AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ವೆಸ್ಟ್ ಕರ್ನಾಟಕದಲ್ಲಿ 10 ಲಕ್ಷ ಕೋಟಿ ರೂ. ಬಂಡವಾಳದ ಹೊಳೆ, ಯಾವ ವಲಯಕ್ಕೆ ಎಷ್ಟು?

Invest Karnataka 2025: ಮೂರು‌ ದಿನಗಳಿಂದ ನಡೆಯುತ್ತಿದ್ದ ಇನ್ವೆಸ್ಟ್ ಕರ್ನಾಟಕ- 2025 ಸಮಾವೇಶಕ್ಕೆ ಅದ್ದೂರಿ ತೆರೆ ಬಿದ್ದಿದೆ.‌ ಹೆಚ್ಚು ಬಂಡವಾಳ ಹೂಡಿಕೆ ನಿರೀಕ್ಷೆಯಲ್ಲಿದ್ದ ಕರ್ನಾಟಕ ಸರ್ಕಾರಕ್ಕೆ ಈ ಸಮಾವೇಶ ವರದಾನವಾಗಿದೆ. ವಸ್ತು ಪ್ರದರ್ಶನದಲ್ಲಿನ ತಂತ್ರಜ್ಞಾನ, ಒಂಡಬಡಿಕೆ, ಗೋಷ್ಠಿ, ಸಂವಾದ ಕಾರ್ಯಕ್ರಮಗಳೂ ಕಳೆದ ಬಾರಿಯ ಇನ್ವೆಸ್ಟ್ ಕರ್ನಾಟಕದ ರೆಕಾರ್ಡ್ ಬ್ರೇಕ್ ಮಾಡಿದೆ. 3 ದಿನದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬರೋಬ್ಬರಿ 10 ಲಕ್ಷ ಕೋಟಿ ರೂ. ಬಂಡವಾಳ ಹೊಳೆ ಹರಿದುಬಂದಿದೆ. ಹಾಗಾದ್ರೆ, ಯಾವ ವಲಯಕ್ಕೆ ಎಷ್ಟು? ಎನ್ನುವ ವಿವರ ಇಲ್ಲಿದೆ.

ಇನ್ವೆಸ್ಟ್ ಕರ್ನಾಟಕದಲ್ಲಿ 10 ಲಕ್ಷ ಕೋಟಿ ರೂ. ಬಂಡವಾಳದ ಹೊಳೆ, ಯಾವ ವಲಯಕ್ಕೆ ಎಷ್ಟು?
Invest Karnataka 2025
Follow us
Anil Kalkere
| Updated By: ರಮೇಶ್ ಬಿ. ಜವಳಗೇರಾ

Updated on: Feb 14, 2025 | 9:17 PM

ಬೆಂಗಳೂರು, (ಫೆಬ್ರವರಿ 14): ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಇನ್ವೆಸ್ಟ್ ಕರ್ನಾಟಕ ಸಮ್ಮಿಟ್​ಗೆ ಇಂದು (ಫೆಬ್ರವರಿ 14) ಅದ್ಧೂರಿ ತೆರೆ ಬಿದ್ದಿದೆ. ಸಿಲಿಕಾನ್ ಸಿಟಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ಇಡೀ ವಿಶ್ವದ ಗಮನ ಸೆಳೆದಿದೆ. ಕಳೆದ 3 ದಿನಗಳಲ್ಲಿ ಕರ್ನಾಟಕಕ್ಕೆ 10.27 ಲಕ್ಷ ಕೋಟಿ ಬಂಡವಾಳ ಹರಿದು ಬಂದಿದೆ. 6 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ ಮೂಡಿಸಿದೆ. ಸಮ್ಮಿಟ್​ನಲ್ಲಿ 19 ದೇಶಗಳು ಭಾಗಿಯಾಗಿದ್ವು. ಸಂವಾದ, ಗೋಷ್ಠಿಗಳು ಇನ್ವೆಸ್ಟ್ ಕರ್ನಾಟಕಕ್ಕೆ ಸಾಕ್ಷಿಯಾದ್ದವು. ಎಂದಿನಂತೆ ಈ ಬಾರಿಯೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಯಾಗಿದೆ. ಇನ್ನು ನವೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದೆ. ಜಾಗತಿಕ ಹೂಡಿಕೆದಾರರ ಚಿತ್ತ ಬೆಂಗಳೂರಿನತ್ತ ಇದ್ದರೂ ಸಹ ಉತ್ತರ ಕರ್ನಾಟಕ ಭಾಗಕ್ಕೆ 45% ಬಂಡವಾಳ ಹರಿದು ಹೋಗಿದೆ. ಹಾಗಾದ್ರೆ ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಹಣದ ಹೊಳೆ ಹರಿದು ಬಂದಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ವಲಯ 1

  •  ಉತ್ಪಾದನಾ ಮತ್ತು ಉದಯೋನ್ಮುಖ ಕ್ಷೇತ್ರ ( ಆಟೋ-ಇವಿ, ಆರ್‌ ಆಂಡ್ ಡಿ)
  •  ಹೂಡಿಕೆ ಘೋಷಣೆ – 75,274 ಕೋಟಿ ರೂ.
  •  ಒಪ್ಪಂದಕ್ಕೆ ಸಹಿ – 63,719 ಕೋಟಿ ರೂ.
  •  ಒಟ್ಟು ಹೂಡಿಕೆ – 1,38,993 ಕೋಟಿ ರೂ.
  •  ಪ್ರಮಾಣ- 14%

ವಲಯ 2

  •  ಸಾಮಾನ್ಯ ಉತ್ಪಾದನಾ ವಲಯ ( ಕೃಷಿ ಮತ್ತು ಆಹಾರ ಉತ್ಪನ್ನ, ಟೆಕ್ಸ್ಟೈಲ್, ಫಾರ್ಮಾ, ಯಂತ್ರೋಪಕರಣದ ಬಿಡಿಭಾಗ)
  •  ಹೂಡಿಕೆ ಘೋಷಣೆ – 52,400 ರೂ.
  •  ಒಪ್ಪಂದಕ್ಕೆ ಸಹಿ – 52,619 ರೂ.
  •  ಒಟ್ಟು ಹೂಡಿಕೆ – 1,05,019 ರೂ.
  •  ಪ್ರಮಾಣ- 10%

ವಲಯ 3

  • ಪ್ರಮುಖ ಉತ್ಪಾದನಾ ಕ್ಷೇತ್ರ ( ಸ್ಟೀಲ್, ಸಿಮೆಂಟ್)
  •  ಹೂಡಿಕೆ ಘೋಷಣೆ- 16, 143
  • ಕೋಟಿ ರೂ.
  •  ಒಪ್ಪಂದಕ್ಕೆ ಸಹಿ – 1,43,700 ಕೋಟಿ ರೂ.
  •  ಒಟ್ಟು – 1,59,843 ಕೋಟಿ ರೂ.
  •  ಪ್ರಮಾಣ – 15%

ವಲಯ 4

  •  ನವೀಕರಿಸಬಹುದಾದ ಇಂಧನ ಕ್ಷೇತ್ರ
  •  ಹೂಡಿಕೆ ಘೋಷಣೆ – 81,356 ಕೋಟಿ ರೂ.
  • ಒಪ್ಪಂದಕ್ಕೆ ಸಹಿ- 3,44,425 ಕೋಟಿ ರೂ.
  • ಒಟ್ಟು – 4,25,781 ಕೋಟಿ ರೂ.
  • ಪ್ರಮಾಣ- 41%

ವಲಯ 5

  • ಮೂಲಸೌಕರ್ಯ ಹಾಗೂ ಕೈಗಾರಿಕಾ ಲಾಜೆಸ್ಟಿಕ್ ( ನಗರ ಗ್ಯಾಸ್ ಸರಬರಾಜು, ಟೆಲಿಕಾಂ, ಏರ್ ಪೋರ್ಟ್, ಡೇಟಾ ಸೆಂಟರ್)
  •  ಹೂಡಿಕೆ ಘೋಷಣೆ – 88,492 ಕೋಟಿ ರೂ.
  •  ಒಪ್ಪಂದಕ್ಕೆ ಸಹಿ – 19,382 ಕೋಟಿ ರೂ.
  •  ಒಟ್ಟು – 1,07,874 ಕೋಟಿ ರೂ.
  •  ಪ್ರಮಾಣ – 11%

ವಲಯ 6

  • ಸ್ಟಾಟಪ್ ಬಂಡವಾಳ
  •  ಹೂಡಿಕೆ ಘೋಷಣೆ- 89,868 ಕೋಟಿ ರೂ.
  •  ಒಟ್ಟು – 89,868 ಕೋಟಿ ರೂ.
  •  ಪ್ರಮಾಣ – 9%

ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು?

ಬಂಡವಾಳ ಹೂಡಿಕೆದಾರರ ಸಮಾವೇಶ ಮುಕ್ತಾಯವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ಕೈಗಾರಿಕಾ ಸಚಿವ ಎಂಬಿಪಾಟೀಲ್, ಬಂಡವಾಳ ಹೂಡಿಕೆದಾರರ ಸಮಾವೇಶ ಮುಕ್ತಾಯವಾಗಿದ್ದು, 10,27,378 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ 10 ಲಕ್ಷ ಕೋಟಿ ರೂ. ಹೂಡಿಕೆಯಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಉತ್ತರ ಕರ್ನಾಟಕ ಭಾಗಕ್ಕೆ 45% ಹೂಡಿಕೆಯಾಗಿದೆ. ಸ್ಕ್ರೀನಿಂಗ್ ಮಾಡಿ ಒಡಂಬಡಿಕೆ ಆಗಿದೆ. JWS ಗ್ರೂಪ್ 25 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ. ಹಾಗೇ ವೋಲ್ವೋ ಕಂಪನಿ 1,400 ಕೋಟಿ ರೂ. ಹೂಡಿಕೆ ಮಾಡಿದೆ. ದೇಶಕ್ಕೆ ಮಾತ್ರವಲ್ಲ, ವಿದೇಶಕ್ಕೂ ವೋಲ್ವೊ ರಫ್ತು ಮಾಡಲಿದೆ. ಹೋಂಡಾ ಕಂಪನಿ 600 ಕೋಟಿ ರೂ. ಹೂಡಿಕೆ ಮಾಡಿದೆ. ಶ್ರೀ ಸಿಮೆಂಟ್ ಗ್ರೂಪ್ 2,500 ಕೋಟಿ ಹೂಡಿಕೆ ಮಾಡಿದೆ. ವಿಭಿನ್ನ ಮತ್ತು ಅರ್ಥಪೂರ್ಣವಾದ ಕಾರ್ಯಕ್ರಮ ಇದಾಗಿದೆ ಎಂದರು.

ಡಿಕೆ ಶಿವಕುಮಾರ್ ಹೇಳಿದ್ದಿಷ್ಟು

ಕರ್ನಾಟಕ ರಾಜ್ಯದ ಇತಿಹಾಸ ದೇಶಕ್ಕೆ ಒಂದು ಮಾದರಿಯಾಗಿದೆ. 2000ನೇ ಇಸ್ವಿಯಲ್ಲಿ ​ವಿಧಾನಸೌಧದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿತ್ತು. ಕೆಲವು ಸಮಾವೇಶ ಸಕ್ಸಸ್ ಮತ್ತೆ ಕೆಲವು ಫೇಲ್ಯೂಯರ್ ಆಗಿವೆ. ಇಡೀ ವಿಶ್ವದ ಹೂಡಿಕೆದಾರರ ಕಂಪನಿಗಳು ಇಲ್ಲಿ ಭಾಗಿಯಾಗಿದ್ದರು. ಇಲ್ಲಿನ‌ ಪರಿಸರ, ಪ್ರತಿಭೆ, ಶಿಕ್ಷಣ‌ ದೇಶದಲ್ಲಿ ಯಾವ ರಾಜ್ಯದಲ್ಲೂ ಇಲ್ಲ. 10 ಲಕ್ಷ ಕೋಟಿ ರೂ. ಹೂಡಿಕೆ ಆಗಿದೆ, 6.3 MOVಗೆ ಸಹಿ ಮಾಡಿದ್ದಾರೆ. ಹೊಸ ಕೈಗಾರಿಕಾ ನೀತಿ ತಂದಿದ್ದೇವೆ. ಬೆಂಗಳೂರಿನಲ್ಲಿ 1.4 ಕೋಟಿ ಜನಸಂಖ್ಯೆ‌ ಇದೆ, 1.10 ಲಕ್ಷ ವಾಹನಗಳಿವೆ. ಬ್ರ್ಯಾಂಡ್ ಬೆಂಗಳೂರು ತೆಗೆದುಕೊಂಡು ಹೋಗುವ ಕಲ್ಪನೆ ಇದೆ. ನಮ್ಮ‌ ರಾಜ್ಯದಲ್ಲಿ ಭೂಮಿಗೆ ಬೆಲೆ ಜಾಸ್ತಿ ಇದೆ. ನಂಜುಂಡಪ್ಪ ವರದಿ ಆಧಾರದ ಮೇಲೆ ಅವಕಾಶ ಒದಗಿಸುತ್ತಿದ್ದೇವೆ ಎಂದು ತಿಳಿಸಿದರು.

ಒಟ್ಟಾರೆ, ಈ ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಈ ಬಾರೀ ನಿರೀಕ್ಷೆಗೂ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ.

ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ