AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಮಂದಿರಕ್ಕೆ ಸಾವಿರ ವರ್ಷ ಆಯಸ್ಸು, ಮಂದಿರ ನಿರ್ಮಾಣದ ಕಲ್ಲು ಪರೀಕ್ಷಿಸಿದ್ದು ಕೋಲಾರದ ವಿಜ್ಞಾನಿಗಳು

ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿರುವ NIRMನ ಹಿರಿಯ ವಿಜ್ಞಾನಿ, ಪ್ರಿನ್ಸಿಪಲ್ ಸೈಂಟಿಸ್ಟ್ ಡಾ.ರಾಜನ್ ಬಾಬು ಅವರು ರಾಮ ಮಂದಿರ ನಿರ್ಮಾಣದ ಪ್ರತಿ ಹಂತದಲ್ಲೂ ಭಾಗಿಯಾಗಿದ್ದಾರೆ. ದೇವಾಲಯದ ಅಡಿಗಲ್ಲಿನಿಂದ ಹಿಡಿದು ದೇವಾಲಯದ ವಿನ್ಯಾಸಕ್ಕೆ ಬಳಸಲಾಗಿರುವ ಕಲ್ಲು, ನೆಲಹಾಸಿಗೆ ಬಳಸಲಾಗಿರುವ ಕಲ್ಲು, ಅಷ್ಟೇ ಯಾಕೆ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಲಾಗಿರುವ ಕಲ್ಲನ್ನು ಸಹ ಇವರೇ ಪರೀಕ್ಷಿಸಿ ಅಂತಿಮಗೊಳಿಸಿದ್ದು.

ರಾಮ ಮಂದಿರಕ್ಕೆ ಸಾವಿರ ವರ್ಷ ಆಯಸ್ಸು, ಮಂದಿರ ನಿರ್ಮಾಣದ ಕಲ್ಲು ಪರೀಕ್ಷಿಸಿದ್ದು ಕೋಲಾರದ ವಿಜ್ಞಾನಿಗಳು
ಡಾ.ರಾಜನ್ ಬಾಬು
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Jan 21, 2024 | 8:22 AM

Share

ಕೋಲಾರ, ಜ.21: ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿಯಾದರೆ ರಾಮಲಲ್ಲಾನ ವಿಗ್ರಹ ಕೆತ್ತನೆಗೆ ಯಾವ ಕಲ್ಲನ್ನು ಬಳಸಬೇಕು, ಯಾವ ಗುಣಮಟ್ಟದ ಕಲ್ಲನ್ನು ಬಳಸಬೇಕು, ಮಂದಿರವನ್ನು (Ayodhya Ram Mandir) ಹೇಗೆ ನಿರ್ಮಾಣ ಮಾಡಬೇಕು ಅನ್ನೋದನ್ನು ಅಂತಿಮಗೊಳಿಸಿದ್ದು ಚಿನ್ನದ ನಾಡು ಕೋಲಾರದ NIRMನ ವಿಜ್ಞಾನಿಗಳು. ಈ ಮೂಲಕ ದೇಶದ ಹೆಮ್ಮೆಯ ಪ್ರತೀಕವಾಗಿರುವ ರಾಮಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರ (Kolar) ಬಹುದೊಡ್ಡ ಕೊಡುಗೆಯನ್ನೇ ನೀಡಿದೆ.

ಸದ್ಯ ಈಗಂತೂ ದೇಶದಾದ್ಯಂತ ಎಲ್ಲಿ ನೋಡಿದ್ರು ಈಗ ಅಯೋಧ್ಯೆ ಶ್ರೀರಾಮನದ್ದೇ ಸುದ್ದಿ. ಈನಿಟ್ಟಿನಲ್ಲಿ ಆಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರ ಬಹುಮುಖ್ಯ ಪಾತ್ರ ವಹಿಸುವ ಮೂಲಕ ಕೋಲಾರ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಮತ್ತೊಂದು ಹೆಗ್ಗಳಿಕೆಯ ಗರಿ ಮುಡಿಗೇರಿಸಿಕೊಂಡಿದೆ. ಕೋಲಾರ ಜಿಲ್ಲೆ ಕೆಜಿಎಫ್​ನಲ್ಲಿರುವ NIRMನ ಹಿರಿಯ ವಿಜ್ಞಾನಿ, ಪ್ರಿನ್ಸಿಪಲ್ ಸೈಂಟಿಸ್ಟ್ ಡಾ.ರಾಜನ್ ಬಾಬು ಅವರು ರಾಮ ಮಂದಿರ ನಿರ್ಮಾಣದ ಪ್ರತಿ ಹಂತದಲ್ಲೂ ಭಾಗಿಯಾಗಿದ್ದಾರೆ. ದೇವಾಲಯದ ಅಡಿಗಲ್ಲಿನಿಂದ ಹಿಡಿದು ದೇವಾಲಯದ ವಿನ್ಯಾಸಕ್ಕೆ ಬಳಸಲಾಗಿರುವ ಕಲ್ಲು, ನೆಲಹಾಸಿಗೆ ಬಳಸಲಾಗಿರುವ ಕಲ್ಲು, ಅಷ್ಟೇ ಯಾಕೆ ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಲಾಗಿರುವ ಕಲ್ಲನ್ನು ಸಹ ಇವರೇ ಪರೀಕ್ಷಿಸಿ ಅಂತಿಮಗೊಳಿಸದ ನಂತರವಷ್ಟೇ ಕಲ್ಲುಗಳನ್ನು ಬಳಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಶ್ರೀರಾಮ ಮಂದಿರದ ಅಡಿಪಾಯಕ್ಕೆ ಕರ್ನಾಟಕದ ಚಿಕ್ಕಬಳ್ಳಾಪುರ, ಸಾದರಹಳ್ಳಿ, ದೇವನಹಳ್ಳಿ, ಆಂಧ್ರದ ವರಾಂಗಲ್​, ಮತ್ತು ತೆಲಂಗಾಣದ ಕರೀಂ ನಗರದ ಕಲ್ಲುಗಳನ್ನು ಬಳಕೆ ಮಾಡಲಾಗಿದೆ.

ನೆಲಹಾಸಿಗೆ ರಾಜಸ್ಥಾನದ ಮಕ್ರಾನಾ ಮಾರ್ಬಲ್​ ಕಲ್ಲುಗಳನ್ನು ಬಳಸಲಾಗಿದೆ. ಇನ್ನು ದೇವಾಲಯದ ಗೋಡೆ ಹಾಗೂ ವಿನ್ಯಾಸಕ್ಕಾಗಿ ಬಯಾನದ ಸ್ಯಾಂಡ್ ಸ್ಟೋನ್ ಗಳನ್ನು ಬಳಕೆ ಮಾಡಲಾಗಿದೆ. ರಾಮಲಲ್ಲಾನ ವಿಗ್ರಹ ಕೆತ್ತನೆಗಾಗಿ ಮೈಸೂರಿನ ಹೆಗ್ಗಡದೇವನಕೋಟೆಯ ಕರಿಯ ಶಿಲೆಯ ಕಲ್ಲನ್ನು ಬಳಕೆ ಮಾಡಲಾಗಿದೆ. ಇನ್ನು ದೇವಾಲಯದ ನಿರ್ಮಾಣಕ್ಕಾಗಿ ಗುಣಮಟ್ಟದ ಕಲ್ಲನ್ನು ಹೊರತುಪಡಿಸಿ ಇನ್ಯಾವುದೇ ವಸ್ತುಗಳನ್ನು ಬಳಕೆ ಮಾಡಿಲ್ಲ ಅನ್ನೋದು ವಿಶೇಷ. ಇಡೀ ದೇವಾಲಯವನ್ನು ಕಲ್ಲಿನಿಂದ ಕಲ್ಲಿಗೆ ಇಂಟರ್​ ಲಾಕಿಂಗ್ ಸಿಸ್ಟಂ ಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ. ಹಾಗಾಗಿ ದೇವಾಲಯಕ್ಕೆ ಒಂದು ಸಾವಿರ ವರ್ಷ ಆಯಸ್ಸು ಇರುತ್ತದೆ. ಈ ದೇವಾಲಯಕ್ಕೆ ಸಿಡಿಲು, ಗುಡುಗು, ಮಳೆ ಹಾಗೂ ಭೂಕಂಪನವಾದರೂ ದೇವಾಲಯಕ್ಕೆ ಯಾವುದೇ ಹಾನಿಯಾಗದಂತೆ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂದು ಹಿರಿಯ ವಿಜ್ಞಾನಿ ರಾಜನ್​ ಬಾಬು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ರಾಮೋತ್ಸವ: ಬೀದಿ, ಬೀದಿಗಳಲ್ಲಿ ರಾರಾಜಿಸುತ್ತಿವೆ ಶ್ರೀ ರಾಮನ ಬೃಹತ್ ಕಟ್ ಔಟ್

ಇನ್ನು ರಾಜನ್​ ಬಾಬು ಅವರು ರಾಮಮಂದಿರದ ನಿರ್ಮಾಣಕ್ಕೂ ಮೊದಲಿನಿಂದಲೂ ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಮಂದಿರ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ತೆಗೆಯುವುದರಿಂದ ಹಿಡಿದು, ಬೇರೆ ಬೇರೆ ರಾಜ್ಯಗಳಲ್ಲಿನ ಕ್ವಾರಿಗಳಲ್ಲಿ ಹೋಗಿ ಕಲ್ಲುಗಳ ಗುಣಮಟ್ಟ ಪರೀಕ್ಷಿಸಿದ ಆಯ್ಕೆ ಮಾಡುವವರೆಗೂ ಪ್ರತಿ ಹಂತದಲ್ಲೂ ಕೆಲಸ ಮಾಡಿದ್ದಾರೆ. ಮೊದಲು ಕ್ವಾರಿಯಲ್ಲಿ ಕಲ್ಲಿನ ಮಾದರಿಯನ್ನು ತಂದು ಇದೇ ಕೆಜಿಎಫ್​ನಲ್ಲಿರುವ NIRMನ ಲ್ಯಾಬ್​ ನಲ್ಲಿ ಪರೀಕ್ಷೆ ನಡೆಸಿ ನಂತರ ಅದು ಗುಣಮಟ್ಟದ ಕಲ್ಲು ಅನ್ನೋದು ಅಂತಿಮಗೊಳಿಸುತ್ತಿದ್ದರು. ಕೇವಲ ಒಂದು ರಾಜ್ಯದಲ್ಲಿ ಮಾತ್ರ ಕಲ್ಲುಗಳನ್ನು ಆಯ್ಕೆ ಮಾಡಿಲ್ಲ, ಮಂದಿರದ ಒಂದೊಂದು ಭಾಗಕ್ಕೆ ಒಂದೊಂದು ರೀತಿಯ ಕಲ್ಲುಗಳನ್ನು ಬಳಕೆ ಮಾಡಲಾಗಿದೆ. ಈ ಮೂಲಕ ಮಂದಿರಕ್ಕೆ ಇಡೀ ದೇಶದ ಪ್ರಮುಖ ತಂತ್ರಜ್ಞರ, ಎಂಜಿನಿಯರ್​ಗಳ, ಹಾಗೂ ಹತ್ತಾರು ವಿಭಿನ್ನ ಶಿಲ್ಪಿಗಳ ಎಲ್ಲರ ಬುದ್ದಿಶಕ್ತಿಯನ್ನು ಒಂದೆಡೆ ಕಲೆಹಾಕಿ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ದೇಶದ ಹೆಮ್ಮೆಯ ಪ್ರತೀಕ ಅಂಥಾದೊಂದು ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇ ರೋಚಕ, ಇದು ನನ್ನ ಜೀವನದ ಮರೆಯಲಾಗದ ಅನುಭವ, ಈ ಕೆಲಸ ನನಗೆ ಆತ್ಮತೃಪ್ತಿ ನೀಡಿದೆ ಅನ್ನೋದು ವಿಜ್ಞಾನಿ ರಾಜನ್​ ಬಾಬು ಅವರ ವೈಯಕ್ತಿಕ ಅಭಿಪ್ರಾಯ.

ಇನ್ನು ಇವರ ಸೇವೆಯನ್ನ ಮೆಚ್ಚಿ ಕೇಂದ್ರದ ಗಣಿ ಮತ್ತೂ ಭೂ ವಿಜ್ಞಾನ ಇಲಾಖೆ ಕೂಡ ಶ್ಲಾಘನೆ ವ್ಯಕ್ತಪಡಿಸಿದೆ. ರಾಮ ಜನ್ಮ ಭುಮಿ ಟ್ರಸ್ಟ್ ಅಧ್ಯಕ್ಷರು ಸೇರಿದಂತೆ ಎಲ್ಲರೂ ಸಹ ಸಹಕಾರ ನೀಡಿದ್ರು. ಹಾಗಾಗಿ ನಾವು ಸಹ ರಾಮನ ಸೇವೆ ಮಾಡಿದ್ದು ಖುಷಿ ಕೊಟ್ಟಿದೆ‌ ಎಂದು ಹಿರಿಯ ವಿಜ್ಞಾನಿ ರಾಜನ್ ಬಾಬು ತಿಳಿಸಿದರು.

ಒಟ್ಟಾರೆ ಎಲ್ಲಿಯ ಉತ್ತರದ ಅಯೋಧ್ಯೆ ಎಲ್ಲಿಯ ದಕ್ಷಿಣದ ಚಿನ್ನದ ನಾಡು ಕೆಜಿಎಫ್, ಎತ್ತಣಿಂದೆತ್ತ ಸಂಬಂಧವಯ್ಯ ಎನ್ನುವಂತೆ ನಿಜಕ್ಕೂ ದೇಶದ ಹೆಮ್ಮೆಯ ಪ್ರತೀಕವಾಗಿರುವ ಹಿಂದುಗಳ ಭಕ್ತಿ ಭಾವನೆಗಳ ಕೇಂದ್ರವಾಗಿರುವ ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರದ ವಿಜ್ಞಾನಿಗಳ ಕೊಡುಗೆ ನೀಡಲು ಅವಕಾಶ ಸಿಕ್ಕಿದ್ದೇ ಜಿಲ್ಲೆಗೆ ಹೆಮ್ಮೆಯ ವಿಚಾರ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ