AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eid-Ul-Fitr 2025: ಶಾಂತಿ, ಸೌಹಾರ್ದ ಸಾರುವ ಪವಿತ್ರ ರಂಜಾನ್‌ ಹಬ್ಬದ ಆಚರಣೆಯ ಹಿಂದಿನ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?

Eid-Ul-Fitr 2025: ಈದ್-ಉಲ್-ಫಿತರ್‌ ಹೆಸರಿನಿಂದ ಕರೆಯಲ್ಪಡುವ ರಂಜಾನ್‌ ಹಬ್ಬವು ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಪವಿತ್ರ ರಂಜಾನ್ ಮಾಸದ ಅಂತ್ಯವನ್ನು ಸೂಚಿಸುತ್ತದೆ. ರಂಜಾನ್‌ ಮಾಸದ ಚಂದ್ರ ದರ್ಶನದೊಂದಿಗೆ ಆರಂಭವಾಗುವ ಉಪವಾಸ ಆಚರಣೆಯು ಶವ್ವಾಲ್‌ ತಿಂಗಳ ಚಂದ್ರ ದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಶವ್ವಾಲ್‌ ತಿಂಗಳ ಮೊದಲ ದಿನದಂದು ಈದ್-ಉಲ್-ಫಿತರ್‌ ಹಬ್ಬವನ್ನು ಪ್ರಪಂಚದಾದ್ಯಂತ ಮುಸ್ಲಿಮರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಈದ್-ಉಲ್-ಫಿತರ್‌ ಯಾವಾಗ? ಈ ಪವಿತ್ರ ಹಬ್ಬದ ಆಚರಣೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

Eid-Ul-Fitr 2025: ಶಾಂತಿ, ಸೌಹಾರ್ದ ಸಾರುವ ಪವಿತ್ರ ರಂಜಾನ್‌ ಹಬ್ಬದ ಆಚರಣೆಯ ಹಿಂದಿನ ಇತಿಹಾಸದ ಬಗ್ಗೆ ನಿಮಗೆ ಗೊತ್ತಾ?
Eid Ul Fitr 2025
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Mar 30, 2025 | 4:18 PM

ಮುಸ್ಲಿಂ ಬಾಂಧವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಈದ್-ಉಲ್‌-ಫಿತರ್‌ (Eid-ul-Fitr) ಹಬ್ಬ ಪ್ರಮುಖವಾದದ್ದು. ಒಂದು ತಿಂಗಳ ಪವಿತ್ರ ರಂಜಾನ್‌ ಉಪವಾಸದ ಬಳಿಕ ಬರುವ ಹಬ್ಬವೇ  ಇದು. ಈ ಹಬ್ಬವು ಪವಿತ್ರ ರಂಜಾನ್ ಮಾಸದ ಅಂತ್ಯವನ್ನು ಸೂಚಿಸುತ್ತದೆ. ಮೂವತ್ತು ದಿನಗಳ ರಂಜಾನ್‌ ವ್ರತಾಚರಣೆ ಪೂರ್ಣಗೊಂಡ ಸಂತೋಷವನ್ನು ಈದ್‌ ಉಲ್‌ ಫಿತರ್‌ ((Eid-ul-Fitr) ಹಬ್ಬದ ಮೂಲಕ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನ ಮನೆ ಮಂದಿಯೆಲ್ಲಾ ಸೇರಿ ಹೊಸ ಉಡುಪು ಧರಿಸಿ, ನಮಾಜ್‌ ಮಾಡಿ, ಪರಸ್ಪರ ಶುಭಾಶಯ ವಿನಿಮಯ ಮಾಡಿ ಬಳಿಕ ವಿಶೇಷ ಖಾದ್ಯವನ್ನು ಸವಿದು ಹಬ್ಬವನ್ನು ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಈ ದಿನ ಬಡವರಿಗೆ ದಾನ-ಧರ್ಮವನ್ನು ಮಾಡುವುದು ಕೂಡಾ ಈ ಹಬ್ಬದ ವಿಶೇಷವಾಗಿದೆ. ಈ ಬಾರಿ ರಂಜಾನ್‌ ಹಬ್ಬ ಯಾವಾಗ? ಈ ಹಬ್ಬದ ಹಿನ್ನೆಲೆ ಏನು? ಈ ಎಲ್ಲದರ ಮಾಹಿತಿಯನ್ನು ತಿಳಿಯಿರಿ.

ಈ ಬಾರಿ ಈದ್‌ ಉಲ್‌ ಫಿತರ್‌ ಯಾವಾಗ?

ಈದ್‌-ಉಲ್-ಫಿತರ್‌ ಹಬ್ಬದ ನಿಖರವಾದ ದಿನಾಂಕ ಮತ್ತು ಸಮಯವನ್ನು ಅರ್ಧ ಚಂದ್ರ ದರ್ಶನದ ನಂತರ ದೃಢೀಕರಿಸಲಾಗುತ್ತದೆ. ಎಲ್ಲಾ ದೇಶಗಳಲ್ಲಿ ಹಬ್ಬದ ಸಮಯ ಮತ್ತು ದಿನಾಂಕಗಳು ಭಿನ್ನವಾಗಿರುತ್ತವೆ. ಮಾರ್ಚ್‌ 31 ಅಥವಾ ಏಪ್ರಿಲ್‌ 01 ಈ ಬಾರಿಯ ಹಬ್ಬ ಯಾವಾಗ ಎಂದು ಹಲವರಲ್ಲಿ ಗೊಂದಲವಿದೆ. ಇಂದು ಶವ್ವಾಲ್‌ ಅರ್ದಚಂದ್ರ ಬರಿಗಣ್ಣಿಗೆ ಗೋಚರಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಒಂದು ವೇಳೆ ಮಾರ್ಚ್‌ 30 ರಂದು ಅಂದರೆ ಇಂದು ಅರ್ಧಚಂದ್ರ ದರ್ಶನವಾದರೆ ಮಾರ್ಚ್‌ 31 ರಂದು ಈದ್‌ ಉಲ್‌ ಫಿತರ್‌ ಹಬ್ಬವನ್ನು ಆಚರಿಸಲಾಗುತ್ತದೆ.

ಈದ್-ಉಲ್-ಫಿತರ್‌ ಹಬ್ಬದ ಇತಿಹಾಸ:

ಪ್ರವಾದಿ ಮಹಮ್ಮದ್ ಅವರು ಮೆಕ್ಕಾವನ್ನು ತೊರೆದ ನಂತರ ಮದೀನಾದಲ್ಲಿ ಈದ್ ಅಲ್-ಫಿತರ್ ಹಬ್ಬವನ್ನು ಮೊದಲ ಬಾರಿಗೆ ಪ್ರಾರಂಭಿಸಿದರು ಎಂಬ ನಂಬಿಕೆಯಿದೆ. ಇಸ್ಲಾಮಿಕ್ ಇತಿಹಾಸದ ಪ್ರಕಾರ ಪ್ರವಾದಿ ಮಹಮ್ಮದ್ ಮದೀನಾಕ್ಕೆ ವಲಸೆ ಬಂದ ನಂತರ ಕ್ರಿ.ಶ. 622 ರಲ್ಲಿ ಈದ್‌-ಉಲ್-ಫಿತರ್‌ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದರು. ಅದಕ್ಕಿಂತ ಮೊದಲ ಮದೀನಾದ ಜನರು ತಮ್ಮದೇ ಆದ ಹಬ್ಬವನ್ನು ಹೊಂದಿದ್ದರು. ಬಳಿಕ ಪ್ರವಾದಿ ಮೊಹಮ್ಮದ್‌ ಈದ್-ಉಲ್-ಫಿತರ್‌ ಮತ್ತು ಈದ್-ಉಲ್-ಅಧಾ ಈ ಎರಡು ಮಹತ್ವದ ಹಬ್ಬವನ್ನು ಪರಿಚಯಿಸಿದರು.

ಇದನ್ನೂ ಓದಿ
Image
ರಾತ್ರಿ ಚಪಾತಿ ತಿನ್ನುತ್ತೀರಾ? ನಿಮ್ಮಲ್ಲಿ ಖಂಡಿತ ಈ ಬದಲಾವಣೆ
Image
ಕಣ್ಣಿಗೆ ಕಸ ಬಿದ್ದರೆ ತಕ್ಷಣ ಕಣ್ಣನ್ನು ಉಜ್ಜಬೇಡಿ, ಈ ಕೆಲಸ ಮೊದ್ಲು ಮಾಡಿ
Image
ನೀರಿಗೆ ಇದನ್ನು ಹಾಕಿ ಸ್ನಾನ ಮಾಡಿದ್ರೆ ಬೆವರಿನ ವಾಸನೆ ದೂರವಾಗುತ್ತೆ
Image
ನೀವು ಆಯ್ಕೆ ಮಾಡಿಕೊಳ್ಳುವ ಬೀಚ್ ಚಿತ್ರದಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

ಇದನ್ನೂ ಓದಿ: ಸ್ಟೈಲಿಶ್ ಆಗಿ ಕಾಣಲು ಬೇಸಿಗೆಯಲ್ಲಿ ಶೂ ಧರಿಸ್ತೀರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ

ಈದ್‌ನ ಇತಿಹಾಸವು ಇಸ್ಲಾಂನ ತತ್ವಗಳೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ರಂಜಾನ್ ತಿಂಗಳು ಆತ್ಮಾವಲೋಕನ, ಆಧ್ಯಾತ್ಮಿಕ ಶುದ್ಧೀಕರಣ ಮತ್ತು ಜನರ ಬಗ್ಗೆ ಸಹಾನುಭೂತಿಯನ್ನು ಹೆಚ್ಚಿಸುವ ಸಮಯ. ಈ ಅವಧಿಯಲ್ಲಿ, ಜನ ಆಹಾರ ಮತ್ತು ಇತರ ಲೌಕಿಕ ಸುಖಗಳಿಂದ ದೂರವಿರುತ್ತಾರೆ ಮತ್ತು ಅಲ್ಲಾಹನೊಂದಿಗಿನ ಸಂಬಂಧವನ್ನು ಬಲಪಡಿಸಲು ಸ್ವಯಂ ಶಿಸ್ತನ್ನು ಬೆಳೆಸಿಕೊಳ್ಳುತ್ತಾರೆ. ಈ ಕಷ್ಟಕರವಾದ ಆಧ್ಯಾತ್ಮಿಕ ತಪಸ್ಸಿನ ಯಶಸ್ವಿ ಪೂರ್ಣಗೊಳಿಸುವಿಕೆಯ ಆಚರಣೆಯೇ ಈದ್-ಉಲ್-ಫಿತರ್ ಹಬ್ಬವಾಗಿದೆ.

ಈದ್-ಉಲ್-ಫಿತರ್‌ನ ಮಹತ್ವ:

ಈದ್ ಉಲ್ ಫಿತರ್ ಒಂದು ಪ್ರಮುಖ ಇಸ್ಲಾಮಿಕ್ ಆಚರಣೆಯಾಗಿದ್ದು, ಇದು ರಂಜಾನ್ ಉಪವಾಸವನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟ ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಮುಸಲ್ಮಾನರು ಈ ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಈ ಹಬ್ಬವು ರಂಜಾನ್ ಸಮಯದಲ್ಲಿ ಬೆಳೆಸಿಕೊಂಡ ಸಕಾರಾತ್ಮಕ ಅಭ್ಯಾಸಗಳ ಮುಂದುವರಿಕೆಯನ್ನು ಪ್ರತಿನಿಧಿಸುತ್ತದೆ. ಈ ಹಬ್ಬವು ಸಮುದಾಯದ ಏಕತೆಯನ್ನು ಒತ್ತಿಹೇಳುತ್ತದೆ, ಜಕಾತ್ ಅಲ್-ಫಿತರ್ ಮೂಲಕ ದಾನ ಮತ್ತು ಔದಾರ್ಯವನ್ನು ಜನರಲ್ಲಿ ಬೆಳೆಸುತ್ತದೆ ಮತ್ತು ಕ್ಷಮೆ ಹಾಗೂ ಸಾಮರಸ್ಯವನ್ನು ಈ ಹಬ್ಬ ಪ್ರೋತ್ಸಾಹಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್