AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತೋರಾತ್ರಿ ಮುನ್ನಲೆಗೆ ಬಂದ ಕೊಪ್ಪಳ ರಾಘವೇಂದ್ರಸ್ವಾಮಿ ಮಠದ ವಿವಾದ: ಏನದು?

ಅದು ಕೊಪ್ಪಳದ ಸುಪ್ರಸಿದ್ದ ರಾಘವೇಂದ್ರ ಸ್ವಾಮಿ ಮಠ. ಆದರೆ ಈ ಮಠಕ್ಕೆ ಮುಂಜಾನೆಯೇ ನೂರಾರು ಭಕ್ತರ ಆಗಮನವಾಗಿತ್ತು. ಕೇವಲ ಭಕ್ತರು ಮಾತ್ರವಲ್ಲ, ಪೊಲೀಸರು ಕೂಡ ಎಂಟ್ರಿಯಾಗಿದ್ದರು. ಮಠದ ಮುಂಭಾಗದಲ್ಲಿ ಬ್ಯಾರಿಕೇಡ್​ಗಳನ್ನು ಹಾಕಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಇದಕ್ಕೆಲ್ಲಾ ಮಠದ ಆಡಳಿತ ವಿವಾದ ಕಾರಣವಾಗಿದೆ.

ರಾತೋರಾತ್ರಿ ಮುನ್ನಲೆಗೆ ಬಂದ ಕೊಪ್ಪಳ ರಾಘವೇಂದ್ರಸ್ವಾಮಿ ಮಠದ ವಿವಾದ: ಏನದು?
ರಾತೋರಾತ್ರಿ ಮುನ್ನಲೆಗೆ ಬಂದ ಕೊಪ್ಪಳ ರಾಘವೇಂದ್ರಸ್ವಾಮಿ ಮಠದ ವಿವಾದ: ಏನದು?
ಸಂಜಯ್ಯಾ ಚಿಕ್ಕಮಠ
| Edited By: |

Updated on:Mar 27, 2025 | 12:44 PM

Share

ಕೊಪ್ಪಳ, ಮಾರ್ಚ್​ 27: ಅದು ಕೊಪ್ಪಳ (koppal) ನಗರದಲ್ಲಿರುವ ರಾಘವೇಂದ್ರಸ್ವಾಮಿ ಮಠ (raghavendra swamy mutt). ಇಷ್ಟು ದಿನಗಳ ಕಾಲ ಮಠವನ್ನು ಸ್ಥಳೀಯರೇ ನೋಡಿಕೊಂಡು ಹೋಗುತ್ತಿದ್ದರು. ಆದರೆ ಕಳೆದ ರಾತ್ರಿ ಮಠದ ಆಡಳಿತ ವಿಚಾರವಾಗಿ ದಿಢೀರನೆ ವಿವಾದ ಬುಗಿಲೆದ್ದಿದೆ. ಮಂತ್ರಾಲಯ ಮಠದ ಸ್ವಾಮೀಜಿ ಮತ್ತು ಕೆಲ ಸ್ಥಳೀಯ ಭಕ್ತರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿ ಇಂದು ಮಠದಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಇನ್ನೊಂದಡೆ ಮಠಕ್ಕೆ ಬಂದರೂ ಒಳಗೆ ಹೋಗದೆ ಮಂತ್ರಾಲಯ ಮಠದ ಸ್ವಾಮೀಜಿ ಮರಳಿ ಹೋಗಿದ್ದಾರೆ.

ಮಠದ ಚುಕ್ಕಾಣಿ ವಿಚಾರದಲ್ಲಿ ಭಿನ್ನಾಭಿಪ್ರಾಯ

ಕೊಪ್ಪಳ ನಗರದ ಗದಗ ರಸ್ತೆಯಲ್ಲಿ ರಾಘವೇಂದ್ರಸ್ವಾಮಿ ಮಠವಿದೆ. ಆದರೆ ಈ ಮಠದ ಆಡಳಿತವನ್ನು ಯಾರು ನಡೆಸಬೇಕು ಅನ್ನೋ ವಿವಾದ ಕಳೆದ ರಾತ್ರಿ ದಿಢೀರನೆ ಮುನ್ನಲೆಗೆ ಬಂದಿದೆ. ಮಾರ್ಚ್ 26 ಮತ್ತು 27 ರಂದು ರಾಘವೇಂದ್ರ ಸ್ವಾಮಿ ಮಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಮಂತ್ರಾಲಯದಿಂದ ಸುಭುದೇಂದ್ರತೀರ್ಥ ಸ್ವಾಮೀಜಿ, ಮಾರ್ಚ್ 26 ರಂದು ರಾತ್ರಿ ಮಠಕ್ಕೆ ಆಗಮಿಸಿದ್ದರು. ಮಠದಲ್ಲಿ ಸ್ವಾಮೀಜಿ ಆಶಿರ್ವಚನ, ದರ್ಶನ ಕೂಡ ನೀಡಿದ್ದರು. ನಂತರ ಮಠದ ಆಡಳಿತ ವಿಚಾರದ ಬಗ್ಗೆ ಭಕ್ತರು ಸ್ವಾಮೀಜಿ ಜೊತೆ ಚರ್ಚೆ ನೆಡೆಸಿದ್ದರು.

ಇದನ್ನೂ ಓದಿ: ಫ್ಯಾಕ್ಟರಿ ಬೇಡ: ಗವಿಶ್ರೀ ಭಾಗವಹಿಸಿದ್ದ ಕೊಪ್ಪಳ ಬಂದ್ ಹೇಗಿತ್ತು ನೋಡಿ

ಇದನ್ನೂ ಓದಿ
Image
ಆಯಸ್ಸು ಮುಗಿದರೂ ಬದಲಾಗದ ತುಂಗಭದ್ರಾ ಡ್ಯಾಂ ಕ್ರೆಸ್ಟ್​ಗೇಟ್​ಗಳು!
Image
ಹೋರಾಟಕ್ಕೆ ಸಂದ ಜಯ: ಬಲ್ಡೋಟ ಪ್ಯಾಕ್ಟರಿ ಕಾಮಗಾರಿ ಸ್ಥಗಿತಕ್ಕೆ ಸಿಎಂ ಸೂಚನೆ
Image
ಫ್ಯಾಕ್ಟರಿ ಬೇಡ: ಗವಿಶ್ರೀ ಭಾಗವಹಿಸಿದ್ದ ಕೊಪ್ಪಳ ಬಂದ್ ಹೇಗಿತ್ತು ನೋಡಿ
Image
ಕೊಪ್ಪಳ: ಕಾರ್ಖಾನೆ ಆರಂಭಕ್ಕೆ ವಿರೋಧ, ದುಸ್ಥಿತಿ ಕಂಡು ಗವಿಶ್ರೀ ಕಣ್ಣೀರು

ಈ ಹಿಂದೆ ಹುಲಗಿ ರಂಗನಾಥ ಆಚಾರ್ ಮಠದ ಅಧ್ಯಕ್ಷರಾಗಿದ್ದರು. ಆದರೆ ಅವರ ನಿಧನದ ನಂತರ ಮಠದ ಆಡಳಿತ ನೋಡಿಕೊಂಡು ಹೋಗುವ ಬಗ್ಗೆ ಚರ್ಚೆಗಳು ನಡೆದಿದ್ದವು. ಈ ಸಮಯದಲ್ಲಿ 1971 ರಲ್ಲಿ ಈ ಮಠವನ್ನು ಮಂತ್ರಾಲಯ ಮಠದ ಸುಪರ್ದಿಗೆ ನೀಡಲಾಗಿದೆ. ಅಂದಿನ ಭಕ್ತರು ಮತ್ತು ಪದಾಧಿಕಾರಿಗಳು ತಮ್ಮ ಮಠಕ್ಕೆ ನೀಡಿರುವ ದಾಖಲೆ ಪತ್ರ ಲಭ್ಯಗಳಿವೆ ಅಂತ ಮಂತ್ರಾಲಯ ಸ್ವಾಮೀಜಿ ಹೇಳಿದ್ದರು. ನಂತರ ಇನ್ಮುಂದೆ ಯಾರು ಮಠದ ಆಡಳಿತವನ್ನು ನಡೆಸಿಕೊಂಡು ಹೋಗಬೇಕು ಅನ್ನೋದರ ಬಗ್ಗೆ ತಾವೇ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡೋದಾಗಿ ಹೇಳಿದ್ದರು. ಆದರೆ ಇದು ಮಠದ ಇನ್ನೊಂದು ಭಕ್ತ ವರ್ಗದ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸ್ವಾಮೀಜಿ ಉಳಿದುಕೊಂಡಿದ್ದ ಕೊಪ್ಪಳ ನಗರದ ಬಸವ ನಗರದಲ್ಲಿರುವ ಮನೆಗೆ ರಾತೋರಾತ್ರಿ ಹೋಗಿದ್ದ ನೂರಾರು ಭಕ್ತರು, ಮಠದ ವಿಚಾರವಾಗಿ ಚರ್ಚೆ ನಡೆಸಿದ್ದರು. ಈ ಸಮಯದಲ್ಲಿ ಕಳೆದ ರಾತ್ರಿ ಗೊಂದಲದ ವಾತಾರವರಣ ನಿರ್ಮಾಣವಾಗಿತ್ತು.

ಇನ್ನು ಮಂತ್ರಾಲಯ ಮಠದ ಸ್ವಾಮೀಜಿ, ಕೊಪ್ಪಳ ರಾಘವೇಂದ್ರಸ್ವಾಮಿ ಮಠ, ಮಂತ್ರಾಲಯ ಮಠಕ್ಕೆ ಸೇರಿರುವ ಮಠವಾಗಿದೆ ಅಂತ ಹೇಳಿರೋದು, ಸ್ಥಳೀಯ ಕೆಲ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಇಲ್ಲಿಯವರಗೆ ಯಾವುದೇ ಮಠಕ್ಕೆ ಸೇರದೆ, ಸ್ವತಂತ್ರವಾಗಿತ್ತು. ಸ್ಥಳೀಯರೇ ಆಡಳಿತ ನಡೆಸಿಕೊಂಡು ಹೋಗ್ತಿದ್ದರು. ಆದರೆ ಇದೀಗ ದಿಢೀರನೆ ಮಂತ್ರಾಲಯ ಮಠದ ಸ್ವಾಮೀಜಿ, ತಮ್ಮ ಮಠಕ್ಕೆ ಈ ಮಠ ಸೇರಿದೆ ಅಂತ ಹೇಳ್ತಿದ್ದಾರೆ. ಇದೊಂದು ಸ್ವತಂತ್ರ ಮಠ ಅನ್ನೋದು ಇನ್ನೊಂದಿಷ್ಟು ಸ್ಥಳೀಯ ಭಕ್ತರ ವಾದವಾಗಿದೆ.

ರಾಮದೇವರ ಪೂಜೆ, ತುಲಾಭಾರ ದಿಢೀರ್ ರದ್ದು

ಕಳೆದ ಕೆಲ ದಿನಗಳಿಂದ ಗುಸುಗುಸು ನಡೆದಿದ್ದ ವಿವಾದ, ಕಳೆದ ರಾತ್ರಿ ದಿಢೀರನೆ ಸ್ಪೋಟಗೊಂಡಿದೆ. ಮಂತ್ರಾಲಯ ಮಠದ ಸ್ವಾಮೀಜಿ ಮತ್ತು ಸ್ಥಳೀಯ ಕೆಲ ಭಕ್ತರ ನಡುವೆ ಗೊಂದಲ ಉಂಟಾದ ಹಿನ್ನೆಲೆಯಲ್ಲಿ, ಇಂದು ಮಠದಲ್ಲಿ ನಡೆಯಬೇಕಿದ್ದ ರಾಮದೇವರ ಪೂಜೆ, ತುಲಾಭಾರ ಕಾರ್ಯಕ್ರಮವನ್ನು ದಿಢೀರನೆ ರದ್ದಗೊಳಿಸಲಾಗಿದೆ.

ಮಠದ ವ್ಯವಸ್ಥಾಪಕ ಜಗನ್ನಾಥ್ ಹುನಗುಂದ ಹೇಳಿದ್ದಿಷ್ಟು

ಇಂದು ಮುಂಜಾನೆ ಮಂತ್ರಾಲಯ ಮಠದ ಸ್ವಾಮೀಜಿ ಮಠಕ್ಕೆ ಆಗಮಿಸಿದ್ರು, ಮಠದೊಳಗೆ ಹೋಗದೆ, ತಮ್ಮ ಮುನಿಸನ್ನು ತೋರಿಸಿದರು. ಮಠದ ಹೊರಗೆ ನಿಂತು ನಮಸ್ಕಾರ ಮಾಡಿದ ಸ್ವಾಮೀಜಿ, ಮಠದೊಳೆಗೆ ಹೋಗದೆ, ಮರಳಿ ಹೋಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಠದ ಸದ್ಯದ ವ್ಯವಸ್ಥಾಪಕ ಜಗನ್ನಾಥ್ ಹುನಗುಂದ, ಸ್ವಾಮೀಜಿಗೆ ಮಠಕ್ಕೆ ಬಂದು ಪೂಜೆ ಸಲ್ಲಿಸುವಂತೆ ಮನವಿ ಮಾಡಿದ್ದೆವು. ಆದರೆ ಅವರು ಅಸಮಾಧಾನಗೊಂಡು ಹೋಗಿದ್ದಾರೆ. ಮಠದ ಆಂತರಿಕ ವಿಚಾರವನ್ನು ಎಲ್ಲರೂ ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಆದರೆ ಮಠ ಸ್ಥಳೀಯರಿಗೆ ಸೇರಿದ್ದು, ಇದನ್ನು ಸ್ಥಳೀಯರಿಗೆ ನೀಡುವಂತೆ ಮನವಿ ಮಾಡಿದ್ದೇವೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಕೊಪ್ಪಳ ಜನರ ಹೋರಾಟಕ್ಕೆ ಸಂದ ಜಯ: ಬಲ್ಡೋಟ ಪ್ಯಾಕ್ಟರಿ ಕಾಮಗಾರಿ ಸ್ಥಗಿತಕ್ಕೆ ಸಿಎಂ ಸೂಚನೆ

ಸದ್ಯ ರಾತೋರಾತ್ರಿ ಮಠದ ಆಡಳಿತ ವಿಚಾರ ಮತ್ತು ಮಠ ಯಾರಿಗೆ ಸೇರಿದ್ದು ಅನ್ನೋ ಚರ್ಚೆ ಮುನ್ನಲೆಗೆ ಬಂದಿದೆ. ಮಠದ ವಿವಾದ ತೀರ್ವವಾಗಿರೋದರಿಂದ, ಮಂತ್ರಾಲಯ ಮಠದ ಸ್ವಾಮೀಜಿ, ಇಂದು ನಡೆಯಬೇಕಿದ್ದ ತುಲಾಭಾರ ಮತ್ತು ರಾಮದೇವ ಪೂಜೆಯನ್ನು ರದ್ದು ಮಾಡಿದ್ದಾರೆ. ಆದರೆ ಇದೀಗ ಮಠದ ಆಡಳಿತ ನಡೆಸುವ ವಿಚಾರ ಎರಡು ಕಡೆಯ ಭಕ್ತರ ನಡುವೆ ತೀರ್ವವಾಗಿದ್ದು, ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಅನ್ನೋದು ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:41 pm, Thu, 27 March 25

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ