AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಳಿ ಕೃಷಿಗೆ: ನೇಗಿಲು ಹಿಡಿದು ಉಳುಮೆಗೆ ಇಳಿದ ‘ಸಾರಥಿ’

ಉಡುಪಿ: ಕೊರೊನಾ ಮಹಾಮಾರಿ ಜನರಿಗೆ ಕಷ್ಟದ ನೀಡುವ ಜೊತೆಗೆ ಹೊಸ ಪಾಠಗಳನ್ನೂ ಸಹ ಕಲಿಸುತ್ತಿವೆ. ಅದರಲ್ಲೂ ಮಧ್ಯಮ ವರ್ಗದವರಿಗೆ ಸಂಕಷ್ಟಗಳನ್ನು ಅರಿತು ಅದಕ್ಕೆ ಹೊಂದಿಕೊಳ್ಳುವಂಥ ಅನುಭವವನ್ನೂ ಸಹ ನೀಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಉದ್ಯೋಗ ಕಳೆದುಕೊಂಡ ಬಹಳಷ್ಟು ಮಂದಿಗೆ ಮರಳಿ ಬೇಸಾಯದಲ್ಲಿ ತೊಡಗಿಕೊಳ್ಳುವ ಸ್ಫೂರ್ತಿ ನೀಡಿದೆ. ಇದಕ್ಕೆ ಉತ್ತಮ ಉದಾಹರಣೆ ದಿನೇಶ್ ಶೆಟ್ಟಿ. ಮೂಲತಃ ಜಿಲ್ಲೆಯ ಕಟಪಾಡಿಯ ಕುಂಜಾರುಗಿರಿಯ ನಿವಾಸಿಯಾದ ದಿನೇಶ್​ ಜೀವನೋಪಾಯಕ್ಕಾಗಿ ಆಟೋ ಚಲಾಯಿಸುತ್ತಿದ್ದರು. ಆದರೆ, ಕೊರೊನಾದಿಂದ ಘೋಷಣೆಯಾದ ಲಾಕ್​ಡೌನ್​ ನಂತರದಲ್ಲಿ ಸಂಪಾದನೆಗೆ ಕಲ್ಲುಬಿತ್ತು. ಆದರೆ, ಇದಕ್ಕೆ […]

ಮರಳಿ ಕೃಷಿಗೆ: ನೇಗಿಲು ಹಿಡಿದು ಉಳುಮೆಗೆ ಇಳಿದ ‘ಸಾರಥಿ’
KUSHAL V
| Updated By: |

Updated on:Jul 12, 2020 | 3:15 PM

Share

ಉಡುಪಿ: ಕೊರೊನಾ ಮಹಾಮಾರಿ ಜನರಿಗೆ ಕಷ್ಟದ ನೀಡುವ ಜೊತೆಗೆ ಹೊಸ ಪಾಠಗಳನ್ನೂ ಸಹ ಕಲಿಸುತ್ತಿವೆ. ಅದರಲ್ಲೂ ಮಧ್ಯಮ ವರ್ಗದವರಿಗೆ ಸಂಕಷ್ಟಗಳನ್ನು ಅರಿತು ಅದಕ್ಕೆ ಹೊಂದಿಕೊಳ್ಳುವಂಥ ಅನುಭವವನ್ನೂ ಸಹ ನೀಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಉದ್ಯೋಗ ಕಳೆದುಕೊಂಡ ಬಹಳಷ್ಟು ಮಂದಿಗೆ ಮರಳಿ ಬೇಸಾಯದಲ್ಲಿ ತೊಡಗಿಕೊಳ್ಳುವ ಸ್ಫೂರ್ತಿ ನೀಡಿದೆ.

ಇದಕ್ಕೆ ಉತ್ತಮ ಉದಾಹರಣೆ ದಿನೇಶ್ ಶೆಟ್ಟಿ. ಮೂಲತಃ ಜಿಲ್ಲೆಯ ಕಟಪಾಡಿಯ ಕುಂಜಾರುಗಿರಿಯ ನಿವಾಸಿಯಾದ ದಿನೇಶ್​ ಜೀವನೋಪಾಯಕ್ಕಾಗಿ ಆಟೋ ಚಲಾಯಿಸುತ್ತಿದ್ದರು. ಆದರೆ, ಕೊರೊನಾದಿಂದ ಘೋಷಣೆಯಾದ ಲಾಕ್​ಡೌನ್​ ನಂತರದಲ್ಲಿ ಸಂಪಾದನೆಗೆ ಕಲ್ಲುಬಿತ್ತು. ಆದರೆ, ಇದಕ್ಕೆ ಬದುಕು ನಿರ್ವಹಣೆ ಇನ್ನು ಹೇಗೋ ಎಂದು ಎದೆಗುಂದದೆ ತಮ್ಮ ಪೂರ್ವಿಕರ ಕುಲಕಸುಬಾದ ಬೇಸಾಯವನ್ನೇ ಕೈಗೆತ್ತಿಕೊಂಡಿದ್ದಾರೆ.

ಮೂಲತ: ರೈತರ ಕುಟುಂಬಕ್ಕೆ ಸೇರಿರುವ ದಿನೇಶ್​ ಹಿರಿಯರಿಂದ ಎರಡು ಎಕರೆ ಜಮೀನು ಬಳುವಳಿಯಾಗಿ ಪಡೆದಿದ್ದರು. ಆದರೆ, ಆಟೋ ನಡೆಸುವ ಭರದಲ್ಲಿ ಬೇಸಾಯಕ್ಕೆ ಗುಡ್​ಬೈ ಹೇಳಿದ್ದರು. ಆದರೆ​, ಇದೀಗ ಮರಳಿ ಕೃಷಿಕನಾಗಿದ್ದಾರೆ. ಗಿಡ, ಪೊದೆ ಬೆಳೆದುನಿಂತು ಪಾಳು ಬಿದ್ದಿದ್ದ ತಮ್ಮ ಜಮೀನನ್ನು ಸಜ್ಜುಮಾಡಿ ಬೇಸಾಯ ಪ್ರಾರಂಭಿಸಿದ್ದಾರೆ.

ಇದಲ್ಲದೆ ಇತರರ 3 ಎಕರೆ ಜಾಗವನ್ನು ಭೋಗ್ಯಕ್ಕೆ ಪಡೆದು ಒಟ್ಟು 5 ಎಕರೆ ಜಾಗದಲ್ಲಿ ಬೇಸಾಯ ಮಾಡುತ್ತಿದ್ದಾರೆ. ತನ್ನ ಪತ್ನಿ ಹಾಗೂ ಎರಡು ಗಂಡು ಮಕ್ಕಳ ಜೊತೆ ಹಾಯಾಗಿದ್ದಾರೆ. ಒಟ್ನಲ್ಲಿ, ಜೀವನದಲ್ಲಿ ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ತೆರೆಯುವುದು ಎಂಬ ಮಾತಿದೆ. ಅಂತೆಯೇ, ಕೊರೊನಾ ಮತ್ತು ಲಾಕ್​ಡೌನ್​ನಿಂದ ಸಂಪಾದನೆಯ ಒಂದು ಬಾಗಿಲು ಬಂದಾದರೂ ಹಿರಿಯರ ಕುಲಕಸುಬು ಇದೀಗ ದಿನೇಶ್​ರಿಗೆ ಮತ್ತೊಂದು ಭವ್ಯ ಬಾಗಿಲು ತೆರೆದಿಟ್ಟಿದೆ. ಹರೀಶ್ ಪಾಲೆಚ್ಚಾರ್

Published On - 2:44 pm, Sun, 12 July 20

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು