AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂರಾರು ತಳಿಯ ಬಿತ್ತನೆ ಬೀಜಗಳ ಸಂಗ್ರಹಣೆ; ಕೋಲಾರದ ಮಹಿಳೆ ಮನೆಯಲ್ಲಿ ಇದೆ ಪುರಾತನ ಕಾಲದ ಬಿತ್ತನೆ ಬೀಜಗಳು

ಕಳೆದ 25 ವರ್ಷಗಳಿಂದ ನಿರಂತರ ಪರಿಶ್ರಮದ ಫಲವಾಗಿ ಇವತ್ತಿಗೆ ಪಾಪಮ್ಮರ ಬಳಿ ಸುಮಾರು ಧಾನ್ಯಗಳು, ತರಕಾರಿಗಳು, ರಾಗಿ, ಭತ್ತ, ಸೇರಿದಂತೆ ಸಾಂಪ್ರದಾಯಿಕವಾದ ಹಾಗೂ ಅಪರೂಪದ ಸುಮಾರು 500 ಕ್ಕೂ ಬಗೆಯ ವಿವಿಧ ತಳಿಯ ಬಿತ್ತನೆ ಬೀಜಗಳ ಸಂಗ್ರಹವಿದೆ.

ನೂರಾರು ತಳಿಯ ಬಿತ್ತನೆ ಬೀಜಗಳ ಸಂಗ್ರಹಣೆ; ಕೋಲಾರದ ಮಹಿಳೆ ಮನೆಯಲ್ಲಿ ಇದೆ ಪುರಾತನ ಕಾಲದ ಬಿತ್ತನೆ ಬೀಜಗಳು
ಪಾಪಮ್ಮ ಮತ್ತು ಪಾಪಣ್ಣ ದಂಪತಿ ಬಿತ್ತನೆ ಬೀಜಗಳನ್ನು ಮನೆಯಲ್ಲಿ ಸಂಗ್ರಹಿಸಿದ್ದಾರೆ.
preethi shettigar
| Updated By: Skanda|

Updated on: Apr 06, 2021 | 1:17 PM

Share

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಡಿ.ಕುರುಬರಹಳ್ಳಿ ರೈತ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ನೂರಾರು ಬಗೆಯ ಪುರಾತನ, ಸಾವಯವ ಹಾಗೂ ಅಪರೂಪದ ಬಿತ್ತನೆ ಬೀಜಗಳನ್ನು ಸಂಗ್ರಹ ಮಾಡಿದ್ದಾರೆ​. ಕುರುಬರಹಳ್ಳಿ ಗ್ರಾಮದ ಪಾಪಮ್ಮ ಕಳೆದ 25 ವರ್ಷಗಳಿಂದ ತಮಗಿರುವ ಮೂರೂವರೆ ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮಾಡುವ ಮೂಲಕ ನಾನಾ ಬಗೆಯ ಅಪರೂಪದ ತರಕಾರಿ ಹಾಗೂ ಧಾನ್ಯದ ಬೀಜಗಳನ್ನ ಸಂಗ್ರಹ ಮಾಡಿದ್ದಾರೆ. ಇದೆಲ್ಲವೂ ರಾಸಾಯನಿಕಗಳನ್ನು ಬಳಸದೆ ಸಂಪ್ರದಾಯಿಕ ಬೇಸಾಯ ಪದ್ಧತಿ ಮೂಲಕ ಬೆಳೆದಿರುವ ಸಾವಯವ ಬೀಜ ಎನ್ನುವುದು ವಿಶೇಷ. ಪಾಪಮ್ಮ, ಪಾಪಣ್ಣ ದಂಪತಿ ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಿಕ ಬೇಸಾಯ ಪದ್ಧತಿ ಮೂಲಕ ಸಾವಿರಾರು ಬಗೆಯ ಬೀಜಗಳನ್ನ ತಮ್ಮ ಮನೆಯಲ್ಲಿ ಸಂಗ್ರಹ ಮಾಡಿದ್ದಾರೆ. ಈಗಿನ ಹಲವು ಹೈಬ್ರೀಡ್​ ತಳಿಗಳು ಬಂದಿವೆ ಹೀಗಿದ್ದರೂ ಪಾಪಮ್ಮ ಬಳಿ ನಿಮಗೆ ನೂರಾರು ವರ್ಷಗಳಷ್ಟು ಹಳೆಯ ಅಪರೂಪದ ತಳಿಯ ಬಿತ್ತನೆ ಬೀಜಗಳು ಸಿಗುತ್ತವೆ ಇದು ಬಿತ್ತನೆ ಬೀಜಗಳ ರಿಸರ್ವ್ ಬ್ಯಾಂಕ್​ ಎಂದರೆ ತಪ್ಪಾಗಲಿಕ್ಕಿಲ್ಲ.

ಪಾಪಮ್ಮ ತಮಗಿರುವ ಮೂರೂವರೆ ಎಕರೆ ಜಮೀನಿನಲ್ಲೇ ಸಾವಯವ ಹಾಗೂ ಸಾಂಪ್ರದಾಯಿಕ ಕೃಷಿ ಮಾಡಿ ಅದರಲ್ಲಿ ಬೀಜ ಉತ್ಪಾದನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಮನೆ ಮೇಲೂ ತೊಗರಿ, ಮರ ಬದನೆ, ಹಾಗಲಕಾಯಿ, ಅವರೆ, ಪಡವಲಕಾಯಿಯಂತಹ ಬಳ್ಳಿ ಗಿಡಗಳನ್ನು ಬೆಳೆಸಿ ಅದರಲ್ಲೂ ಕೂಡ ಬೀಜ ಉತ್ಪಾದನೆ ಮಾಡುತ್ತಿದ್ದಾರೆ. ಆ ಮೂಲಕ ಮನೆಯಲ್ಲೆ ಬೀಜ ಬ್ಯಾಂಕ್ ಮಾಡಿಕೊಂಡು ಬೇಸಾಯ ಮಾಡಬಹುದು ಎಂಬುದನ್ನ ರಾಜ್ಯಕ್ಕೆ ಮಾಡಿ ತೋರಿಸುತ್ತಿದ್ದಾರೆ.

ಪಾಪಮ್ಮ ಅವರ ಬ್ಯಾಂಕ್​ನಲ್ಲಿದೆ 500 ಕ್ಕೂ ಹೆಚ್ಚು ತಳಿಯ ಬಿತ್ತನೆ ಬೀಜಗಳು ಕಳೆದ 25 ವರ್ಷಗಳಿಂದ ನಿರಂತರ ಪರಿಶ್ರಮದ ಫಲವಾಗಿ ಇವತ್ತಿಗೆ ಪಾಪಮ್ಮರ ಬಳಿ ಸುಮಾರು ಧಾನ್ಯಗಳು, ತರಕಾರಿಗಳು, ರಾಗಿ, ಭತ್ತ, ಸೇರಿದಂತೆ ಸಾಂಪ್ರದಾಯಿಕವಾದ ಹಾಗೂ ಅಪರೂಪದ ಸುಮಾರು 500 ಕ್ಕೂ ಬಗೆಯ ವಿವಿಧ ತಳಿಯ ಬಿತ್ತನೆ ಬೀಜಗಳ ಸಂಗ್ರಹವಿದೆ. ರಸಗೊಬ್ಬರಗಳೇ ಇಲ್ಲದೆ ಬೇಸಾಯ ಮಾಡುವುದು ಅಸಾಧ್ಯ ಎನ್ನುವ ಕಾಲದಲ್ಲಿ ಪಾಪಮ್ಮ, ಹಸುವಿನ ಗಂಜಲ ಹಾಗೂ ಬೇವಿನ ರಸ ಬಳಕೆ ಮಾಡಿಕೊಂಡು ಅದೆಷ್ಟೋ ಬಗೆಯ ಗುಣಮಟ್ಟದ ಬೀಜಗಳನ್ನ ಸಂಗ್ರಹ ಮಾಡಿ ರೈತರಿಗೆ ವಿತರಿಸುತ್ತಿದ್ದಾರೆ. ಅದನ್ನು ಬಿತ್ತನೆ ಕಾರ್ಯಕ್ಕೆ ರೈತರಿಗೆ ಒಂದು ಕೆ.ಜಿಯಂತೆ ನೀಡಿ ನಂತರ ಬೆಳೆ ಬಂದ ಮೇಲೆ ಎರಡು ಕೆ.ಜಿಯಂತೆ ವಾಪಸ್ಸು ಪಡೆಯುವುದು ಇವರ ಹವ್ಯಾಸ.

seeds bank

500 ಕ್ಕೂ ಹೆಚ್ಚು ತಳಿಯ ಬಿತ್ತನೆ ಬೀಜಗಳನ್ನು ಪಾಪಮ್ಮ ಸಂಗ್ರಹಿಸಿದ್ದಾರೆ

ನಾನು ಮೊದಲು ಹಳ್ಳಿ ಹಳ್ಳಿಗೆ ಹೋಗಿ ವಿವಿಧ ತಳಿಯ ಬೀಜಗಳನ್ನು ಸಂಗ್ರಹಿಸುತ್ತಿದ್ದೆ, ಯಾವುದೋ ಹೈಬ್ರೀಡ್​ ತಳಿಗಳಿಗೆ ಮಾರು ಹೋಗಿರುವ ನಮ್ಮ ರೈತರಿಗೆ ಪುರಾತನ ಹಾಗೂ ದೇಸಿ ತಳಿಗಳ ಮಹತ್ವ ತಿಳಿಸುವುದು ಜೊತೆಗೆ ಅದನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವುದು ನನ್ನ ಉದ್ದೇಶ ಎಂದು ಪಾಪಮ್ಮ ಹೇಳಿದ್ದಾರೆ.

ಪಾಪಮ್ಮರ ಈ ಕೆಲಸಕ್ಕೆ ರಾಜ್ಯ ಪ್ರಶಸ್ತಿಗಳು ಸೇರಿ ಹಲವು ಗೌರವ ಸಿಕ್ಕಿದೆ! ಹತ್ತಾರು ಬಗೆಯ ರಾಗಿ, ಹಲವು ಬಗೆಯ ಭತ್ತ, ವಿವಿಧ ಬದನೆ ಬೀಜಗಳು, ತರಕಾರಿ ಬೀಜಗಳು ಸೇರಿದಂತೆ ನಾನಾ ಬಗೆಯ ಬೀಜಗಳನ್ನ ಸಂಗ್ರಹ ಮಾಡಿರುವ ಪಾಪಮ್ಮನಿಗೆ ಸರ್ಕಾರ ಹಾಗೂ ಹಲವು ಸಂಘ ಸಂಸ್ಥೆಗಳು ಪುರಸ್ಕರಿಸಿವೆ. ರಾಜ್ಯ ಪ್ರಶಸ್ತಿ, ರೈತ ಮಹಿಳೆ ಪ್ರಶಸ್ತಿ, ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನ ರೈತ ಮಹಿಳೆ ಪಾಪಮ್ಮನಿಗೆ ಲಭಿಸಿವೆ. ಇವರ ಬಳಿ ಇರುವ ಬಿತ್ತನೆ ಬೀಜಗಳನ್ನು ಬೇರೆ ದೇಶದವರು ಬಂದು ವೀಕ್ಷಣೆ ಮಾಡಿಕೊಂಡು ಹೋಗಿದ್ದಾರೆ. ಇವರ ಬಳಿ ಇರುವ ಬಿತ್ತನೆ ಬೀಜಗಳನ್ನ ರಾಜ್ಯವಷ್ಟೇ ಅಲ್ಲದೆ ಇತರೆ ರಾಜ್ಯಗಳಲ್ಲಿ ನಡೆಯುವ ಕೃಷಿ ಮೇಳ, ವಸ್ತು ಪ್ರದರ್ಶನದಲ್ಲಿ ಪರಿಚಯಿಸಲಾಗಿದೆ. ಆ ಮೂಲಕ ಪುರಾತನ ಬೀಜ ಸಂಗ್ರಹದ ಕೇಂದ್ರ ಎಂದು ಇವರ ಮನೆಯನ್ನು ಗುರುತಿಸಲಾಗುತ್ತದೆ.

seeds bank

ಪಾಪಮ್ಮ ಅವರಿಗೆ ರಾಜ್ಯ ಪ್ರಶಸ್ತಿಗಳು ಸೇರಿ ಹಲವು ಗೌರವ ಸಿಕ್ಕಿದೆ

ಪುರಾತನ ಹಾಗೂ ಗುಣಮಟ್ಟದ ಬೀಜ ತಳಿಗಳನ್ನು ಉಳಿಸಬೇಕೆನ್ನುವ ಉದ್ದೇಶದಿಂದ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ, ಬೀಜಗಳನ್ನು ಸಂಗ್ರಹ ಮಾಡಿ, ತಮ್ಮ ಮನೆಯನ್ನೇ ಬೀಜ ಸಂಗ್ರಹಾಲಯ ಕೇಂದ್ರ ಮಾಡಿಕೊಂಡು ಮುಂದಿನ ಪೀಳಿಗೆಗೂ ದೇಸಿ ತಳಿಗಳನ್ನು ಉಳಿಸಿ ಬೆಳೆಸುತ್ತಿರುವ ಈ ಮಹಿಳೆಯ ಕಾರ್ಯಕ್ಕೆ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ನಾಗರಾಜ್​, ಮಾಜಿ ಶಾಸಕ ಕೊತ್ತೂರು ಮಂಜುನಾಥ್​, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ನೀಲಕಂಠೇಗೌಡ ಸೇರಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

(ವರದಿ: ರಾಜೇಂದ್ರ ಸಿಂಹ-9980914108)

ಇದನ್ನೂ ಓದಿ: ಕೋಲಾರದಿಂದ ವಿದೇಶಕ್ಕೆ ಸುವಾಸೆನೆಯ ದ್ರವ್ಯ ರಫ್ತು; ಧವನ ಬೆಳೆದು ಲಾಭ ಗಳಿಸುತ್ತಿರುವ ರೈತರು

(Variety of organic and ancient sowing seeds are stored in the house of a woman in Kolar)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ