Sign In

By signing in or creating an account, you agree with Associated Broadcasting Company's Terms & Conditions and Privacy Policy.

Ambedkar Jayanti 2025: ಡಾ. ಅಂಬೇಡ್ಕರ್‌ ಅವರಿಂದ ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನ ಪಾಠಗಳಿವು

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್‌ 14 ರಂದು ಅಂಬೇಡ್ಕರ್‌ ಜಯಂತಿಯನ್ನು ಆಚರಿಸಲಾಗುತ್ತದೆ. ವಕೀಲರೂ, ಸಮಾಜ ಸುಧಾರಕರೂ ಆಗಿದ್ದ ಅಂಬೇಡ್ಕರ್‌ ಶಿಕ್ಷಣ, ಅಸ್ಪೃಶ್ಯತೆಯನ್ನು ತೊಡೆದು ಹಾಕುವಲ್ಲಿ, ಸಮಾನತೆಗೆ ಅಪೂರ್ವವಾದ ಕೊಡುಗೆಯನ್ನು ನೀಡಿದ್ದಾರೆ. ಇವರ ಜನ್ಮ ಜಯಂತಿಯ ಶುಭ ಸಂದರ್ಭದಲ್ಲಿ ನಾವು ಅವರಿಂದ ಕಲಿಯಬೇಕಾಗಿರುವ ಜೀವನ ಪಾಠಗಳು ಯಾವುವು ನೋಡೋಣ.

Ambedkar Jayanti 2025: ಡಾ. ಅಂಬೇಡ್ಕರ್‌ ಅವರಿಂದ ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನ ಪಾಠಗಳಿವು
B. R. AmbedkarImage Credit source: Getty Images
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Apr 13, 2025 | 4:39 PM

ಸಂವಿಧಾನ ಶಿಲ್ಪಿ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ  ಡಾ. ಭೀಮರಾವ್‌  ಅಂಬೇಡ್ಕರ್‌ (Bhimarao Ramji Ambedkar) ಡಾ. ಬಿ.ಆರ್‌ ಅಂಬೇಡ್ಕರ್‌ ಎಂದೇ ಖ್ಯಾತಿ ಪಡೆದವರು. ಅಂಬೇಡ್ಕರ್‌  (Ambedkar) ಅವರ ಬದುಕು, ತತ್ವ, ಆದರ್ಶಗಳು, ಚಿಂತನೆಗಳು ನಮ್ಮೆಲ್ಲರ ಪಾಲಿಗೆ ಪ್ರೇರಣೆ ಅಂದರೆ ತಪ್ಪಾಗಲಾರದು.  ಏಪ್ರಿಲ್‌ 14 ರಂದು ಭಾರತ ಕಂಡ ಈ ಶ್ರೇಷ್ಠ ನಾಯಕನ ಜನ್ಮ ದಿನ. ಇವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಏಪ್ರಿಲ್‌ 14 ಭಾರತದಾದ್ಯಂತ ಅಂಬೇಡ್ಕರ್‌ ಜಯಂತಿಯನ್ನು (Ambedkar Jayanti) ಆಚರಿಸಲಾಗುತ್ತದೆ. ಪ್ರಗತಿ, ಸಮಾನತೆಯ ಕನಸು ಕಂಡ ಈ ಮೇರು ನಾಯಕನ ಜನ್ಮ ದಿನದ ಶುಭ ಸಂದರ್ಭದಲ್ಲಿ ಅವರ ಜೀವನದ ಒಂದಷ್ಟು ಆದರ್ಶಗಳನ್ನು, ಜೀವನ ಪಾಠಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳೋಣ.

ಡಾ. ಅಂಬೇಡ್ಕರ್‌ ಅವರಿಂದ ಪ್ರತಿಯೊಬ್ಬರೂ ಕಲಿಯಲೇಬೇಕಾದ ಜೀವನ ಪಾಠಗಳಿವು:

ಅಂಬೇಡ್ಕರ್‌ ಅವರ ಬದುಕು ನಮಗೆಲ್ಲರಿಗೂ ಸ್ಫೂರ್ತಿ. ಹಲವಾರು ನೋವು, ಅವಮಾನ, ನಿಂದನೆಗಳನ್ನು ಎದುರಿಸಿ ಅಸ್ಪೃಶ್ಯತೆಯೆಂಬ ಪಿಡುಗನ್ನು ಹೋಗಲಾಡಿಸಲು ಶ್ರಮಿಸಿದ, ಸಮಾನತೆ, ಪ್ರಗತಿಯ ಕನಸು ಕಂಡ ಈ ಮೇರು ನಾಯಕ ಆದರ್ಶ, ಚಿಂತನೆಗಳು, ಜೀವನ ತತ್ವಗಳು, ಜೀವನ ಆದರ್ಶ ಸರ್ವಕಾಲಕ್ಕೂ ಸ್ಮರಣೀಯವಾದದ್ದು.

ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು:

ಇವರ ಈ ಸಂದೇಶ ಒಬ್ಬ ವ್ಯಕ್ತಿಯ ಸಾರ್ಥಕ ಜೀವನದ ಬಗ್ಗೆ ತಿಳಿಸುತ್ತದೆ.  ಅಂದರೆ ನಾವು ನಮ್ಮ ಸಮಾಜ ಮತ್ತು ರಾಷ್ಟ್ರಕ್ಕೆ ಏನಾದರೂ ಕೊಡುಗೆ ನೀಡುವ ರೀತಿಯಲ್ಲಿ ನಮ್ಮ ಜೀವನವನ್ನು ನಡೆಸಬೇಕು ಮತ್ತು ನಮ್ಮ ಸಮಾಜ ಮತ್ತು ರಾಷ್ಟ್ರಕ್ಕೆ ನಾವು ಹೊರೆಯಾಗುವ ರೀತಿಯಲ್ಲಿ ಬದುಕಬಾರದು.  ಶಿಕ್ಷಣ ಪಡೆದ ಬಳಿಕ ಅಂಬೇಡ್ಕರ್‌ ಅವರು ಐಷಾರಾಮಿ ಮತ್ತು ಸಮೃದ್ಧ ಜೀವನವನ್ನು ನಡೆಸಬಹುದಿತ್ತು, ಆದರೆ ಭಾರತಕ್ಕೆ ಬಂದ ನಂತರ, ಅವರು ತಮ್ಮ ಜೀವನವನ್ನು ಸಮಾನತೆಯನ್ನು ತರಲು, ಅಸ್ಪೃಶ್ಯತೆಯನ್ನು ಹೋಗಲಾಡಿಲು ಮುಡಿಪಾಗಿಟ್ಟರು. ಹೀಗೆ ನಾವು ಕೂಡಾ ಕಷ್ಟದ ಕಾಲದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವಂತದ್ದಾಗಿರಬಹುದು, ಸಮಾಜ ಸೇವೆ, ನಿಸ್ವಾರ್ಥ ಸೇವೆ ಹೀಗೆ ಇನ್ನೊಬ್ಬರ ಬದುಕಿಗೆ ದಾರಿ ದೀಪವಾಗುವ ಮೂಲಕ ನಮ್ಮ ಬದುಕನ್ನು ನಾವು ಶ್ರೇಷ್ಠವನ್ನಾಗಿಸಬಹುದು.

ಇದನ್ನೂ ಓದಿ
Image
ಪೋಷಕರ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಮಕ್ಕಳಿಗೆ ಆಸ್ತಿಯಲ್ಲಿ ಪಾಲಿದ್ಯಾ
Image
ಬೇಸಿಗೆಯಲ್ಲೂ ಪದೇ ಪದೇ ಮೂತ್ರ ಬರುತ್ತಾ?
Image
ಭಯಬೇಡ, ತೆಂಗಿನಕಾಯಿ ತಿನ್ನುವುದರಿಂದ ದೇಹದ ಕೊಬ್ಬು ಹೆಚ್ಚಾಗುವುದಿಲ್ಲ
Image
ಸಾಲ ಮಾಡಿದ ಅಪ್ಪ ತೀರಿ ಹೋದರೆ ಮಗನ ಮೇಲೆ ಬೀಳುತ್ತಾ ಆ ಸಾಲದ ಹೊರೆ?

ನಿಮ್ಮ ಸಮಯದ ಮೌಲ್ಯವನ್ನು ತಿಳಿದುಕೊಳ್ಳಿ:

ಅಂಬೇಡ್ಕರ್‌ ಅವರನ್ನು ಯಾರಾದರೂ ಪಾರ್ಟಿ, ಫಂಕ್ಷನ್‌ಗಳಿಗೆ ಆಹ್ವಾನಿಸಿದರೆ ಅವರು ಅಲ್ಲಿಗೆ ಹೋಗಲು ಬಯಸುತ್ತಿರಲಿಲ್ಲ.ಹೀಗೆ ಹೊರಗೆ ಹೋದರೆ ನನ್ನ ಸಮಯ ವ್ಯರ್ಥವಾಗುತ್ತದೆ ಎಂದು  ಅವರು ಆ ಸಮಯವನ್ನು ಜ್ಞಾನಾರ್ಜನೆ ಅಥವಾ ಅಧ್ಯಯನಕ್ಕೆ ಮೀಸಲಿಡುತ್ತಿದ್ದರು. ಅಂಬೇಡ್ಕರ್‌ ಅವರ ರೀತಿ ನಮ್ಮ ಸಮಯದ ಮೌಲ್ಯದ ಬಗ್ಗೆ ನಮಗೆ ತಿಳಿದಿರಬೇಕು. ನಮ್ಮ ಸಮಯವನ್ನು ನಿಷ್ಪ್ರಯೋಜಕ ಸಂಗತಿಗಳಿಗೆ ವ್ಯರ್ಥ ಮಾಡುವ ಬದಲು ಜ್ಞಾನ ಸಂಪಾದಿಸುವುದಕ್ಕೆ, ಒಳ್ಳೆಯ ವಿಷಯಗಳನ್ನು ಕಲಿಯುವುದಕ್ಕೆ ಮೀಸಲಿಡಬೇಕು.

ಇದನ್ನೂ ಓದಿ: ತಮ್ಮಿಚ್ಛೆಗೆ ವಿರುದ್ಧವಾಗಿ ಮಕ್ಕಳು ಮದುವೆಯಾದ್ರೆ ಪೋಷಕರು ಅವರಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಬಹುದೇ?

 ಬಲವಾದ ಇಚ್ಛಾಶಕ್ತಿ ಅಥವಾ ಮಾನಸಿಕ ದೃಢತೆ:

ಅಂಬೇಡ್ಕರ್‌ ಬಾಲ್ಯದಿಂದಲೇ ಹಲವಾರು ಅವಮಾನ, ಅಪಮಾನಗಳನ್ನು ಎದುರಿಸಿ ಬಂದವರು. ಶಾಲಾ ದಿನಗಳಲ್ಲಿ ತರಗತಿಯಲ್ಲಿ ಪ್ರತ್ಯೇಕವಾಗಿ ಕೂರಿಸುತ್ತಿದ್ದರು, ಇತರರನ್ನು ಮುಟ್ಟಲು ಬಿಡುತ್ತಿರಲಿಲ್ಲ ಹೀಗೆ ಅಸ್ಪೃತ್ಯತೆಯ ಆಧಾರದ ಮೇಲೆ ಸಾಕಷ್ಟು ಅವಮಾನಗಳನ್ನು ಎದುರಿಸಿದರು. ಸಮಾಜದ ಈ ತಾರತಮ್ಯದಿಂದ ನೋವನ್ನು ಅನುಭವಿಸಿದರೂ, ಅವಮಾನಗಳನ್ನು ಎದುರಿಸಿದರೂ ಇದರಿಂದ ಕುಗ್ಗದ ಡಾ. ಅಂಬೇಡ್ಕರ್‌ ಉತ್ತಮ ಶಿಕ್ಷಣವನ್ನು ಪಡೆದು, ತಮ್ಮ ಹೋರಾಟದ ಮೂಲಕ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಅಸ್ಪೃತ್ಯತೆಯೆಂಬ ಪಿಡುಗನ್ನು ತೊಡೆದು ಹಾಕಿದರು. ಹೀಗೆ ಈ ಮಹಾನ್‌ ನಾಯಕನಂತೆ ಬಲವಾದ ಇಚ್ಛಾಶಕ್ತಿ, ಸಾಧಿಸುವ ಛಲ, ಮಾನಸಿಕ ದೃಢತೆ ಇವೆಲ್ಲವೂ ಇದ್ದರೆ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು. ನಕರಾತ್ಮಕತೆಯಿಂದ ದೂರವಿರಬಹುದು.

ಅಂಬೇಡ್ಕರ್‌ ಅವರಿಂದ ನಾವು ಕಲಿಯಬಹುದಾದ ಇನ್ನೊಂದು ಪಾಠವೆಂದರೆ ಶಿಕ್ಷಣದ ಮಹತ್ವ:

ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿರುವುದರಿಂದ ಶಿಕ್ಷಣ ಎನ್ನುವಂತಹದ್ದು ಪುರುಷ ಮತ್ತು ಮಹಿಳೆ ಇಬ್ಬರಿಗೂ ಮುಖ್ಯ ಎಂದಿದ್ದಾರೆ. ಹೀಗೆ ಶಿಕ್ಷಣ ಅವಕಾಶವನ್ನು ಪಡೆಯುವ ಮೂಲಕ ಸಮಾಜದ ಸವಾಲುಗಳನ್ನು ಎದುರಿಸಿ ನಿಲ್ಲಬಹುದು. ಶಾಲಾ ಕಾಲೇಜು ಶಿಕ್ಷಣವನ್ನು ಪಡೆಯುವುದರ ಜೊತೆಗೆ ಪುಸ್ತಕಗಳನ್ನು ಓದುವ ಮೂಲಕ, ಇನ್ನೊಬ್ಬರ ಒಳ್ಳೆಯ ವ್ಯಕ್ತಿತ್ವವನ್ನು ನೋಡಿ ಕಲಿಯುವ ಮೂಲಕ ಉತ್ತಮ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು.

ವೈಫಲ್ಯ ಎಂದಿಗೂ ಅಂತಿಮವಲ್ಲ ಯಶಸ್ಸು ಸಿಗುವವರೆಗೂ ಪ್ರಯತ್ನ ನಿಲ್ಲದಿರಲಿ:

ವೈಫಲ್ಯಗಳು, ಕಷ್ಟಗಳು ಬಂದಾಗ ಅದನ್ನು ಎದುರಿಸದೆ ಹೇಡಿಯಂತೆ ಹಿಂದೆ ಸರಿಯುವವರೇ ಹೆಚ್ಚು. ಹೀಗೆ ಹಿಂದೆ ಸರಿಯದೆ, ಇದನ್ನೇ ಯಶಸ್ಸಿನ ಮೆಟ್ಟಿಲನ್ನಾಗಿಸಿ ಛಲ ಮತ್ತು ದೃಢ ನಿರ್ಧಾರದಿಂದ ಪ್ರಯತ್ನ ಪಟ್ಟರೆ ಖಂಡಿತವಾಗಿಯೂ ಯಶಸ್ಸು ನಮ್ಮದಾಗುತ್ತದೆ. ಹಾಗಾಗಿ ಜೀವನದಲ್ಲಿ ಸೋಲು ಬಂದಾಗ ಅದನ್ನು ಸ್ವೀಕರಿಸಿ, ಯಶಸ್ಸಿನ ಕಡೆಗೆ ಹೆಜ್ಜೆ ಇಡುವುದನ್ನು ಕಲಿಯಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:34 pm, Sun, 13 April 25

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
‘ಹಾಯ್ ಜನರೇ’: ರೀಲ್ಸ್ ಮಾತ್ರವಲ್ಲ ಈಗ ಸಿನಿಮಾಕ್ಕೂ ಬಂದ ಕಿಪಿ ಕೀರ್ತಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!