್‌ಗಳಲ್ಲಿ ಹಾಲು ಪ್ಯಾಕ್‌ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದು ಕೇವಲ ಪ್ರಾಯೋಗಿಕವಾಗಿದ್ದು ಪ್ರಾರಂಭದಲ್ಲಿ 2 ಲಕ್ಷ ಬಯೋ ಡಿ ಕಾಂಪೋಸಬಲ್‌ ಕವರ್‌ಗಳನ್ನು ಬಳಕೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟ ವ್ಯಾಪ್ತಿಯ ಎಲ್ಲಾ ಕಡೆಯೂ ಇದನ್ನು ಬಳಕೆ ಮಾಡುವ ನಿರ್ಧಾರ ಮಾಡಲಾಗಿದೆ.

ಪರಿಸರ ಸ್ನೇಹಿ ಬಯೋ ಡಿ ಕಾಂಪೋಸಬಲ್‌ ಕವರ್‌ಗಳ ಬೆಲೆ ಪಾಲಿಥಿನ್‌ ಕವರ್‌ಗಳ ಬೆಲೆಗಿಂತ ಜಾಸ್ತಿಯಿದ್ದು, ಇವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿದೆ. ಪಾಲಿಥಿನ್‌ ಕವರ್‌ ದರ ಕಡಿಮೆ ಇದ್ದರೂ ಪರಿಸರದ ಮೇಲೆ ಅದು ಉಂಟು ಮಾಡುತ್ತಿರುವ ದುಷ್ಪರಿಣಾಮವನ್ನು ಯೋಚಿಸಿದಾಗ ದರ ಜಾಸ್ತಿಯಾದರೂ ಸರಿ ಇವುಗಳನ್ನೇ ಬಳಕೆ ಮಾಡಬೇಕೆಂದು ತೀರ್ಮಾನಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Fri, 18 July 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ