AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coconut Kulukki: ಈ ಬೇಸಿಗೆಯ ಉರಿ ಬಿಸಿಲಿಗೆ ದೇಹ ತಂಪಾಗಿರಿಸಲು ಟ್ರೈ ಮಾಡಿ ಎಳನೀರು ಕುಲುಕ್ಕಿ ಶರ್ಬತ್‌

ಈ ಬಾರಿ ಬೇಸಿಗೆಯ ಆರಂಭದಲ್ಲಿಯೇ ಬಿಸಿಲ ಅಬ್ಬರ ಜೋರಾಗಿದೆ. ಈ ಉರಿ ಬಿಸಿಲಿಗೆ ದಾಹವೂ ಹೆಚ್ಚುತ್ತಿದ್ದು, ತಂಪಾದ ಪಾನೀಯ ಆಗಾಗ್ಗೆ ಕುಡಿಯಬೇಕೆನಿಸುತ್ತದೆ. ಹೀಗಿರುವಾಗ ಸಿಕ್ಕ ಸಿಕ್ಕ ತಂಪು ಪಾನೀಯವನ್ನು ಕುಡಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಆರೋಗ್ಯಕರವಾದ ರಿಫ್ರೆಶಿಂಗ್‌ ಪಾನೀಯಗಳನ್ನು ಕುಡಿಯುವುದು ಉತ್ತಮ. ಆದ್ರೆ ಮಿಲ್ಕ್‌ಶೇಕ್‌ ಲಸ್ಸಿಗಳನ್ನು ಕುಡಿದು ಬೋರ್‌ ಆಗಿದೆ ಅಂತಾದ್ರೆ ಕೇರಳದ ಈ ಸ್ಪೆಷಲ್‌ ಎಳನೀರು ಕುಲುಕ್ಕಿ ಶರ್ಬತ್‌ ಟ್ರೈ ಮಾಡಿ.

Coconut Kulukki: ಈ ಬೇಸಿಗೆಯ ಉರಿ ಬಿಸಿಲಿಗೆ ದೇಹ ತಂಪಾಗಿರಿಸಲು ಟ್ರೈ ಮಾಡಿ ಎಳನೀರು ಕುಲುಕ್ಕಿ ಶರ್ಬತ್‌
Coconut Kulukki
ಮಾಲಾಶ್ರೀ ಅಂಚನ್​
| Edited By: |

Updated on: Mar 30, 2025 | 5:32 PM

Share

ಈ ಬಾರಿ ಮಾರ್ಚ್‌  ಆರಂಭದಲ್ಲಿಯೇ ಬೇಸಿಗೆಯ (Summer) ಬಿಸಿಲ ಅಬ್ಬರ ಬಲು ಜೋರಾಗಿಯೇ ಇದೆ. ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು, ದೇಹ (Body ತಂಪಾಗಿರಿಸಲು (cool), ದಾಹ (thirst) ತೀರಿಸಿಕೊಳ್ಳಲು ಹೆಚ್ಚಿನವರು ತಂಪು ಪಾನೀಯಗಳ  ಮೊರೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಕ್ಕ ಸಿಕ್ಕ ಕೋಲ್ಡ್‌ ಡ್ರಿಂಕ್ಸ್‌ ಕುಡಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಆರೋಗ್ಯಕರವಾದ ರಿಫ್ರೆಶಿಂಗ್‌ ಪಾನೀಯಗಳನ್ನು ಮನೆಯಲ್ಲಿಯೇ ತಯಾರಿಸಿ ಕುಡಿಯುವ ಮೂಲಕ ದೇಹವನ್ನು ತಂಪಾಗಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿಯೇ ನಾವು ನಿಮಗೆ ತುಂಬಾ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಆರೋಗ್ಯಕರ ಪಾನೀಯ ರೆಸಿಪಿಯನ್ನು ಹೊತ್ತು ತಂದಿದ್ದೇವೆ. ಅದುವೇ ಕೇರಳದ (Kerala) ಸ್ಪೆಷಲ್‌ ಎಳನೀರು ಕುಲುಕ್ಕಿ (coconut kulukki) ಶರ್ಬತ್.‌ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ ಬನ್ನಿ.

ಕುಲುಕ್ಕಿ ಕೇರಳದ ತಂಪು ಪಾನೀಯವಾಗಿದೆ. ಕಿತ್ತಳೆ ಹಣ್ಣು, ಮಾವಿನ ಹಣ್ಣು, ನಿಂಬೆ ಇತ್ಯಾದಿ ಹಣ್ಣುಗಳಿಂದ ಈ ಕುಲುಕ್ಕಿ ಶರ್ಬತ್‌ ತಯಾರಿಸಬಹುದು. ಅದೇ ರೀತಿ ಎಳನೀರನ್ನು ಕೂಡಾ ಬಳಸಿ ರಿಫ್ರೆಶಿಂಗ್‌ ಕುಲುಕ್ಕಿ ಶರ್ಬತ್‌ ತಯಾರಿಸಬಹುದು. ಬೇಸಿಗೆಯ ದಾಹ ನೀಗಿಸಲು ಸಹಕಾರಿಯಾದ ಎಳನೀರು ಕುಲುಕ್ಕಿ ಶರ್ಬತ್‌ ರೆಸಿಪಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು:

• ಎಳನೀರು • ನಿಂಬೆ ರಸ • ಜೇನುತುಪ್ಪ ಅಥವಾ ಸಕ್ಕರೆ • ಒಂದು ಹಸಿ ಮೆಣಸಿನಕಾಯಿ (ಐಚ್ಛಿಕ) • ಉಪ್ಪು ಅಥವಾ ಬ್ಲ್ಯಾಕ್‌ ಸಾಲ್ಟ್‌ • ಐಸ್‌ ಕ್ಯೂಬ್‌ • ನೆನೆಸಿಟ್ಟ ಸಬ್ಜಾ ಬೀಜಗಳು

ಇದನ್ನೂ ಓದಿ: ಸ್ಟೈಲಿಶ್ ಆಗಿ ಕಾಣಲು ಬೇಸಿಗೆಯಲ್ಲಿ ಶೂ ಧರಿಸ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ

ತಯಾರಿಸುವ ವಿಧಾನ:

ಮೊದಲಿಗೆ ಒಂದು ಪಾತ್ರೆಗೆ ತಾಜಾ ಎಳನೀರನ್ನು ಸುರಿದು ಅದಕ್ಕೆ ಭಾಗ ಮಾಡಿದ ಹಸಿ ಮೆಣಸಿನಕಾಯಿಯನ್ನು ಹಾಕಿ. ನಂತರ ಸ್ವಲ್ಪ ಉಪ್ಪು, ಸಿಹಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಸಕ್ಕರೆ, ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಎಲ್ಲವನ್ನು ಮಿಕ್ಸ್‌ ಮಾಡಿ ಕೊನೆಗೆ ಒಂದು ಲೋಟಕ್ಕೆ ನೆನೆಸಿಟ್ಟ ಸಬ್ಜಾ ಬೀಜ, ಐಸ್‌ ಕ್ಯೂಬ್‌ ಹಾಗೂ ಮೊದಲೇ ತಯಾರಿಸಿಟ್ಟ ಎಳನೀರಿನ ಮಿಶ್ರಣವನ್ನು ಸೇರಿಸಿದರೆ ಕುಡಿಯಲು ಸಿದ್ಧ ಎಳನೀರು ಕುಲುಕ್ಕಿ ಶರ್ಬತ್.‌

ಎಳನೀರು ಕುಲುಕ್ಕಿ ಶರ್ಬತ್‌ ಆರೋಗ್ಯಕರವೇ?

ಖಂಡಿತವಾಗಿಯೂ ಇದೊಂದು ಆರೋಗ್ಯಕರವಾದ ಪಾನೀಯವಾಗಿದೆ. ಇದರಲ್ಲಿರುವ ಎಳನೀರು ಹಲವಾರು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಸಾಕಷ್ಟು ಜಲಸಂಚಯನವನ್ನು (ಹೈಡ್ರೇಶನ್) ಒದಗಿಸುತ್ತದೆ. ಜೊತೆಗೆ ಇದರಲ್ಲಿರುವ ಸಬ್ಜಾ ಬೀಜಗಳು ಫೈಬರ್‌ ಮತ್ತು ಸಸ್ಯ ಆಧಾರಿತ ಒಮೆಗಾ-3 ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ. ಇದು ಕೂಡಾ ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಹಂಸಲೇಖ-ರವಿಚಂದ್ರನ್ ಹಾಡುಗಳ ಕಾನ್ಸರ್ಟ್ ‘ಕ್ರೇಜಿಬ್ರಹ್ಮಂ’: ಎಲ್ಲಿ? ಯಾವಾಗ?
ಹಂಸಲೇಖ-ರವಿಚಂದ್ರನ್ ಹಾಡುಗಳ ಕಾನ್ಸರ್ಟ್ ‘ಕ್ರೇಜಿಬ್ರಹ್ಮಂ’: ಎಲ್ಲಿ? ಯಾವಾಗ?
ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಕೇಸ್ ದಾಖಲಾಗ್ತಿದ್ದಂತೆ ಪರಾರಿ
ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಕೇಸ್ ದಾಖಲಾಗ್ತಿದ್ದಂತೆ ಪರಾರಿ
ತಮ್ಮ ‘ಯಜಮಾನ್ರು’ ರವಿಚಂದ್ರನ್ ಬಗ್ಗೆ ಹಂಸಲೇಖ ಮಾತು
ತಮ್ಮ ‘ಯಜಮಾನ್ರು’ ರವಿಚಂದ್ರನ್ ಬಗ್ಗೆ ಹಂಸಲೇಖ ಮಾತು
ಅಬ್ಬರದ ಮಳೆಗೆ ರಾಯರ ಭಕ್ತರು ಕಂಗಾಲು: ನೆರವಿಗೆ ದೌಡಾಯಿಸಿದ ಶ್ರೀಗಳು
ಅಬ್ಬರದ ಮಳೆಗೆ ರಾಯರ ಭಕ್ತರು ಕಂಗಾಲು: ನೆರವಿಗೆ ದೌಡಾಯಿಸಿದ ಶ್ರೀಗಳು
ಮೂರಿಕಟ್ಟೆ ಒಡೆದ ಮುಸ್ಲಿಮರು; ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ
ಮೂರಿಕಟ್ಟೆ ಒಡೆದ ಮುಸ್ಲಿಮರು; ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್!
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ತುರ್ತು ಬುಲಾವ್!
ಭಟ್ಕಳದಲ್ಲಿ ಘನಘೋರ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಭಟ್ಕಳದಲ್ಲಿ ಘನಘೋರ ದುರಂತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ
ಕರ್ನಾಟಕದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ
ಕರ್ನಾಟಕದಲ್ಲಿ ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ
ಕುಮಾರಣ್ಣ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ ಬಿಗ್‌ಬಾಸ್‌ ಜಾಹ್ನವಿ
ಕುಮಾರಣ್ಣ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ ಬಿಗ್‌ಬಾಸ್‌ ಜಾಹ್ನವಿ
ಸಭೆ ಬಳಿಕ ಕರ್ನಾಟಕ ರಾಜಕೀಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಖಡಕ್ ಮಾತು
ಸಭೆ ಬಳಿಕ ಕರ್ನಾಟಕ ರಾಜಕೀಯ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಖಡಕ್ ಮಾತು