AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಭಟನೆ, ಹೋರಾಟಕ್ಕೆ ಮಣಿಯದ ಸರ್ಕಾರಕ್ಕೆ ತಮ್ಮ ಗತ್ತು ತೋರಿಸಿದ ರೈತರು..!

ನಾರಾಯಣಪುರ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ದಿನಕ್ಕೊಂದು ಪ್ರತಿಭಟನೆಗಳು, ಹೋರಾಟಗಳು ನಡೆದವು. ತಮ್ಮ ಬೆಳೆಗಳು ಒಣಗುತ್ತಿವೆ ನೀರು ಕೊಡಿ ಎಂದು ರೈತರು ಬೇಡಿಕೊಂಡರು. ಎಲ್ಲಾ ಅಧಿಕಾರಿ, ರಾಜಕಾರಣಿಗಳ ಮನೆ ಬಾಗಿಲಿಗೆ ಹೋಗಿ ನೀರು ಕೊಡಿ ಸ್ವಾಮಿ ಎಂದು ಪರಿ ಪರಿಯಾಗಿ ಬೇಡಿಕೊಂಡ್ರು. ಆದರೂ ಯಾವ ರಾಜಕಾರಣಿ, ಸರ್ಕಾರ ಮಾತು ಕೇಳಿಲ್ಲ. ಇದರಿಂದ ರೈತರ ತಾಳ್ಮೆಯ ಕಟ್ಟೆ ಹೊಡೆದಿದ್ದು, ರೈತರು ಸ್ವತಃ ತಾವೇ ಹೋಗಿ ಕ್ಯಾನಲ್​ ಗೇಟ್​ಗಳನ್ನು ಎತ್ತಿ ಜಮೀನುಗಳಿಗೆ ನೀರು ಹರಿಸಿಕೊಂಡಿದ್ದಾರೆ. ಅಲ್ಲದೇ ಇದೀಗ ಕೋರ್ಟ್​ ಸಹ ರೈತರ ಗುಡ್​ನ್ಯೂಸ್ ನೀಡಿದೆ. ಇದರೊಂದಿಗೆ ರೈತರು ಸಿಡಿದೆದ್ದರೆ ಏನಾಗುತ್ತೆ ಎನ್ನುವುದಕ್ಕೆ ಇದೊಂದು ಉದಾಹರಣೆ.

ಪ್ರತಿಭಟನೆ, ಹೋರಾಟಕ್ಕೆ ಮಣಿಯದ ಸರ್ಕಾರಕ್ಕೆ ತಮ್ಮ ಗತ್ತು ತೋರಿಸಿದ ರೈತರು..!
Yadgir Farmers
Follow us
ಅಮೀನ್​ ಸಾಬ್​
| Updated By: ರಮೇಶ್ ಬಿ. ಜವಳಗೇರಾ

Updated on:Apr 03, 2025 | 9:47 PM

ಯಾದಗಿರಿ, (ಏಪ್ರಿಲ್ 03): ನಾರಾಯಣಪುರದ ಬಸವಸಾಗರ ಜಲಾಶಯದ (Basava Sagar Reservoir) ನೀರಿಗಾಗಿ ರೈತರ ಹೋರಾಟ.. ರೈತರ ಹೋರಾಟಕ್ಕೆ ಸ್ಪಂದಿಸದ ಸರ್ಕಾರ.. ರೊಚ್ಚಿಗೆದ್ದ ರೈತರು (Farmers) ತಾವೇ ಕಾಲುವೆ ಗೇಟ್ ಗಳನ್ನ ಎತ್ತಿ ಜಮೀನುಗಳಿಗೆ ನೀರು (Water) ಹರಿಸಿದ್ದಾರೆ. ಎಷ್ಟೇ ಪ್ರತಿಭಟನೆ, ಹೋರಾಟಗಳನ್ನು (Protest) ಮಾಡಿದರೂ ಸಹ ಸರ್ಕಾರ ಕ್ಯಾರೇ ಎಂದಿಲ್ಲ. ಹೀಗಾಗಿ ತಮ್ಮ ಬೆಳೆ ಉಳಿಸಿಕೊಳ್ಳಲು ರೈತರು ನಿನ್ನೆ(ಏಪ್ರಿಲ್ 02) ರಾತ್ರಿ ಏಕಾಏಕಿ ಎರಡು ಉಪ ಕಾಲುವೆಯ ಗೇಟ್ ಗಳನ್ನ ಓಪನ್ ಮಾಡಿ ತಮ್ಮ ಜಮೀನುಗಳಿಗೆ ನೀರುಣಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಇದರ ಮಧ್ಯ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠವೂ ಸಹ ಕಾಲುವೆಗಳಿಗೆ ನೀರು ಹರಿಸುವಂತೆ ಆದೇಶಿಸಿದೆ. ಈ ಮೂಲಕ ರೈತರು ಸಿಡಿದೆದ್ದರೆ ಏನಾಗುತ್ತೆ ಎನ್ನುವುದನ್ನು ಸರ್ಕಾರಕ್ಕೆ ತೋರಿಸಿಕೊಟ್ಟಿದ್ದಾರೆ.

ಸರ್ಕಾರಕ್ಕೆ ತಮ್ಮ ಗತ್ತು ತೋರಿಸಿದ ರೈತರು

ನಾರಾಯಣಪುರದ ಬಸವಸಾಗರ ಜಲಾಶಯದ ನೀರಿಗಾಗಿ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಹೋರಾಟಕ್ಕೆ ಸ್ಪಂದಿಸಿ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಹೀಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ಒಣಗುವ ಸ್ಥಿತಿಗೆ ಬಂದಿವೆ. ಸಾಲ ಸೂಲ ಮಾಡಿ ಬೆಳೆ ಬೆಳೆದ ರೈತರಿಗೆ ದೊಡ್ಡ ಆಘಾತವಾಗಿದೆ. ಬೆಳೆಗೆ ನೀರು ಸಿಗದೆ ಹೋದ್ರೆ ಬೆಳೆ ಒಣಗಿ ಹೋಗಿ ಕಂಗಲಾಗಬೇಕಾಗುತ್ತೆ.ಇದೆ ಕಾರಣಕ್ಕೆ ಏಪ್ರಿಲ್ 15 ರ ವರೆಗೆ ನೀರು ಬಿಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಸರ್ಕಾರ ಮಾತ್ರ ರೈತರ ಮನವಿಯನ್ನ ಕಿವಿಯಲ್ಲಿ ಹಾಕಿಕೊಂಡಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ಯಾವೇ ಕಾಲುವೆ ಗೇಟ್​ಗಳನ್ನು ಓಪನ್ ಮಾಡಿದ್ದಾರೆ.

ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬ ಒಡೆತನದ ಶುಗರ್ ಫ್ಯಾಕ್ಟರಿ ಸ್ಥಾಪನೆಗೆ ಗ್ರಾಮಸ್ಥರಿಂದ ವಿರೋಧ, ಇನ್ನೊಮ್ಮೆ ಬರ್ತೀನಿ ಅಂತ ವಾಪಸ್ಸಾದ ಸಚಿವೆ

ನಾರಾಯಣಪುರದ ಎಡದಂಡೆ ಕಾಲುವೆಯ ಎರಡು ಉಪ ಕಾಲುವೆಗಳಾದ ಉಒ ಕಾಲುವೆ ನಂಬರ್ 10 ಎ ಹಾಗೂ 11 ಗೇಟ್ ಗಳನ್ನ ರಾತ್ರೋರಾತ್ರಿ ಓಪನ್ ಮಾಡಿದ್ದಾರೆ. ಗೇಟ್ ಗಳನ್ನ ಓಪನ್ ಮಾಡಿಕೊಂಡು ನಿರಂತರವಾಗಿ 100 ಕ್ಯೂಸೆಕ್ಸ್ ನೀರನ್ನ ಉಪ ಕಾಲುವೆಗಳಿಗೆ ಹರಿಸಿಕೊಳ್ಳುತ್ತಿದ್ದಾರೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಯಿಂದ ಕಲಬುರಗಿ ನಗರಕ್ಕೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದೆ. ಅದೆ ನೀರನ್ನ ಉಪ ಕಾಲುವೆಗಳನ್ನ ಓಪನ್ ಮಾಡಿ ತಮ್ಮ ಜಮೀನುಗಳಿಗೆ ಬಿಟ್ಟುಕೊಳ್ಳುತ್ತಿದ್ದಾರೆ‌.

ಇದನ್ನೂ ಓದಿ
Image
ಮನೆಗೆ ನುಗ್ಗಿದ ಚಿರತೆ.. ಡೋರ್ ಲಾಕ್ ಮಾಡಿ ಆಚೆ ಬಂದ ದಂಪತಿ: ಮುಂದೇನಾಯ್ತು?
Image
ಶೀಘ್ರದಲ್ಲೇ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ: ಕರ್ನಾಟಕ ಸರ್ಕಾರ ಶುಭ ಸುದ್ದಿ
Image
ಇಂದಿನಿಂದ ಬೆಂಗಳೂರಿನಲ್ಲಿ ಮಳೆ, ಕರ್ನಾಟಕದ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Image
ಸಾರ್ವಜನಿಕರ ಗಮನಕ್ಕೆ: ಈ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ

ಉಪ ಕಾಲುವೆಯ ನೀರು ನಿನ್ನೆ ರಾತ್ರಿಯಿಂದ ಸುಮಾರು 10 ಹಳ್ಳಿಯ ಸಾವಿರಾರು ಎಕರೆ ಪ್ರದೇಶಕ್ಕೆ ಹರಿದು ಹೋಗಿದೆ. ಇದರಿಂದ ರೈತರ ಬೆಳೆಗೆ ಜೀವ ಕಳೆ ಬಂದಂತಾಗಿದೆ. ಸ್ಥಳಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ರೈತರ ಮದ್ಯೆ ಅಕ್ರಮವಾಗಿ ನೀರು ಬಿಟ್ಟುಕೊಂಡ ಕಾರಣಕ್ಕೆ ವಾಗ್ವಾದ ಕೂಡ ನಡೆಯಿತು. ಬಳಿಕ ಸ್ಥಳಕ್ಕೆ ನೂರಾರು ಪೊಲೀಸರು ದೌಡಾಯಿಸಿ ಪರಿಸ್ಥಿತಿಯನ್ನ ಶಾಂತಗೊಳಿಸಿದ್ದಾರೆ‌. ಆದ್ರೆ ರೈತರು ಯಾವುದೇ ಕಾರಣಕ್ಕೂ ಗೇಟ್ ಗಳನ್ನ ಬಂದ್ ಮಾಡಲ್ಲ ಅಂತ ಪಟ್ಟು ಹಿಡಿದಿದ್ದಾರೆ.

ನೀರು ಹರಿಸುವಂತೆ ಕೋರ್ಟ್​ ಆದೇಶ

ರೈತರು ಗೇಟ್ ಗಳನ್ನ ಓಪನ್ ಮಾಡಿಕೊಂಡು ನೀರು ಬಿಟ್ಟುಕೊಳ್ಳುತ್ತಿರುವುದರ ಮದ್ಯೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠದಿಂದ ರೈತರಿಗೆ ನೀರು ಬಿಡುವಂತೆ ಸರ್ಕಾರಕ್ಕೆ ಆದೇಶ ಮಾಡಿದೆ. ಯಾಕಂದ್ರೆ ಕಳೆದ ತಿಂಗಳು ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ಕಾಲುವೆಗಳಿಗೆ ಎಪ್ರಿಲ್ 1 ರಿಂದ 6 ರ ತನಕ ನೀರು ಹರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಆದ್ರೆ ನಿರ್ಣಯವನ್ನ ಜಾರಿಗೆ ತರುವ ಕೆಲಸ ಮಾಡಿರಲಿಲ್ಲ. ಇದೆ ಕಾರಣಕ್ಕೆ ಹುಣಸಗಿ ತಾಲೂಕಿನ ಮಲ್ಲಿಕಾರ್ಜುನ ಎಂಬ ರೈತ ಸರ್ಕಾರದ ವಿರುದ್ಧ ಕಲಬುರಗಿ ಹೈಕೋರ್ಟ್ ನಲ್ಲಿ ರೀಟ್ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, ನಾಳೆಯಿಂದ(ಏಪ್ರಿಲ್ 04) ರಿಂದ ಏಪ್ರಿಲ್ 6ರ ತನಕ ಜಲಾಶಯ ಎಡ ಮತ್ತು ಬಲ ದಂಡೆ ಕಾಲುವೆಗಳಿಗೆ ನಿರಂತರವಾಗಿ 0.8 ಟಿಎಂಸಿ ನೀರು ಹರಿಸುವಂತೆ ಆದೇಶಿಸಿದೆ.

ಅಕ್ರಮವಾಗಿ ಕಾಲುವೆಗಳ ಗೇಟ್ ಗಳನ್ನ ಓಪನ್ ರೈತರು ಬಿಡೋದ್ದನ್ನ ಕೊನೆಗೆ ಹೈಕೋರ್ಟ್ ಆದೇಶ ಆಗಿದೆ. ಹೀಗಾಗಿ ನಾಳೆಯಿಂದ ನೀರು ಬಿಡುತ್ತೇವೆ ಎಂದು ಅಧಿಕಾರಿಗಳು ರೈತರ ಮನವೋಲಿಸಿ ಗೇಟ್ ಗಳನ್ನು ಬಂದ್ ಮಾಡಿದ್ದಾರೆ. ಇನ್ನು ಗೇಟ್ ಗಳನ್ನ ಓಪನ್ ಮಾಡಿಕೊಂಡು ನೀರು ಬಿಟ್ಟಿರುವ ಕಾರಣಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಕೆಂಭಾವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ಪ್ರತಿಭಟನೆ, ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಕಾರಣಕ್ಕೆ ತಾವೇ ಸ್ವತ ಗೇಟ್ ಗಳನ್ನ ಓಪನ್ ಮಾಡಿಕೊಂಡು ನೀರು ಹರಿಸುವ ಕೆಲಸವನ್ನ ರೈತರು ಮಾಡಿದ್ದಾರೆ. ಈ ಮೂಲಕ ರೈತರು ಸಿಡಿದೆದ್ದರೆ ಏನಾಗುತ್ತೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:25 pm, Thu, 3 April 25

ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು
RCB ವಿಜಯೋತ್ಸವಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿದ್ಯಾರು? ಸತ್ಯಾಂಶ ಬಯಲು