AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ: ಆಸ್ತಿಗಾಗಿ ಹೆಚ್ಐವಿ ಪೀಡಿತ ಪತಿಗೆ ಹೆಂಡತಿ ಮಕ್ಕಳಿಂದಲೇ ಗೃಹಬಂಧನ?

ಶಿವಸ್ವಾಮಿ ಹಾಗೂ ಜಯಲಕ್ಷ್ಮೀಗೆ ಮದುವೆಯಾಗಿ 25 ವರ್ಷಗಳು ಕಳೆದಿವೆ. ಮದುವೆಯ ಬಳಿಕ ಗಂಡನ ಟಾರ್ಚರ್ ತಡೆಯಲಾಗದೆ ಪತ್ನಿ ಮನೆ ಬಿಟ್ಟು ಪರಾರಿಯಾಗಿದ್ದರು. ಅತ್ತೆ ತೀರಿ ಹೋದ ಬಳಿಕ ಪರಾರಿಯಾಗಿದ್ದ ಜಯಲಕ್ಷ್ಮೀ ವಾಪಸ್ಸಾಗಿದ್ದರು.

ಮಂಡ್ಯ: ಆಸ್ತಿಗಾಗಿ ಹೆಚ್ಐವಿ ಪೀಡಿತ ಪತಿಗೆ ಹೆಂಡತಿ ಮಕ್ಕಳಿಂದಲೇ ಗೃಹಬಂಧನ?
ಆಸ್ತಿಗಾಗಿ ಹೆಚ್ಐವಿ ಪೀಡಿತ ಪತಿಗೆ ಹೆಂಡತಿ ಮಕ್ಕಳಿಂದಲೇ ಗೃಹಬಂಧನ?
TV9 Web
| Edited By: ಆಯೇಷಾ ಬಾನು|

Updated on:Aug 17, 2022 | 4:20 PM

Share

ಮಂಡ್ಯ: ಹೆಚ್ಐವಿ(HIV) ಪೀಡಿತ ಪತಿಗೆ ಆತನ ಪತ್ನಿ, ಮಕ್ಕಳು ಮೂರು ತಿಂಗಳಿನಿಂದ ಗೃಹ ಬಂಧನದಲ್ಲಿಟ್ಟು ಹಿಂಸಿಸುತ್ತಿರುವ ಆರೋಪ ಕೇಳಿ ಬಂದಿದೆ. ಮಂಡ್ಯದ 100ಫೀಟ್ ಬಳಿ ಇರುವ ವಿದ್ಯಾನಗರದಲ್ಲಿ ಆಸ್ತಿ ಆಸೆಗಾಗಿ ಹೆಚ್ಐವಿ ಪೀಡಿತ ಗಂಡನನ್ನೆ ಶೆಡ್ ನಲ್ಲಿ ಕೂಡಿ ಹಾಕಲಾಗಿದೆ ಎಂಬ ಗಂಭೀರ ಆರೋಪ ಪತ್ನಿ ಹಾಗೂ ಮಕ್ಕಳ ಮೇಲೆ ಕೇಳಿ ಬಂದಿದೆ.

ಶಿವಸ್ವಾಮಿ ಹಾಗೂ ಜಯಲಕ್ಷ್ಮೀಗೆ ಮದುವೆಯಾಗಿ 25 ವರ್ಷಗಳು ಕಳೆದಿವೆ. ಮದುವೆಯ ಬಳಿಕ ಗಂಡನ ಟಾರ್ಚರ್ ತಡೆಯಲಾಗದೆ ಪತ್ನಿ ಮನೆ ಬಿಟ್ಟು ಪರಾರಿಯಾಗಿದ್ದರು. ಅತ್ತೆ ತೀರಿ ಹೋದ ಬಳಿಕ ಪರಾರಿಯಾಗಿದ್ದ ಜಯಲಕ್ಷ್ಮೀ ವಾಪಸ್ಸಾಗಿದ್ದರು. ಈ ವೇಳೆ ಶಿವಸ್ವಾಮಿ ಅಕ್ಕ ಪುಟ್ಟತಾಯಮ್ಮ, ಜಯಲಕ್ಷ್ಮೀ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಆಸ್ತಿ ಆಸೆಗಾಗಿ ತಮ್ಮ ಶಿವಸ್ವಾಮಿಯನ್ನ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. 112 ಗೆ ಕರೆ ಮಾಡಿ ಪೊಲೀಸರನ್ನು ಮನೆಗೆ ಕರಿಸಿ ಸಹಾಯ ಪಡೆದು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ಮನೆಗೆ ಬಂದ ಹೊಯ್ಸಳ ಪೊಲೀಸರು ಹೆಚ್ಐವಿ ಪೀಡಿತ ಶಿವಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಪತ್ನಿ, ಮಕ್ಕಳು ತನ್ನನ್ನು ಗೃಹ ಬಂಧನದಲ್ಲಿಟ್ಟಿರುವುದಾಗಿ ಶಿವಸ್ವಾಮಿ ಹೇಳಿಕೆ ನೀಡಿದ್ದಾರೆ. ಈ ವೇಳೆ ಶಿವಸ್ವಾಮಿ ಪತ್ನಿ ಹಾಗೂ ಪತಿಯ ಅಕ್ಕನ ನಡುವೆ ಹೈಡ್ರಾಮ ನಡೆದಿದೆ. ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಜಗಳ ಮಾಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶ ಮಾಡಿ ಗಲಾಟೆಯನ್ನು ಶಾಂತಗೊಳಿಸಿದ್ದಾರೆ.

ಆಸ್ತಿಗಾಗಿ ಪುಟ್ಟತಾಯಮ್ಮ ಈ ರೀತಿ ಆರೋಪ ಮಾಡ್ತಿದ್ದಾರೆ

ಘಟನೆ ಸಂಬಂಧ ಶಿವಸ್ವಾಮಿ ಪತ್ನಿ ಜಯಲಕ್ಷ್ಮೀ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು ಮೂರು ತಿಂಗಳ ಹಿಂದೆ ಅಪಘಾತವಾಗಿತ್ತು. ನಾವೇ ಪತಿಗೆ ಚಿಕಿತ್ಸೆ ಕೊಡಿಸಿ ಮನೆಯಲ್ಲೇ ಇಟ್ಟಿದ್ದೇವೆ. ಪತಿ ಹಾಗೂ ನಾನು ಹೆಚ್ಐವಿ ಪಾಸಿಟಿವ್ ರೋಗಿಗಳು. ಯಾವ ಆಸ್ಪತ್ರೆಗೆ ಹೋದ್ರು ಸೂಕ್ತ ಚಿಕಿತ್ಸೆ ಸಿಗದ ಕಾರಣ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇವೆ. ಅತ್ತೆ ತೀರಿ ಹೋದ ಬಳಿಕ ಆಸ್ತಿಯೆಲ್ಲಾ ಪತಿ ಶಿವಸ್ವಾಮಿ ಹೆಸರಿಗೆ ಬಂದಿದೆ. ಹಾಗಾಗಿ ಅವರ ಅಕ್ಕ ಪುಟ್ಟತಾಯಮ್ಮ ಈ ರೀತಿ ಹೈಡ್ರಾಮ ಮಾಡ್ತಾಯಿದ್ದಾರೆ. ಆಸ್ತಿ ವಿಚಾರಕ್ಕೆ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಜಯಲಕ್ಷ್ಮೀ ಆರೋಪಿಸಿದ್ದಾರೆ. ಸದ್ಯ ಹೊಯ್ಸಳ ಪೊಲೀಸರ ಸಹಾಯದಿಂದ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಶಿವಸ್ವಾಮಿಯವರನ್ನು ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:11 pm, Wed, 17 August 22

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ