AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಮಠದಲ್ಲಿ 300 ಕೋಟಿ ರೂ ದರೋಡೆಗೆ ಸ್ಕೇಚ್, ಸಿಕ್ಕಿದ್ದು 50 ಸಾವಿರ ರೂ, 12 ಜನರ ಬಂಧನ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಹಿಷಿ ಉತ್ತರಾಧಿ ಮಠದಲ್ಲಿ ಕೋಟ್ಯಂತರ ರೂ. ಹಣವಿದೆ ಎಂಬ ಸುಳ್ಳು ಸುದ್ದಿಯನ್ನು ನಂಬಿ 12 ದರೋಡೆಕೋರರು ದರೋಡೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಆದರೆ ಅವರಿಗೆ ಕೇವಲ 50 ಸಾವಿರ ರೂ ಮಾತ್ರ ಸಿಕ್ಕಿದ್ದು, ಮಾಳೂರು ಪೊಲೀಸರು ಎಲ್ಲ 12 ಜನರನ್ನು ಬಂಧಿಸಿದ್ದಾರೆ.

ಶಿವಮೊಗ್ಗ: ಮಠದಲ್ಲಿ 300 ಕೋಟಿ ರೂ ದರೋಡೆಗೆ ಸ್ಕೇಚ್, ಸಿಕ್ಕಿದ್ದು 50 ಸಾವಿರ ರೂ, 12 ಜನರ ಬಂಧನ
ಮಹಿಷಿ ಉತ್ತರಾಧಿ ಮಠ
Follow us
Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ

Updated on: Apr 12, 2025 | 2:57 PM

ಶಿವಮೊಗ್ಗ, ಏಪ್ರಿಲ್ 12: ಮಠದಲ್ಲಿ (Mahishi Uttaradi Math) ಕೋಟಿ ಕೋಟಿ ರೂ ಆಸ್ತಿ ಇದೆ ಎನ್ನುವ ಸುದ್ದಿ ಎಲ್ಲಡೆ ಹರಿದಾಡಿತ್ತು. ಈ ಮಾತು ದರೋಡೆಕೋರರ ಕಿವಿಯೂ ಮುಟ್ಟಿತ್ತು. ಹಾಗಾಗಿ ಕೋಟ್ಯಂತರ ರೂ ಹಣ ದರೋಡೆ (robbery) ಹೊಡೆಯಲು ದರೋಡೆಕೋರರು ಸಂಚು ರೂಪಿಸಿದ್ದರು. ಪಕ್ಕಾ ಪ್ಲ್ಯಾನ್​ ಪ್ರಕಾರ ದರೋಡೆಗಿಳಿದವರಿಗೆ ಸಿಕ್ಕಿದ್ದು ಕೇವಲ 50 ಸಾವಿರ ರೂ. ಮಾತ್ರ. ಈ ಸಂಬಂಧ 12 ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಕೋಟ್ಯಂತರ ರೂ ಮಠದ ಹಣದ ದರೋಡೆ ರಹಸ್ಯ ಕುರಿತು ಒಂದು ವರದಿ ಇಲ್ಲಿದೆ ಮುಂದೆ ಓದಿ.

ದರೋಡೆಕೋರರಿಗೆ ಸಿಕ್ಕಿದ್ದು ಕೇವಲ 50 ಸಾವಿರ ರೂ ಮಾತ್ರ

ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿ ಉತ್ತರಾಧಿ ಮಠದಲ್ಲಿ 300 ಕೋಟಿ ರೂ. ಇದೆ ಎನ್ನುವ ಗಾಳಿ ಸುದ್ದಿಯು ಎಲ್ಲಡೆ ಹರಿದಾಡಿತ್ತು. ಇದರ ಬೆನ್ನಲ್ಲೇ ದರೋಡೆಕೋರರು ಕೋಟಿ ಕೋಟಿ ಹಣ ಲೂಟಿಗೆ ಮುಂದಾಗಿದ್ದರು. ಏ.5 ರಂದು ರಾತ್ರಿ 12 ದರೋಡೆಕೋರರು ಎಂಟ್ರಿ ಕೊಟ್ಟಿದ್ದರು. ಹೀಗೆ ಬಂದವರು ಕೊಟ್ಯಂತರ ರೂ ಹಣಕ್ಕಾಗಿ ಹುಡುಕಾಡಿದ್ದಾರೆ. ಮಠದಲ್ಲಿ ಇದ್ದವರಿಗೆ ಮಾರಕಾಸ್ತ್ರ ತೋರಿಸಿ ಹಣದ ಮಾಹಿತಿ ಕೇಳಿದ್ದಾರೆ. ಆದರೆ ಕೋಟಿ ಕೋಟಿ ಹಣದ ಹಿಂದೆ ಬಿದ್ದಿದ್ದ ದರೋಡೆಕೋರರಿಗೆ ಸಿಕ್ಕಿದ್ದು ಕೇವಲ 50 ಸಾವಿರ ರೂ ಮಾತ್ರ.

ಇದನ್ನೂ ಓದಿ: ಶಿವಮೊಗ್ಗ ಈದ್ಗಾ ಮೈದಾನ ವಿವಾದ ಕೊನೆಗೂ ಸುಖಾಂತ್ಯ: ನಿರ್ಬಂಧ ತೆರವು, ಸಾರ್ವಜನಿಕರಿಗೆ ಮುಕ್ತ ಪ್ರವೇಶ

ಇದನ್ನೂ ಓದಿ
Image
ಈ ರಸ್ತೆಗಳಲ್ಲಿ ಭಾನುವಾರ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ
Image
ದೊಡ್ಡ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಹೇಳಿಕೆಗೆ ಪರಮೇಶ್ವರ್ ವಿಷಾದ
Image
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
Image
ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ವಿಕೃತಿ, ಕೃತ್ಯದ ವಿಡಿಯೋ ವೈರಲ್​

ಈ ಘಟನೆ ಮಠದ ಭಕ್ತರು ಮತ್ತು ತಾಲೂಕಿನ ಜನರನ್ನು ಬೆಚ್ಚಿ ಬೀಳಿಸಿತ್ತು. ತೀರ್ಥಹಳ್ಳಿಯ ಮಾಳೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಜೊತೆಗೆ ಮಠದಲ್ಲಿ ಇಷ್ಟೊಂದು ಹಣವಿದು ಎಂದು ಗಾಳಿ ಸುದ್ದಿ ಹಬ್ಬಿಸಿದ್ದು ಯಾರು ಎನ್ನುವ ಚರ್ಚೆ ಕೂಡ ಮಠದಲ್ಲಿ ಶುರುವಾಗಿದೆ.

12 ದರೋಡೆಕೋರರ ಬಂಧನ

ಮಾಳೂರು ಪೊಲೀಸರು ಈ ದರೋಡೆಕೋರರ ಹಿಂದೆ ಬಿದಿದ್ದು, ನಿನ್ನೆ ಆರೋಪಿಗಳ ಬಂಧನಕ್ಕೆ ಮಾಳೂರು ಪೊಲೀಸರ ತಂಡ ತೆರಳಿದೆ. ಈ ವೇಳೆ ಶಿಕಾರಿಪುರದ ಪಟ್ಟಣದಲ್ಲಿ ಶ್ರೀನಿವಾಸ ಅಲಿಯಾಸ್​ ಸೀನ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಉಳಿದ 12 ಜನರನ್ನೂ ಪೊಲೀಸರು ಬಂಧಿಸಿದ್ದಾರೆ. ಸುರೇಶ ಅಲಿಯಾಸ್​ ನೇರಲೆ ಸುರೇಶ್​, ಸತೀಶ್​ ಅಲಿಯಾಸ್​ ಸತ್ಯನಾರಾಯಣ, ಪೃಥ್ವಿರಾಜ್, ಸಿರಿ ಅಲಿಯಾಸ್​ ಸಿರಿಕಾಂತ್, ಅಭಿಲಾಷ್​ ಅಲಿಯಾಸ್​ ಅಭಿ, ರಾಕೇಶ್, ಭರತ್ ಅಲಿಯಾಸ್​ ಚಿಟ್ಟೆ, ಪವನ ಅಲಿಯಾಸ್​ ಗಿಡ್ಡಪವನ್, ರಮೇಶ್​ ಅಲಿಯಾಸ್​ ನವೀನ, ನವೀನ ಕುಮಾರ್ ಅಲಿಯಾಸ್​ ಡೈಮೆಂಡ್ ನವೀನ್​, ಕರಿಬಸಪ್ಪ ಆರ್ ಬಂಧಿತರು.

ಶ್ರೀನಿವಾಸ್ ಮತ್ತು ರಿಪ್ಪನ್ ಪೇಟೆ ಪೃಥ್ವಿರಾಜ್ 300 ಕೋಟಿ ರೂ ಹಣ ದರೋಡೆ ಮಾಡಿ ಜೀವನದಲ್ಲಿ ಸೆಟ್ಲು ಆಗಲು ಪ್ಲ್ಯಾನ್​ ಮಾಡಿರುತ್ತಾರೆ. ಎರಡು ಮೂರು ಬಾರಿ ಮಹಿಷಿಗೆ ಬೈಕ್​ನಲ್ಲಿ ಹೋಗಿ ಬಂದಿದ್ದರು. ಈ ಮಹಿಷಿ ಮಠದಲ್ಲಿಯೇ 300 ಕೋಟಿ ರೂ ಹಣ ಇಡಲಾಗಿದೆ ಎಂದು ತಿಳಿದು ಏ.5 ರಂದು ರಾತ್ರಿ ಹಣ ಎಗುರಿಸಲು ದರೋಡೆ ಇಳಿಯುತ್ತಾರೆ.

ಇದನ್ನೂ ಓದಿ: ಚಿತ್ರದುರ್ಗ: ಜೋಗಿಮಟ್ಟಿ ವನ್ಯಧಾಮಕ್ಕೆ ಜೂನ್​ವರೆಗೆ ಪ್ರವಾಸಿಗರಿಗೆ ನಿಷೇಧ!

ಆಯುಧಗಳನ್ನ ಹಿಡಿದು 300 ಕೋಟಿ ರೂ ಹಣ ಕೊಡಿ ಎಂದು ಗದರಿಸುತ್ತಾರೆ. ಆಗ ಮಠದ ಜನರು ನೀಡಿದ 50 ಸಾವಿರ ರೂ ಪಡೆದು ಹೋಗುತ್ತಾರೆ. ಕೋಟ್ಯಂತರ ರೂ ಹಣ ದರೋಡೆಗೆ ಸ್ಕೇಚ್ ಹಾಕಿದ್ದ ದರೋಡೆಕೋರರಿಗೆ ಇದು ದೊಡ್ಡ ನಿರಾಸೆ ಆಗುತ್ತದೆ.

ಇನ್ನು ದರೋಡೆ ವೇಳೆ ದರೋಡೆಕೋರರು ಒಂದಿಷ್ಟು ಸುಳಿವು ಬಿಟ್ಟುಹೋಗಿದ್ದರು. ಇದೇ ಸುಳಿವಿನ ಜಾಡು ಹಿಡಿದ ಪೊಲೀಸರು ಮೊದಲಿಗೆ ಸೀನನ್ನ ಬಂಧಿಸಿದ್ದಾರೆ. ಬಳಿಕ ಎಲ್ಲರನ್ನು ಬಂಧಿಸಿದ್ದಾರೆ. ಆ ಮೂಲಕ ಮಾಳೂರು ಪೊಲೀಸರು ದರೋಡೆ ನಡೆದು ಕೆಲವೇ ದಿನದಲ್ಲಿ 300 ಕೋಟಿ ರೂ ದರೋಡೆ ರಹಸ್ಯ ಬಯಲು ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ