AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಟಾ: ತೂಗು ಸೇತುವೆ ಕೊಚ್ಚಿ ಹೋಗಿ ಐದು ವರ್ಷ ಕಳೆದರೂ ಇಲ್ಲ ಪರ್ಯಾಯ ವ್ಯವಸ್ಥೆ, ಏಳು ಗ್ರಾಮಗಳ ಜನರಿಗೆ ನರಕ ಯಾತನೆ

ಅವು ನದಿಯ ದಡದ ಸಣ್ಣ ಗ್ರಾಮಗಳು. ಚಿಕ್ಕ ಪುಟ್ಟ ಕೆಲಸಕ್ಕೂ ನದಿ ಇನ್ನೊಂದು ಬದಿಯ ಗ್ರಾಮವನ್ನೇ ಅವಲಂಬಿಸಿರುವ ಹಿನ್ನೆಲೆ ತೂಗುಸೇತುವೆಯನ್ನೇ ನಿತ್ಯದ ಸಂಪರ್ಕ ಕೊಂಡಿಯಾಗಿ ಬಳಕೆ ಮಾಡಲಾಗುತಿತ್ತು, ಆದರೆ, ಕಳೆದ ಐದು ವರ್ಷಗಳ ಹಿಂದೆ ನದಿಯ ಪ್ರವಾಹದ ಅಬ್ಬರಕ್ಕೆ ತೂಗು ಸೇತುವೆ ಕೊಚ್ಚಿ ಹೋಗಿದೆ. ಇದುವರೆಗೂ ಸೇತುವೆ ನಿರ್ಮಾಣ ಮಾಡದ ಕಾರಣ, ಸುಮಾರು 32 ಕಿಲೋಮೀಟರ್ ಸುತ್ತಿಬಳಸಿ ಬರಬೇಕಿರುವ ಅನಿವಾರ್ಯತೆ ಉಂಟಾಗಿದೆ.

ಕುಮಟಾ: ತೂಗು ಸೇತುವೆ ಕೊಚ್ಚಿ ಹೋಗಿ ಐದು ವರ್ಷ ಕಳೆದರೂ ಇಲ್ಲ ಪರ್ಯಾಯ ವ್ಯವಸ್ಥೆ, ಏಳು ಗ್ರಾಮಗಳ ಜನರಿಗೆ ನರಕ ಯಾತನೆ
ಮುರಿದು ಬಿದ್ದಿರುವ ತೂಗುಸೇತುವೆಯ ಅವಶೇಷ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Nov 28, 2024 | 2:49 PM

Share

ಕಾರವಾರ, ನವೆಂಬರ್ 28: ಸಮೃದ್ಧವಾದ ಕಾಡಿನ ಮಧ್ಯದಿಂದ ಹರಿದು ಬರುತ್ತಿರುವ ಅಘನಾಶಿನಿ ನದಿ. ನದಿಯ ಪಕ್ಕದಲ್ಲೇ ಕಳಚಿ ಬಿದ್ದಿರುವ ತೂಗು ಸೇತುವೆ. ಇನ್ನೊಂದು ಕಡೆ ಆತಂಕದಲ್ಲಿ ನಿಂತಿರುವ ಗ್ರಾಮಸ್ಥರು. ಇದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂಗಣಿ ಸೇರಿದಂತೆ ಏಳೂ ಗ್ರಾಮಸ್ಥರ ಪರಿಸ್ಥಿತಿ. 2019 ರಲ್ಲಿ ಸುರಿದ ಅಬ್ಬರದ ಮಳೆಗೆ ಅಘನಾಶಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗುಸೇತುವೆ ಕಳಚಿ ಬಿದ್ದಿತ್ತು. ಸುಮಾರು ಐದು ವರ್ಷಗಳಿಂದ ನಿತ್ಯ 32 ಕಿಮೀ ಸಂಚರಿಸಿ ಬರಬೇಕಿರುವ ಗೊಳು ಈ ಗ್ರಾಮಸ್ಥರದ್ದಾಗಿದೆ.

ಯಾಕಂದರೆ, ನದಿಯ ಈ ಬದಿಯಲ್ಲಿರುವ ಬಂಗಣಿ, ಮೊರ್ಸೆ, ಮೂಡಗಿ, ಚಿಂಬೊಳ್ಳಿ, ಕಲವೆ, ಹಲಬಳ್ಳಿ, ಉಪ್ಲೆ ಹೀಗೆ ಒಟ್ಟು ಏಳು ಚಿಕ್ಕ ಚಿಕ್ಕ ಗ್ರಾಮಗಳಿಗೆ ಸಂಬಂಧಿಸಿದ ಗ್ರಾಮ ಪಂಚಾಯತಿ ನದಿಯ ಆ ಬದಿಯಲ್ಲಿರುವ ಸೊಪ್ಪಿನ ಹೊಸಳ್ಳಿ ಯಲ್ಲಿದೆ. ಹಾಗಾಗಿ ಪಡಿತರ ಅಂಗಡಿ, ಆಸ್ಪತ್ರೆ, ಶಾಲೆ, ಅಂಚೆ ಕಚೇರಿ, ಬ್ಯಾಂಕ್ ಹಾಗೂ ಪ್ರಮುಖ ಸಂತೆ ಪೆಟೆ ಎಲ್ಲ ಅದೆ ಗ್ರಾಮದಲ್ಲಿವೆ. ಹಾಗಾಗಿ ನಿತ್ಯ ಹೊಗದೆ ಇದ್ದರೂ ತಿಂಗಳಿಗೆ ಎರಡು ಬಾರಿಯಾದರೂ ರೇಶನ್ ಹಾಗೂ ಅಂಚೆ ಕೇಚೇರಿಗೆ ಬರುವ ಪಿಂಚಣಿ ತರಲು ಹೊಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಗ್ರಾಮದಿಂದ ಸರಿಯಾದ ಬಸ್ ವ್ಯವಸ್ಥೆಯೂ ಇಲ್ಲದ ಹಿನ್ನೆಲೆ, ಅನೇಕ ವೃದ್ಧರು ತಮ್ಮ ತಿಂಗಳ ಪಿಂಚಣಿ ತರಲು ಪರದಾಡುವಂತಾಗಿದೆ.

Kumta: Five years after the suspension bridge collapsed, no alternative system, people of seven villages are living in hell

ಅಘನಾಶಿನಿ ನದಿ

ತೂಗು ಸೇತುವೆ ನಿರ್ಮಾಣ ವಿಚಾರವಾಗಿ ಪ್ರಾರಂಭದಲ್ಲಿ ಇಲ್ಲಿನ ಜನಪ್ರತಿನಿಧಿಗಳು ಭಾರಿ ಆಸಕ್ತಿ ತೊರಿಸಿದ್ದರು ಎನ್ನಲಾಗಿದೆ. ಕಳಚಿ ಬಿದ್ದರುವ ತೂಗು ಸೇತುವೆಯ ಬಿಡಿ ಭಾಗಗಳನ್ನು ನದಿಯಿಂದ ಹೊರ ತೆಗೆಯಲು ನಾಲ್ಕು ಲಕ್ಷ ರೂ. ಮಂಜೂರಾತಿ ಆಗಿದೆ. ಆದರೆ ಅದು ತಕ್ಷಣಕ್ಕೆ ಸಿಗುವುದು ಕಷ್ಟ, ನೀವು ಗ್ರಾಮಸ್ಥರೆಲ್ಲ ಸೇರಿ ಅದನ್ನು ತೆರವು ಮಾಡಿದರೆ ನಿರ್ಮಾಣ ಮಾಡುವ ಕೆಲಸ ನಾವು ಮಾಡುತ್ತೇವೆ ಎಂದು ಮಗ್ರಾಮಸ್ಥರಿಗೆ ಹೇಳಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಗ್ರಾಮಸ್ಥರಿಂದಲೇ ತೂಗು ಸೇತುವೆ ಅವಶೇಷ ತೆರವು

ಗ್ರಾಮಸ್ಥರೆಲ್ಲ ಸೇರಿ ಪ್ರತಿ ಮನೆಗೆ 12 ಆಳಿನಂತೆ ಕೂಲಿ ಮಾಡಿ ನದಿಯಲ್ಲಿ ಬಿದ್ದಿದ್ದ ತೂಗು ಸೇತುವೆಯ ಬಿಡಿ ಭಾಗ ತೆರವು ಮಾಡಿದ್ದರು. ಅದಾದ ಬಳಿಕ ಸೇತುವೆ ನಿರ್ಮಾಣಕ್ಕೆ ಆದಷ್ಟು ಬೇಗ ಟೆಂಡರ್ ಆಗುತ್ತದೆ ಎಂದು ಹೇಳಿ ಹೋದ ಜನಪ್ರತಿನಿಧಿಗಳು, ಇವತ್ತಿನವರೆಗೂ ಗ್ರಾಮದ ಕಡೆಗೆ ತಿರುಗಿಯೂ ನೊಡಿಲ್ಲ ಎಂದಿದ್ದಾರೆ ಈ ಗ್ರಾಮದ ಜನ.

ಜನಪ್ರತಿನಿಧಿಗಳ ಮನೆ ಬಳಿ ಹೋದಾಗ ಕುಂಟು ನೇಪ ಹೇಳಿ ಕಳಿಳುಹಿಸುತ್ತಾರೆಯೇ ಹೊರತು ಸೇತುವೆ ನಿರ್ಮಾಣದ ಬಗ್ಗೆ ಆಸಕ್ತಿ ತೊರಿಸಲ್ಲ ಎಂದು ಗ್ರಾಮಸ್ಥರು ಅಳಲು ತೊಡಿಕೊಂಡರು.

ಇದನ್ನೂ ಓದಿ: ಕುಮಟಾ- ಶಿರಸಿ ರಸ್ತೆ ಸಂಚಾರ ಡಿಸೆಂಬರ್ 2ರಿಂದ ಫೆಬ್ರವರಿ 25ರವರೆಗೆ ಬಂದ್

ಒಟ್ಟಾರೆಯಾಗಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ, ಏಳು ಗ್ರಾಮಗಳ ಜನರು ಕಳೆದ ಐದು ವರ್ಷಗಳಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಬುದ್ಧಿ ಆದಷ್ಟು ಬೇಗ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಬರಲಿ ಎನ್ನುತ್ತಾರೆ ಸ್ಥಳೀಯರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್