AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Weather Report: ಕಳೆದ 24 ಗಂಟೆಯಲ್ಲಿ ಹೊನ್ನೆತಾಳು, ಬಿರುನಾನಿಯಲ್ಲಿ ದಾಖಲೆ ಬರೆದ ಮಳೆ

ಕರ್ನಾಟಕ ಮಳೆ, ಹವಾಮಾನ ವರದಿ: ಕರ್ನಾಟಕದ ಮಲೆನಾಡು ಹಾಗೂ ಕರಾವಳಿಯಲ್ಲಿ ಮುಂಗಾರು ಮಳೆ ಆರ್ಭಟಿಸಿದ್ದು, ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗದ ಹೊನ್ನೆತಾಳು ಹಾಗೂ ಕೊಡಗಿನ ಬಿರುನಾನಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ತಲಾ 178.5 ಮಿ.ಮೀ ಮಳೆ ದಾಖಲಾಗಿದೆ. ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸೋವಿನಕೊಪ್ಪದಲ್ಲಿ 177 ಮಿ.ಮೀ, ಚಿಕ್ಕಮಗಳೂರಿನ ಮೂಡಿಗೆರೆಯ ಬೆಟ್ಟಗೆರೆಯಲ್ಲಿ 160.5 ಮಿ.ಮೀ ವರ್ಷಧಾರೆಯಾಗಿದೆ.

Karnataka Weather Report: ಕಳೆದ 24 ಗಂಟೆಯಲ್ಲಿ ಹೊನ್ನೆತಾಳು, ಬಿರುನಾನಿಯಲ್ಲಿ ದಾಖಲೆ ಬರೆದ ಮಳೆ
ಮಳೆImage Credit source: Tv9 Kannada
ಪ್ರಸನ್ನ ಹೆಗಡೆ
| Edited By: |

Updated on:Jul 07, 2026 | 3:53 PM

Share

ಮುಖ್ಯಾಂಶಗಳು

  • ಮಲೆನಾಡು, ಕರಾವಳಿ ಭಾಗದಲ್ಲಿ ಭಾರಿ ವರುಣಾರ್ಭಟ
  • ಹೊನ್ನೆತಾಳು, ಬಿರುನಾನಿಯಲ್ಲಿ 178.5 ಮಿ.ಮೀ. ಮಳೆ
  • ಸಿದ್ದಾಪುರದ ಸೋವಿನಕೊಪ್ಪದಲ್ಲಿ 177 ಮಿ.ಮೀ. ವರ್ಷಧಾರೆ

ಬೆಂಗಳೂರು, ಜುಲೈ 07: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹೀಗಾಗಿ ಈ ಭಾಗದಲ್ಲಿನ ನದಿ ಮತ್ತು ಜಲಪಾತಗಳಿಗೆ ಜೀವಕಳೆ ಮರಳಿ ಬಂದಿದ್ದು, ಗಾಳಿ ಮಳೆ ಹಲವೆಡೆ ಸಾಲು ಸಾಲು ಅನಾಹುತಗಳನ್ನೂ ಸೃಷ್ಟಿಸಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಸುರಿದ ವರ್ಷಧಾರೆಯ ಮಾಹಿತಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದೆ. ಆ ಪ್ರಕಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಮತ್ತು ಕೊಡಗಿನ ವಿರಾಜಪೇಟೆಯ ಬಿರುನಾನಿಯಲ್ಲಿ ಅತಿ ಹೆಚ್ಚು, ಅಂದರೆ ತಲಾ 178.5 ಮಿ.ಮೀ. ಮಳೆಯಾಗಿದೆ.

ಜುಲೈ 7, 2026 ರಂದು ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲಾವಾರು ಗರಿಷ್ಠ ಮಳೆಯ ವಿವರ ಹೀಗಿದೆ

ಉಳಿದಂತೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸೋವಿನಕೊಪ್ಪದಲ್ಲಿ 177 ಮಿ.ಮೀ, ಬೆಳಗಾವಿಯ ಖಾನಾಪುರದಲ್ಲಿ 141 ಮಿ.ಮೀ, ದಕ್ಷಿಣ ಕನ್ನಡದ ಬೆಳ್ತಂಗಡಿಯ ಮಲವಂತಿಗೆಯಲ್ಲಿ 130 ಮಿ.ಮೀ, ಉಡುಪಿಯ ಕುಂದಾಪುದ ಮಡಾಮಕ್ಕಿಯಲ್ಲಿ 102.5 ಮಿ.ಮೀ, ಧಾರವಾಡದ ಅಳ್ತಾವರ 1ರಲ್ಲಿ 38 ಮಿ.ಮೀ, ಹಾವೇರಿಯ ಹಾನಗಲ್​​ನ ಬೈಚವಳ್ಳಿಯಲ್ಲಿ 37 ಮಿ.ಮೀ, ಚಿಕ್ಕಮಗಳೂರಿನ ಮೂಡಿಗೆರೆಯ ಬೆಟ್ಟಗೆರೆಯಲ್ಲಿ 160.5 ಮಿ.ಮೀ, ಹಾಸನದ ಸಕಲೇಶಪುರದ ಕ್ಯಾಮನಹಳ್ಳಿಯಲ್ಲಿ 139 ಮಿ.ಮೀ, ದಾವಣಗೆರೆಯ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ 23 ಮಿ.ಮೀ ಮಳೆಯಾಗಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ವರುಣಾರ್ಭಟ! ಉಡುಪಿ, ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್​, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಹಾಗೆಯೇ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪುಣಬಘಟ್ಟದಲ್ಲಿ 22 ಮಿ.ಮೀ, ಗದಗದ ನರಗುಂದ ತಾಲೂಕಿನ ರಡ್ಡೆರ​​ನಾಗನೂರಿನಲ್ಲಿ 12.5 ಮಿ.ಮೀ, ಕೊಪ್ಪಳದ ಕಿನ್ನಾಳದಲ್ಲಿ 24 ಮಿ.ಮೀ, ಚಾಮರಾಜನಗರದ ಉಮ್ಮತ್ತೂರಲ್ಲಿ 15.5 ಮಿ.ಮೀ, ಬಳ್ಳಾರಿಯ ಸಂಡೂರಿನಲ್ಲಿ 13 ಮಿ.ಮೀ, ವಿಜಯಪುರದ ಚಡಚಣದ ಬರಡೊಲದಲ್ಲಿ 13 ಮಿ.ಮೀ. ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:47 pm, Tue, 7 July 26

Follow Us