AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TRAI Guidelines: ಟ್ರಾಯ್ ಹೊಸ ನಿಯಮ; ಓಟಿಪಿ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ ಇ-ಕಾಮರ್ಸ್​ ಸೈಟ್​ಗಳ ಗ್ರಾಹಕರು

The Telecom Regulatory Authority of India (Trai) guidelines: ನಿನ್ನೆಯಿಂದ ಯಾವುದೇ ಮೆಸೆಜ್ ಡೆಲಿವರಿ ಆಗುವ ಮುನ್ನ ಪ್ರತಿ ಮೆಸೇಜ್​ನಲ್ಲಿನ ವಿಷಯವನ್ನು ಪರಿಶೀಲನೆ ಮಾಡದಿದ್ದರೆ ಈ ಮೆಸೇಜ್​ಗಳನ್ನು ಅನಧಿಕೃತ ಮತ್ತು ನೋಂದಾವಣೆ ಹೊಂದಿಲ್ಲದ ಮೆಸೇಜ್ ಎಂದು ಪರಿಗಣಿಸಲಾಗುತ್ತಿದೆ. ಅಂತಹ ಮೆಸೇಜ್​ಗಳನ್ನು ಬ್ಲಾಕ್ ಮಾಡುವ ಅನಿವಾರ್ಯತೆಗೆ ಟೆಲಿಕಾಂ ಕಂಪನಿಗಳು ಸಿಲುಕಿವೆ.

TRAI Guidelines: ಟ್ರಾಯ್ ಹೊಸ ನಿಯಮ; ಓಟಿಪಿ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ ಇ-ಕಾಮರ್ಸ್​ ಸೈಟ್​ಗಳ ಗ್ರಾಹಕರು
ಟ್ರಾಯ್​ನ ಹೊಸ ನಿಯಮಗಳೇನು?
Follow us
guruganesh bhat
| Updated By: Digi Tech Desk

Updated on:Mar 09, 2021 | 7:00 PM

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (The Telecom Regulatory Authority of India (TRAI) guidelines) ಹೊರಡಿಸಿದ ನೂತನ ನಿಯಮಾವಳಿಯಿಂದ ದೇಶಾದ್ಯಂತ ಪಾವತಿ ಸೇವೆಗಳಲ್ಲಿ ಬಳಸುವ ಓಟಿಪಿ ರವಾನೆಯಲ್ಲಿ (OTP) ಭಾರಿ ವ್ಯತ್ಯಯ ಕಂಡುಬಂದಿದೆ ಎಂದು ದಿ ಇಂಡಿಯನ್ ಎಕ್ಸ್​ಪ್ರೆಸ್ ಜಾಲತಾಣ ವರದಿ ಮಾಡಿದೆ. ಯಾವುದೇ ಮೆಸೆಜ್ ಡೆಲಿವರಿ ಆಗುವ ಮುನ್ನ ಪ್ರತಿ ಮೆಸೇಜ್​ನಲ್ಲಿನ ವಿಷಯವನ್ನು ಪರಿಶೀಲನೆ ಮಾಡಬೇಕು ಎಂಬ ಹೊಸ ನಿಯಮವೇ ಈ ತೊಂದರೆಗೆ ಕಾರಣವಾಗಿದೆ. ಸ್ಕ್ರಬ್ಬಿಂಗ್ (Scrubbing) ಎಂದು ಕರೆಯಲಾಗಿರುವ ಈ ಪ್ರಕ್ರಿಯೆ ನಿನ್ನೆಯಿಂದ ಜಾರಿಯಾಗಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಈ ಮುನ್ನವೇ ನೂತನ ನಿಯಮವನ್ನು ಜಾರಿಗೊಳಿಸುವ ಕುರಿತು ಚಿಂತನೆ ನಡೆಸಿತ್ತು. ಅಲ್ಲದೇ ಹಲವು ಬಾರಿ ಅನುಷ್ಠಾನಕ್ಕೂ ಮುಂದಾಗಿತ್ತು. ಆದರೂ ಸ್ಕ್ರಬ್ಬಿಂಗ್ ಪ್ರಕ್ರಿಯೆ ಜಾರಿಯಾಗಿರಲಿಲ್ಲ. ಅಂತೂ ನಿನ್ನೆಯಿಂದ ಈ ಪ್ರಕ್ರಿಯ ಅನುಸರಿಸಿಯೇ ಟೆಲಿಕಾಂ ಕಂಪನಿಗಳು ಕಾರ್ಯನಿರ್ವಹಿಸಬೇಕಿದ್ದು, ಇ-ಕಾಮರ್ಸ್ ಸೈಟ್​ ಮತ್ತು ಇತರ ಪಾವತಿ ಸೇವೆಗಳಲ್ಲಿನ ಓಟಿಪಿ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

ನಿನ್ನೆಯಿಂದ ಯಾವುದೇ ಮೆಸೆಜ್ ಡೆಲಿವರಿ ಆಗುವ ಮುನ್ನ ಪ್ರತಿ ಮೆಸೇಜ್​ನಲ್ಲಿನ ವಿಷಯವನ್ನು ಪರಿಶೀಲನೆ ಮಾಡದಿದ್ದರೆ ಈ ಮೆಸೇಜ್​ಗಳನ್ನು ಅನಧಿಕೃತ ಮತ್ತು ನೋಂದಾವಣೆ ಹೊಂದಿಲ್ಲದ ಮೆಸೇಜ್ ಎಂದು ಪರಿಗಣಿಸಲಾಗುತ್ತಿದೆ. ಅಂತಹ ಮೆಸೇಜ್​ಗಳನ್ನು ಬ್ಲಾಕ್ ಮಾಡುವ ಅನಿವಾರ್ಯತೆಗೆ ಟೆಲಿಕಾಂ ಕಂಪನಿಗಳು ಸಿಲುಕಿವೆ.

ವಹಿವಾಟಿಗೆ ಸಂಬಂಧಿಸಿದ ಮೆಸೇಜ್​ಗಳಲ್ಲಿ ಯಾವುದೇ ಕಂಪೆನಿ, ಉತ್ಪನ್ನಗಳನ್ನು  ಪ್ರಚಾರ ಮಾಡುವಂತಹ ಮಾಹಿತಿ, ಜಾಹೀರಾತುಗಳು ಸೇರದೇ ಇರಲು ಈ ನಿಯಮ ಜಾರಿಗೊಳಿಸಿದ್ದೇವೆ ಎಂದು ಟ್ರಾಯ್ ತಿಳಿಸಿದೆ.

ನೂತನ ನಿಯಮದಿಂದಾದ ತೊಂದರೆಯಿಂದ ಇ-ಕಾಮರ್ಸ್ ಉಪಯೋಗಿಸುವ ಗ್ರಾಹಕರು ಓಟಿಪಿ ಬಂದಿಲ್ಲ ಎಂದು ದೂರಿ ಬ್ಯಾಂಕ್​ಗಳ ಸಹಹಾಯವಾಣಿಗೆ ದೂರು ನೀಡುತ್ತಿದ್ದಾರೆ. ಇಂತಹ ದೂರುಗಳನ್ನು ಪರಿಹರಿಸುವ ಕಾರ್ಯದಲ್ಲೇ ಇಡೀ ದಿನ ವ್ಯಯವಾಗುತ್ತಿದೆ. ಯಾವುದೇ ಮೆಸೆಜ್ ಡೆಲಿವರಿ ಆಗುವ ಮುನ್ನ ಪ್ರತಿ ಮೆಸೇಜ್​ನಲ್ಲಿನ ವಿಷಯವನ್ನು ಪರಿಶೀಲನೆ ಮಾಡುವ ಪ್ರಕ್ರಿಯೆ ಸಮರ್ಪಕವಾಗಿ ಜಾರಿಯಾಗಿಲ್ಲ. ಸೂಕ್ತ ಕ್ರಮಗಳನ್ನು ಅನುಸರಿಸದೇ ಸ್ಕ್ರಬ್ಬಿಂಗ್ ಅನ್ನು ಜಾರಿಗೊಳಿಸಲಾಗಿದೆ ಎಂದು ಬ್ಯಾಂಕ್ ಸಿಬ್ಬಂದಿಯೋರ್ವರು ತಿಳಿಸಿದ್ದಾರೆ. ಈ ಕುರಿತು ಆಂಗ್ಲ ಪತ್ರಿಕೆಯ ಜಾಲತಾಣವೊಂದು ವರದಿ ಮಾಡಿದ ಪ್ರಕಾರ ‘ಇ-ಕಾಮರ್ಸ್ ಸೈಟ್​ನಲ್ಲಿ ಅಗತ್ಯ ವಸ್ತುಗಳ ಖರೀದಿ ಮಾಡುತ್ತಿದೆ. ಆದರೆ, ಓಟಿಪಿ ಬರಲೇ ಇಲ್ಲ. ಹೀಗಾಗಿ ಖರೀದಿ ಮಾಡಲು ಸಾಧ್ಯವಾಗಲಿಲ್ಲ’ ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ. ಇಂತಹ ಹಲವು ಗ್ರಾಹಕರು ಬ್ಯಾಂಕ್ ಸಹಾಯವಾಣಿಯ ಮೊರೆ ಹೋಗುತ್ತಿದ್ದಾರೆ.

ಈ ತೊಂದರೆಗೆ ಕಾರಣವಾದ ಯಾವುದೇ ಮೆಸೆಜ್ ಡೆಲಿವರಿ ಆಗುವ ಮುನ್ನ ಪ್ರತಿ ಮೆಸೇಜ್​ನಲ್ಲಿನ ವಿಷಯವನ್ನು ಪರಿಶೀಲನೆ ಮಾಡಬೇಕು ಎಂಬ ನಿಯಮವನ್ನು ಸಮರ್ಪಕ ಅನುಷ್ಠಾನಗೊಳಿಸಬೇಕು. ಅಂದಾಗ ಮಾತ್ರ ಈ ತೊಂದರೆ ಪರಿಹಾರ ಸಾಧ್ಯವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ: Reliance Jio Phone Prepaid Plan: ಜಿಯೋದಿಂದ 5 ಹೊಸ ಪ್ರಿಪೇಯ್ಡ್ ಪ್ಲ್ಯಾನ್ ಆರಂಭ; ರೂ. 22 ಕನಿಷ್ಠ

Published On - 1:19 pm, Tue, 9 March 21

ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್