AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಆತಂಕದ ನಡುವೆ ಮನಸ್ಸಿಗೆ ಮುದ ನೀಡುತ್ತಿದೆ ಗುಲ್ ಮೊಹರ್..

ಧಾರವಾಡ: ಮೇ ತಿಂಗಳಲ್ಲಿ ಧಾರವಾಡವನ್ನ ನೋಡೋ ಅಂದವೇ ಬೇರೆ. ಎಲ್ಲೆಡೆ ಬಿಸಿಲಿನ ಬೇಗೆಯಿಂದ ನೆಲವೆಲ್ಲಾ ಬಿಕೋ ಅನ್ನುತ್ತಿದ್ದರೆ ಧಾರವಾಡ ನಗರಿ ಮಾತ್ರ ಕೆಂಪು ಬಣ್ಣದ ಹೂವುಗಳಿಂದ ಎಲ್ಲರನ್ನ ಅಚ್ಚರಿಗೊಳಿಸುತ್ತೆ. ಸದ್ಯ ಬಿರು ಬಿಸಿಲಿನ ಮಧ್ಯೆಯೂ ರಸ್ತೆ ಬದಿಯಲ್ಲಿರೋ ಕೆಲ ಗಿಡಗಳು ಚೆಲುವೆಲ್ಲಾ ತಮ್ಮದೇ ಅಂತಾ ಬೀಗುತ್ತಿವೆ. ಎಲ್ಲೆಡೆ ಕೆಂಪು ಹೂವಿನದ್ದೇ ಪಾರುಪತ್ಯ. ಮೇ ತಿಂಗಳು ಬಂದ್ರೆ ಸಾಕು ವಿದ್ಯಾಕಾಶಿ ಧಾರವಾಡದ ಗಲ್ಲಿ ಗಲ್ಲಿಗಳಲ್ಲಿ ಈ ಗುಲ್ ಮೊಹರ್ ಅಥವಾ ಮೇ ಫ್ಲಾವರ್​ಗಳದ್ದೇ ಕಾರುಬಾರು. ಪ್ರಕೃತಿಗೆ ಕೆಂಪು ಸೀರೆ […]

ಕೊರೊನಾ ಆತಂಕದ ನಡುವೆ ಮನಸ್ಸಿಗೆ ಮುದ ನೀಡುತ್ತಿದೆ ಗುಲ್ ಮೊಹರ್..
ಆಯೇಷಾ ಬಾನು
|

Updated on:May 21, 2020 | 4:21 PM

Share

ಧಾರವಾಡ: ಮೇ ತಿಂಗಳಲ್ಲಿ ಧಾರವಾಡವನ್ನ ನೋಡೋ ಅಂದವೇ ಬೇರೆ. ಎಲ್ಲೆಡೆ ಬಿಸಿಲಿನ ಬೇಗೆಯಿಂದ ನೆಲವೆಲ್ಲಾ ಬಿಕೋ ಅನ್ನುತ್ತಿದ್ದರೆ ಧಾರವಾಡ ನಗರಿ ಮಾತ್ರ ಕೆಂಪು ಬಣ್ಣದ ಹೂವುಗಳಿಂದ ಎಲ್ಲರನ್ನ ಅಚ್ಚರಿಗೊಳಿಸುತ್ತೆ. ಸದ್ಯ ಬಿರು ಬಿಸಿಲಿನ ಮಧ್ಯೆಯೂ ರಸ್ತೆ ಬದಿಯಲ್ಲಿರೋ ಕೆಲ ಗಿಡಗಳು ಚೆಲುವೆಲ್ಲಾ ತಮ್ಮದೇ ಅಂತಾ ಬೀಗುತ್ತಿವೆ. ಎಲ್ಲೆಡೆ ಕೆಂಪು ಹೂವಿನದ್ದೇ ಪಾರುಪತ್ಯ. ಮೇ ತಿಂಗಳು ಬಂದ್ರೆ ಸಾಕು ವಿದ್ಯಾಕಾಶಿ ಧಾರವಾಡದ ಗಲ್ಲಿ ಗಲ್ಲಿಗಳಲ್ಲಿ ಈ ಗುಲ್ ಮೊಹರ್ ಅಥವಾ ಮೇ ಫ್ಲಾವರ್​ಗಳದ್ದೇ ಕಾರುಬಾರು.

ಪ್ರಕೃತಿಗೆ ಕೆಂಪು ಸೀರೆ ಅಲಂಕಾರ: ಅದರಲ್ಲೂ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್​ಗಳಲ್ಲಂತೂ ಈ ಗಿಡಗಳದ್ದೇ ರಾಜ್ಯಬಾರ ಮಾರ್ಚ್ ನಲ್ಲಿ ಹಚ್ಚ ಹಸಿರು ಎಲೆಗಳಿಂದ ತುಂಬಿರುತ್ತಿದ್ದ ಈ ಗಿಡಗಳು ಮೇ ಆರಂಭವಾಗುತ್ತಿದ್ದಂತೆಯೇ ತನ್ನೆಲ್ಲಾ ಎಲೆಗಳನ್ನ ಉದುರಿಸಿ, ಕೆಂಪು ಬಣ್ಣದ ಹೂವು ಮುಡಿದುಕೊಂಡು ಮದುವಣಗಿತ್ತಿಯಂತೆ ನಿಂತು ಬಿಡುತ್ತವೆ. ಮೂಲತಃ ಆಫ್ರಿಕಾ ಖಂಡದ ಮಡಗಾಸ್ಕರ್ ದ್ವೀಪದ ಈ ಗಿಡದ ವೈಜ್ಞಾನಿಕ ಹೆಸರು ಡೆಲೋನಿಕ್ಸ್ ರೇಬಿಯಾ(Delonix Ragia).

ಕಾಲಾಂತರದಲ್ಲಿ ತನ್ನ ಸೌಂದರ್ಯದಿಂದಲೇ ಎಲ್ಲರ ಮನಗೆದ್ದ ಇದು ಪ್ರಪಂಚದ ಎಲ್ಲ ದೇಶಗಳಿಗೂ ಪ್ರಯಾಣ ಬೆಳೆಸಿತು. ಮೇ ತಿಂಗಳಲ್ಲಷ್ಟೇ ಕೆಂಪು ಹೂವು ಬಿಡೋದ್ರಿಂದಲೇ ಇದಕ್ಕೆ ಮೇ ಫ್ಲಾವರ್ ಟ್ರೀ ಅಂತಾ ಕರೆಯಲಾಗುತ್ತೆ. ಬೇಗನೇ ಬೆಳೆಯೋ ಗುಣ ಹೊಂದಿರೋ ಈ ಗಿಡಗಳನ್ನ ಹೆಚ್ಚಾಗಿ ಉದ್ಯಾನವನಗಳಲ್ಲಿ ಬೆಳೆಸಲಾಗುತ್ತೆ. ಎಲ್ಲ ಪರಿಸರದಲ್ಲಿ ಬೆಳೆಯೋ ಗುಣ ಈ ಗಿಡದ ಮತ್ತೊಂದು ಪ್ಲಸ್ ಪಾಯಿಂಟ್.

ಮೇ ತಿಂಗಳು ಹೊರತುಪಡಿಸಿ ಉಳಿದ ತಿಂಗಳಲ್ಲಿ ಹಚ್ಚ ಹಸಿರಿನ ಎಲೆಗಳಿಂದ ಸುಂದರವಾಗಿ ಕಾಣೋ ಈ ಗಿಡ, ಮೇ ನಲ್ಲಿ ಮಾತ್ರ ಕೆಂಪನೆಯ ಹೂವುಗಳಿಂದ ತನ್ನನ್ನ ತಾನು ಸಿಂಗರಿಸಿಕೊಳ್ಳೋದಲ್ಲದೇ ಪರಿಸರವನ್ನೂ ಸಿಂಗರಿಸುತ್ತೆ. ಹೀಗಾಗಿ ರಸ್ತೆ ಬದಿಗಳಲ್ಲಿ, ಕಚೇರಿಗಳ ಸುತ್ತಲೂ, ಉದ್ಯಾನವನಗಳ ಮಧ್ಯೆ ಈ ಗಿಡಗಳನ್ನ ಬೆಳೆಸಿ, ಪರಿಸರದ ಸೌಂದರ್ಯ ವೃದ್ಧಿಸಲಾಗುತ್ತೆ. ಒಟ್ಟಿನಲ್ಲಿ ಮೇ ತಿಂಗಳಲ್ಲಿ ಧಾರವಾಡದ ರಸ್ತೆಗಳಲ್ಲಿ ಓಡಾಡೋ ಜನರಿಗೆ ಈ ಕೆಂಪು ಹೂವುಗಳು ಮನಸ್ಸಿಗೆ ಆಹ್ಲಾದಕರ ಅನುಭೂತಿ ನೀಡೋದಂತೂ ಸತ್ಯ.  (ಬರಹ-ನರಸಿಂಹಮೂರ್ತಿ ಪ್ಯಾಟಿ)

Published On - 2:53 pm, Thu, 21 May 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್