AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chabeel Day 2021: ಐದನೇ ಸಿಖ್​ ಗುರು ಅರ್ಜುನ್​ ದೇವ್​ ಕುರಿತಾಗಿ ತಿಳಿಯಬೇಕಾದ ಸಂಗತಿಗಳು

ಗುರು ಅರ್ಜುನ್​ ದೇವ್​ ಅವರ ಹುತಾತ್ಮ ದಿನ: ಈ ದಿನದಂದು ಸಿಖ್​ ಧರ್ಮದವರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಶ್ರೀ ಗುರು ಗ್ರಂಥ ಸಾಹಿಬ್​ಅನ್ನು ಓದುತ್ತಾರೆ. ಆದರೆ ಕಳೆದ ವರ್ಷದಂತೆಯೇ ಈ ವರ್ಷವೂ ಕೂಡಾ ಕೊವಿಡ್​-19 ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿಲ್ಲ.

Chabeel Day 2021: ಐದನೇ ಸಿಖ್​ ಗುರು ಅರ್ಜುನ್​ ದೇವ್​ ಕುರಿತಾಗಿ ತಿಳಿಯಬೇಕಾದ ಸಂಗತಿಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 14, 2021 | 11:12 AM

Share

ಗುರು ಅರ್ಜುನ್​ ದೇವ್​ ಸಿಖ್​ರ ಐದನೇ ಗುರು ಹಾಗೂ ಸಿಖ್​ ನಂಬಿಕೆಯಲ್ಲಿ ಹುತಾತ್ಮರಾದ ಇಬ್ಬರು ಗುರುಗಳಲ್ಲಿ ಮೊದಲನೇಯವರು. ಅವರ ಹುತಾತ್ಮ ದಿನವನ್ನು 1606 ಜೂನ್​ 14ರಂದು ಆಚರಿಸಲಾಗುತ್ತದೆ. ಸಿಖ್​​ ಸಮುದಾಯಕ್ಕೆ ಸೇರಿದ ಜನರು ನೆನಪಿನ ಸಂಕೇತವಾಗಿ ಅವರ ಹುತಾತ್ಮ ದಿನವನ್ನು ಚಬೀಲ್​ ದಿನವೆಂದು ಆಚರಿಸುತ್ತಾರೆ. ಹಾಗೂ ಬೇಸಿಗೆಯಲ್ಲಿ ಬಿಸಿಲಿನಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರಿಗೆ ಗುಲಾಬಿ ಹಾಲನ್ನು ನೀಡುವ ಪದ್ಧತಿ ರೂಢಿಯಲ್ಲಿದೆ.

ಗುರು ಅರ್ಜುನ್​ ದೇವ್​ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು * 1563ರಲ್ಲಿ ಗುರು ಅರ್ಜುನ್​ ದೇವ್​ ಅವರು ಜನಿಸಿದರು. ಅವರ ಅಜ್ಜ ಗುರು ಅಮರ್​ ದಾಸ್​ ಮತ್ತು ಅವರ ತಂದೆ ಗುರು ರಾಮದಾಸ್​. ಕ್ರಮವಾಗಿ ಸಿಖ್​ರ ಮೂರನೇ ಮತ್ತು ನಾಲ್ಕನೇ ಗುರು

* ಅವರ ಮಗ ಹರ್ಗೋಬಿಂದ್​ ಸಿಂಗ್​. ಇವರು ಸಿಖ್​ರ ಆರನೇ ಗುರುಗಳಾದರು

* ಗುರು ಅರ್ಜುನ್​ ದೇವ್​ ಅವರು ಗೋಲ್ಡನ್​ ಟೆಂಪಲ್​ ಅಡಿಪಾಯವನ್ನು ಹಾಕಿದರು. ಹಾಗೂ ಈ ದೇವಾಲಯದ ನಕ್ಷೆಯನ್ನು ತಯಾರಿಸಿದರು

* ಆಧ್ಯಾತ್ಮಿಕ ಕಾವ್ಯ ಮತ್ತು ಸಂಗೀತ ರಾಗಗಳನ್ನು ಒಳಗೊಂಡ ಸಿಖ್​ರ ಧಾರ್ಮಿಕ ಗ್ರಂಥ ಆದಿ ಗ್ರಂಥವನ್ನು ಇವರು ರಚಿಸಿದರು. ಇದನ್ನು ಹರ್ಮಂದಿರ್​ ಸಾಹಿಬ್​ನಲ್ಲಿ ಸ್ಥಾಪಿಸಲಾಯಿತು

* ಸಿಖ್​ ಧರ್ಮದ ಕುರಿತಾಗಿ ಜನರಲ್ಲಿ ಹೆಚ್ಚುತ್ತಿರುವ ಪ್ರಭಾವನ್ನು ಕಂಡ ಮೊಘಲ್​ ಚಕ್ರವತ್ರಿ ಜಹಾಂಗೀರ್​, ಗುರು ಅರ್ಜುನ್​ ದೇವ್​ ಅವರನ್ನು ಸೆರೆಹಿಡಿದು ಲಾಹೋರ್​ ಕೋಟೆಯಲ್ಲಿ ಬಂಧಿಸಿದನು

*ಲಾಹೋರ್​ನಲ್ಲಿ ಜೂನ್​ ತಿಂಗಳಿನಲ್ಲಿ ಗುರು ಅರ್ಜುನ್​ ದೇವ್​ ಅವರು ಮೊಘಲರ ಚಿತ್ರಹಿಂಸೆ ತಾಳಲಾರದೆ ಹುತಾತ್ಮರಾದರು

*ಗುರು ಅರ್ಜುನ್​ ದೇವ್​ ಅವರ ಹುತಾತ್ಮ ದಿನದಂದು ಜನರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಶ್ರೀ ಗುರು ಗ್ರಂಥ ಸಾಹಿಬ್​ಅನ್ನು ಓದುತ್ತಾರೆ. ಆದರೆ ಕಳೆದ ವರ್ಷದಂತೆಯೇ ಈ ವರ್ಷವೂ ಕೂಡಾ ಕೊವಿಡ್​-19 ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿಲ್ಲ.

ಇದನ್ನೂ ಓದಿ:

ಪಾಕಿಸ್ತಾನದ ಪಠ್ಯಪುಸ್ತಕಗಳಲ್ಲಿ ಹಿಂದೂಗಳು, ಹಿಂದೂ ಧರ್ಮದ ಬಗ್ಗೆ ಏನಿದೆ ಗೊತ್ತಾ?

Published On - 11:11 am, Mon, 14 June 21

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ