US ನಿಂದ ವಾಪಸ್ ಆದ ಮಗನನ್ನ ಕಂಡು ಶಾಸಕ ರೇಣುಕಾಚಾರ್ಯ ಆನಂದಬಾಷ್ಪ
ದಾವಣಗೆರೆ: ಕೊರೊನಾ ಕಾಟದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ MP ರೇಣುಕಾಚಾರ್ಯರ ಪುತ್ರ ಚಂದನ್ ಅಮೆರಿಕಾದಲ್ಲಿಯೇ ಉಳಿದುಕೊಳ್ಳುವ ಸ್ಥಿತಿ ಎದುರಾಗಿತ್ತು. ಆಗ ಅಮೆರಿಕಾದಲ್ಲಿ ಎಗ್ಗಿಲ್ಲದೆ ಹರುಡುತ್ತಿದ್ದ ಕೊರೊನಾದ ಭೀತಿಯ ನಡುವೆ ಮಗನಿಗಾಗಿ, ಇಲ್ಲಿ ಶಾಸಕ ಪರಿತಪಿಸಿದ್ದು ಅಷ್ಟಿಷ್ಟಲ್ಲ. ಇದೀಗ, ರೇಣುಕಾಚಾರ್ಯರ ಪುತ್ರ ಚಂದನ್ ಅಮೆರಿಕಾದಿಂದ ವಾಪಸ್ ಆದ ಹಿನ್ನೆಲೆಯಲ್ಲಿ ಶಾಸಕರ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಅಮೆರಿಕದಲ್ಲಿ MS ವ್ಯಾಸಂಗ ಮಾಡುತ್ತಿದ್ದ ಚಂದನ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರ […]

ದಾವಣಗೆರೆ: ಕೊರೊನಾ ಕಾಟದಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ MP ರೇಣುಕಾಚಾರ್ಯರ ಪುತ್ರ ಚಂದನ್ ಅಮೆರಿಕಾದಲ್ಲಿಯೇ ಉಳಿದುಕೊಳ್ಳುವ ಸ್ಥಿತಿ ಎದುರಾಗಿತ್ತು. ಆಗ ಅಮೆರಿಕಾದಲ್ಲಿ ಎಗ್ಗಿಲ್ಲದೆ ಹರುಡುತ್ತಿದ್ದ ಕೊರೊನಾದ ಭೀತಿಯ ನಡುವೆ ಮಗನಿಗಾಗಿ, ಇಲ್ಲಿ ಶಾಸಕ ಪರಿತಪಿಸಿದ್ದು ಅಷ್ಟಿಷ್ಟಲ್ಲ.

ಇದೀಗ, ರೇಣುಕಾಚಾರ್ಯರ ಪುತ್ರ ಚಂದನ್ ಅಮೆರಿಕಾದಿಂದ ವಾಪಸ್ ಆದ ಹಿನ್ನೆಲೆಯಲ್ಲಿ ಶಾಸಕರ ಸಂತಸಕ್ಕೆ ಪಾರವೇ ಇಲ್ಲವಾಗಿದೆ. ಅಮೆರಿಕದಲ್ಲಿ MS ವ್ಯಾಸಂಗ ಮಾಡುತ್ತಿದ್ದ ಚಂದನ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡ ಶಾಸಕ ಮಗನನ್ನ ಅಪ್ಪಿಮುದ್ದಾಡಿದರು.
ಪದೇ ಪದೇ ಮಗನನ್ನು ನೆನಪಿಸಿಕೊಳ್ಳುತ್ತಾ ನೋವು ಅನುಭವಿಸುತ್ತಿದ್ದ ರೇಣುಕಾಚಾರ್ಯಗೆ ಇದೀಗ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಚಂದನ್ನನ್ನ ರೇಣುಕಾಚಾರ್ಯ ದಂಪತಿ ಹಾಗೂ ಚಂದನ್ ಸಹೋದರಿ ವೆಲ್ಕಂ ಮಾಡಿಕೊಂಡರು.
ಬಳಿಕ ಮಾತನಾಡಿದ ಶಾಸಕ ನಮ್ಮ ತಂದೆ ತಾಯಿ ಆಶೀರ್ವಾದ ಮತ್ತು ಕ್ಷೇತ್ರದ ಜನರ ಆಶೀರ್ವಾದದಿಂದ ಯಾವುದೇ ತೊಂದರೆ ಇಲ್ಲದೆ ಚಂದನ್ ವಾಪಸ್ ಆಗಿದ್ದಾನೆ ಎಂದು ಹೇಳಿದ ವೇಳೆ ರೇಣುಕಾಚಾರ್ಯ ಕಣ್ಣಾಲೆಗಳಿಂದ ಆನಂದಬಾಷ್ಪ ತನ್ನಿಂತಾನೇ ಹರಿಯಿತು.



