AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಕ್ ಸಮಿಟ್​ನಲ್ಲಿ ಪ್ರತ್ಯಕ್ಷರಾದ ಸದ್ಗುರು.. ಟೆಕ್ಕಿಗಳಿಗೆ ಹೇಳಿದ ಕಿವಿಮಾತು ಏನು?

ನೀವೊಂದು ಅಮೀಬಾ ಆಗಿದ್ದರೆ ಸಿಟ್ಟು, ಸ್ಪರ್ಧೆ, ಭಯಗಳು ಕಾಡುತ್ತಿದ್ದವೆ? ಇಂಥದ್ದೊಂದು ಪ್ರಶ್ನೆ ಕೇಳಿದವರು ಮತ್ಯಾರೂ ಅಲ್ಲ, ಸದ್ಗುರು. ಹೌದು, ಬೆಂಗಳೂರು ಟೆಕ್ ಸಮಿಟ್ Bengaluru Tech Summit 2020 ಕೊನೆಯ ದಿನದ ಬೆಳ್ಳಂಬೆಳಿಗ್ಗೆ ಸದ್ಗುರು ಪ್ರತ್ಯಕ್ಷರಾಗಿದ್ದರು. ತಂತ್ರಜ್ಞಾನಕ್ಕೆ ಮಾನವೀಯತೆ ಕಲಿಸೋಣ! ನಮ್ಮ ದೇಹವೇ ಇದುವರೆಗಿನ ಅತಿ ದೊಡ್ಡ ತಂತ್ರಜ್ಞಾನ. ಈ ತಂತ್ರಜ್ಞಾನವನ್ನು ಅರಿತರೆ ಮಾತ್ರ ಏನನ್ನು ಬೇಕಾದರೂ ಸಾಧಿಸಬಹುದು. ಭಯದ ನೆರಳಲ್ಲೇ ಪ್ರತಿ ಕ್ಷಣ ಕಳೆಯುತ್ತಿದ್ದೇವೆ. ಪುಟ್ಟ ಪುಟ್ಟ ಮಕ್ಕಳನ್ನು ನೋಡಿ, ಯಾವ ಆತಂಕವಿಲ್ಲ, ಭಯವಿಲ್ಲ. ಅವರು […]

ಟೆಕ್ ಸಮಿಟ್​ನಲ್ಲಿ ಪ್ರತ್ಯಕ್ಷರಾದ ಸದ್ಗುರು.. ಟೆಕ್ಕಿಗಳಿಗೆ ಹೇಳಿದ ಕಿವಿಮಾತು ಏನು?
ಸಾಧು ಶ್ರೀನಾಥ್​
|

Updated on: Nov 21, 2020 | 3:00 PM

Share

ನೀವೊಂದು ಅಮೀಬಾ ಆಗಿದ್ದರೆ ಸಿಟ್ಟು, ಸ್ಪರ್ಧೆ, ಭಯಗಳು ಕಾಡುತ್ತಿದ್ದವೆ? ಇಂಥದ್ದೊಂದು ಪ್ರಶ್ನೆ ಕೇಳಿದವರು ಮತ್ಯಾರೂ ಅಲ್ಲ, ಸದ್ಗುರು. ಹೌದು, ಬೆಂಗಳೂರು ಟೆಕ್ ಸಮಿಟ್ Bengaluru Tech Summit 2020 ಕೊನೆಯ ದಿನದ ಬೆಳ್ಳಂಬೆಳಿಗ್ಗೆ ಸದ್ಗುರು ಪ್ರತ್ಯಕ್ಷರಾಗಿದ್ದರು.

ತಂತ್ರಜ್ಞಾನಕ್ಕೆ ಮಾನವೀಯತೆ ಕಲಿಸೋಣ! ನಮ್ಮ ದೇಹವೇ ಇದುವರೆಗಿನ ಅತಿ ದೊಡ್ಡ ತಂತ್ರಜ್ಞಾನ. ಈ ತಂತ್ರಜ್ಞಾನವನ್ನು ಅರಿತರೆ ಮಾತ್ರ ಏನನ್ನು ಬೇಕಾದರೂ ಸಾಧಿಸಬಹುದು. ಭಯದ ನೆರಳಲ್ಲೇ ಪ್ರತಿ ಕ್ಷಣ ಕಳೆಯುತ್ತಿದ್ದೇವೆ. ಪುಟ್ಟ ಪುಟ್ಟ ಮಕ್ಕಳನ್ನು ನೋಡಿ, ಯಾವ ಆತಂಕವಿಲ್ಲ, ಭಯವಿಲ್ಲ. ಅವರು ನಮಗೆ ಮಾದರಿಯಾಗಬೇಕು. ತಂತ್ರಜ್ಞಾನ ನಮ್ಮ ಮನಸ್ಸನ್ನು ಅರಳಿಸಬೇಕು. ತಂತ್ರಜ್ಞಾನಕ್ಕೆ ಮಾನವೀಯತೆ ಕಲಿಸಬೇಕು ಎಂದರು.

ಸೂಪರ್ ಕಂಪ್ಯೂಟರ್ ಸಹ ಏನಲ್ಲ.. ನಾವು ಅಮೀಬಾ ಆಗಿದ್ದರೆ ಅಸ್ಮಿತೆಯ ಕುರಿತು ಯೋಚಿಸಲು ಅವಕಾಶವೇ ಇರುತ್ತಿರಲಿಲ್ಲ. ಕೃತಕ ಬುದ್ಧಿಮತ್ತೆಯಿಂದ ನೈತಿಕತೆ, ಮಾನವೀಯತೆಯ ಕೊರತೆ ಉಂಟಾಗುತ್ತಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮೊದಲು ಅಮೀಬಾದಂತಹ ಏಕಕೋಶ ಜೀವಿಯಿತ್ತು.

ನಿಧಾನವಾಗಿ ಮನುಷ್ಯನಂತಹ ಸಂಕೀರ್ಣ ದೇಹದವರೆಗೆ ಜೈವಿಕತೆ ಬೆಳೆದಿದೆ. ನಮ್ಮ ದೇಹದ ಮುಂದೆ ಸೂಪರ್ ಕಂಪ್ಯೂಟರ್ ಸಹ ಸಣ್ಣದೇ. ನಮ್ಮ ಬುದ್ಧಿಮತ್ತೆ, ನಮ್ಮ ನಮ್ಮೊಳಗೇ ಹುಟ್ಟುವ ಸ್ಪರ್ಧೆ, ಕ್ಷುಲ್ಲಕತೆಗಳಿಂದ ದೇಹದ ತಂತ್ರಜ್ಞಾನವನ್ನು ಹಾಳುಗೆಡವುತ್ತಿದ್ದೇವೆ ಎಂದು ತಿಳಿಸಿದರು.

ಇದ್ದಷ್ಟು ದಿನ ಖುಷಿಯಾಗಿ.. ತಂತ್ರಜ್ಞಾನದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಆದರೆ ನಮಗೆ ಅದರ ಬಳಕೆ ಮಾಡುವ ಮನಸ್ಥಿತಿಯಿರಲಿಲ್ಲ. ಕೊವಿಡ್ ಪಿಡುಗು ವೈಯಕ್ತಿಕ ಕಾಳಜಿಗೆ ಒತ್ತು ನೀಡುವುದನ್ನು ಕಲಿಸಿದೆ. ವೈಯಕ್ತಿಕ ಕಾಳಜಿ ಎಂದರೆ ನಿಧಾನವಾಗಿ ನಮ್ಮ ದೇಹದ ತಂತ್ರಜ್ಞಾನ ಅರಿಯುತ್ತಾ ಹೋಗುವುದೇ..ಇದ್ದಷ್ಟು ದಿನ ಖುಷಿಯಾಗಿ ಬದುಕುವುದೇ ತಂತ್ರಜ್ಞಾನದ ಸದುಪಯೋಗ ಪಡೆಯುವ ಮಾರ್ಗ ಎಂದು ಅವರು ವಿವರಿಸಿದರು.

ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ
ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ನಾವು ಬಿಡಲ್ಲ: ಎನ್ ಶ್ರೀನಿವಾಸ್, ಶಾಸಕ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ನಾವು ಬಿಡಲ್ಲ: ಎನ್ ಶ್ರೀನಿವಾಸ್, ಶಾಸಕ
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್