AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಇಂತಹ ವ್ಯಕ್ತಿಗಳು ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರಂತೆ

ದುಡ್ಡು ಇರೋರು, ಸಂಪತ್ತನ್ನು ಹೊಂದಿರೋರು ತುಂಬಾ ಖುಷಿಯಾಗಿರುತ್ತಾರೆ, ಅವರೇ ತುಂಬಾ ಅದೃಷ್ಟವಂತರು ಎಂದು ಹೆಚ್ಚಿನವರು ಹೇಳುತ್ತಾರೆ. ಆದ್ರೆ ಚಾಣಕ್ಯರ ಪ್ರಕಾರ ಆಸ್ತಿ ಅಂತಸ್ತನ್ನು ಹೊಂದಿರುವವರಲ್ಲ, ಈ ಮೂರು ಸಂಗತಿಗಳನ್ನು ಹೊಂದಿರುವವರೇ ಈ ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರು, ಅವರು ಸದಾ ಖುಷಿಯಾಗಿರುತ್ತಾರಂತೆ.

Chanakya Niti: ಇಂತಹ ವ್ಯಕ್ತಿಗಳು ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರಂತೆ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Nov 27, 2025 | 5:56 PM

Share

ಬೇಕಾದಷ್ಟು ಹಣ, ಆಸ್ತಿ, ಶ್ರೀಮಂತಿಕೆ ಇದ್ರೆ ಮಾತ್ರ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯ, ಇದ್ಯಾವುದು ಇಲ್ಲದಿದ್ದರೆ ಸಂತೋಷವಾಗಿರಲು ಸಾಧ್ಯವೇ ಇಲ್ಲವೆಂದು ಹಲವರು ಅಂದುಕೊಳ್ಳುತ್ತಾರೆ. ಆದ್ರೆ ಆಚಾರ್ಯ ಚಾಣಕ್ಯರ (Acharya Chanakya) ಪ್ರಕಾರ ಈ ಮೂರು ಸಂಗತಿಗಳನ್ನು ಹೊಂದಿರುವ ವ್ಯಕ್ತಿಗಳೇ ಈ ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರಂತೆ, ಅವರು ಭೂಮಿಯ ಮೇಲೆಯೇ ಸ್ವರ್ಗ ಸುಖವನ್ನು ಕಾಣುತ್ತಾರಂತೆ. ಅಷ್ಟಕ್ಕೂ ಆ ಅದೃಷ್ಟವಂತ ವ್ಯಕ್ತಿಗಳು ಯಾರೆಂಬುದನ್ನು ನೋಡೋಣ ಬನ್ನಿ.

ಈ ವ್ಯಕ್ತಿಗಳು ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರಂತೆ:

ಸದ್ಗುಣಶೀಲ ಮಕ್ಕಳನ್ನು ಹೊಂದಿರುವ ಪೋಷಕರು: ಆಚಾರ್ಯ ಚಾಣಕ್ಯರ ಪ್ರಕಾರ, ಸದ್ಗುಣಶೀಲ ಮಕ್ಕಳನ್ನು ಹೊಂದಿರುವ ಪೋಷಕರು ಅತ್ಯಂತ ಅದೃಷ್ಟವಂತರು. ಏಕೆಂದರೆ ಇಂತಹ ಮಕ್ಕಳು ಹೆತ್ತವರನ್ನು ಖುಷಿಯಾಗಿ ನೋಡಿಕೊಳ್ಳುತ್ತಾರೆ. ಅವರ ಮೇಲೆ ಅಪಾರವಾದ ಗೌರವವನ್ನೂ ಹೊಂದಿರುತ್ತಾರೆ. ಇಂತಹ ಪೋಷಕರು ನೋವಿನಲ್ಲಿ ಕೊರಗುವುದಿಲ್ಲ, ಅವರು ಭೂಮಿಯ ಮೇಲೆ ಸ್ವರ್ಗದ ಸಂತೋಷವನ್ನು ಅನುಭವಿಸುತ್ತಾರೆ ಎನ್ನುತ್ತಾರೆ ಚಾಣಕ್ಯ.

ಯೋಗ್ಯ ಹೆಂಡತಿಯನ್ನು ಪಡೆದವರು: ಚಾಣಕ್ಯ ಹೇಳುವಂತೆ ಹೆಂಡತಿ ಕೇವಲ ಜೀವನ ಸಂಗಾತಿಯಲ್ಲ, ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯ ಅಡಿಪಾಯ.  ತನ್ನ ಗಂಡನನ್ನು ಅರ್ಥಮಾಡಿಕೊಳ್ಳುವ, ಬೆಂಬಲಿಸುವ, ಗೌರವದಿಂದ ನಡೆಸಿಕೊಳ್ಳುವ, ಗಂಡನ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿ ನಿಲ್ಲುವ ಹೆಂಡತಿಯನ್ನು ಪಡೆದ ವ್ಯಕ್ತಿ ಯ ಜೀವನವು ಸಂತೋಷದಿಂದ ತುಂಬಿರುತ್ತಂತೆ.

ಇದನ್ನೂ ಓದಿ: ಅಮೂಲ್ಯ ಸಂಗತಿಗಳನ್ನು ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ

ಸಂತೃಪ್ತ ಜೀವನ ನಡೆಸುವವರು: ಯಾವುದಕ್ಕೂ ದುರಾಸೆ ಪಡದೆ, ಇತರರ ಬಗ್ಗೆ ಅಸೂಯೆ ಪಡೆದೆ, ತನ್ನಲ್ಲಿ ಏನಿದೆ ಅದರಲ್ಲಿಯೇ ಖುಷಿ ಕಾಣುತ್ತಾ ಸಂತೃಪ್ತ ಜೀವನ ನಡೆಸುವ ವ್ಯಕ್ತಿ ಯಾವಾಗಲೂ ಸಂತೋಷದಿಂದ ಇರುತ್ತಾರೆ, ಆತ ಜೀವನದ ಬಗ್ಗೆ ದುಃಖ ಪಡುವುದಿಲ್ಲ. ಆದ್ದರಿಂದ ಇರುವುದರಲ್ಲಿಯೇ ತೃಪ್ತಿ ಪಡಬೇಕು ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ